<p>ಚಿಕ್ಕಬಳ್ಳಾಪುರ: ಮತ ಚಲಾಯಿಸುವುದು ಪ್ರತಿ ಮಹಿಳೆಯ ಹಕ್ಕಾಗಿದೆ. ಎಷ್ಟೇ ಕಾರ್ಯ ಒತ್ತಡ ಅಥವಾ ಸಮಸ್ಯೆಯಿದ್ದರೂ ಇಚ್ಛೆ ಅನುಸಾರವಾಗಿ ಮತ ಚಲಾಯಿಸಬೇಕು. ಇನ್ನೊಬ್ಬರ ಬಲವಂತದಿಂದ ಚಲಾಯಿಸಬಾರದು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ತಿಳಿಸಿದರು.<br /> <br /> ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದಲ್ಲಿ ಭಾನುವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಆಯೋಜಿಸಿದ್ದ ‘ಮಹಿಳೆಯರ ಮತದಾನದ ಹಕ್ಕು–ಜಾಗೃತಿ ಸಮಾವೇಶ’ದಲ್ಲಿ ಮಾತನಾಡಿ,<br /> ಮಹಿಳೆಯರು ಸಂಸಾರ ನಿಭಾಯಿಸುವುದರ ಜತೆಗೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಬಗ್ಗೆಯೂ ಆಸಕ್ತಿ ತೋರಬೇಕು. ಮಹಿಳೆಯರು ಹಿಂಜರಿಕೆ ಬಿಟ್ಟು ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದರು.<br /> <br /> ಮಹಿಳೆಯರನ್ನು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಮಹಿಳೆಯರಲ್ಲಿ ಪ್ರತಿಭೆ ಮತ್ತು ಬುದ್ಧಿವಂತಿಕೆಯಿದ್ದರೂ ಅವರದ್ದೇ ಆದ ನಿಲುವು ತಳೆಯಲು ಪುರುಷರು ಅವಕಾಶ ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.<br /> <br /> ಚುನಾವಣೆಯಲ್ಲಿ ಯಾರ ಪರ ಮತ ಚಲಾಯಿಸಬೇಕು ಅಥವಾ ಚಲಾಯಿಸಬಾರದು ಎಂಬುದನ್ನು ಕುಟುಂಬದ ಮುಖ್ಯಸ್ಥರು ಅಥವಾ ಪುರುಷರೇ ನಿರ್ಧರಿಸುತ್ತಾರೆ. ಮಹಿಳೆಯರಿಗೆ ಹೆಸರಿಗೆ ಮಾತ್ರವೇ ಸ್ವಾತಂತ್ರ್ಯ ಇರುತ್ತದೆ ಹೊರತು ಅದನ್ನು ಚಲಾಯಿಸಲಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.<br /> <br /> ರಾಜಕೀಯವಾಗಿ ಜಾಗೃತರಾದಲ್ಲಿ ಮಾತ್ರ ಸಮಸ್ಯೆಗಳಿಗೆ ಏನೂ ಕಾರಣ ಎಂಬುದು ಅರಿವಿಗೆ ಬರುತ್ತದೆ ಎಂದು ಅವರು ತಿಳಿಸಿದರು.<br /> ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ಇಂದಿಗೂ ಪುರುಷ ಪ್ರಧಾನ ವ್ಯವಸ್ಥೆ ಜೀವಂತವಾಗಿದೆ. ಇಂಥ ಸ್ಥಿತಿಯಲ್ಲೇ ಮಹಿಳೆಯರು ಆತಂಕ ಮತ್ತು ಅಳುಕಿನಲ್ಲೇ ಕಾಲ ಕಳೆಯಬೇಕಾಗಿದೆ ಎಂದು ವಿಷಾದಿಸಿದರು.<br /> <br /> ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಕಾರ್ಯದರ್ಶಿ ಗೌರಮ್ಮ, ಜಿಲ್ಲಾ ಘಟಕದ ಅಧ್ಯಕ್ಷೆ ಬಿ.ಸಾವಿತ್ರಮ್ಮ, ಸಂಚಾಲಕರಾದ ಫಾತಿಮಾ, ಪವಿತ್ರಾ, ನಾರಾಯಣಮ್ಮ, ಮುನಿರತ್ನಮ್ಮ, ಶೋಭಾರಾಣಿ, ಶೋಭಾ, ವೀಣಾ, ಮಧುಲತಾ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ಮತ ಚಲಾಯಿಸುವುದು ಪ್ರತಿ ಮಹಿಳೆಯ ಹಕ್ಕಾಗಿದೆ. ಎಷ್ಟೇ ಕಾರ್ಯ ಒತ್ತಡ ಅಥವಾ ಸಮಸ್ಯೆಯಿದ್ದರೂ ಇಚ್ಛೆ ಅನುಸಾರವಾಗಿ ಮತ ಚಲಾಯಿಸಬೇಕು. ಇನ್ನೊಬ್ಬರ ಬಲವಂತದಿಂದ ಚಲಾಯಿಸಬಾರದು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ತಿಳಿಸಿದರು.<br /> <br /> ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದಲ್ಲಿ ಭಾನುವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಆಯೋಜಿಸಿದ್ದ ‘ಮಹಿಳೆಯರ ಮತದಾನದ ಹಕ್ಕು–ಜಾಗೃತಿ ಸಮಾವೇಶ’ದಲ್ಲಿ ಮಾತನಾಡಿ,<br /> ಮಹಿಳೆಯರು ಸಂಸಾರ ನಿಭಾಯಿಸುವುದರ ಜತೆಗೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಬಗ್ಗೆಯೂ ಆಸಕ್ತಿ ತೋರಬೇಕು. ಮಹಿಳೆಯರು ಹಿಂಜರಿಕೆ ಬಿಟ್ಟು ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದರು.<br /> <br /> ಮಹಿಳೆಯರನ್ನು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಮಹಿಳೆಯರಲ್ಲಿ ಪ್ರತಿಭೆ ಮತ್ತು ಬುದ್ಧಿವಂತಿಕೆಯಿದ್ದರೂ ಅವರದ್ದೇ ಆದ ನಿಲುವು ತಳೆಯಲು ಪುರುಷರು ಅವಕಾಶ ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.<br /> <br /> ಚುನಾವಣೆಯಲ್ಲಿ ಯಾರ ಪರ ಮತ ಚಲಾಯಿಸಬೇಕು ಅಥವಾ ಚಲಾಯಿಸಬಾರದು ಎಂಬುದನ್ನು ಕುಟುಂಬದ ಮುಖ್ಯಸ್ಥರು ಅಥವಾ ಪುರುಷರೇ ನಿರ್ಧರಿಸುತ್ತಾರೆ. ಮಹಿಳೆಯರಿಗೆ ಹೆಸರಿಗೆ ಮಾತ್ರವೇ ಸ್ವಾತಂತ್ರ್ಯ ಇರುತ್ತದೆ ಹೊರತು ಅದನ್ನು ಚಲಾಯಿಸಲಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.<br /> <br /> ರಾಜಕೀಯವಾಗಿ ಜಾಗೃತರಾದಲ್ಲಿ ಮಾತ್ರ ಸಮಸ್ಯೆಗಳಿಗೆ ಏನೂ ಕಾರಣ ಎಂಬುದು ಅರಿವಿಗೆ ಬರುತ್ತದೆ ಎಂದು ಅವರು ತಿಳಿಸಿದರು.<br /> ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ಇಂದಿಗೂ ಪುರುಷ ಪ್ರಧಾನ ವ್ಯವಸ್ಥೆ ಜೀವಂತವಾಗಿದೆ. ಇಂಥ ಸ್ಥಿತಿಯಲ್ಲೇ ಮಹಿಳೆಯರು ಆತಂಕ ಮತ್ತು ಅಳುಕಿನಲ್ಲೇ ಕಾಲ ಕಳೆಯಬೇಕಾಗಿದೆ ಎಂದು ವಿಷಾದಿಸಿದರು.<br /> <br /> ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಕಾರ್ಯದರ್ಶಿ ಗೌರಮ್ಮ, ಜಿಲ್ಲಾ ಘಟಕದ ಅಧ್ಯಕ್ಷೆ ಬಿ.ಸಾವಿತ್ರಮ್ಮ, ಸಂಚಾಲಕರಾದ ಫಾತಿಮಾ, ಪವಿತ್ರಾ, ನಾರಾಯಣಮ್ಮ, ಮುನಿರತ್ನಮ್ಮ, ಶೋಭಾರಾಣಿ, ಶೋಭಾ, ವೀಣಾ, ಮಧುಲತಾ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>