<p>ಕೋಲಾರ: ಖಾದಿ, ಗಾಂಧೀಜಿ, ಭಗವದ್ಗೀತೆ ಬಗ್ಗೆ ಶ್ರದ್ಧೆ ಹೊಂದಿದ್ದ ಸರಳ ಜೀವಿ ಕೆ.ಪಟ್ಟಾಭಿರಾಮನ್ ಅವರನ್ನು ಸ್ಮರಣೆ ಮಾಡುವವರು ಇಲ್ಲವೇ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಆದರೆ ಇದೇ ವೇಳೆ ಅವರ ಕುರಿತ ಪುಸ್ತಕ ಬಿಡುಗಡೆಯಾಗಿರುವುದು ಆಶಾದಾಯಕ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.<br /> <br /> ತಾಲ್ಲೂಕಿನ ಬೆಗ್ಲಿಹೊಸಹಳ್ಳಿಯ ಗ್ರೀನ್ ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಕೆ.ಆರ್.ಜಯಶ್ರೀ ಅವರ ‘ಕೋಲಾರ ಗಾಂಧಿ ಕೆ.ಪಟ್ಟಭಿರಾಮನ್’ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಚಿವ ಸಂಪುಟದಲ್ಲಿ ಸ್ಥಾನ ಗಳಿಸುವ ಎಲ್ಲ ಅರ್ಹತೆ ಇದ್ದರೂ ಪಟ್ಟಾಭಿರಾಮನ್ ಅವರಿಗೆ ದೊರಕಲಿಲ್ಲ ಎಂದು ಹೇಳಿದರು.<br /> <br /> ಜಾತಿ ಜನಸಂಖ್ಯೆ ಆಧರಿಸಿ ಚುನಾವಣೆ ಟಿಕೆಟ್ ನೀಡುವ ಧೋರಣೆಯನ್ನು ವಿರೋಧಿಸಿದ್ದ ಅವರು, ಕಾಂಗ್ರೆಸ್ ತೊರೆದು ಸರ್ವೋದಯ ಪಕ್ಷ ಸ್ಥಾಪಿಸಿ ಸ್ವತಂತ್ರವಾಗಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರು ಎಂದರು.<br /> <br /> ಪಟ್ಟಾಭಿರಾಮನ್ ಅವರ ಮೊಮ್ಮಗಳು, ನಿವೃತ್ತ ಪ್ರಾಂಶುಪಾಲರಾದ ಕೆ.ಎಂ.ಉಮಾದೇವಿ ಕೃತಿ ಬಿಡುಗಡೆ ಮಾಡಿದರು.<br /> <br /> ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪಟ್ಟಾಭಿರಾಮನ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದು, ಕೋಲಾರ– ಚಿಕ್ಕಬಳ್ಳಾಪುರ ಕೇಂದ್ರೀಯ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ವಿ.ಶಂಕರಪ್ಪ, ಪಟ್ಟಾಭಿರಾಮನ್ ಅವರಿಂದ ತಾವು ಉಪಕೃತರಾದದ್ದನ್ನು ಸ್ಮರಿಸಿದರು.<br /> <br /> ಅಧ್ಯಕ್ಷತೆ ವಹಿಸಿದ್ದ ವಕೀಲ ಕೆ.ಮುನಿಸ್ವಾಮಿಗೌಡರೇ ಕಾರ್ಯಕ್ರಮ ನಿರ್ವಹಿಸಿ ಗಮನ ಸೆಳೆದರು. ವನಸುಮ ಪ್ರಕಾಶನದ ಆರ್.ವೇಣುಗೋಪಾಲ್, ಲೇಖಕಿ ಕೆ.ಆರ್.ಜಯಶ್ರೀ, ಅವರ ತಾಯಿ ಕಮಲಮ್ಮ ವೇದಿಕೆಯಲ್ಲಿದ್ದರು. ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ವಕೀಲ ಬಿಸಪ್ಪಗೌಡ, ಪಟ್ಟಾಭಿರಾಮನ್ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ಖಾದಿ, ಗಾಂಧೀಜಿ, ಭಗವದ್ಗೀತೆ ಬಗ್ಗೆ ಶ್ರದ್ಧೆ ಹೊಂದಿದ್ದ ಸರಳ ಜೀವಿ ಕೆ.ಪಟ್ಟಾಭಿರಾಮನ್ ಅವರನ್ನು ಸ್ಮರಣೆ ಮಾಡುವವರು ಇಲ್ಲವೇ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಆದರೆ ಇದೇ ವೇಳೆ ಅವರ ಕುರಿತ ಪುಸ್ತಕ ಬಿಡುಗಡೆಯಾಗಿರುವುದು ಆಶಾದಾಯಕ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.<br /> <br /> ತಾಲ್ಲೂಕಿನ ಬೆಗ್ಲಿಹೊಸಹಳ್ಳಿಯ ಗ್ರೀನ್ ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಕೆ.ಆರ್.ಜಯಶ್ರೀ ಅವರ ‘ಕೋಲಾರ ಗಾಂಧಿ ಕೆ.ಪಟ್ಟಭಿರಾಮನ್’ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಚಿವ ಸಂಪುಟದಲ್ಲಿ ಸ್ಥಾನ ಗಳಿಸುವ ಎಲ್ಲ ಅರ್ಹತೆ ಇದ್ದರೂ ಪಟ್ಟಾಭಿರಾಮನ್ ಅವರಿಗೆ ದೊರಕಲಿಲ್ಲ ಎಂದು ಹೇಳಿದರು.<br /> <br /> ಜಾತಿ ಜನಸಂಖ್ಯೆ ಆಧರಿಸಿ ಚುನಾವಣೆ ಟಿಕೆಟ್ ನೀಡುವ ಧೋರಣೆಯನ್ನು ವಿರೋಧಿಸಿದ್ದ ಅವರು, ಕಾಂಗ್ರೆಸ್ ತೊರೆದು ಸರ್ವೋದಯ ಪಕ್ಷ ಸ್ಥಾಪಿಸಿ ಸ್ವತಂತ್ರವಾಗಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರು ಎಂದರು.<br /> <br /> ಪಟ್ಟಾಭಿರಾಮನ್ ಅವರ ಮೊಮ್ಮಗಳು, ನಿವೃತ್ತ ಪ್ರಾಂಶುಪಾಲರಾದ ಕೆ.ಎಂ.ಉಮಾದೇವಿ ಕೃತಿ ಬಿಡುಗಡೆ ಮಾಡಿದರು.<br /> <br /> ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪಟ್ಟಾಭಿರಾಮನ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದು, ಕೋಲಾರ– ಚಿಕ್ಕಬಳ್ಳಾಪುರ ಕೇಂದ್ರೀಯ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ವಿ.ಶಂಕರಪ್ಪ, ಪಟ್ಟಾಭಿರಾಮನ್ ಅವರಿಂದ ತಾವು ಉಪಕೃತರಾದದ್ದನ್ನು ಸ್ಮರಿಸಿದರು.<br /> <br /> ಅಧ್ಯಕ್ಷತೆ ವಹಿಸಿದ್ದ ವಕೀಲ ಕೆ.ಮುನಿಸ್ವಾಮಿಗೌಡರೇ ಕಾರ್ಯಕ್ರಮ ನಿರ್ವಹಿಸಿ ಗಮನ ಸೆಳೆದರು. ವನಸುಮ ಪ್ರಕಾಶನದ ಆರ್.ವೇಣುಗೋಪಾಲ್, ಲೇಖಕಿ ಕೆ.ಆರ್.ಜಯಶ್ರೀ, ಅವರ ತಾಯಿ ಕಮಲಮ್ಮ ವೇದಿಕೆಯಲ್ಲಿದ್ದರು. ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ವಕೀಲ ಬಿಸಪ್ಪಗೌಡ, ಪಟ್ಟಾಭಿರಾಮನ್ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>