<p><strong>ಕೋಲಾರ: </strong>ತಾಲ್ಲೂಕಿನ ಭಟ್ರಹಳ್ಳಿಯಲ್ಲಿ ನೂತನವಾಗಿ ತೆರೆದಿರುವ ಮದ್ಯದ ಅಂಗಡಿಯನ್ನು ಮುಚ್ಚಬೇಕು ಎಂದು ಆಗ್ರಹಿಸಿ ಗ್ರಾಮದ ನಾಗರಿಕರು, ಸ್ತ್ರೀಶಕ್ತಿ ಸಂಘಗಳ ಸದಸ್ಯರು ನಗರದಲ್ಲಿ ಶನಿವಾರ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಬಾಬಣ್ಣ ಅವರಿಗೆ ಮನವಿ ಸಲ್ಲಿಸಿದರು.<br /> <br /> ನಗರದ ಹೊರವಲಯದಲ್ಲಿರುವ ಭಟ್ರಹಳ್ಳಿ ಗೇಟಿನಲ್ಲಿ ಮದ್ಯದ ಅಂಗಡಿ ಯನ್ನು ತೆರೆದಿರುವುದರಿಂದ ಆಸುಪಾಸಿನ ಸಾಕಷ್ಟು ಗ್ರಾಮಗಳ ಜನತೆ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಮೇಲಾಗಿ ಈ ಜಾಗವು ಸಾರ್ವಜನಿಕ ಸ್ಥಳವಾಗಿದೆ. ಇಲ್ಲಿಯೇ ಬಸ್ ನಿಲಾದಣವೂ ಇದೆ.<br /> <br /> ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಣ್ಣಮಕ್ಕಳಿಗೆ ಈ ಸ್ಥಳ ಈಗ ಮುಜುಗರ ಉಂಟು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೆಲವು ತಿಂಗಳ ಹಿಂದೆ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಮದ್ಯದ ಅಂಗಡಿ ಮುಚ್ಚ ಲ್ಪಟ್ಟಿತ್ತು. ಆದರೆ ಮತ್ತೆ ಅಂಗಡಿಯನ್ನು ತೆರೆಯಲಾಗಿದೆ. ಸಾರ್ವಜನಿಕ ಶಾಂತಿ- ನೆಮ್ಮದಿಗೆ ಭಂಗ ಉಂಟಾಗುತ್ತಿದೆ ಎಂದು ದೂರಿದರು.<br /> <br /> ಮುನೇಶ್, ವೆಂಕಟೇಶಮೌರ್ಯ, ಕೆಂಪಣ್ಣ, ಅಂಬರೀಶ್, ಪ್ರಸನ್ನ, ವೈ.ಸಿ. ನಾಗರಾಜ್, ಈಶ್ವರಪ್ಪ, ಚಲಪತಿ, ಬಿ. ಕಷ್ಣಪ್ಪ, ವೆಂಕಟರಾಮ್, ಕಷ್ಣಪ್ಪ, ಸ್ತ್ರೀ ಶಕ್ತಿ ಸಂಘಗಳ ಶೋಭ, ಮುನಿ ಚೌಡಮ್ಮ, ಸಾಕಮ್ಮ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong>ತಾಲ್ಲೂಕಿನ ಭಟ್ರಹಳ್ಳಿಯಲ್ಲಿ ನೂತನವಾಗಿ ತೆರೆದಿರುವ ಮದ್ಯದ ಅಂಗಡಿಯನ್ನು ಮುಚ್ಚಬೇಕು ಎಂದು ಆಗ್ರಹಿಸಿ ಗ್ರಾಮದ ನಾಗರಿಕರು, ಸ್ತ್ರೀಶಕ್ತಿ ಸಂಘಗಳ ಸದಸ್ಯರು ನಗರದಲ್ಲಿ ಶನಿವಾರ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಬಾಬಣ್ಣ ಅವರಿಗೆ ಮನವಿ ಸಲ್ಲಿಸಿದರು.<br /> <br /> ನಗರದ ಹೊರವಲಯದಲ್ಲಿರುವ ಭಟ್ರಹಳ್ಳಿ ಗೇಟಿನಲ್ಲಿ ಮದ್ಯದ ಅಂಗಡಿ ಯನ್ನು ತೆರೆದಿರುವುದರಿಂದ ಆಸುಪಾಸಿನ ಸಾಕಷ್ಟು ಗ್ರಾಮಗಳ ಜನತೆ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಮೇಲಾಗಿ ಈ ಜಾಗವು ಸಾರ್ವಜನಿಕ ಸ್ಥಳವಾಗಿದೆ. ಇಲ್ಲಿಯೇ ಬಸ್ ನಿಲಾದಣವೂ ಇದೆ.<br /> <br /> ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಣ್ಣಮಕ್ಕಳಿಗೆ ಈ ಸ್ಥಳ ಈಗ ಮುಜುಗರ ಉಂಟು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೆಲವು ತಿಂಗಳ ಹಿಂದೆ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಮದ್ಯದ ಅಂಗಡಿ ಮುಚ್ಚ ಲ್ಪಟ್ಟಿತ್ತು. ಆದರೆ ಮತ್ತೆ ಅಂಗಡಿಯನ್ನು ತೆರೆಯಲಾಗಿದೆ. ಸಾರ್ವಜನಿಕ ಶಾಂತಿ- ನೆಮ್ಮದಿಗೆ ಭಂಗ ಉಂಟಾಗುತ್ತಿದೆ ಎಂದು ದೂರಿದರು.<br /> <br /> ಮುನೇಶ್, ವೆಂಕಟೇಶಮೌರ್ಯ, ಕೆಂಪಣ್ಣ, ಅಂಬರೀಶ್, ಪ್ರಸನ್ನ, ವೈ.ಸಿ. ನಾಗರಾಜ್, ಈಶ್ವರಪ್ಪ, ಚಲಪತಿ, ಬಿ. ಕಷ್ಣಪ್ಪ, ವೆಂಕಟರಾಮ್, ಕಷ್ಣಪ್ಪ, ಸ್ತ್ರೀ ಶಕ್ತಿ ಸಂಘಗಳ ಶೋಭ, ಮುನಿ ಚೌಡಮ್ಮ, ಸಾಕಮ್ಮ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>