<p>ಟೋಲ್ಗೇಟ್ ನಂತರ ಮಾಗಡಿ ರಸ್ತೆಯ ಹೊಣೆಗಾರಿಕೆ ರಾಜ್ಯ ಸರ್ಕಾರದ್ದೊ ಅಥವಾ ಬಿಬಿಎಂಪಿಯದ್ದೊ ಎಂಬುದು ನಿಗೂಢ ರಹಸ್ಯವಾಗಿದೆ. ಇಲ್ಲೆಲ್ಲಾ ಟ್ರಾಫಿಕ್ ಪೊಲೀಸರ ಸುಳಿವೇ ಕಂಡುಬರುವುದಿಲ್ಲ. <br /> <br /> ಸುಂಕದಕಟ್ಟೆಯಲ್ಲಿ ಟ್ರಾಫಿಕ್ ಜಾಮ್ ಮಾಮೂಲಾಗಿದೆ. ವಾರಕ್ಕೊಂದಾದರೂ ದಾರಿಯಲ್ಲೇ ಕೆಟ್ಟು ನಿಲ್ಲುವ ಬಿಎಂಟಿಸಿ ಬಸ್ಸುಗಳು ಒಂದು ಕಡೆ, ಅಡ್ಡಾದಿಡ್ಡಿ ಚಲಿಸುವ ಖಾಸಗಿ ಬಸ್ಸುಗಳಂತೂ ಜನ ತುಂಬದೆ ಮುಂದೆ ಸಾಗುವುದಿಲ್ಲ. <br /> <br /> ರಸ್ತೆ ಬದಿಯಲ್ಲೆ ಪಾರ್ಕಿಂಗ್ ಮಾಡುವವರು, ಓಲಾಡುವ ಕುಡುಕರು ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಹಬ್ಬ ಬಂದರಂತೂ ರಸ್ತೆಯಲ್ಲೆ ತರಕಾರಿ, ಹೂವಿನ ಮಾರಾಟ. ಉಳಿದದ್ದನ್ನು ಅಲ್ಲೆ ಬಿಸಾಡಿ ಕೊಳಕೆಬ್ಬಿಸುತ್ತಾರೆ. <br /> <br /> ಇಲ್ಲಿಯ ಪ್ರಮುಖ ಸಮಸ್ಯೆ ಸುಂಕದಕಟ್ಟೆ - ಅನ್ನಪೂರ್ಣೇಶ್ವರಿ ನಗರ - ಜಾಲಹಳ್ಳಿ ಜಂಕ್ಷನ್ ಆಗಿದೆ. ಇಲ್ಲಿ ಸಿಗ್ನಲ್ ವ್ಯವಸ್ಥೆ ಅಗತ್ಯವಾಗಿದೆ. ಇನ್ನು ಕಾಮಾಕ್ಷಿಪಾಳ್ಯದ ಬಗ್ಗೆ ಎಷ್ಟು ವರ್ಣಿಸಿದರೂ ಕಡಿಮೆಯೇ. ಇಲ್ಲಿ ಎಲ್ಲೆಂದರಲ್ಲಿ ರಸ್ತೆ ವಿಭಜಕವನ್ನೇ ಕತ್ತರಿಸಿ ವಾಹನಗಳು ಬೇಕಾಬಿಟ್ಟಿ ಚಲಿಸಿ ಜಾಮ್ ಮಾಮೂಲಾಗಿದೆ.<br /> <br /> ಈ ಎಲ್ಲಾ ಕಾರಣಗಳಿಂದ ಪ್ರಯಾಣಿಕರು ತಡವಾಗಿ ಆಫೀಸು, ಸ್ಕೂಲು, ಕಾಲೇಜುಗಳಿಗೆ ಹೋಗುವುದು, ಉಗಿಸಿಕೊಳ್ಳುವುದು ಅನಿವಾರ್ಯ ಕರ್ಮ. ನಗರಾಭಿವೃದ್ಧಿ ಸಚಿವರು ಹಾಗೂ ಸಂಚಾರಿ ಪೊಲೀಸರು ಇತ್ತ ಗಮನಹರಿಸಿ ಜನರ ಸಮಯ, ಮಾನಸಿಕ ಆರೋಗ್ಯ, ವಿದ್ಯಾರ್ಥಿಗಳ ಭವಿಷ್ಯ ಕಾಪಾಡಬೇಕೆಂದು ಮನವಿ. <br /> <br /> ಸಚಿವ ಸುರೇಶ್ ಕುಮಾರ್ ಅವರು ತಿಂಗಳಿಗೆ ಒಂದು ಸಲವಾದರೂ ಬೆಳಿಗೆ 9 ರಿಂದ 10 ಗಂಟೆಯ ಮಧ್ಯೆ ಪ್ರಯಾಣಿಸಿ, ಜನರ ತಾಳ್ಮೆ ತಪ್ಪುವ ಮುಂಚೆ ಸಮಸ್ಯೆಯನ್ನು ಪರಿಹರಿಸಬೇಕಾಗಿ ವಿನಂತಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಟೋಲ್ಗೇಟ್ ನಂತರ ಮಾಗಡಿ ರಸ್ತೆಯ ಹೊಣೆಗಾರಿಕೆ ರಾಜ್ಯ ಸರ್ಕಾರದ್ದೊ ಅಥವಾ ಬಿಬಿಎಂಪಿಯದ್ದೊ ಎಂಬುದು ನಿಗೂಢ ರಹಸ್ಯವಾಗಿದೆ. ಇಲ್ಲೆಲ್ಲಾ ಟ್ರಾಫಿಕ್ ಪೊಲೀಸರ ಸುಳಿವೇ ಕಂಡುಬರುವುದಿಲ್ಲ. <br /> <br /> ಸುಂಕದಕಟ್ಟೆಯಲ್ಲಿ ಟ್ರಾಫಿಕ್ ಜಾಮ್ ಮಾಮೂಲಾಗಿದೆ. ವಾರಕ್ಕೊಂದಾದರೂ ದಾರಿಯಲ್ಲೇ ಕೆಟ್ಟು ನಿಲ್ಲುವ ಬಿಎಂಟಿಸಿ ಬಸ್ಸುಗಳು ಒಂದು ಕಡೆ, ಅಡ್ಡಾದಿಡ್ಡಿ ಚಲಿಸುವ ಖಾಸಗಿ ಬಸ್ಸುಗಳಂತೂ ಜನ ತುಂಬದೆ ಮುಂದೆ ಸಾಗುವುದಿಲ್ಲ. <br /> <br /> ರಸ್ತೆ ಬದಿಯಲ್ಲೆ ಪಾರ್ಕಿಂಗ್ ಮಾಡುವವರು, ಓಲಾಡುವ ಕುಡುಕರು ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಹಬ್ಬ ಬಂದರಂತೂ ರಸ್ತೆಯಲ್ಲೆ ತರಕಾರಿ, ಹೂವಿನ ಮಾರಾಟ. ಉಳಿದದ್ದನ್ನು ಅಲ್ಲೆ ಬಿಸಾಡಿ ಕೊಳಕೆಬ್ಬಿಸುತ್ತಾರೆ. <br /> <br /> ಇಲ್ಲಿಯ ಪ್ರಮುಖ ಸಮಸ್ಯೆ ಸುಂಕದಕಟ್ಟೆ - ಅನ್ನಪೂರ್ಣೇಶ್ವರಿ ನಗರ - ಜಾಲಹಳ್ಳಿ ಜಂಕ್ಷನ್ ಆಗಿದೆ. ಇಲ್ಲಿ ಸಿಗ್ನಲ್ ವ್ಯವಸ್ಥೆ ಅಗತ್ಯವಾಗಿದೆ. ಇನ್ನು ಕಾಮಾಕ್ಷಿಪಾಳ್ಯದ ಬಗ್ಗೆ ಎಷ್ಟು ವರ್ಣಿಸಿದರೂ ಕಡಿಮೆಯೇ. ಇಲ್ಲಿ ಎಲ್ಲೆಂದರಲ್ಲಿ ರಸ್ತೆ ವಿಭಜಕವನ್ನೇ ಕತ್ತರಿಸಿ ವಾಹನಗಳು ಬೇಕಾಬಿಟ್ಟಿ ಚಲಿಸಿ ಜಾಮ್ ಮಾಮೂಲಾಗಿದೆ.<br /> <br /> ಈ ಎಲ್ಲಾ ಕಾರಣಗಳಿಂದ ಪ್ರಯಾಣಿಕರು ತಡವಾಗಿ ಆಫೀಸು, ಸ್ಕೂಲು, ಕಾಲೇಜುಗಳಿಗೆ ಹೋಗುವುದು, ಉಗಿಸಿಕೊಳ್ಳುವುದು ಅನಿವಾರ್ಯ ಕರ್ಮ. ನಗರಾಭಿವೃದ್ಧಿ ಸಚಿವರು ಹಾಗೂ ಸಂಚಾರಿ ಪೊಲೀಸರು ಇತ್ತ ಗಮನಹರಿಸಿ ಜನರ ಸಮಯ, ಮಾನಸಿಕ ಆರೋಗ್ಯ, ವಿದ್ಯಾರ್ಥಿಗಳ ಭವಿಷ್ಯ ಕಾಪಾಡಬೇಕೆಂದು ಮನವಿ. <br /> <br /> ಸಚಿವ ಸುರೇಶ್ ಕುಮಾರ್ ಅವರು ತಿಂಗಳಿಗೆ ಒಂದು ಸಲವಾದರೂ ಬೆಳಿಗೆ 9 ರಿಂದ 10 ಗಂಟೆಯ ಮಧ್ಯೆ ಪ್ರಯಾಣಿಸಿ, ಜನರ ತಾಳ್ಮೆ ತಪ್ಪುವ ಮುಂಚೆ ಸಮಸ್ಯೆಯನ್ನು ಪರಿಹರಿಸಬೇಕಾಗಿ ವಿನಂತಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>