<p><strong>ದಾವಣಗೆರೆ: </strong>ದಶಕಗಳ ಹಿಂದಿನ ಮಾತು. `ಕರ್ನಾಟಕ ಮ್ಯಾಂಚೆಸ್ಟರ್~ ಎಂದು ದಾವಣಗೆರೆ ಹೆಸರಾಗಿತ್ತು. ಹತ್ತಾರು ಮಿಲ್ಗಳನ್ನು ಹೊಂದಿದ್ದ ಈ ನಗರ ಕಾರ್ಮಿಕರ ಹೋರಾಟಕ್ಕೆ ಮುನ್ನುಡಿ ಬರೆದಿತ್ತು. ತನ್ನ ಒಡಲೊಳಗಿನ ಲಕ್ಷಾಂತರ ಕಾರ್ಮಿಕರಿಗೆ `ಅನ್ನದಾತ~ನಾಗಿದ್ದ ದಾವಣಗೆರೆ, ಅಂದು ಅಕ್ಷರಶಃ ಕಮ್ಯುನಿಸ್ಟರ ಭದ್ರಕೋಟೆಯಾಗಿತ್ತು. ಅದಕ್ಕೆಲ್ಲಾ ನಾಂದಿ ಹಾಡಿದ್ದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಸಂಘಟನೆ. <br /> <br /> 1962ರಲ್ಲಿ ದಾವಣಗೆರೆ ಹತ್ತಿಗಿರಣಿಯಲ್ಲಿ ಆರಂಭವಾದ ಎಐಟಿಯುಸಿ ಸಂಘಟನೆ ಮುಂದೆ ನಗರದಲ್ಲಿಬರೆದಿದ್ದೆಲ್ಲವೂ ರಕ್ತಸಿಕ್ತ ಅಧ್ಯಾಯವೇ. ಹತ್ತಾರು ಮಿಲ್ಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ತಮ್ಮ ಮೂಲಭೂತ ಹಕ್ಕುಗಳ ಹೋರಾಟಕ್ಕೆ ನೇತೃತ್ವ ವಹಿಸಿದ್ದು ಕಾಂ. ಎಂ.ಸಿ. ನರಸಿಂಹನ್. <br /> <br /> ಅಂದಿನ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಕಾಂ.ಆವರಗೆರೆ ಗೌಡ್ರು ಶೇಖರಪ್ಪ, ಪಂಪಾಪತಿ, ವಿಠೋಬರಾವ್, ಮೂರ್ತಿ, ಸುರೇಶ್. ವಿವಿಧ ಮಿಲ್ಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಒಗ್ಗೂಡಿಸಿ, ಅವರ ಹಕ್ಕುಗಳಿಗಾಗಿ ಹೋರಾಟ ರೂಪಿಸುತ್ತಿದ್ದ ಈ ನಾಯಕರನ್ನು ಚಳವಳಿಯಿಂದ ವಿಮುಖಗೊಳಿಸಲು ಮಿಲ್ಗಳ ಮಾಲೀಕರು `ಚಕ್ರವ್ಯೆಹ~ವನ್ನೇ ರಚಿಸಬೇಕಾಯಿತು. <br /> <br /> ಸಂಘಟನೆ ವಿಘಟನೆಗೊಳಿಸಲು ಗೂಂಡಾಗಳನ್ನು ಬಳಸಿದ ಮಾಲೀಕ ವರ್ಗ, ಕೊಲೆ ಪ್ರಕರಣವೊಂದರಲ್ಲಿ ಕಾರ್ಮಿಕ ನೇತಾರರನ್ನು ಜೈಲಿಗೆ ಕಳುಹಿಸಿತು. ಆದರೂ, ವಿವಿಧ ಕೈಗಾರಿಕೆಗಳಲ್ಲಿ ಸಂಘಟನೆ ಮತ್ತಷ್ಟು ಬಲಗೊಂಡಿತು. <br /> <br /> ಸಂಘಟನೆಯ ಬಲ ಸಹಿಸದ ಬಂಡವಾಳಶಾಹಿ ಮಾಲೀಕ ವರ್ಗ ಶೇಖರಪ್ಪ, ಸುರೇಶ್, ಪಂಪಾಪತಿ ಅವರ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿತು. ಆ ಸಂಚಿನಲ್ಲಿ ಸುರೇಶ್, ಶೇಖರಪ್ಪ ಹತ್ಯೆಯಾದರೆ, ಅದೃಷ್ಟವಶಾತ್ ಪಂಪಾಪತಿ ಉಳಿದರು. 1962ರಿಂದ 74ರ ತನಕ ದಾವಣಗೆರೆ ಹಲವು ಹೋರಾಟಗಳಿಗೆ `ಮೂಕ ಸಾಕ್ಷಿ~ಯಾಯಿತು. <br /> <br /> 1974ರಲ್ಲಿ ಪಂಪಾಪತಿ ಮತ್ತೆ ಕಾರ್ಮಿಕ ನಾಯಕರಾಗಿ ಹೊರ ಹೊಮ್ಮಿದ್ದು ನಗರಸಭೆಯ ಅಧ್ಯಕ್ಷ ಸ್ಥಾನ ಪಡೆಯುವ ಮೂಲಕ. ಯಾವ ಕಾರ್ಖಾನೆಯ ಮಾಲೀಕರು ಪಂಪಾಪತಿ ಅವರನ್ನು ಗಡೀ ಪಾರು ಮಾಡಬೇಕೆಂದು ಅಂದುಕೊಂಡಿದ್ದರೋ ಅವರೇ, ಪಂಪಾಪತಿ ಅವರನ್ನು ಸನ್ಮಾನಿಸುವ ಸಂದರ್ಭ ಒದಗಿತ್ತು.<br /> <br /> ನಗರಸಭೆ ಅಧ್ಯಕ್ಷರಾಗಿ ನಗರದ ಸುತ್ತಮುತ್ತ ಆರು ಸಾವಿರಕ್ಕೂ ಹೆಚ್ಚಿನ ಗಿಡ ನೆಡುವ ಮೂಲಕ ನಗರದ ನಾಗರಿಕರಿಗೆ ಹಸಿರಿನ ಮಹತ್ವ ಪರಿಚಯಿಸಿದರು. ನಗರಸಭೆಗೆ ಮೊದಲ ಬಾರಿ `ನಗರಸಭೆ ಕಾರ್ಯಾಲಯ~ ಎಂದು ಕನ್ನಡದಲ್ಲಿ ಬೋರ್ಡ್ ಬರೆಸಿದ್ದ ಪಂಪಾಪತಿ, ನಿಜದ ನೆಲೆಯಲ್ಲಿ ನಗರಕ್ಕೆ ಹೋರಾಟ ಶಬ್ದದ ಅರ್ಥ ಮಾಡಿಸಿಕೊಟ್ಟಿದ್ದರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಅವರು, ನಗರಕ್ಕೆ ಮೊದಲ ಬಾರಿಗೆ ಸಿಟಿಬಸ್ ಸೇವೆ ಸೌಲಭ್ಯ ಕಲ್ಪಿಸಿದ್ದರು.<br /> <br /> ಶಾಸಕರಾಗಿದ್ದಾಗ ರಾಜ್ಯದ ವಿವಿಧ ಕಾರ್ಮಿಕರ ಪರವಾಗಿ ಅನಿರ್ದಿಷ್ಟ ಕಾಲ ಹೋರಾಟ ನಡೆಸಿದ್ದ ಕೀರ್ತಿಯೂ ಅವರದ್ದಾಗಿತ್ತು. ಅದಕ್ಕೆಲ್ಲಾ ಅವರಿಗೆ ಬೆನ್ನೆಲುಬಾಗಿದ್ದು ಎಐಟಿಯುಸಿ. ಅದರ ಪಡಿಯಚ್ಚಿನಲ್ಲೇ ಎಚ್.ಕೆ. ರಾಮಚಂದ್ರಪ್ಪ, ರಾಮರಾವ್, ಕಾಂತರಾವ್, ಎಂ.ಜಿ. ತಿಪ್ಪೇಸ್ವಾಮಿ, ಎಚ್.ವಿ. ವೀರಭದ್ರಪ್ಪ ಮತ್ತಿತರರು ನಾಯಕರಾಗಿ ಹೊರಹೊಮ್ಮುವಂತಾಯಿತು. <br /> <br /> ಆದರೆ, 90ರ ದಶಕದಲ್ಲಿ ಜಾಗತೀಕರಣ ದೆಸೆಯಿಂದ ಕಾವು ಕಳೆದುಕೊಂಡ ಹೋರಾಟ, ನಷ್ಟದ ಹಾದಿ ಹಿಡಿದ ಮಿಲ್ಗಳು ಇಂದು ಇತಿಹಾಸದ ಪುಟ ಸೇರಿವೆ. ಕೈಗಾರಿಕೆ-ಕಾರ್ಮಿಕ ಹೋರಾಟದ ನಡುವೆ ಕಾರ್ಮಿಕರು ಬೀದಿಪಾಲಾದರು. ಒಂದು ಕಾಲಕ್ಕೆ ಇಲ್ಲಿನ ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತಿದ್ದವು ಎಂಬುದು ಮುಂದಿನ ಪೀಳಿಗೆಗೆ ದಂತಕತೆಯೇ ಆಯಿತು. ಆದರೂ ಹೋರಾಟದ ಕಾವು ಕಳೆದುಕೊಳ್ಳದ ನಾಯಕರು ವಿವಿಧ ವಲಯಗಳ ಕಾರ್ಮಿಕರ ಸಂಘಟನೆಯಲ್ಲಿ ನಿರತರಾಗಿದ್ದಾರೆ. <br /> <br /> ದಶಕದ ನಂತರ ದಾವಣಗೆರೆಯಲ್ಲಿ ಎಐಟಿಯುಸಿ ರಾಜ್ಯಮಟ್ಟದ ಸಮ್ಮೇಳನ ನಡೆಯುತ್ತಿದೆ. ಅಂದು ಪಂಪಾಪತಿ ನೆಟ್ಟ ಗುಲ್ಮೊಹರ್ ಮರಗಳಲ್ಲಿ ಇಂದಿಗೂ ಅರಳುತ್ತಿರುವ ಕೆಂಪು ಹೂವಿನಂತೆ ಈ ಸಮ್ಮೇಳನದಲ್ಲಿ `ಕಾರ್ಮಿಕ ಸೂರ್ಯ~ ಉದಯಿಸುವನೇ ಎಂಬುದು ದುಡಿಯುವ ವರ್ಗದ ಪ್ರಶ್ನೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ದಶಕಗಳ ಹಿಂದಿನ ಮಾತು. `ಕರ್ನಾಟಕ ಮ್ಯಾಂಚೆಸ್ಟರ್~ ಎಂದು ದಾವಣಗೆರೆ ಹೆಸರಾಗಿತ್ತು. ಹತ್ತಾರು ಮಿಲ್ಗಳನ್ನು ಹೊಂದಿದ್ದ ಈ ನಗರ ಕಾರ್ಮಿಕರ ಹೋರಾಟಕ್ಕೆ ಮುನ್ನುಡಿ ಬರೆದಿತ್ತು. ತನ್ನ ಒಡಲೊಳಗಿನ ಲಕ್ಷಾಂತರ ಕಾರ್ಮಿಕರಿಗೆ `ಅನ್ನದಾತ~ನಾಗಿದ್ದ ದಾವಣಗೆರೆ, ಅಂದು ಅಕ್ಷರಶಃ ಕಮ್ಯುನಿಸ್ಟರ ಭದ್ರಕೋಟೆಯಾಗಿತ್ತು. ಅದಕ್ಕೆಲ್ಲಾ ನಾಂದಿ ಹಾಡಿದ್ದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಸಂಘಟನೆ. <br /> <br /> 1962ರಲ್ಲಿ ದಾವಣಗೆರೆ ಹತ್ತಿಗಿರಣಿಯಲ್ಲಿ ಆರಂಭವಾದ ಎಐಟಿಯುಸಿ ಸಂಘಟನೆ ಮುಂದೆ ನಗರದಲ್ಲಿಬರೆದಿದ್ದೆಲ್ಲವೂ ರಕ್ತಸಿಕ್ತ ಅಧ್ಯಾಯವೇ. ಹತ್ತಾರು ಮಿಲ್ಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ತಮ್ಮ ಮೂಲಭೂತ ಹಕ್ಕುಗಳ ಹೋರಾಟಕ್ಕೆ ನೇತೃತ್ವ ವಹಿಸಿದ್ದು ಕಾಂ. ಎಂ.ಸಿ. ನರಸಿಂಹನ್. <br /> <br /> ಅಂದಿನ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಕಾಂ.ಆವರಗೆರೆ ಗೌಡ್ರು ಶೇಖರಪ್ಪ, ಪಂಪಾಪತಿ, ವಿಠೋಬರಾವ್, ಮೂರ್ತಿ, ಸುರೇಶ್. ವಿವಿಧ ಮಿಲ್ಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಒಗ್ಗೂಡಿಸಿ, ಅವರ ಹಕ್ಕುಗಳಿಗಾಗಿ ಹೋರಾಟ ರೂಪಿಸುತ್ತಿದ್ದ ಈ ನಾಯಕರನ್ನು ಚಳವಳಿಯಿಂದ ವಿಮುಖಗೊಳಿಸಲು ಮಿಲ್ಗಳ ಮಾಲೀಕರು `ಚಕ್ರವ್ಯೆಹ~ವನ್ನೇ ರಚಿಸಬೇಕಾಯಿತು. <br /> <br /> ಸಂಘಟನೆ ವಿಘಟನೆಗೊಳಿಸಲು ಗೂಂಡಾಗಳನ್ನು ಬಳಸಿದ ಮಾಲೀಕ ವರ್ಗ, ಕೊಲೆ ಪ್ರಕರಣವೊಂದರಲ್ಲಿ ಕಾರ್ಮಿಕ ನೇತಾರರನ್ನು ಜೈಲಿಗೆ ಕಳುಹಿಸಿತು. ಆದರೂ, ವಿವಿಧ ಕೈಗಾರಿಕೆಗಳಲ್ಲಿ ಸಂಘಟನೆ ಮತ್ತಷ್ಟು ಬಲಗೊಂಡಿತು. <br /> <br /> ಸಂಘಟನೆಯ ಬಲ ಸಹಿಸದ ಬಂಡವಾಳಶಾಹಿ ಮಾಲೀಕ ವರ್ಗ ಶೇಖರಪ್ಪ, ಸುರೇಶ್, ಪಂಪಾಪತಿ ಅವರ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿತು. ಆ ಸಂಚಿನಲ್ಲಿ ಸುರೇಶ್, ಶೇಖರಪ್ಪ ಹತ್ಯೆಯಾದರೆ, ಅದೃಷ್ಟವಶಾತ್ ಪಂಪಾಪತಿ ಉಳಿದರು. 1962ರಿಂದ 74ರ ತನಕ ದಾವಣಗೆರೆ ಹಲವು ಹೋರಾಟಗಳಿಗೆ `ಮೂಕ ಸಾಕ್ಷಿ~ಯಾಯಿತು. <br /> <br /> 1974ರಲ್ಲಿ ಪಂಪಾಪತಿ ಮತ್ತೆ ಕಾರ್ಮಿಕ ನಾಯಕರಾಗಿ ಹೊರ ಹೊಮ್ಮಿದ್ದು ನಗರಸಭೆಯ ಅಧ್ಯಕ್ಷ ಸ್ಥಾನ ಪಡೆಯುವ ಮೂಲಕ. ಯಾವ ಕಾರ್ಖಾನೆಯ ಮಾಲೀಕರು ಪಂಪಾಪತಿ ಅವರನ್ನು ಗಡೀ ಪಾರು ಮಾಡಬೇಕೆಂದು ಅಂದುಕೊಂಡಿದ್ದರೋ ಅವರೇ, ಪಂಪಾಪತಿ ಅವರನ್ನು ಸನ್ಮಾನಿಸುವ ಸಂದರ್ಭ ಒದಗಿತ್ತು.<br /> <br /> ನಗರಸಭೆ ಅಧ್ಯಕ್ಷರಾಗಿ ನಗರದ ಸುತ್ತಮುತ್ತ ಆರು ಸಾವಿರಕ್ಕೂ ಹೆಚ್ಚಿನ ಗಿಡ ನೆಡುವ ಮೂಲಕ ನಗರದ ನಾಗರಿಕರಿಗೆ ಹಸಿರಿನ ಮಹತ್ವ ಪರಿಚಯಿಸಿದರು. ನಗರಸಭೆಗೆ ಮೊದಲ ಬಾರಿ `ನಗರಸಭೆ ಕಾರ್ಯಾಲಯ~ ಎಂದು ಕನ್ನಡದಲ್ಲಿ ಬೋರ್ಡ್ ಬರೆಸಿದ್ದ ಪಂಪಾಪತಿ, ನಿಜದ ನೆಲೆಯಲ್ಲಿ ನಗರಕ್ಕೆ ಹೋರಾಟ ಶಬ್ದದ ಅರ್ಥ ಮಾಡಿಸಿಕೊಟ್ಟಿದ್ದರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಅವರು, ನಗರಕ್ಕೆ ಮೊದಲ ಬಾರಿಗೆ ಸಿಟಿಬಸ್ ಸೇವೆ ಸೌಲಭ್ಯ ಕಲ್ಪಿಸಿದ್ದರು.<br /> <br /> ಶಾಸಕರಾಗಿದ್ದಾಗ ರಾಜ್ಯದ ವಿವಿಧ ಕಾರ್ಮಿಕರ ಪರವಾಗಿ ಅನಿರ್ದಿಷ್ಟ ಕಾಲ ಹೋರಾಟ ನಡೆಸಿದ್ದ ಕೀರ್ತಿಯೂ ಅವರದ್ದಾಗಿತ್ತು. ಅದಕ್ಕೆಲ್ಲಾ ಅವರಿಗೆ ಬೆನ್ನೆಲುಬಾಗಿದ್ದು ಎಐಟಿಯುಸಿ. ಅದರ ಪಡಿಯಚ್ಚಿನಲ್ಲೇ ಎಚ್.ಕೆ. ರಾಮಚಂದ್ರಪ್ಪ, ರಾಮರಾವ್, ಕಾಂತರಾವ್, ಎಂ.ಜಿ. ತಿಪ್ಪೇಸ್ವಾಮಿ, ಎಚ್.ವಿ. ವೀರಭದ್ರಪ್ಪ ಮತ್ತಿತರರು ನಾಯಕರಾಗಿ ಹೊರಹೊಮ್ಮುವಂತಾಯಿತು. <br /> <br /> ಆದರೆ, 90ರ ದಶಕದಲ್ಲಿ ಜಾಗತೀಕರಣ ದೆಸೆಯಿಂದ ಕಾವು ಕಳೆದುಕೊಂಡ ಹೋರಾಟ, ನಷ್ಟದ ಹಾದಿ ಹಿಡಿದ ಮಿಲ್ಗಳು ಇಂದು ಇತಿಹಾಸದ ಪುಟ ಸೇರಿವೆ. ಕೈಗಾರಿಕೆ-ಕಾರ್ಮಿಕ ಹೋರಾಟದ ನಡುವೆ ಕಾರ್ಮಿಕರು ಬೀದಿಪಾಲಾದರು. ಒಂದು ಕಾಲಕ್ಕೆ ಇಲ್ಲಿನ ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತಿದ್ದವು ಎಂಬುದು ಮುಂದಿನ ಪೀಳಿಗೆಗೆ ದಂತಕತೆಯೇ ಆಯಿತು. ಆದರೂ ಹೋರಾಟದ ಕಾವು ಕಳೆದುಕೊಳ್ಳದ ನಾಯಕರು ವಿವಿಧ ವಲಯಗಳ ಕಾರ್ಮಿಕರ ಸಂಘಟನೆಯಲ್ಲಿ ನಿರತರಾಗಿದ್ದಾರೆ. <br /> <br /> ದಶಕದ ನಂತರ ದಾವಣಗೆರೆಯಲ್ಲಿ ಎಐಟಿಯುಸಿ ರಾಜ್ಯಮಟ್ಟದ ಸಮ್ಮೇಳನ ನಡೆಯುತ್ತಿದೆ. ಅಂದು ಪಂಪಾಪತಿ ನೆಟ್ಟ ಗುಲ್ಮೊಹರ್ ಮರಗಳಲ್ಲಿ ಇಂದಿಗೂ ಅರಳುತ್ತಿರುವ ಕೆಂಪು ಹೂವಿನಂತೆ ಈ ಸಮ್ಮೇಳನದಲ್ಲಿ `ಕಾರ್ಮಿಕ ಸೂರ್ಯ~ ಉದಯಿಸುವನೇ ಎಂಬುದು ದುಡಿಯುವ ವರ್ಗದ ಪ್ರಶ್ನೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>