<p><strong>ಮಂಗಳೂರು:</strong> ಕುತೂಹಲಕಾರಿ ತಿರುವುಗಳನ್ನು ಕಂಡ ಪಂದ್ಯಗಳಲ್ಲಿ ಧೃತಿಗೆಡದೆ ಮುನ್ನಡೆದ ಮಂಗಳೂರಿನ ಶರಣ್ ರಾವ್, ಕರ್ನಾಟಕ ರಾಜ್ಯ ಫಿಡೆ ರೇಟೆಡ್ ರ್ಯಾಪಿಡ್, ಬ್ಲಿಟ್ಜ್ ಮುಕ್ತ ಚೆಸ್ ಟೂರ್ನಿಯ ಎರಡೂ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.</p>.<p>ರ್ಯಾಪಿಡ್ನಲ್ಲಿ ಆರವ್ ಸರ್ಬಾಲಿಯ ಹಾಗೂ ಬ್ಲಿಟ್ಜ್ನಲ್ಲಿ ಆರ್ಯನ್ ಫುತಾನೆ ರನ್ನರ್ ಅಪ್ ಆದರು.</p>.<p>ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಟೂರ್ನಿಯ ರ್ಯಾಪಿಡ್ ವಿಭಾಗದಲ್ಲಿ ಶರಣ್ 8 ಪಾಯಿಂಟ್ ಗಳಿಸಿದರೆ ಬ್ಲಿಟ್ಜ್ನಲ್ಲಿ 8.5 ಪಾಯಿಂಟ್ ಕಲೆ ಹಾಕಿದರು.</p>.<p>ಮೊದಲ ದಿನವಾದ ಶನಿವಾರ ರ್ಯಾಪಿಡ್ ವಿಭಾಗದ ಆರು ಸುತ್ತುಗಳ ಮುಕ್ತಾಯಕ್ಕೆ ಮಂಗಳೂರಿನ ಲಕ್ಷಿತ್ ಸಾಲ್ಯಾನ್ ಮತ್ತು ಆಗಸ್ಟಿನ್ ತಲಾ 6 ಪಾಯಿಂಟ್ಗಳನ್ನು ಗಳಿಸಿ ಅಗ್ರಸ್ಥಾನ ಹಂಚಿಕೊಂಡಿದ್ದರು. ಅಗ್ರ ಶ್ರೇಯಾಂಕಿತ ಶರಣ್ ರಾವ್ ಒಂದು ಪಂದ್ಯ ಡ್ರಾ ಮಾಡಿಕೊಂಡು 5.5 ಪಾಯಿಂಟ್ ಗಳಿಸಿದ ಏಕೈಕ ಆಟಗಾರ ಆಗಿದ್ದರು. ಭಾನುವಾರದ 3 ಸುತ್ತುಗಳ ಪೈಕಿ 2ರಲ್ಲಿ ಗೆದ್ದು ಒಂದನ್ನು ಡ್ರಾ ಮಾಡಿಕೊಂಡರು. 16ನೇ ಶ್ರೇಯಾಂಕಿತ ಆರವ್ ಸರ್ಬಾಲಿಯ ಕೂಡ 8 ಪಾಯಿಂಟ್ ಗಳಿಸಿದರು. ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಶರಣ್ಗೆ ಚಾಂಪಿಯನ್ ಪಟ್ಟ ನೀಡಲಾಯಿತು.</p>.<p>ಪಂಕಜ್ ಭಟ್, ವಿಹಾನ್ ಸಚ್ದೇವ್ ಮತ್ತು ಅಭಿನವ್ ಆನಂದ್ ತಲಾ 7.5 ಪಾಯಿಂಟ್ ಗಳಿಸಿ ಕ್ರಮವಾಗಿ 3, 4 ಮತ್ತು 5ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಆಗಸ್ಟಿನ್ 6 ಮತ್ತು ಲಕ್ಷಿತ್ 8ನೇ ಸ್ಥಾನಕ್ಕೆ ಕುಸಿದರು. 2ನೇ ಶ್ರೇಯಾಂಕಿತೆ ಇಶಾ ಶರ್ಮಾ 10ನೇ ಸ್ಥಾನ ಗಳಿಸಿದರು.</p>.<p>ಭಾನುವಾರ ನಡೆದ 9 ಸುತ್ತುಗಳ ಬ್ಲಿಟ್ಜ್ನಲ್ಲಿ ಶರಣ್, ಅಮೋಘ ಪ್ರದರ್ಶನ ನೀಡಿದರು. ಅಯಾನ್ 8 ಪಾಯಿಂಟ್ ಗಳಿಸಿದರು. ತಲಾ 7.5 ಪಾಯಿಂಟ್ಗಳೊಂದಿಗೆ ಪ್ರಜ್ವಲ್ ಶೇಟ್ ಮತ್ತು ಆಗಸ್ಟಿನ್ ಕ್ರಮವಾಗಿ 3 ಮತ್ತು 4ನೇ ಸ್ಥಾನ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಕುತೂಹಲಕಾರಿ ತಿರುವುಗಳನ್ನು ಕಂಡ ಪಂದ್ಯಗಳಲ್ಲಿ ಧೃತಿಗೆಡದೆ ಮುನ್ನಡೆದ ಮಂಗಳೂರಿನ ಶರಣ್ ರಾವ್, ಕರ್ನಾಟಕ ರಾಜ್ಯ ಫಿಡೆ ರೇಟೆಡ್ ರ್ಯಾಪಿಡ್, ಬ್ಲಿಟ್ಜ್ ಮುಕ್ತ ಚೆಸ್ ಟೂರ್ನಿಯ ಎರಡೂ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.</p>.<p>ರ್ಯಾಪಿಡ್ನಲ್ಲಿ ಆರವ್ ಸರ್ಬಾಲಿಯ ಹಾಗೂ ಬ್ಲಿಟ್ಜ್ನಲ್ಲಿ ಆರ್ಯನ್ ಫುತಾನೆ ರನ್ನರ್ ಅಪ್ ಆದರು.</p>.<p>ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಟೂರ್ನಿಯ ರ್ಯಾಪಿಡ್ ವಿಭಾಗದಲ್ಲಿ ಶರಣ್ 8 ಪಾಯಿಂಟ್ ಗಳಿಸಿದರೆ ಬ್ಲಿಟ್ಜ್ನಲ್ಲಿ 8.5 ಪಾಯಿಂಟ್ ಕಲೆ ಹಾಕಿದರು.</p>.<p>ಮೊದಲ ದಿನವಾದ ಶನಿವಾರ ರ್ಯಾಪಿಡ್ ವಿಭಾಗದ ಆರು ಸುತ್ತುಗಳ ಮುಕ್ತಾಯಕ್ಕೆ ಮಂಗಳೂರಿನ ಲಕ್ಷಿತ್ ಸಾಲ್ಯಾನ್ ಮತ್ತು ಆಗಸ್ಟಿನ್ ತಲಾ 6 ಪಾಯಿಂಟ್ಗಳನ್ನು ಗಳಿಸಿ ಅಗ್ರಸ್ಥಾನ ಹಂಚಿಕೊಂಡಿದ್ದರು. ಅಗ್ರ ಶ್ರೇಯಾಂಕಿತ ಶರಣ್ ರಾವ್ ಒಂದು ಪಂದ್ಯ ಡ್ರಾ ಮಾಡಿಕೊಂಡು 5.5 ಪಾಯಿಂಟ್ ಗಳಿಸಿದ ಏಕೈಕ ಆಟಗಾರ ಆಗಿದ್ದರು. ಭಾನುವಾರದ 3 ಸುತ್ತುಗಳ ಪೈಕಿ 2ರಲ್ಲಿ ಗೆದ್ದು ಒಂದನ್ನು ಡ್ರಾ ಮಾಡಿಕೊಂಡರು. 16ನೇ ಶ್ರೇಯಾಂಕಿತ ಆರವ್ ಸರ್ಬಾಲಿಯ ಕೂಡ 8 ಪಾಯಿಂಟ್ ಗಳಿಸಿದರು. ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಶರಣ್ಗೆ ಚಾಂಪಿಯನ್ ಪಟ್ಟ ನೀಡಲಾಯಿತು.</p>.<p>ಪಂಕಜ್ ಭಟ್, ವಿಹಾನ್ ಸಚ್ದೇವ್ ಮತ್ತು ಅಭಿನವ್ ಆನಂದ್ ತಲಾ 7.5 ಪಾಯಿಂಟ್ ಗಳಿಸಿ ಕ್ರಮವಾಗಿ 3, 4 ಮತ್ತು 5ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಆಗಸ್ಟಿನ್ 6 ಮತ್ತು ಲಕ್ಷಿತ್ 8ನೇ ಸ್ಥಾನಕ್ಕೆ ಕುಸಿದರು. 2ನೇ ಶ್ರೇಯಾಂಕಿತೆ ಇಶಾ ಶರ್ಮಾ 10ನೇ ಸ್ಥಾನ ಗಳಿಸಿದರು.</p>.<p>ಭಾನುವಾರ ನಡೆದ 9 ಸುತ್ತುಗಳ ಬ್ಲಿಟ್ಜ್ನಲ್ಲಿ ಶರಣ್, ಅಮೋಘ ಪ್ರದರ್ಶನ ನೀಡಿದರು. ಅಯಾನ್ 8 ಪಾಯಿಂಟ್ ಗಳಿಸಿದರು. ತಲಾ 7.5 ಪಾಯಿಂಟ್ಗಳೊಂದಿಗೆ ಪ್ರಜ್ವಲ್ ಶೇಟ್ ಮತ್ತು ಆಗಸ್ಟಿನ್ ಕ್ರಮವಾಗಿ 3 ಮತ್ತು 4ನೇ ಸ್ಥಾನ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>