<p><strong>ಕಂಪ್ಲಿ: </strong>ನೀಲಂ ಮಳೆಯಿಂದ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಹಾನಿಯಾದ ಬೆಳೆಗಳ ನಷ್ಟದ ಅಂದಾಜು ಪರಿಶೀಲನೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಕೈಗೊಂಡಿದೆ.<br /> <br /> ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ, ಟೋಮೆಟೊ, ಬದನೆಕಾಯಿ, ವಾಣಿಜ್ಯ ಬೆಳೆಗಳಾದ ಬಾಳೆ, ಹತ್ತಿ, ಕೆಲ ಕಡೆ ಬತ್ತ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು, ಸಮೀಕ್ಷೆ ನಡೆಸಿ ನಷ್ಟದ ಅಂದಾಜನ್ನು ನಂತರ ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.<br /> <br /> ಕೆಲ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಕಂದಾಯ ಇಲಾಖೆಯವರು ಸಮೀಕ್ಷೆ ಮುಂದುವರಿಸಿದ್ದಾರೆ. ಬೆಳೆ ಮತ್ತು ಮನೆಗಳ ಹಾನಿ ಬಗ್ಗೆ ಸಮೀಕ್ಷಾ ವರದಿಯ ನಂತರ ವಾಸ್ತಾವ ವರದಿ ತಿಳಿಯಲಿದೆ ಎಂದು ಎರಡು ಇಲಾಖೆಗಳ ಅಧಿಕಾರಿಗಳು ತಿಳಿಸಿದ್ದಾರೆ.<br /> <br /> <strong>ಆಗ್ರಹ: </strong>ಮಳೆಯಿಂದ ತುಂಬಾ ನಷ್ಟ ಹೊಂದಿದ್ದು, ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಹತ್ತಿ ಬೆಳೆ ಕಳೆದುಕೊಂಡ ಮೆಟ್ರಿ ಗ್ರಾಮದ ಮೇಗಳಮನಿ ಈಶ್ವರ ಮತ್ತು ಜಿ. ದೊಡ್ಡ ಯರ್ರಿಸ್ವಾಮಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. <br /> <br /> ಕೆಲ ಕಡೆ ಹಳ್ಳಗಳಿಗೆ ಅಡ್ಡಲಾಗಿ ನಿರ್ಮಿಸಿರುವ ವಡ್ಡುಗಟ್ಟೆಗಳಿಗೆ ಹಾನಿಯಾಗಿದ್ದು, ಇದರಿಂದ ಹೊಲಗಳಿಗೆ ನೀರು ದೊರೆಯದಂತಾಗಿದೆ ಎಂದು ವಡ್ಡುಗಟ್ಟೆ ಆಶ್ರಯಿಸಿರುವ ರೈತರು ತಿಳಿಸಿದ್ದಾರೆ. ಆದಷ್ಟು ತೀವ್ರವಾಗಿ ವಡ್ಡುಗಟ್ಟೆಗಳನ್ನೂ ದುರಸ್ತಿ ಮಾಡಿಸುವಂತೆ ಮನವಿ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ: </strong>ನೀಲಂ ಮಳೆಯಿಂದ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಹಾನಿಯಾದ ಬೆಳೆಗಳ ನಷ್ಟದ ಅಂದಾಜು ಪರಿಶೀಲನೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಕೈಗೊಂಡಿದೆ.<br /> <br /> ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ, ಟೋಮೆಟೊ, ಬದನೆಕಾಯಿ, ವಾಣಿಜ್ಯ ಬೆಳೆಗಳಾದ ಬಾಳೆ, ಹತ್ತಿ, ಕೆಲ ಕಡೆ ಬತ್ತ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು, ಸಮೀಕ್ಷೆ ನಡೆಸಿ ನಷ್ಟದ ಅಂದಾಜನ್ನು ನಂತರ ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.<br /> <br /> ಕೆಲ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಕಂದಾಯ ಇಲಾಖೆಯವರು ಸಮೀಕ್ಷೆ ಮುಂದುವರಿಸಿದ್ದಾರೆ. ಬೆಳೆ ಮತ್ತು ಮನೆಗಳ ಹಾನಿ ಬಗ್ಗೆ ಸಮೀಕ್ಷಾ ವರದಿಯ ನಂತರ ವಾಸ್ತಾವ ವರದಿ ತಿಳಿಯಲಿದೆ ಎಂದು ಎರಡು ಇಲಾಖೆಗಳ ಅಧಿಕಾರಿಗಳು ತಿಳಿಸಿದ್ದಾರೆ.<br /> <br /> <strong>ಆಗ್ರಹ: </strong>ಮಳೆಯಿಂದ ತುಂಬಾ ನಷ್ಟ ಹೊಂದಿದ್ದು, ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಹತ್ತಿ ಬೆಳೆ ಕಳೆದುಕೊಂಡ ಮೆಟ್ರಿ ಗ್ರಾಮದ ಮೇಗಳಮನಿ ಈಶ್ವರ ಮತ್ತು ಜಿ. ದೊಡ್ಡ ಯರ್ರಿಸ್ವಾಮಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. <br /> <br /> ಕೆಲ ಕಡೆ ಹಳ್ಳಗಳಿಗೆ ಅಡ್ಡಲಾಗಿ ನಿರ್ಮಿಸಿರುವ ವಡ್ಡುಗಟ್ಟೆಗಳಿಗೆ ಹಾನಿಯಾಗಿದ್ದು, ಇದರಿಂದ ಹೊಲಗಳಿಗೆ ನೀರು ದೊರೆಯದಂತಾಗಿದೆ ಎಂದು ವಡ್ಡುಗಟ್ಟೆ ಆಶ್ರಯಿಸಿರುವ ರೈತರು ತಿಳಿಸಿದ್ದಾರೆ. ಆದಷ್ಟು ತೀವ್ರವಾಗಿ ವಡ್ಡುಗಟ್ಟೆಗಳನ್ನೂ ದುರಸ್ತಿ ಮಾಡಿಸುವಂತೆ ಮನವಿ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>