<p>ಧಾರವಾಡ: ತಾಲ್ಲೂಕಿನ ಮನಗುಂಡಿ ಗ್ರಾಮದ 18 ತಿಂಗಳ ಪುಟ್ಟ ಮಗು ತೇಜಸ್ ಅನಾರೋಗ್ಯದಿಂದ ಬಳಲುತ್ತಿದ್ದು, ಆತನಿಗೆ ಚಿಕಿತ್ಸೆ ನೀಡಲು ಮಹಾದೇವಪ್ಪ–ಕಲ್ಲಪ್ಪ ದಂಪತಿ ದಾನಿಗಳ ನೆರವು ಬಯಸಿದ್ದಾರೆ.<br /> <br /> ‘ತೇಜಸ್ ಹೆಸರಿನ ನನ್ನ ಮಗನಿಗೆ 5 ತಿಂಗಳ ನಂತರ ಅನಾರೋಗ್ಯ ಸಮಸ್ಯೆ ಎದುರಾಯಿತು. ಸದ್ಯ 18 ತಿಂಗಳು ತುಂಬಿರುವ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಅದಕ್ಕೆ ಬೆಂಗಳೂರಿನ ಬನಶಂಕರಿ ಬಡಾವಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕೆ ದಾನಿಗಳು ಸಹಾಯ ಮಾಡಬೇಕು’ ಎಂದು ಕಲ್ಲವ್ವ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.<br /> <br /> ಮಗು ಕೇವಲ ಕಣ್ಣುಗಳನ್ನಷ್ಟೇ ಮಿಟುಕಿಸುತ್ತದೆ. ಅದರ ಕೈ, ಕಾಲು ಸೇರಿದಂತೆ ಉಳಿದೆಲ್ಲ ಭಾಗಗಳು ಸಂಪೂರ್ಣ ನಿಷ್ಕ್ರಿಯವಾಗಿವೆ. ಜೊತೆಗೆ ಮಗುವಿನ ಮೆದುಳಿನ ಬೆಳವಣಿಗೆಯೂ ಕುಂಠಿತವಾಗಿದ್ದು, 4 ವರ್ಷವಾದ ಮೇಲೆ ಮಗು ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾಗಿ ಅವರು ತಿಳಿಸಿದರು.<br /> <br /> ದಾನಿಗಳು ಮಹಾದೇವಪ್ಪ ಉಪ್ಪಿನ (ಮೊ.ನಂ. 87227 37520) ಅವರನ್ನು ಸಂಪರ್ಕಿಸಬಹುದು. ಶ್ಯಾಮರಾವ್ ವಿಠ್ಠಲ ಕೋ-ಆಪ್ ಬ್ಯಾಂಕ್ನ ಹುಬ್ಬಳ್ಳಿ ಶಾಖೆಯ ಬ್ಯಾಂಕ್ ಖಾತೆ ಸಂಖ್ಯೆ: 1090 0313 0007 117ಗೆ ಹಣಕಾಸು ನೆರವು ಪಾವತಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ತಾಲ್ಲೂಕಿನ ಮನಗುಂಡಿ ಗ್ರಾಮದ 18 ತಿಂಗಳ ಪುಟ್ಟ ಮಗು ತೇಜಸ್ ಅನಾರೋಗ್ಯದಿಂದ ಬಳಲುತ್ತಿದ್ದು, ಆತನಿಗೆ ಚಿಕಿತ್ಸೆ ನೀಡಲು ಮಹಾದೇವಪ್ಪ–ಕಲ್ಲಪ್ಪ ದಂಪತಿ ದಾನಿಗಳ ನೆರವು ಬಯಸಿದ್ದಾರೆ.<br /> <br /> ‘ತೇಜಸ್ ಹೆಸರಿನ ನನ್ನ ಮಗನಿಗೆ 5 ತಿಂಗಳ ನಂತರ ಅನಾರೋಗ್ಯ ಸಮಸ್ಯೆ ಎದುರಾಯಿತು. ಸದ್ಯ 18 ತಿಂಗಳು ತುಂಬಿರುವ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಅದಕ್ಕೆ ಬೆಂಗಳೂರಿನ ಬನಶಂಕರಿ ಬಡಾವಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕೆ ದಾನಿಗಳು ಸಹಾಯ ಮಾಡಬೇಕು’ ಎಂದು ಕಲ್ಲವ್ವ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.<br /> <br /> ಮಗು ಕೇವಲ ಕಣ್ಣುಗಳನ್ನಷ್ಟೇ ಮಿಟುಕಿಸುತ್ತದೆ. ಅದರ ಕೈ, ಕಾಲು ಸೇರಿದಂತೆ ಉಳಿದೆಲ್ಲ ಭಾಗಗಳು ಸಂಪೂರ್ಣ ನಿಷ್ಕ್ರಿಯವಾಗಿವೆ. ಜೊತೆಗೆ ಮಗುವಿನ ಮೆದುಳಿನ ಬೆಳವಣಿಗೆಯೂ ಕುಂಠಿತವಾಗಿದ್ದು, 4 ವರ್ಷವಾದ ಮೇಲೆ ಮಗು ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾಗಿ ಅವರು ತಿಳಿಸಿದರು.<br /> <br /> ದಾನಿಗಳು ಮಹಾದೇವಪ್ಪ ಉಪ್ಪಿನ (ಮೊ.ನಂ. 87227 37520) ಅವರನ್ನು ಸಂಪರ್ಕಿಸಬಹುದು. ಶ್ಯಾಮರಾವ್ ವಿಠ್ಠಲ ಕೋ-ಆಪ್ ಬ್ಯಾಂಕ್ನ ಹುಬ್ಬಳ್ಳಿ ಶಾಖೆಯ ಬ್ಯಾಂಕ್ ಖಾತೆ ಸಂಖ್ಯೆ: 1090 0313 0007 117ಗೆ ಹಣಕಾಸು ನೆರವು ಪಾವತಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>