<p>ಬಾಗಲಕೋಟೆ: ರಾಜಧಾನಿ ಬೆಂಗಳೂರಿನಲ್ಲಿ `ತ್ಯಾಜ್ಯ~ ವಿಲೇವಾರಿ ಬೃಹದಾಕಾರ ಸಮಸ್ಯೆಯಾಗಿ ಮಾರ್ಪಟ್ಟಿರುವ ಸಂದರ್ಭದಲ್ಲೇ ಬಾಗಲಕೋಟೆ ನಗರಸಭೆ `ತ್ಯಾಜ್ಯ~ ಸಂಗ್ರಹಕ್ಕೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ.<br /> <br /> ನಗರದ ಪ್ರತಿ ವಾರ್ಡ್ ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ ಕಸ ಸಂಗ್ರಹಕ್ಕಾಗಿ `ಕಂಟೈನರ್~ಗಳನ್ನು ಇಡಲಾಗಿದೆ. ಆದರೂ, ಸಾರ್ವಜನಿಕರು ತಮ್ಮ ಮನೆಯ ಕಸವನ್ನು ಕಂಟೈನರ್ಗಳಿಗೆ ತಂದು ಹಾಕುವ ಬದಲು ಗಟಾರಕ್ಕೆ, ರಸ್ತೆಗೆ ತಂದು ಬಿಸಾಡುವ ಮೂಲಕ ನಗರಸಭೆಯ ಸ್ವಚ್ಛತೆಗೆ ಸ್ಪಂದಿಸದ ಕಾರಣ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿಯೇ ಕಾಡತೊಡಗಿದೆ.<br /> <br /> ಇದನ್ನು ಮನಗಂಡ ನಗರಸಭೆ ಅಧಿಕಾರಿಗಳು ಪ್ರತಿ ಮನೆಗೆ 10 ಲೀಟರ್ ಸಾಮಾರ್ಥ್ಯದ ಎರಡು ಪ್ಲಾಸ್ಟಿಕ್ ಡಬ್ಬಿ (ಡಸ್ಟ್ಬಿನ್) ನೀಡಿ, ಕಸವನ್ನು ಮೂಲದಲ್ಲೇ ಬೇರ್ಪಡಿಸಿ, ಪ್ರತಿ ದಿನ ಕಸವನ್ನು ಸಂಗ್ರಹಿಸಿ, ಸೂಕ್ತ ವಿಲೇವಾರಿ ಮಾಡಲು ನಿರ್ಧರಿಸಿದೆ.<br /> <br /> ಹಳೆ ಬಾಗಲಕೋಟೆ, ನವನಗರ ಮತ್ತು ವಿದ್ಯಾಗಿರಿ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿ 27 ಸಾವಿರ ಕುಟುಂಬಗಳಿದ್ದು, ಪ್ರತಿ ಮನೆಗೆ ಎರಡರಂತೆ 54 ಸಾವಿರ ಕಸದ ಡಬ್ಬಿಗಳ ಅವಶ್ಯವಿದೆ. ಹೀಗಾಗಿ ನಗರಸಭೆ ಪ್ರಾಯೋಗಿಕವಾಗಿ ಆಯ್ದ ವಾರ್ಡ್ಗಳ 6 ಸಾವಿರ ಕುಟುಂಬಗಳಿಗೆ ಮಾತ್ರ ಪ್ಲಾಸ್ಟಿಕ್ ಡಬ್ಬಿಗಳನ್ನು ನೀಡಲು ನಿರ್ಧರಿಸಿದೆ.<br /> <br /> ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ನಗರಸಭೆ ಪೌರಾಯುಕ್ತ ಎ.ಬಿ.ಶಿಂಧೆ, ರೂ. 12.5 ಕೋಟಿ ವೆಚ್ಚದಲ್ಲಿ 12 ಸಾವಿರ ತ್ಯಾಜ್ಯ ಸಂಗ್ರಹ ಪ್ಲಾಸ್ಟಿಕ್ ಡಬ್ಬಿಗಳನ್ನು ಖರೀದಿಸಿದ್ದು, ವಾರ್ಡ್ ನಂ 1 ಮತ್ತು ಕೊಳಚೆ ಪ್ರದೇಶವೊಂದನ್ನು ಗುರುತಿಸಿ ಒಂದು ಬಿಳಿ (ಹಸಿ ಕಸ ಸಂಗ್ರಹ) ಮತ್ತು ಇನ್ನೊಂದು ಹಸಿರು ಡಬ್ಬಿ(ಒಣ ಕಸ ಸಂಗ್ರಹ) ನೀಡಲಾಗುವುದು ಎಂದರು.<br /> <br /> ಪ್ರತಿ ದಿನ ನಗರಸಭೆ ಸಿಬ್ಬಂದಿ 4 ಆಟೋ-ಟಿಪ್ಪರ್ಗಳಲ್ಲಿ ಮನೆ-ಮನೆಗೆ ತೆರಳಿ ಹಸಿ ಕಸವನ್ನು ಮಾತ್ರ ಸಂಗ್ರಹಿಸುತ್ತಾರೆ. ಒಣ ಕಸವನ್ನು ವಾರಕೊಮ್ಮೆ ಸಂಗ್ರಹಿಸಲಿದ್ದಾರೆ. ಹಸಿ ಕಸವನ್ನು ಎರೆಹುಳು ಮತ್ತು ಜೈವಿಕ ಗೊಬ್ಬರ ತಯಾರಿಕೆಗೆ ಬಳಸಿಕೊಳ್ಳಲಾಗುವುದು ಮತ್ತು ಒಣ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು ಎಂದರು.<br /> <br /> 2013 ಮಾರ್ಚ್ 31ರೊಳಗೆ 6 ಸಾವಿರ ಕುಟುಂಬಕ್ಕೆ ಡಸ್ಟ್ಬಿನ್ ನೀಡಲಾಗುವುದು, ಪ್ರಾಯೋಗಿಕ ಜಾರಿ ಯಶಸ್ವಿಯಾದರೆ, ಎಲ್ಲ 27 ಸಾವಿರ ಕುಟಂಬಕ್ಕೂ ಡಸ್ಟ್ಬಿನ್ ನೀಡುವ ಯೋಜನೆ ಇದೆ ಎಂದು ತಿಳಿಸಿದರು. ಇನ್ನು ಮುಂದಾದರೂ ಬಾಗಲಕೋಟೆ ನಗರ ಕಸ ಮುಕ್ತವಾಗಲಿದೆಯೇ ಕಾದುನೋಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗಲಕೋಟೆ: ರಾಜಧಾನಿ ಬೆಂಗಳೂರಿನಲ್ಲಿ `ತ್ಯಾಜ್ಯ~ ವಿಲೇವಾರಿ ಬೃಹದಾಕಾರ ಸಮಸ್ಯೆಯಾಗಿ ಮಾರ್ಪಟ್ಟಿರುವ ಸಂದರ್ಭದಲ್ಲೇ ಬಾಗಲಕೋಟೆ ನಗರಸಭೆ `ತ್ಯಾಜ್ಯ~ ಸಂಗ್ರಹಕ್ಕೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ.<br /> <br /> ನಗರದ ಪ್ರತಿ ವಾರ್ಡ್ ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ ಕಸ ಸಂಗ್ರಹಕ್ಕಾಗಿ `ಕಂಟೈನರ್~ಗಳನ್ನು ಇಡಲಾಗಿದೆ. ಆದರೂ, ಸಾರ್ವಜನಿಕರು ತಮ್ಮ ಮನೆಯ ಕಸವನ್ನು ಕಂಟೈನರ್ಗಳಿಗೆ ತಂದು ಹಾಕುವ ಬದಲು ಗಟಾರಕ್ಕೆ, ರಸ್ತೆಗೆ ತಂದು ಬಿಸಾಡುವ ಮೂಲಕ ನಗರಸಭೆಯ ಸ್ವಚ್ಛತೆಗೆ ಸ್ಪಂದಿಸದ ಕಾರಣ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿಯೇ ಕಾಡತೊಡಗಿದೆ.<br /> <br /> ಇದನ್ನು ಮನಗಂಡ ನಗರಸಭೆ ಅಧಿಕಾರಿಗಳು ಪ್ರತಿ ಮನೆಗೆ 10 ಲೀಟರ್ ಸಾಮಾರ್ಥ್ಯದ ಎರಡು ಪ್ಲಾಸ್ಟಿಕ್ ಡಬ್ಬಿ (ಡಸ್ಟ್ಬಿನ್) ನೀಡಿ, ಕಸವನ್ನು ಮೂಲದಲ್ಲೇ ಬೇರ್ಪಡಿಸಿ, ಪ್ರತಿ ದಿನ ಕಸವನ್ನು ಸಂಗ್ರಹಿಸಿ, ಸೂಕ್ತ ವಿಲೇವಾರಿ ಮಾಡಲು ನಿರ್ಧರಿಸಿದೆ.<br /> <br /> ಹಳೆ ಬಾಗಲಕೋಟೆ, ನವನಗರ ಮತ್ತು ವಿದ್ಯಾಗಿರಿ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿ 27 ಸಾವಿರ ಕುಟುಂಬಗಳಿದ್ದು, ಪ್ರತಿ ಮನೆಗೆ ಎರಡರಂತೆ 54 ಸಾವಿರ ಕಸದ ಡಬ್ಬಿಗಳ ಅವಶ್ಯವಿದೆ. ಹೀಗಾಗಿ ನಗರಸಭೆ ಪ್ರಾಯೋಗಿಕವಾಗಿ ಆಯ್ದ ವಾರ್ಡ್ಗಳ 6 ಸಾವಿರ ಕುಟುಂಬಗಳಿಗೆ ಮಾತ್ರ ಪ್ಲಾಸ್ಟಿಕ್ ಡಬ್ಬಿಗಳನ್ನು ನೀಡಲು ನಿರ್ಧರಿಸಿದೆ.<br /> <br /> ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ನಗರಸಭೆ ಪೌರಾಯುಕ್ತ ಎ.ಬಿ.ಶಿಂಧೆ, ರೂ. 12.5 ಕೋಟಿ ವೆಚ್ಚದಲ್ಲಿ 12 ಸಾವಿರ ತ್ಯಾಜ್ಯ ಸಂಗ್ರಹ ಪ್ಲಾಸ್ಟಿಕ್ ಡಬ್ಬಿಗಳನ್ನು ಖರೀದಿಸಿದ್ದು, ವಾರ್ಡ್ ನಂ 1 ಮತ್ತು ಕೊಳಚೆ ಪ್ರದೇಶವೊಂದನ್ನು ಗುರುತಿಸಿ ಒಂದು ಬಿಳಿ (ಹಸಿ ಕಸ ಸಂಗ್ರಹ) ಮತ್ತು ಇನ್ನೊಂದು ಹಸಿರು ಡಬ್ಬಿ(ಒಣ ಕಸ ಸಂಗ್ರಹ) ನೀಡಲಾಗುವುದು ಎಂದರು.<br /> <br /> ಪ್ರತಿ ದಿನ ನಗರಸಭೆ ಸಿಬ್ಬಂದಿ 4 ಆಟೋ-ಟಿಪ್ಪರ್ಗಳಲ್ಲಿ ಮನೆ-ಮನೆಗೆ ತೆರಳಿ ಹಸಿ ಕಸವನ್ನು ಮಾತ್ರ ಸಂಗ್ರಹಿಸುತ್ತಾರೆ. ಒಣ ಕಸವನ್ನು ವಾರಕೊಮ್ಮೆ ಸಂಗ್ರಹಿಸಲಿದ್ದಾರೆ. ಹಸಿ ಕಸವನ್ನು ಎರೆಹುಳು ಮತ್ತು ಜೈವಿಕ ಗೊಬ್ಬರ ತಯಾರಿಕೆಗೆ ಬಳಸಿಕೊಳ್ಳಲಾಗುವುದು ಮತ್ತು ಒಣ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು ಎಂದರು.<br /> <br /> 2013 ಮಾರ್ಚ್ 31ರೊಳಗೆ 6 ಸಾವಿರ ಕುಟುಂಬಕ್ಕೆ ಡಸ್ಟ್ಬಿನ್ ನೀಡಲಾಗುವುದು, ಪ್ರಾಯೋಗಿಕ ಜಾರಿ ಯಶಸ್ವಿಯಾದರೆ, ಎಲ್ಲ 27 ಸಾವಿರ ಕುಟಂಬಕ್ಕೂ ಡಸ್ಟ್ಬಿನ್ ನೀಡುವ ಯೋಜನೆ ಇದೆ ಎಂದು ತಿಳಿಸಿದರು. ಇನ್ನು ಮುಂದಾದರೂ ಬಾಗಲಕೋಟೆ ನಗರ ಕಸ ಮುಕ್ತವಾಗಲಿದೆಯೇ ಕಾದುನೋಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>