<p>ಬ್ಯಾಡಗಿ : ಮುನಿಸಿಕೊಂಡ ಮಳೆ ದೇವನನ್ನು ಒಲಿಸಿಕೊಳ್ಳಲು ರೈತ ಸಮೂದಾಯ ಕತ್ತೆಗಳ ಮದುವೆಗೆ ಮೊರೆ ಹೋದ ಘಟನೆ ತಾಲ್ಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ನಡೆದಿದೆ. <br /> <br /> ಮಳೆ ಸುರಿಯ ಬಹುದೆನ್ನುವ ರೈತ ಸಮುದಾಯದ ನಿರೀಕ್ಷೆ ಹುಸಿಯಾಗಿದೆ. ಮಳೆಯಾಗದ್ದರಿಂದ ಆತಂಕ ಗೊಂಡಿರುವ ರೈತರು ದೇವರನ್ನು ಪ್ರಾರ್ಥಿಸುವಂತಾಗಿದೆ. <br /> <br /> ಗ್ರಾಮದ ರೈತರು ದಿಕ್ಕು ತೋಚದೆ ಕತ್ತೆಗಳ ಮದುವೆ ಮಾಡಿದರಾದರೂ ವರುಣ ದೇವ ಒಲಿಯಬಹುದೆನ್ನುವ ಮಹಾದಾಸೆಯಿಂದ ಮದುವೆ ನಡೆಸಲು ಮುಂದಾದರು ಎನ್ನಲಾಗಿದೆ. <br /> <br /> ಗ್ರಾಮದಲ್ಲಿ ಕತ್ತೆಗಳ ಮದುವೆಗಾಗಿ ಮದುವೆ ಮಂಟಪ ನಿರ್ಮಿಸಿದ್ದು, ಮೈತೊಳೆದು ಅರಿಶಿಣ ಹಚ್ಚಿ ನವ ವಧು-ವರರಂತೆ ಸಿಂಗರಿಸಲಾಗಿತ್ತು. ಮುತೈದೆಯರು ಕತ್ತೆ ವಧು-ವರರನ್ನು ಆರತಿ ಬೆಳಗಿ ಮಳೆಗಾಗಿ ಪ್ರಾರ್ಥಿಸಿ ದರು. <br /> <br /> ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾಧ್ಯ ವೈಭವದೊಂದಿಗೆ ಮೆರವಣೆಗೆ ನಡೆಸಿ ಅನ್ನ ಸಂತರ್ಪಣೆ ನಡೆಸಿದರು. <br /> <br /> ಮದುವೆ ಸಮಾರಂಭದಲ್ಲಿ ಶೇಖರಗೌಡ್ರ ಗೌಡ್ರ, ಅಂದಾನೆಪ್ಪ ಮುಚ್ಚಟ್ಟಿ, ಹಾಲಪ್ಪ ಮಾಳಗಿ, ನಾಗಪ್ಪ ಪೂಜಾರ, ಚನ್ನಬಸಪ್ಪ ಕಾಕೋಳ, ಶಿವಲಿಂಗಪ್ಪ ಮಾಗನೂರ, ಹೊಳಿ ಯಪ್ಪ ದೇವರಗುಡ್ಡ, ಬಸಪ್ಪ ಕೊತ್ನೇರ್, ವಿರೂಪಾಕ್ಷಪ್ಪ ಉಕ್ಕುಂದ, ಶೇಖಣ್ಣ ಎಲಿಗಾರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ಯಾಡಗಿ : ಮುನಿಸಿಕೊಂಡ ಮಳೆ ದೇವನನ್ನು ಒಲಿಸಿಕೊಳ್ಳಲು ರೈತ ಸಮೂದಾಯ ಕತ್ತೆಗಳ ಮದುವೆಗೆ ಮೊರೆ ಹೋದ ಘಟನೆ ತಾಲ್ಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ನಡೆದಿದೆ. <br /> <br /> ಮಳೆ ಸುರಿಯ ಬಹುದೆನ್ನುವ ರೈತ ಸಮುದಾಯದ ನಿರೀಕ್ಷೆ ಹುಸಿಯಾಗಿದೆ. ಮಳೆಯಾಗದ್ದರಿಂದ ಆತಂಕ ಗೊಂಡಿರುವ ರೈತರು ದೇವರನ್ನು ಪ್ರಾರ್ಥಿಸುವಂತಾಗಿದೆ. <br /> <br /> ಗ್ರಾಮದ ರೈತರು ದಿಕ್ಕು ತೋಚದೆ ಕತ್ತೆಗಳ ಮದುವೆ ಮಾಡಿದರಾದರೂ ವರುಣ ದೇವ ಒಲಿಯಬಹುದೆನ್ನುವ ಮಹಾದಾಸೆಯಿಂದ ಮದುವೆ ನಡೆಸಲು ಮುಂದಾದರು ಎನ್ನಲಾಗಿದೆ. <br /> <br /> ಗ್ರಾಮದಲ್ಲಿ ಕತ್ತೆಗಳ ಮದುವೆಗಾಗಿ ಮದುವೆ ಮಂಟಪ ನಿರ್ಮಿಸಿದ್ದು, ಮೈತೊಳೆದು ಅರಿಶಿಣ ಹಚ್ಚಿ ನವ ವಧು-ವರರಂತೆ ಸಿಂಗರಿಸಲಾಗಿತ್ತು. ಮುತೈದೆಯರು ಕತ್ತೆ ವಧು-ವರರನ್ನು ಆರತಿ ಬೆಳಗಿ ಮಳೆಗಾಗಿ ಪ್ರಾರ್ಥಿಸಿ ದರು. <br /> <br /> ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾಧ್ಯ ವೈಭವದೊಂದಿಗೆ ಮೆರವಣೆಗೆ ನಡೆಸಿ ಅನ್ನ ಸಂತರ್ಪಣೆ ನಡೆಸಿದರು. <br /> <br /> ಮದುವೆ ಸಮಾರಂಭದಲ್ಲಿ ಶೇಖರಗೌಡ್ರ ಗೌಡ್ರ, ಅಂದಾನೆಪ್ಪ ಮುಚ್ಚಟ್ಟಿ, ಹಾಲಪ್ಪ ಮಾಳಗಿ, ನಾಗಪ್ಪ ಪೂಜಾರ, ಚನ್ನಬಸಪ್ಪ ಕಾಕೋಳ, ಶಿವಲಿಂಗಪ್ಪ ಮಾಗನೂರ, ಹೊಳಿ ಯಪ್ಪ ದೇವರಗುಡ್ಡ, ಬಸಪ್ಪ ಕೊತ್ನೇರ್, ವಿರೂಪಾಕ್ಷಪ್ಪ ಉಕ್ಕುಂದ, ಶೇಖಣ್ಣ ಎಲಿಗಾರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>