<p>ಆರು ವರ್ಷಗಳ ವಿರಾಮದ ಬಳಿಕ ಐಎಎಸ್ ಅಧಿಕಾರಿ ಕೆ. ಶಿವರಾಂ ಬಣ್ಣ ಹಚ್ಚಿದ್ದಾರೆ. ಅವರು ಸೇವೆಯಿಂದ ನಿವೃತ್ತಿಯಾಗಿ ಎರಡು ತಿಂಗಳಾಗಿದೆ. ಅಧಿಕಾರಿಯಾಗಿದ್ದಾಗ ತಮ್ಮ ಅನುಭವಕ್ಕೆ ಬಂದ ಸನ್ನಿವೇಶಗಳೇ ಈಗ ಬಣ್ಣಹಚ್ಚಿರುವ `ಈ ಹೃದಯ' ಚಿತ್ರದ ಸಾರವಾಗಿವೆ.<br /> <br /> ಸುದೀರ್ಘವಾಗಿ ನಟನೆಯಿಂದ ದೂರವುಳಿದ ಬೇಸರವನ್ನು `ಈ ಹೃದಯ' ಇಂಗಿಸಲಿದೆ ಎನ್ನುವುದು ಅವರ ಮಾತು. ನಟನೆಯ ಜತಗೆ ಸಮಾಜಸೇವೆಯಲ್ಲಿ ತೊಡಗಿರುವ ಅವರಿಗೆ ರಾಜಕಾರಣದಲ್ಲೂ ಆಸಕ್ತಿ. ಚಿತ್ರರಂಗದ ಮತ್ತು ವೃತ್ತಿಯ ಕುರಿತು ಅವರು `ಮೆಟ್ರೊ'ದೊಂದಿಗೆ ಮಾತನಾಡಿದ್ದಾರೆ.<br /> <br /> <strong>ನಟನೆಯ ಗೀಳು ಎಂದಿನಿಂದ?</strong><br /> ಕಲಾವಿದನಾಗಬೇಕೆಂಬ ಹಂಬಲ ಬಾಲ್ಯದ್ದು. ನಮ್ಮ ತಂದೆ ಕೆಂಪಯ್ಯ ಅವರು ರಂಗಭೂಮಿ ಕಲಾವಿದರು. ನನ್ನ ಕಲಾ ಬದುಕಿಗೆ ಅವರೇ ಪ್ರೇರಣೆ. ಅವರು ಅಭಿನಯಿಸುತ್ತಿದ್ದ ಪೌರಾಣಿಕ ನಾಟಕಗಳಲ್ಲಿ ನನಗೂ ಸಣ್ಣಪಾತ್ರ ದೊರೆಯುತ್ತಿತ್ತು. ಕಾಲೇಜು ಹಂತದಲ್ಲಿ ನಾಟಕಗಳಲ್ಲಿ ಸಕ್ರಿಯನಾದಾಗ ಕಲೆಯ ಬಗೆಗಿನ ತುಡಿತ ವೇಗ ಪಡೆಯಿತು. <br /> <br /> <strong>ಚಿತ್ರರಂಗದಲ್ಲಿ ನಿಮ್ಮ `ನಾಯಕ'ತ್ವಕ್ಕೆ ಸಂದ ಗೆಲುವು ಕಡಿಮೆ ಅಲ್ಲವೆ</strong>? <br /> ಜನಪ್ರಿಯ ನಟನಾಗಬೇಕು ಎಂಬ ಆಸೆಯಿಂದ ನಾನು ಚಿತ್ರರಂಗಕ್ಕೆ ಬಂದವನಲ್ಲ. ಕಲಾವಿದನಾಗಬೇಕು ಎಂದುಕೊಂಡು ಚಿತ್ರರಂಗ ಪ್ರವೇಶಿಸಿದವನು. ನಾಯಕ ಪ್ರಧಾನ ಚಿತ್ರಗಳಿಗಿಂತ ಕಥಾ ಪ್ರಾಮುಖ್ಯ ಚಿತ್ರಗಳಲ್ಲಿ ನಟಿಸುವುದು ಇಷ್ಟ. ಮುಖ್ಯವಾಗಿ ಆ ಕಥೆ ಸಮಾಜಕ್ಕೆ ಸಂದೇಶ ನೀಡುವಂತಿರಬೇಕು. ಮೊದಲ ಚಿತ್ರ `ಬಾ ನಲ್ಲೆ ಮಧುಚಂದ್ರಕೆ'ಯೇ ನನ್ನ ಸಿನಿಮಾ ಲೋಕಕ್ಕೆ ಸಿಕ್ಕ ತಿರುವು. ಆ ಚಿತ್ರದ ಯಶಸ್ಸು ನನ್ನನ್ನು ಚಿತ್ರರಂಗದಲ್ಲಿ ಮುಂದುವರಿಯುವಂತೆ ಮಾಡಿತು. ಇಲ್ಲಿಯವರೆಗೂ ನಟಿಸಿರುವ 10 ಚಿತ್ರಗಳಲ್ಲಿ ಸೋಲು, ಗೆಲುವು ಎಲ್ಲವನ್ನೂ ಕಂಡಿದ್ದೇನೆ. ಚಿತ್ರರಂಗದಲ್ಲಿ ಏರಿಳಿತ ಸಹಜ.<br /> <br /> <strong>`ಈ ಹೃದಯ'ದ ನಂತರ ಯಾವ ಚಿತ್ರದಲ್ಲಿ ನಟಿಸುತ್ತಿದ್ದೀರಿ?</strong><br /> ನಿರ್ದೇಶಕ ಮೋಹನ್ರ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಚಿತ್ರದ ಶೀರ್ಷಿಕೆ ಅಂತಿಮವಾಗಿಲ್ಲ. ಕಥೆ ಕೇಳಿದೆ, ಇಷ್ಟವಾಗಿದೆ. ಸಾಮಾಜಿಕ ಪರಿಣಾಮ ಮತ್ತು ಭಾವನಾತ್ಮಕ ವಸ್ತುವುಳ್ಳ ವಿಷಯ ಕಥೆಯಲ್ಲಿದೆ. <br /> <br /> <strong>ಅಧಿಕಾರಿಗಳು ಬಣ್ಣಹಚ್ಚುವಂತಿಲ್ಲ ಎನ್ನುವ ಸರ್ಕಾರದ ನಿಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೀರಿ, ಆ ವಿಷಯ ಏನಾಯಿತು?</strong><br /> ಸರ್ಕಾರಿ ಅಧಿಕಾರಿಗಳು ಬಣ್ಣಹಚ್ಚುವಂತಿಲ್ಲ ಎನ್ನುವ ನಿರ್ಧಾರ ನನಗಾಗಿಯೇ ಹೊರಡಿಸಿದ ಅಧಿಸೂಚನೆ. ನನ್ನ ಜನಪ್ರಿಯತೆಯನ್ನು ತಡೆಯಲು ಮಾಡಿದ ಪ್ರಯತ್ನ. ಅಂದಿನ ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ಕೆಲವು ಐಎಎಸ್ ಅಧಿಕಾರಿಗಳು ಈ ಹುನ್ನಾರದ ಹಿಂದಿದ್ದರು. ರಾಷ್ಟ್ರೀಕೃತ ಬ್ಯಾಂಕ್ಗಳು ಸೇರಿದಂತೆ ಕೆಲವು ಇಲಾಖೆಗಳಲ್ಲಿರುವ ನೌಕರರು ಕ್ರೀಡಾಪಟುಗಳಾಗಿದ್ದರೆ ಅವರನ್ನು ಆ ಕ್ಷೇತ್ರದಲ್ಲೇ ಪೂರ್ಣವಾಗಿ ತೊಡಗಿಸಲಾಗುತ್ತದೆ. ಆದರೆ ಚಿತ್ರರಂಗದಲ್ಲಿ ತೊಡಗಿದರೆ ತಾರತಮ್ಯವೇಕೆ?<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆರು ವರ್ಷಗಳ ವಿರಾಮದ ಬಳಿಕ ಐಎಎಸ್ ಅಧಿಕಾರಿ ಕೆ. ಶಿವರಾಂ ಬಣ್ಣ ಹಚ್ಚಿದ್ದಾರೆ. ಅವರು ಸೇವೆಯಿಂದ ನಿವೃತ್ತಿಯಾಗಿ ಎರಡು ತಿಂಗಳಾಗಿದೆ. ಅಧಿಕಾರಿಯಾಗಿದ್ದಾಗ ತಮ್ಮ ಅನುಭವಕ್ಕೆ ಬಂದ ಸನ್ನಿವೇಶಗಳೇ ಈಗ ಬಣ್ಣಹಚ್ಚಿರುವ `ಈ ಹೃದಯ' ಚಿತ್ರದ ಸಾರವಾಗಿವೆ.<br /> <br /> ಸುದೀರ್ಘವಾಗಿ ನಟನೆಯಿಂದ ದೂರವುಳಿದ ಬೇಸರವನ್ನು `ಈ ಹೃದಯ' ಇಂಗಿಸಲಿದೆ ಎನ್ನುವುದು ಅವರ ಮಾತು. ನಟನೆಯ ಜತಗೆ ಸಮಾಜಸೇವೆಯಲ್ಲಿ ತೊಡಗಿರುವ ಅವರಿಗೆ ರಾಜಕಾರಣದಲ್ಲೂ ಆಸಕ್ತಿ. ಚಿತ್ರರಂಗದ ಮತ್ತು ವೃತ್ತಿಯ ಕುರಿತು ಅವರು `ಮೆಟ್ರೊ'ದೊಂದಿಗೆ ಮಾತನಾಡಿದ್ದಾರೆ.<br /> <br /> <strong>ನಟನೆಯ ಗೀಳು ಎಂದಿನಿಂದ?</strong><br /> ಕಲಾವಿದನಾಗಬೇಕೆಂಬ ಹಂಬಲ ಬಾಲ್ಯದ್ದು. ನಮ್ಮ ತಂದೆ ಕೆಂಪಯ್ಯ ಅವರು ರಂಗಭೂಮಿ ಕಲಾವಿದರು. ನನ್ನ ಕಲಾ ಬದುಕಿಗೆ ಅವರೇ ಪ್ರೇರಣೆ. ಅವರು ಅಭಿನಯಿಸುತ್ತಿದ್ದ ಪೌರಾಣಿಕ ನಾಟಕಗಳಲ್ಲಿ ನನಗೂ ಸಣ್ಣಪಾತ್ರ ದೊರೆಯುತ್ತಿತ್ತು. ಕಾಲೇಜು ಹಂತದಲ್ಲಿ ನಾಟಕಗಳಲ್ಲಿ ಸಕ್ರಿಯನಾದಾಗ ಕಲೆಯ ಬಗೆಗಿನ ತುಡಿತ ವೇಗ ಪಡೆಯಿತು. <br /> <br /> <strong>ಚಿತ್ರರಂಗದಲ್ಲಿ ನಿಮ್ಮ `ನಾಯಕ'ತ್ವಕ್ಕೆ ಸಂದ ಗೆಲುವು ಕಡಿಮೆ ಅಲ್ಲವೆ</strong>? <br /> ಜನಪ್ರಿಯ ನಟನಾಗಬೇಕು ಎಂಬ ಆಸೆಯಿಂದ ನಾನು ಚಿತ್ರರಂಗಕ್ಕೆ ಬಂದವನಲ್ಲ. ಕಲಾವಿದನಾಗಬೇಕು ಎಂದುಕೊಂಡು ಚಿತ್ರರಂಗ ಪ್ರವೇಶಿಸಿದವನು. ನಾಯಕ ಪ್ರಧಾನ ಚಿತ್ರಗಳಿಗಿಂತ ಕಥಾ ಪ್ರಾಮುಖ್ಯ ಚಿತ್ರಗಳಲ್ಲಿ ನಟಿಸುವುದು ಇಷ್ಟ. ಮುಖ್ಯವಾಗಿ ಆ ಕಥೆ ಸಮಾಜಕ್ಕೆ ಸಂದೇಶ ನೀಡುವಂತಿರಬೇಕು. ಮೊದಲ ಚಿತ್ರ `ಬಾ ನಲ್ಲೆ ಮಧುಚಂದ್ರಕೆ'ಯೇ ನನ್ನ ಸಿನಿಮಾ ಲೋಕಕ್ಕೆ ಸಿಕ್ಕ ತಿರುವು. ಆ ಚಿತ್ರದ ಯಶಸ್ಸು ನನ್ನನ್ನು ಚಿತ್ರರಂಗದಲ್ಲಿ ಮುಂದುವರಿಯುವಂತೆ ಮಾಡಿತು. ಇಲ್ಲಿಯವರೆಗೂ ನಟಿಸಿರುವ 10 ಚಿತ್ರಗಳಲ್ಲಿ ಸೋಲು, ಗೆಲುವು ಎಲ್ಲವನ್ನೂ ಕಂಡಿದ್ದೇನೆ. ಚಿತ್ರರಂಗದಲ್ಲಿ ಏರಿಳಿತ ಸಹಜ.<br /> <br /> <strong>`ಈ ಹೃದಯ'ದ ನಂತರ ಯಾವ ಚಿತ್ರದಲ್ಲಿ ನಟಿಸುತ್ತಿದ್ದೀರಿ?</strong><br /> ನಿರ್ದೇಶಕ ಮೋಹನ್ರ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಚಿತ್ರದ ಶೀರ್ಷಿಕೆ ಅಂತಿಮವಾಗಿಲ್ಲ. ಕಥೆ ಕೇಳಿದೆ, ಇಷ್ಟವಾಗಿದೆ. ಸಾಮಾಜಿಕ ಪರಿಣಾಮ ಮತ್ತು ಭಾವನಾತ್ಮಕ ವಸ್ತುವುಳ್ಳ ವಿಷಯ ಕಥೆಯಲ್ಲಿದೆ. <br /> <br /> <strong>ಅಧಿಕಾರಿಗಳು ಬಣ್ಣಹಚ್ಚುವಂತಿಲ್ಲ ಎನ್ನುವ ಸರ್ಕಾರದ ನಿಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೀರಿ, ಆ ವಿಷಯ ಏನಾಯಿತು?</strong><br /> ಸರ್ಕಾರಿ ಅಧಿಕಾರಿಗಳು ಬಣ್ಣಹಚ್ಚುವಂತಿಲ್ಲ ಎನ್ನುವ ನಿರ್ಧಾರ ನನಗಾಗಿಯೇ ಹೊರಡಿಸಿದ ಅಧಿಸೂಚನೆ. ನನ್ನ ಜನಪ್ರಿಯತೆಯನ್ನು ತಡೆಯಲು ಮಾಡಿದ ಪ್ರಯತ್ನ. ಅಂದಿನ ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ಕೆಲವು ಐಎಎಸ್ ಅಧಿಕಾರಿಗಳು ಈ ಹುನ್ನಾರದ ಹಿಂದಿದ್ದರು. ರಾಷ್ಟ್ರೀಕೃತ ಬ್ಯಾಂಕ್ಗಳು ಸೇರಿದಂತೆ ಕೆಲವು ಇಲಾಖೆಗಳಲ್ಲಿರುವ ನೌಕರರು ಕ್ರೀಡಾಪಟುಗಳಾಗಿದ್ದರೆ ಅವರನ್ನು ಆ ಕ್ಷೇತ್ರದಲ್ಲೇ ಪೂರ್ಣವಾಗಿ ತೊಡಗಿಸಲಾಗುತ್ತದೆ. ಆದರೆ ಚಿತ್ರರಂಗದಲ್ಲಿ ತೊಡಗಿದರೆ ತಾರತಮ್ಯವೇಕೆ?<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>