ಮಳೆಗಾಗಿ ದೇವರಿಗೆ ನದಿ ನೀರು ಹರಕೆ
ಯಾದಗಿರಿ: ಜೂನ್ ಆರಂಭವಾಗುತ್ತಿದ್ದರೂ, ಮಳೆಯ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದಾಗಿ ಸಮೀಪದ ನಾಯ್ಕಲ್ ಗ್ರಾಮದ ಮುಸ್ಲಿಂ ಯುವಕರು ಮಳೆಗಾಗಿ ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದರು.
ಗ್ರಾಮದ ಮುಸ್ಲಿಂ ಸಮಾಜದ ಯುವಕರು ಸಮೀಪದ ಭೀಮಾ ನದಿಯಿಂದ ಕಾಲ್ನಡಿಗೆ ಮೂಲಕ ಕೊಡಗಳಲ್ಲಿ ನೀರು ತಂದು ಗ್ರಾಮದ ಹಜರತ್ ಅಬ್ಬಾಸಲಿ ದರ್ಗಾಕ್ಕೆ ನೀರು ನೀಡುವ ಮೂಲಕ ಮಳೆಗಾಗಿ ಪ್ರಾರ್ಥಿಸಿದರು.
ಮುಂಗಾರು ಹಂಗಾಮಿಗಾಗಿ ಮಳೆರಾಯ ಕೃಪೆ ತೋರದೇ ಇರುವುದರಿಂದ ಗ್ರಾಮದ ಯುವಕರು ದೇವರಿಗೆ ನೀರಿನ ಹರಕೆ ತೀರಿಸುವ ಮೂಲಕ ವರುಣನಿಗಾಗಿ ಪ್ರಾರ್ಥಿಸಿದರು.
ಅಬ್ಬಾಸಲೀ ಬಾಲೆಸನೋರ್, ಬಡೆಸಾಬ್, ಮಹ್ಮದ್ ಬಾರಪೆಟ್ ಸೇರಿದಂತೆ ಸುಮಾರು 50 ಕ್ಕೂ ಯುವಕರು ಪಾಲ್ಗೊಂಡಿದ್ದರು. ಅಲ್ಲದೆ ಗ್ರಾಮದ ಅನೇಕ ಕಡೆಗಳಲ್ಲಿ ದೇವರನ್ನು ಮಾಡುವ ಮೂಲಕ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.