<p>ಮತ್ತೊಂದು ಚಿತ್ರದ ಪ್ರಸವ ವೇದನೆ ಕೋಮಲ್ ಮುಖದಲ್ಲಿ ತುಂಬಿತ್ತು. `ಕಳ್ ಮಂಜ~ ಚಿತ್ರ ಬಿಡುಗಡೆಯಾದಾಗ ತಮ್ಮ ಚಿತ್ರಕ್ಕಾಗಿ ಥಿಯೇಟರ್ಗಳಿಗೆ ಪರದಾಡುವ ಪರಿಸ್ಥಿತಿ ಅವರಿಗೆ ಇತ್ತು. ಈಗ ಕಾಲ ಬದಲಾಗಿದೆ.<br /> <br /> `ಮರ್ಯಾದೆ ರಾಮಣ್ಣ~ ಚಿತ್ರಕ್ಕಾಗಿ ರಾಜ್ಯದ ಕೆಲವು ಭಾಗಗಳ ಚಿತ್ರಮಂದಿರದ ಮಾಲೀಕರು ದುಂಬಾಲು ಬಿದ್ದಿರುವುದೇ ಇದಕ್ಕೆ ಸಾಕ್ಷಿ. ಖುದ್ದು ಕೋಮಲ್ ಈ ವಿಷಯ ಹಂಚಿಕೊಂಡರು. <br /> <br /> ಒಂದಿಲ್ಲೊಂದು ಕಾರಣದಿಂದ ಬಿಡುಗಡೆ ಮುಂದೂಡುತ್ತಲೇ ಬಂದ `ಮರ್ಯಾದೆ ರಾಮಣ್ಣ~ ಇಂದು ತೆರೆಕಾಣುತ್ತಿದೆ. ಕಳೆದ ವಾರವೇ ಬಿಡುಗಡೆಯಾಗಬೇಕಿದ್ದ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅಸ್ತು ಎನ್ನುವುದು ತಡವಾಗಿದ್ದರಿಂದ ಬಿಡುಗಡೆ ಭಾಗ್ಯ ಸಿಗಲಿಲ್ಲ. ಹಾಗಾಗಿ ಈ ವಾರ ತೆರೆ ಕಾಣಿಸಲು ಸಿದ್ಧವಾಗಿದ್ದ ಚಿತ್ರತಂಡ ಸುದ್ದಿಮಿತ್ರರ ಮುಂದೆ ಕೆಲ ಮಾತುಗಳನ್ನು ಹಂಚಿಕೊಂಡಿತು.<br /> <br /> ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಬೇಕೆಂಬ ಉದ್ದೇಶದಿಂದ ಬರೋಬ್ಬರಿ 140ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣಿಸಲಾಗುತ್ತಿದೆ. ಹೈದರಾಬಾದ್, ಮುಂಬೈ, ದೆಹಲಿಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ. <br /> <br /> ಇದು ನಟ ಕೋಮಲ್ರಲ್ಲಿ ತಳಮಳವನ್ನೂ ಹುಟ್ಟಿಸಿದೆ. ಚಿತ್ರವನ್ನು ಜನ ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ಆತ್ಮವಿಶ್ವಾಸವಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂಬುದು ಅವರ ಅಭಿಪ್ರಾಯ.<br /> <br /> `ಕೆಲವು ವರ್ಷಗಳ ಹಿಂದೆ ರಜನಿಕಾಂತ್ ಚಿತ್ರವೊಂದು ಬಿಡುಗಡೆಯಾದಾಗ ದಕ್ಷಿಣದ ನಟನ ಚಿತ್ರವೊಂದು ದೇಶದೆಲ್ಲೆಡೆ ಬಿಡುಗಡೆಯಾಗುತ್ತದೆಯೇ ಎಂದು ಆಶ್ಚರ್ಯಪಟ್ಟಿದ್ದೆ. <br /> <br /> ಈಗ ನನ್ನ ಚಿತ್ರ ಬೇರೆ ರಾಜ್ಯಗಳಲ್ಲಿ ಬಿಡುಗಡೆಯಾಗುತ್ತಿದೆ~ ಎಂದು ಭಾವುಕರಾಗಿ ಅರೆಕ್ಷಣ ಮಾತು ನಿಲ್ಲಿಸಿದರು. ಹಂಚಿಕೆದಾರರಾದ ಲೀಡರ್ ಪ್ರೊಡಕ್ಷನ್ರವರ ಕೈಗುಣ ಚೆನ್ನಾಗಿದೆ. ಹಾಗಾಗಿ ಖಂಡಿತ `...ರಾಮಣ್ಣ~ ಗೆಲ್ಲುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಕೋಮಲ್.<br /> <br /> ಹೊರರಾಜ್ಯಗಳಲ್ಲೂ ಸಾಕಷ್ಟು ಕನ್ನಡಿಗರಿದ್ದಾರೆ. ಜೊತೆಗೆ ಕೋಮಲ್ಗೆ ಒಳ್ಳೆ ಇಮೇಜ್ ಇದೆ. ಹೀಗಾಗಿ ಜನ ಚಿತ್ರವನ್ನು ಖಂಡಿತ ನೋಡುತ್ತಾರೆ. ಅದೇ ಧೈರ್ಯದ ಮೇಲೆ ಇಷ್ಟೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು ನಿರ್ದೇಶಕ ಗುರುಪ್ರಸಾದ್.<br /> <br /> ಮಾತಿಗೆ ನಿಂತವರೆಲ್ಲರೂ ಪರಸ್ಪರ ಒಬ್ಬರನ್ನೊಬ್ಬರು ಹೊಗಳಲು ಪದಗಳನ್ನು ಮೀಸಲಿಟ್ಟರು. ಸಂಕಲನಕಾರ ಬಸವರಾಜ್ ಅರಸ್ ಒಂದು ಹೆಜ್ಜೆ ಮುಂದೆ ಹೋಗಿ ಕೋಮಲ್ ಅವರ ನಟನೆಯನ್ನು ಹಾಲಿವುಡ್ ನಟ ಆಲಿವರ್ ಹಾರ್ಡಿಗೆ ಹೋಲಿಸಿದರು. <br /> ಕೇಳಿದ್ದಕ್ಕೆಲ್ಲ ಇಲ್ಲ ಎನ್ನದ ನಿರ್ಮಾಪಕ ಕುಮರೇಶ್ ಬಾಬು ಅವರನ್ನು ಎಲ್ಲರೂ ಕೊಂಡಾಡಿದರು. ಸಿನಿಮಾ ಒಂದು ವ್ಯವಹಾರವೆಂಬುದು ಭಾಸವಾಗದಂತೆ ಇಡೀ ಚಿತ್ರತಂಡವನ್ನು ಕುಟುಂಬದಂತೆ ಪ್ರೀತಿಯಿಂದ ನೋಡಿಕೊಂಡರು ಎಂದು ನಟರಾದ ರಾಜೇಶ್, ಮನ್ದೀಪ್ರಾಯ್, ಶಿವಕುಮಾರ್, ನಟಿ ಪುಷ್ಪಾಸ್ವಾಮಿ ಹೊಗಳಿಕೆಯ ಹೊಳೆ ಹರಿಸಿದರು.<br /> <br /> ಚಿತ್ರದಲ್ಲಿ ಕೋಮಲ್ ತುಳಿಯುವ ಸೈಕಲ್ಗೆ ನಟ ಉಪೇಂದ್ರ ಧ್ವನಿ ನೀಡಿದ್ದಾರೆ. ಸೈಕಲ್ ಹತ್ತಿ ರಾಜ್ಯದಾದ್ಯಂತ ಪ್ರಚಾರ ಮಾಡುವ ಕೋಮಲ್ ಇರಾದೆ ಅವರು ಬೇರೆ ಚಿತ್ರಗಳಲ್ಲಿ ಬಿಜಿಯಾಗಿರುವ ಕಾರಣ ಇನ್ನೂ ಕೈಗೂಡಿಲ್ಲ. <br /> <br /> ಆದರೆ ಚಿತ್ರ ಬಿಡುಗಡೆಯಾದ ಬಳಿಕ ಸೈಕಲ್ ತುಳಿಯುವುದು ಮಾತ್ರ ಶತಃಸಿದ್ಧವಂತೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮತ್ತೊಂದು ಚಿತ್ರದ ಪ್ರಸವ ವೇದನೆ ಕೋಮಲ್ ಮುಖದಲ್ಲಿ ತುಂಬಿತ್ತು. `ಕಳ್ ಮಂಜ~ ಚಿತ್ರ ಬಿಡುಗಡೆಯಾದಾಗ ತಮ್ಮ ಚಿತ್ರಕ್ಕಾಗಿ ಥಿಯೇಟರ್ಗಳಿಗೆ ಪರದಾಡುವ ಪರಿಸ್ಥಿತಿ ಅವರಿಗೆ ಇತ್ತು. ಈಗ ಕಾಲ ಬದಲಾಗಿದೆ.<br /> <br /> `ಮರ್ಯಾದೆ ರಾಮಣ್ಣ~ ಚಿತ್ರಕ್ಕಾಗಿ ರಾಜ್ಯದ ಕೆಲವು ಭಾಗಗಳ ಚಿತ್ರಮಂದಿರದ ಮಾಲೀಕರು ದುಂಬಾಲು ಬಿದ್ದಿರುವುದೇ ಇದಕ್ಕೆ ಸಾಕ್ಷಿ. ಖುದ್ದು ಕೋಮಲ್ ಈ ವಿಷಯ ಹಂಚಿಕೊಂಡರು. <br /> <br /> ಒಂದಿಲ್ಲೊಂದು ಕಾರಣದಿಂದ ಬಿಡುಗಡೆ ಮುಂದೂಡುತ್ತಲೇ ಬಂದ `ಮರ್ಯಾದೆ ರಾಮಣ್ಣ~ ಇಂದು ತೆರೆಕಾಣುತ್ತಿದೆ. ಕಳೆದ ವಾರವೇ ಬಿಡುಗಡೆಯಾಗಬೇಕಿದ್ದ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅಸ್ತು ಎನ್ನುವುದು ತಡವಾಗಿದ್ದರಿಂದ ಬಿಡುಗಡೆ ಭಾಗ್ಯ ಸಿಗಲಿಲ್ಲ. ಹಾಗಾಗಿ ಈ ವಾರ ತೆರೆ ಕಾಣಿಸಲು ಸಿದ್ಧವಾಗಿದ್ದ ಚಿತ್ರತಂಡ ಸುದ್ದಿಮಿತ್ರರ ಮುಂದೆ ಕೆಲ ಮಾತುಗಳನ್ನು ಹಂಚಿಕೊಂಡಿತು.<br /> <br /> ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಬೇಕೆಂಬ ಉದ್ದೇಶದಿಂದ ಬರೋಬ್ಬರಿ 140ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣಿಸಲಾಗುತ್ತಿದೆ. ಹೈದರಾಬಾದ್, ಮುಂಬೈ, ದೆಹಲಿಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ. <br /> <br /> ಇದು ನಟ ಕೋಮಲ್ರಲ್ಲಿ ತಳಮಳವನ್ನೂ ಹುಟ್ಟಿಸಿದೆ. ಚಿತ್ರವನ್ನು ಜನ ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ಆತ್ಮವಿಶ್ವಾಸವಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂಬುದು ಅವರ ಅಭಿಪ್ರಾಯ.<br /> <br /> `ಕೆಲವು ವರ್ಷಗಳ ಹಿಂದೆ ರಜನಿಕಾಂತ್ ಚಿತ್ರವೊಂದು ಬಿಡುಗಡೆಯಾದಾಗ ದಕ್ಷಿಣದ ನಟನ ಚಿತ್ರವೊಂದು ದೇಶದೆಲ್ಲೆಡೆ ಬಿಡುಗಡೆಯಾಗುತ್ತದೆಯೇ ಎಂದು ಆಶ್ಚರ್ಯಪಟ್ಟಿದ್ದೆ. <br /> <br /> ಈಗ ನನ್ನ ಚಿತ್ರ ಬೇರೆ ರಾಜ್ಯಗಳಲ್ಲಿ ಬಿಡುಗಡೆಯಾಗುತ್ತಿದೆ~ ಎಂದು ಭಾವುಕರಾಗಿ ಅರೆಕ್ಷಣ ಮಾತು ನಿಲ್ಲಿಸಿದರು. ಹಂಚಿಕೆದಾರರಾದ ಲೀಡರ್ ಪ್ರೊಡಕ್ಷನ್ರವರ ಕೈಗುಣ ಚೆನ್ನಾಗಿದೆ. ಹಾಗಾಗಿ ಖಂಡಿತ `...ರಾಮಣ್ಣ~ ಗೆಲ್ಲುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಕೋಮಲ್.<br /> <br /> ಹೊರರಾಜ್ಯಗಳಲ್ಲೂ ಸಾಕಷ್ಟು ಕನ್ನಡಿಗರಿದ್ದಾರೆ. ಜೊತೆಗೆ ಕೋಮಲ್ಗೆ ಒಳ್ಳೆ ಇಮೇಜ್ ಇದೆ. ಹೀಗಾಗಿ ಜನ ಚಿತ್ರವನ್ನು ಖಂಡಿತ ನೋಡುತ್ತಾರೆ. ಅದೇ ಧೈರ್ಯದ ಮೇಲೆ ಇಷ್ಟೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು ನಿರ್ದೇಶಕ ಗುರುಪ್ರಸಾದ್.<br /> <br /> ಮಾತಿಗೆ ನಿಂತವರೆಲ್ಲರೂ ಪರಸ್ಪರ ಒಬ್ಬರನ್ನೊಬ್ಬರು ಹೊಗಳಲು ಪದಗಳನ್ನು ಮೀಸಲಿಟ್ಟರು. ಸಂಕಲನಕಾರ ಬಸವರಾಜ್ ಅರಸ್ ಒಂದು ಹೆಜ್ಜೆ ಮುಂದೆ ಹೋಗಿ ಕೋಮಲ್ ಅವರ ನಟನೆಯನ್ನು ಹಾಲಿವುಡ್ ನಟ ಆಲಿವರ್ ಹಾರ್ಡಿಗೆ ಹೋಲಿಸಿದರು. <br /> ಕೇಳಿದ್ದಕ್ಕೆಲ್ಲ ಇಲ್ಲ ಎನ್ನದ ನಿರ್ಮಾಪಕ ಕುಮರೇಶ್ ಬಾಬು ಅವರನ್ನು ಎಲ್ಲರೂ ಕೊಂಡಾಡಿದರು. ಸಿನಿಮಾ ಒಂದು ವ್ಯವಹಾರವೆಂಬುದು ಭಾಸವಾಗದಂತೆ ಇಡೀ ಚಿತ್ರತಂಡವನ್ನು ಕುಟುಂಬದಂತೆ ಪ್ರೀತಿಯಿಂದ ನೋಡಿಕೊಂಡರು ಎಂದು ನಟರಾದ ರಾಜೇಶ್, ಮನ್ದೀಪ್ರಾಯ್, ಶಿವಕುಮಾರ್, ನಟಿ ಪುಷ್ಪಾಸ್ವಾಮಿ ಹೊಗಳಿಕೆಯ ಹೊಳೆ ಹರಿಸಿದರು.<br /> <br /> ಚಿತ್ರದಲ್ಲಿ ಕೋಮಲ್ ತುಳಿಯುವ ಸೈಕಲ್ಗೆ ನಟ ಉಪೇಂದ್ರ ಧ್ವನಿ ನೀಡಿದ್ದಾರೆ. ಸೈಕಲ್ ಹತ್ತಿ ರಾಜ್ಯದಾದ್ಯಂತ ಪ್ರಚಾರ ಮಾಡುವ ಕೋಮಲ್ ಇರಾದೆ ಅವರು ಬೇರೆ ಚಿತ್ರಗಳಲ್ಲಿ ಬಿಜಿಯಾಗಿರುವ ಕಾರಣ ಇನ್ನೂ ಕೈಗೂಡಿಲ್ಲ. <br /> <br /> ಆದರೆ ಚಿತ್ರ ಬಿಡುಗಡೆಯಾದ ಬಳಿಕ ಸೈಕಲ್ ತುಳಿಯುವುದು ಮಾತ್ರ ಶತಃಸಿದ್ಧವಂತೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>