<p>ವನಿತಾ (ಹೆಸರು ಬದಲಿಸಲಾಗಿದೆ), ಬೆಳಗಾವಿ ಜಿಲ್ಲೆಯ ಸರ್ಕಾರಿ ಕಚೇರಿಯೊಂದರ ಕಂಪ್ಯೂಟರ್ ಆಪರೇಟರ್. ಈ ಹಿಂದೆ ಯಾವ ಚುನಾವಣೆಯಲ್ಲಿಯೂ ಈ ಆಪರೇಟರ್ಗಳನ್ನು ಚುನಾವಣೆ ಕೆಲಸಕ್ಕೆ ಹಾಕಿರಲಿಲ್ಲ. ಆದರೆ ಕಳೆದ ವಿಧಾನಸಭಾ ಚುನಾವಣೆಗೆ ಇವರನ್ನೂ ಸಹಿತ ಫೋಟೊ ತೆಗೆಯುವ ಕೆಲಸಕ್ಕೆ ಸೇರಿಸಿಕೊಂಡರು. <br /> <br /> ಚುನಾವಣಾ ಕೆಲಸಕ್ಕೆ ನಿಯೋಜನೆಯಾದ ನೌಕರರು ಹಿಂದಿನ ದಿನವೇ ತಮ್ಮ ಮತಗಟ್ಟೆಗಳಲ್ಲಿರಬೇಕು. ವನಿತಾಳಿಗೆ ಅವಳ ಮತಗಟ್ಟೆಯಲ್ಲಿ ಮತ್ತೊಬ್ಬ ಶಿಕ್ಷಕಿ ಜೊತೆಯಾಗಿದ್ದುದರಿಂದ ಅಲ್ಲಿ ಅವಳು ತಂಗಬಹುದು ಎಂದುಕೊಂಡಳು. ಆದರೆ, ಆ ಶಿಕ್ಷಕಿ ತನ್ನ ಸಮಸ್ಯೆಯನ್ನು ಬಿಚ್ಚಿದಳು. ಪಾಪ ಅವಳಿಗೆ ಮೂರು ತಿಂಗಳಾಗಿತ್ತು.<br /> <br /> ಆಬಾರ್ಶನ್ ಆಗುವ ಲಕ್ಷಣ ಕಂಡುಬಂದಾಗ, ಡ್ಯೂಟಿಗೆ ಜಾಯಿನ್ ಆದ ನಂತರ ಆರೋಗ್ಯ ಸಮಸ್ಯೆಯಿಂದ ಹೊರಟು ಹೋಗುವುದಾಗಿ ತಿಳಿಸಿದರು. ಆ ಮತಗಟ್ಟೆಯ ಪಿಆರ್ಒ ‘ನಿಮಗ ಹಂಗ ಸಮಸ್ಯೆ ಇದ್ರ ಮೊದಲ ವಲ್ಯಾ ಅನ್ನಬೇಕಿತ್ತರಿ? ಈಗ ನಿಮ್ಮ ಡ್ಯೂಟಿನೂ ನಾವ ಮಾಡಬೇಕ. ಈಗ ಡ್ಯೂಟಿಗೆ ಹಾಜರ ಆಗಿ ನೀವು ಇಲ್ಲಿ ಇರೂದಿಲ್ಲಾ ಅಂದ್ರ ಮುಂದ ಭಾಳ ಕಠಿಣ ಆಕ್ಕತಿ ನೋಡ್ರಿ ಇದು ಸರಕಾರಿ ನೌಕರಿ. ಚುನಾವಣಾ ಕೆಲಸಕ್ಕ ಇಲ್ಲ ಅಂದ್ರ ನೆಡಿಯೂದಿಲ್ಲಾ. ಏನಾರ ಆಗಲಿ ನೀವು ಇಲ್ಲೆ ಇರೂದು ಚೊಲೊ’ ಎಂದೆಲ್ಲ ಆ ಶಿಕ್ಷಕಿ ಅಲ್ಲಿಂದ ಹೋಗಲು ಅಡ್ಡಿಪಡಿಸಿದರು.<br /> <br /> ಪಾಪ ನಿಜವಾದ ಸಮಸ್ಯೆಯನ್ನು ಗಂಡಸರಾದ ಆ ಅಧಿಕಾರಿಯ ಮುಂದೆ ಹೇಳಲಾಗದ ಆ ಶಿಕ್ಷಕಿ, ಆ ಅಧಿಕಾರಿಯಿಂದ ಬೈಯಿಸಿಕೊಳ್ಳಬೇಕಾಯಿತು. ಅಷ್ಟೇ ಅಲ್ಲ ಅವರು ಹೇಳುವಂತೆ ಅವಳ ನೌಕರಿ ಉಳಿಸಿಕೊಳ್ಳಬೇಕೆಂದರೆ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕರುಳಕುಡಿ ಎಲ್ಲಿ ಕಳಚಿಹೋಗುವುದೋ ಎಂಬ ಭಯ, ಅದನ್ನು ಉಳಿಸಿಕೊಳ್ಳಲು ಹೋಗಬೇಕೆಂದರೆ ಹೊಟ್ಟೆಪಾಡಿಗಿರುವ ನೌಕರಿಯನ್ನು ಕಳೆದುಕೊಳ್ಳುವ ಭಯ! ಇದೇ ಹೊಯ್ದಾಟದಲ್ಲಿಯೇ ಕೊನೆಗೆ ಶಿಕ್ಷಕಿ ಹೊರಟುಹೋದರು.<br /> <br /> ಶಿಕ್ಷಕಿ ಹೋದ ನಂತರ, ಹಾಡು ಹಗಲೇ ರೇಪ್ ಕೇಸ್ಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ವನಿತಾ ಒಬ್ಬಳೇ ಅಲ್ಲಿರುವುದು ಸುರಕ್ಷಿತ ವಲ್ಲವೆನಿಸಿತು. ಮರಳಿ ತನ್ನ ಗ್ರಾಮಕ್ಕೆ ತೆರಳಿ ಮರುದಿನ 7 ಗಂಟೆಗೆ ಆ ಮತಗಟ್ಟೆಗೆ ಬರುವುದು ಅಸಾಧ್ಯವೆನಿಸಿತು. ಇನ್ನು ಬಿಟ್ಟು ಹೋಗಿಬಿಟ್ಟರೆ ಕೆಲಸದಿಂದ ತೆಗೆಯುವರೆಂಬ ಭಯ. ಏನು ಮಾಡುವುದೆಂದು ಯೋಚನೆ ಮಾಡುತ್ತಲೇ ಅದೇ ಸಿಟಿಯಲ್ಲಿರುವ ಸಂಬಂಧಿಯೊಬ್ಬರ ಮನೆಗೆ ಕರೆ ಮಾಡಿ ಕೇಳಿಕೊಂಡು ಅವರ ಮನೆಗೆ ನಡೆದಳು.<br /> <br /> ಮರುದಿನ ಮತ್ತೆ ಆಟೋಕ್ಕೆ ದುಡ್ಡು ಹಾಕಿ, ವನಿತಾ ಬಿದ್ದೆನೋ ಸತ್ತೆನೋ ಎನ್ನುತ್ತಾ ಕರ್ತವ್ಯಕ್ಕೆ ಹಾಜರಾದಳು. ಸಾಯಂಕಾಲದವರೆಗೂ ಎಲ್ಲರ ಫೋಟೊ ತೆಗೆದು ತೆಗೆದು ಸಾಕಾಯಿತು. ಮತದಾನ ಮುಗಿದ ನಂತರ, ಅವರು ತಿಳಿಸಿದ ಸ್ಥಳಕ್ಕೆ ಹೋಗುವುದರಲ್ಲಿ ಸಮಯ 6 ಗಂಟೆಯಾಗಿ ಹೋಗಿತ್ತು. ಅವರ ಕ್ಯಾಮೆರಾ ಅವರಿಗೆ ನೀಡಿ ಗೌರವಧನಕ್ಕಾಗಿ ಅವಳೊಂದಿಗೆ ಇನ್ನುಳಿದ ಆಪರೇಟರ್ಗಳು ನಿಂತಿದ್ದರು. <br /> ಅವರ ಗೌರವಧನಕ್ಕಾಗಿ ಅವರನ್ನು ಕೇಳಿ ಇವರನ್ನ ಕೇಳಿ ಎಂದು ಅಲೆದಾಡಿಸಿದರು.<br /> <br /> ಚುನಾವಣಾ ಅಧಿಕಾರಿಯನ್ನೇ ಕೇಳಿದಾಗ, ‘ಗೊತ್ತಿಲ್ಲ ಇವರ ಪೇಮೆಂಟ್ ಬಗ್ಗೆ ಮಾತಾಡಿಲ್ಲಾ’ ಎಂದು ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಿದರು. ಆಪರೇಟರ್ಗಳೆಲ್ಲ ‘ಹಂಗಾರ ನಮಗ ಕೆಲಸಾ ಆದ್ರು ಯಾಕ ಕೊಟ್ರು ಯಾರ ಕೊಟ್ರು ಅದು ಇವರಿಗೆ ತಿಳಿಯೂದಿಲ್ಲಾ? ಉಪವಾಸ ವನವಾಸ ಆಟೋಕ್ಕ ರೊಕ್ಕಾ ಬಡದ ಬಡದ ಕೆಲಸಾ ಮಾಡಿದ್ದು ಹೋತಾ?’ ಎಂದು ಅವಡುಗಚ್ಚಿದರಾದರೂ, ಇವರಿಗೆ ಕೆಲಸ ನೀಡಿದ ಅಧಿಕಾರಿಗಳು ‘ನಾವೆಲ್ಲ ನಿಮ್ಮ ದುಡ್ಡ ಕೊಡಸ್ತೀವಿ ನೀವು ಈಗ ಹೋಗಿಬಿಡ್ರಿ’ ಎಂದಾಗ, ಬಡವನ ಕೋಪ ದವಡೆಗೆ ಮೂಲ ಎಂದು ಬಗೆದು ಮನೆಗೆ ತೆರಳಿದರು. ತಮ್ಮ ಕೈಯಿಂದ ಖರ್ಚು ಮಾಡಿ ಪರದಾಡಿದ ಆ ಆಪರೇಟರುಗಳಿಗೆ ಮುಂದೆ ಒಂದು ಕವಡೆಕಾಸು ದೊರೆಯಲಿಲ್ಲ.<br /> <br /> ಇದು ಕೇವಲ ಒಬ್ಬ ವನಿತಾಳ ಕಥೆ ಅಲ್ಲ. ಚುನಾವಣಾ ಕೆಲಸಕ್ಕೆ ನಿಯೋಜಿಸಲ್ಪಟ್ಟ ಎಷ್ಟೋ ಮಹಿಳೆಯರ ಕಥೆ. ಇದರ ಅರ್ಥ ಆ ಕೆಲಸವನ್ನು ಮಾಡಬಾರದೆಂದಲ್ಲ. ಈ ಕೆಲಸಕ್ಕೆ ಅನ್ಯಾಯ ಅಕ್ರಮಗಳು ನಡೆಯದಂತೆ ಖಂಡಿತ ಎಲ್ಲರೂ ಸಕ್ರಿಯವಾಗಿ ಭಾಗಿಯಾಗಬೇಕು ಆದರೆ ಯಾರಿಗೂ ಅನ್ಯಾಯವಾಗಬಾರದು.<br /> <br /> ಊಟ–ತಿಂಡಿ ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರಿಗೆ ಮತಗಟ್ಟೆಯಲ್ಲಿ ತಂಗಲು ಸುರಕ್ಷಿತ ಸ್ಥಳ ಆಗಬೇಕಿದೆ. ಅಷ್ಟೇ ಅಲ್ಲ, ಕೆಲಸ ನೀಡಿದ ಸ್ಥಳಕ್ಕೆ ಹೋಗಲು ವಾಹನ ಸೌಕರ್ಯನೀಡಬೇಕು. ಹಾಗಾದಾಗ ಮಾತ್ರ ಮತಗಟ್ಟೆಗಳಲ್ಲಿ ತಂಗಲು ಭಯಪಡುವ ಸಮಸ್ಯೆ ದೂರವಾಗುತ್ತದೆ. ಮತ್ತು ಚುನಾವಣಾ ಕೆಲಸವನ್ನು ಆಸಕ್ತಿಯಿಂದ ಮಾಡುವಂತಾಗುತ್ತದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವನಿತಾ (ಹೆಸರು ಬದಲಿಸಲಾಗಿದೆ), ಬೆಳಗಾವಿ ಜಿಲ್ಲೆಯ ಸರ್ಕಾರಿ ಕಚೇರಿಯೊಂದರ ಕಂಪ್ಯೂಟರ್ ಆಪರೇಟರ್. ಈ ಹಿಂದೆ ಯಾವ ಚುನಾವಣೆಯಲ್ಲಿಯೂ ಈ ಆಪರೇಟರ್ಗಳನ್ನು ಚುನಾವಣೆ ಕೆಲಸಕ್ಕೆ ಹಾಕಿರಲಿಲ್ಲ. ಆದರೆ ಕಳೆದ ವಿಧಾನಸಭಾ ಚುನಾವಣೆಗೆ ಇವರನ್ನೂ ಸಹಿತ ಫೋಟೊ ತೆಗೆಯುವ ಕೆಲಸಕ್ಕೆ ಸೇರಿಸಿಕೊಂಡರು. <br /> <br /> ಚುನಾವಣಾ ಕೆಲಸಕ್ಕೆ ನಿಯೋಜನೆಯಾದ ನೌಕರರು ಹಿಂದಿನ ದಿನವೇ ತಮ್ಮ ಮತಗಟ್ಟೆಗಳಲ್ಲಿರಬೇಕು. ವನಿತಾಳಿಗೆ ಅವಳ ಮತಗಟ್ಟೆಯಲ್ಲಿ ಮತ್ತೊಬ್ಬ ಶಿಕ್ಷಕಿ ಜೊತೆಯಾಗಿದ್ದುದರಿಂದ ಅಲ್ಲಿ ಅವಳು ತಂಗಬಹುದು ಎಂದುಕೊಂಡಳು. ಆದರೆ, ಆ ಶಿಕ್ಷಕಿ ತನ್ನ ಸಮಸ್ಯೆಯನ್ನು ಬಿಚ್ಚಿದಳು. ಪಾಪ ಅವಳಿಗೆ ಮೂರು ತಿಂಗಳಾಗಿತ್ತು.<br /> <br /> ಆಬಾರ್ಶನ್ ಆಗುವ ಲಕ್ಷಣ ಕಂಡುಬಂದಾಗ, ಡ್ಯೂಟಿಗೆ ಜಾಯಿನ್ ಆದ ನಂತರ ಆರೋಗ್ಯ ಸಮಸ್ಯೆಯಿಂದ ಹೊರಟು ಹೋಗುವುದಾಗಿ ತಿಳಿಸಿದರು. ಆ ಮತಗಟ್ಟೆಯ ಪಿಆರ್ಒ ‘ನಿಮಗ ಹಂಗ ಸಮಸ್ಯೆ ಇದ್ರ ಮೊದಲ ವಲ್ಯಾ ಅನ್ನಬೇಕಿತ್ತರಿ? ಈಗ ನಿಮ್ಮ ಡ್ಯೂಟಿನೂ ನಾವ ಮಾಡಬೇಕ. ಈಗ ಡ್ಯೂಟಿಗೆ ಹಾಜರ ಆಗಿ ನೀವು ಇಲ್ಲಿ ಇರೂದಿಲ್ಲಾ ಅಂದ್ರ ಮುಂದ ಭಾಳ ಕಠಿಣ ಆಕ್ಕತಿ ನೋಡ್ರಿ ಇದು ಸರಕಾರಿ ನೌಕರಿ. ಚುನಾವಣಾ ಕೆಲಸಕ್ಕ ಇಲ್ಲ ಅಂದ್ರ ನೆಡಿಯೂದಿಲ್ಲಾ. ಏನಾರ ಆಗಲಿ ನೀವು ಇಲ್ಲೆ ಇರೂದು ಚೊಲೊ’ ಎಂದೆಲ್ಲ ಆ ಶಿಕ್ಷಕಿ ಅಲ್ಲಿಂದ ಹೋಗಲು ಅಡ್ಡಿಪಡಿಸಿದರು.<br /> <br /> ಪಾಪ ನಿಜವಾದ ಸಮಸ್ಯೆಯನ್ನು ಗಂಡಸರಾದ ಆ ಅಧಿಕಾರಿಯ ಮುಂದೆ ಹೇಳಲಾಗದ ಆ ಶಿಕ್ಷಕಿ, ಆ ಅಧಿಕಾರಿಯಿಂದ ಬೈಯಿಸಿಕೊಳ್ಳಬೇಕಾಯಿತು. ಅಷ್ಟೇ ಅಲ್ಲ ಅವರು ಹೇಳುವಂತೆ ಅವಳ ನೌಕರಿ ಉಳಿಸಿಕೊಳ್ಳಬೇಕೆಂದರೆ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕರುಳಕುಡಿ ಎಲ್ಲಿ ಕಳಚಿಹೋಗುವುದೋ ಎಂಬ ಭಯ, ಅದನ್ನು ಉಳಿಸಿಕೊಳ್ಳಲು ಹೋಗಬೇಕೆಂದರೆ ಹೊಟ್ಟೆಪಾಡಿಗಿರುವ ನೌಕರಿಯನ್ನು ಕಳೆದುಕೊಳ್ಳುವ ಭಯ! ಇದೇ ಹೊಯ್ದಾಟದಲ್ಲಿಯೇ ಕೊನೆಗೆ ಶಿಕ್ಷಕಿ ಹೊರಟುಹೋದರು.<br /> <br /> ಶಿಕ್ಷಕಿ ಹೋದ ನಂತರ, ಹಾಡು ಹಗಲೇ ರೇಪ್ ಕೇಸ್ಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ವನಿತಾ ಒಬ್ಬಳೇ ಅಲ್ಲಿರುವುದು ಸುರಕ್ಷಿತ ವಲ್ಲವೆನಿಸಿತು. ಮರಳಿ ತನ್ನ ಗ್ರಾಮಕ್ಕೆ ತೆರಳಿ ಮರುದಿನ 7 ಗಂಟೆಗೆ ಆ ಮತಗಟ್ಟೆಗೆ ಬರುವುದು ಅಸಾಧ್ಯವೆನಿಸಿತು. ಇನ್ನು ಬಿಟ್ಟು ಹೋಗಿಬಿಟ್ಟರೆ ಕೆಲಸದಿಂದ ತೆಗೆಯುವರೆಂಬ ಭಯ. ಏನು ಮಾಡುವುದೆಂದು ಯೋಚನೆ ಮಾಡುತ್ತಲೇ ಅದೇ ಸಿಟಿಯಲ್ಲಿರುವ ಸಂಬಂಧಿಯೊಬ್ಬರ ಮನೆಗೆ ಕರೆ ಮಾಡಿ ಕೇಳಿಕೊಂಡು ಅವರ ಮನೆಗೆ ನಡೆದಳು.<br /> <br /> ಮರುದಿನ ಮತ್ತೆ ಆಟೋಕ್ಕೆ ದುಡ್ಡು ಹಾಕಿ, ವನಿತಾ ಬಿದ್ದೆನೋ ಸತ್ತೆನೋ ಎನ್ನುತ್ತಾ ಕರ್ತವ್ಯಕ್ಕೆ ಹಾಜರಾದಳು. ಸಾಯಂಕಾಲದವರೆಗೂ ಎಲ್ಲರ ಫೋಟೊ ತೆಗೆದು ತೆಗೆದು ಸಾಕಾಯಿತು. ಮತದಾನ ಮುಗಿದ ನಂತರ, ಅವರು ತಿಳಿಸಿದ ಸ್ಥಳಕ್ಕೆ ಹೋಗುವುದರಲ್ಲಿ ಸಮಯ 6 ಗಂಟೆಯಾಗಿ ಹೋಗಿತ್ತು. ಅವರ ಕ್ಯಾಮೆರಾ ಅವರಿಗೆ ನೀಡಿ ಗೌರವಧನಕ್ಕಾಗಿ ಅವಳೊಂದಿಗೆ ಇನ್ನುಳಿದ ಆಪರೇಟರ್ಗಳು ನಿಂತಿದ್ದರು. <br /> ಅವರ ಗೌರವಧನಕ್ಕಾಗಿ ಅವರನ್ನು ಕೇಳಿ ಇವರನ್ನ ಕೇಳಿ ಎಂದು ಅಲೆದಾಡಿಸಿದರು.<br /> <br /> ಚುನಾವಣಾ ಅಧಿಕಾರಿಯನ್ನೇ ಕೇಳಿದಾಗ, ‘ಗೊತ್ತಿಲ್ಲ ಇವರ ಪೇಮೆಂಟ್ ಬಗ್ಗೆ ಮಾತಾಡಿಲ್ಲಾ’ ಎಂದು ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಿದರು. ಆಪರೇಟರ್ಗಳೆಲ್ಲ ‘ಹಂಗಾರ ನಮಗ ಕೆಲಸಾ ಆದ್ರು ಯಾಕ ಕೊಟ್ರು ಯಾರ ಕೊಟ್ರು ಅದು ಇವರಿಗೆ ತಿಳಿಯೂದಿಲ್ಲಾ? ಉಪವಾಸ ವನವಾಸ ಆಟೋಕ್ಕ ರೊಕ್ಕಾ ಬಡದ ಬಡದ ಕೆಲಸಾ ಮಾಡಿದ್ದು ಹೋತಾ?’ ಎಂದು ಅವಡುಗಚ್ಚಿದರಾದರೂ, ಇವರಿಗೆ ಕೆಲಸ ನೀಡಿದ ಅಧಿಕಾರಿಗಳು ‘ನಾವೆಲ್ಲ ನಿಮ್ಮ ದುಡ್ಡ ಕೊಡಸ್ತೀವಿ ನೀವು ಈಗ ಹೋಗಿಬಿಡ್ರಿ’ ಎಂದಾಗ, ಬಡವನ ಕೋಪ ದವಡೆಗೆ ಮೂಲ ಎಂದು ಬಗೆದು ಮನೆಗೆ ತೆರಳಿದರು. ತಮ್ಮ ಕೈಯಿಂದ ಖರ್ಚು ಮಾಡಿ ಪರದಾಡಿದ ಆ ಆಪರೇಟರುಗಳಿಗೆ ಮುಂದೆ ಒಂದು ಕವಡೆಕಾಸು ದೊರೆಯಲಿಲ್ಲ.<br /> <br /> ಇದು ಕೇವಲ ಒಬ್ಬ ವನಿತಾಳ ಕಥೆ ಅಲ್ಲ. ಚುನಾವಣಾ ಕೆಲಸಕ್ಕೆ ನಿಯೋಜಿಸಲ್ಪಟ್ಟ ಎಷ್ಟೋ ಮಹಿಳೆಯರ ಕಥೆ. ಇದರ ಅರ್ಥ ಆ ಕೆಲಸವನ್ನು ಮಾಡಬಾರದೆಂದಲ್ಲ. ಈ ಕೆಲಸಕ್ಕೆ ಅನ್ಯಾಯ ಅಕ್ರಮಗಳು ನಡೆಯದಂತೆ ಖಂಡಿತ ಎಲ್ಲರೂ ಸಕ್ರಿಯವಾಗಿ ಭಾಗಿಯಾಗಬೇಕು ಆದರೆ ಯಾರಿಗೂ ಅನ್ಯಾಯವಾಗಬಾರದು.<br /> <br /> ಊಟ–ತಿಂಡಿ ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರಿಗೆ ಮತಗಟ್ಟೆಯಲ್ಲಿ ತಂಗಲು ಸುರಕ್ಷಿತ ಸ್ಥಳ ಆಗಬೇಕಿದೆ. ಅಷ್ಟೇ ಅಲ್ಲ, ಕೆಲಸ ನೀಡಿದ ಸ್ಥಳಕ್ಕೆ ಹೋಗಲು ವಾಹನ ಸೌಕರ್ಯನೀಡಬೇಕು. ಹಾಗಾದಾಗ ಮಾತ್ರ ಮತಗಟ್ಟೆಗಳಲ್ಲಿ ತಂಗಲು ಭಯಪಡುವ ಸಮಸ್ಯೆ ದೂರವಾಗುತ್ತದೆ. ಮತ್ತು ಚುನಾವಣಾ ಕೆಲಸವನ್ನು ಆಸಕ್ತಿಯಿಂದ ಮಾಡುವಂತಾಗುತ್ತದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>