<p><strong>ಹೊಸಕೋಟೆ:</strong> ತಾಲ್ಲೂಕಿನ ಸೂಲಿಬೆಲೆ ಗ್ರಾಮದ ಸಂತೇ ಮೈದಾನದ ಬಳಿಯಿದ್ದ ಬೃಹತ್ ಮರವೊಂದು ಭಾನುವಾರ ರಾತ್ರಿ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು ಮತ್ತಿಬ್ಬರಿಗೆ ಗಾಯಗಳಾಗಿವೆ.<br /> <br /> ತೀವ್ರ ಗಾಯಗೊಂಡ ಲಕ್ಷ್ಮಮ್ಮ(40) ಅವರನ್ನು ಹೊಸಕೋಟೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಮೃತಪಟ್ಟರು. ಅವರ ಪತಿ ನರಸಿಂಹಮೂರ್ತಿ ಎಂಬುವವರ ಕಾಲು ಮೂಳೆ ಮುರಿದಿದ್ದು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.<br /> <br /> ಸೂಲಿಬೆಲೆಯವರಾದ ಇವರಿಬ್ಬರು ಸಣ್ಣವ್ಯಾಪಾರಸ್ಥರಾಗಿದ್ದು ಸಂತೇ ವ್ಯಾಪಾರಕ್ಕೆ ಬಂದಿದ್ದರು. ಮರದ ಕೆಳಗಿದ್ದ ಕ್ಯಾಂಟರ್ ವಾಹನವೊಂದು ಜಖಂಗೊಂಡಿದೆ. ಭಾನುವಾರ ಸಂತೇ ದಿನವಾಗಿದ್ದು ಹೆಚ್ಚಿನ ಜನ ಮರದ ಬಳಿ ವ್ಯಾಪಾರ ವಹಿವಾಟಿಗೆ ಸೇರುತ್ತಿದ್ದರು. ಕತ್ತಲಾಗಿದ್ದರಿಂದ ಜನ ಚದುರಿದ್ದು ಅದೃಷ್ಟವಶಾತ್ ಆಗಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದೆ.<br /> <br /> ಮರದ ಒಂದು ಭಾಗದ ಕೊಂಬೆಗಳನ್ನು ಈಚೆಗೆ ಕಡಿದಿದ್ದೇ ಮರ ಉರುಳಲು ಕಾರಣ ಎನ್ನಲಾಗಿದೆ. ಮೃತ ಲಕ್ಷ್ಮಮ್ಮನ ಕುಟುಂಬದವರಿಗೆ ಸರ್ಕಾರದಿಂದ ನೀಡಿದ 1.50ಲಕ್ಷ ರೂಪಾಯಿ ಪರಿಹಾರದ ಚೆಕ್ನ್ನು ಶಾಸಕ ಎನ್.ನಾಗರಾಜು ಸೋಮವಾರ ವಿತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ:</strong> ತಾಲ್ಲೂಕಿನ ಸೂಲಿಬೆಲೆ ಗ್ರಾಮದ ಸಂತೇ ಮೈದಾನದ ಬಳಿಯಿದ್ದ ಬೃಹತ್ ಮರವೊಂದು ಭಾನುವಾರ ರಾತ್ರಿ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು ಮತ್ತಿಬ್ಬರಿಗೆ ಗಾಯಗಳಾಗಿವೆ.<br /> <br /> ತೀವ್ರ ಗಾಯಗೊಂಡ ಲಕ್ಷ್ಮಮ್ಮ(40) ಅವರನ್ನು ಹೊಸಕೋಟೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಮೃತಪಟ್ಟರು. ಅವರ ಪತಿ ನರಸಿಂಹಮೂರ್ತಿ ಎಂಬುವವರ ಕಾಲು ಮೂಳೆ ಮುರಿದಿದ್ದು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.<br /> <br /> ಸೂಲಿಬೆಲೆಯವರಾದ ಇವರಿಬ್ಬರು ಸಣ್ಣವ್ಯಾಪಾರಸ್ಥರಾಗಿದ್ದು ಸಂತೇ ವ್ಯಾಪಾರಕ್ಕೆ ಬಂದಿದ್ದರು. ಮರದ ಕೆಳಗಿದ್ದ ಕ್ಯಾಂಟರ್ ವಾಹನವೊಂದು ಜಖಂಗೊಂಡಿದೆ. ಭಾನುವಾರ ಸಂತೇ ದಿನವಾಗಿದ್ದು ಹೆಚ್ಚಿನ ಜನ ಮರದ ಬಳಿ ವ್ಯಾಪಾರ ವಹಿವಾಟಿಗೆ ಸೇರುತ್ತಿದ್ದರು. ಕತ್ತಲಾಗಿದ್ದರಿಂದ ಜನ ಚದುರಿದ್ದು ಅದೃಷ್ಟವಶಾತ್ ಆಗಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದೆ.<br /> <br /> ಮರದ ಒಂದು ಭಾಗದ ಕೊಂಬೆಗಳನ್ನು ಈಚೆಗೆ ಕಡಿದಿದ್ದೇ ಮರ ಉರುಳಲು ಕಾರಣ ಎನ್ನಲಾಗಿದೆ. ಮೃತ ಲಕ್ಷ್ಮಮ್ಮನ ಕುಟುಂಬದವರಿಗೆ ಸರ್ಕಾರದಿಂದ ನೀಡಿದ 1.50ಲಕ್ಷ ರೂಪಾಯಿ ಪರಿಹಾರದ ಚೆಕ್ನ್ನು ಶಾಸಕ ಎನ್.ನಾಗರಾಜು ಸೋಮವಾರ ವಿತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>