<p>ಒಂದು ಊರಿನಲ್ಲಿ ಸಿದ್ದಪ್ಪನೆಂಬ ಸೋಮಾರಿ ಯುವಕನಿದ್ದನು. ಅವನು ಯಾವ ಕೆಲಸವನ್ನೂ ಮಾಡದೆ, ಹಸಿವಾದಾಗ ಒಂದಿಷ್ಟು ಹೊಟ್ಟೆ ತುಂಬಿಸಿಕೊಂಡು ಊರಿನ ಕೆರೆಯ ಹಿಂಭಾಗದ ದಿಬ್ಬದ ಮೇಲೆ ವಿಶಾಲವಾಗಿ ಹರಡಿದ್ದ ಹುಣಸೇಮರದ ನೆರಳಿನಲ್ಲಿ ಮೈಚಾಚಿ ಮಲಗಿ ಬಿಡುತ್ತಿದ್ದ.<br /> <br /> ಒಂದು ಮಧ್ಯಾಹ್ನ ಹುಣಸೇಮರದ ನೆರಳಿನಲ್ಲಿ ಮಲಗಿದ್ದ ಸಿದ್ದಪ್ಪನಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಹುಣಸೇಮರ ದೇವತೆಯ ರೂಪದಲ್ಲಿ ಪ್ರತ್ಯೆಕ್ಷಳಾಗಿ, ಸಿದ್ದಪ್ಪನನ್ನು ಕುರಿತು, `ಮಗು, ಹೀಗೆ ಸೋಮಾರಿಯಾಗಿ ಏಕೆ ಕಾಲ ಕಳೆಯುತ್ತಿದ್ದೀಯಾ? ಏನಾದರೊಂದು ಉದ್ಯೋಗ ಮಾಡಬಾರದೇ? ನೋಡು. ಈ ಗಾಳಿ, ಭೂಮಿ, ಚಂದ್ರ, ಸೂರ್ಯ - ಇವು ಮನುಷ್ಯರಿಗೆ ಸದಾ ನೆರವು ನೀಡುತ್ತವಲ್ಲವೇ? ನನ್ನನ್ನೇ ನೋಡು. ನೀನು ಮಲಗಲು ನೆರಳನ್ನು ಮಾಡಿಕೊಟ್ಟಿದ್ದೇನೆ. ಈ ಭೂಮಿಗೆ ಬಂದ ಮೇಲೆ ಯಾವುದಾದರೂ ಪ್ರಯೋಜನಕ್ಕೆ ಬರುವಂತಾಗಬೇಕು.<br /> <br /> ಸೋಮಾರಿತನ ನಮ್ಮ ಪ್ರಥಮ ಶತ್ರು. ನೀನು ಸಾಲು ಮರದ ತಿಮ್ನಕ್ಕನ ಹೆಸರು ಕೇಳಿಲ್ಲವೇ? ನನ್ನ ಅಣ್ಣ, ಅಕ್ಕ, ತಮ್ಮಂದಿರನ್ನು ಪೋಷಿಸಿ - ನಮ್ಮ ಸಂತತಿಯನ್ನು ಹೆಚ್ಚಿಸಿಲ್ಲವೇ? ಏಳು, ಎದ್ದೇಳು. ನಿನ್ನ ಪಾಳುಬಿದ್ದ ಜಮೀನನ್ನಾದರೂ ನೋಡಿಕೋ. ಭೂ ತಾಯಿಯನ್ನು ನಂಬಿ ಕೆಟ್ಟವರಿಲ್ಲ' - ಎಂದೆಲ್ಲಾ ಹೇಳಿ ಅವನ ಕನಸಿನಿಂದ ಮಾಯವಾದಳು ದೇವತೆ.<br /> <br /> ಸಿದ್ದಪ್ಪನಿಗೆ ಎಚ್ಚರವಾಯಿತು. ಕನಸಿನಲ್ಲಿ ಬಂದು ಮಾಯವಾದ ಹುಣಸೇಮರದಮ್ಮನನ್ನು ಹೊಸದಾಗಿ ನೋಡುವಂತೆ ನೋಡತೊಡಗಿದ.<br /> ನನ್ನ ಕಣ್ಣು ತೆರೆಸಿದ ದೇವತೆ' ಎಂದು ಹುಣಸೇಮರಕ್ಕೆ ನಮಸ್ಕರಿಸುತ್ತಾ, `ಅಮ್ಮಾ ನನಗೆ ನೀನು ಜ್ಞಾನೋದಯ ಮಾಡಿದ್ದೀಯಾ. ಇನ್ನು ಮುಂದೆ ಈ ರೀತಿ ಸೋಮಾರಿಯಾಗಿ ಕಾಲ ಕಳೆಯುವುದಿಲ್ಲ' ಎಂದು ಅಲ್ಲಿಂದ ಎದ್ದು ತನ್ನ ಜಮೀನಿನತ್ತ ಹೊರಟ.<br /> <br /> ಮಾರನೆಯ ದಿನದಿಂದ ಸಿದ್ದಪ್ಪನ ದಿನಚರಿ ಬದಲಾಯಿತು. ತನ್ನ ಹೊಲವನ್ನು ಹಸನು ಮಾಡಿದ. ಊರಿನ ಶಿವಪ್ಪನಿಂದ ನೇಗಿಲು, ಎತ್ತುಗಳನ್ನು ಎರವಲು ಪಡೆದು ಹೊಲವನ್ನು ಉತ್ತು ಬಿತ್ತಿದನು. ಆ ವರ್ಷ ಅವನ ಹೊಲದಲ್ಲಿ ಅದ್ಭುತ ಬೆಳೆ ಬಂದಿತು. ಸಿದ್ದಪ್ಪನ ಪರಿವರ್ತನೆಯನ್ನು ಕಂಡ ಅವನ ವೃದ್ಧ ತಂದೆ ತಾಯಿ ಸಂತಸಪಟ್ಟರು.<br /> <br /> ಸಿದ್ದಪ್ಪ ಬಿಡುವಿನ ವೇಳೆಯಲ್ಲಿ ಮನೆಯ ಹಿತ್ತಲಿನಲ್ಲಿ ತರಕಾರಿ ಗಿಡಗಳನ್ನು ನೆಟ್ಟು ಆರೈಕೆ ಮಾಡತೊಡಗಿದನು. ಮುಂಜಾನೆ ಎದ್ದು ತರಕಾರಿಗಳನ್ನು ಬಿಡಿಸಿ, ಸಂತೆಗೆ ಒಯ್ದು ತರಕಾರಿಗಳನ್ನು ಮಾರಿ ಹಣ ಸಂಪಾದನೆ ಮಾಡತೊಡಗಿದನು.<br /> <br /> ಆದರೂ ತಾನು ಹುಣಸೇ ಮರದಮ್ಮ ಹೇಳಿದಂತೆ ನಾಲ್ಕಾರು ಜನಕ್ಕೆ ಪ್ರಯೋಜನವಾಗುವಂತಹ ಕೆಲಸ ಮಾಡಬೇಕು ಎಂದುಕೊಂಡು ಊರ ಶಾಲೆಯ ಉಪಾಧ್ಯಾಯರ ಬಳಿ ಬಂದು, ಅವರಿಗೆ ನಮಸ್ಕರಿಸಿ, `ನನಗೆ ಸಾಲುಮರದ ತಿಮ್ಮಕ್ಕನ ಕತೆ ಹೇಳಿ' ಎಂದ. ಶಾಲಾ ಅಧ್ಯಾಪಕರು ಅವನನ್ನು ಶಾಲೆಯ ಒಳಕ್ಕೆ ಕರೆದು ಕುಳ್ಳಿರಿಸಿ, ಮಕ್ಕಳಿಗೆಲ್ಲಾ ಅಂದು ಸಾಲಮರದ ತಿಮ್ಮಕ್ಕನ ಕತೆ ಹೇಳುತ್ತಾ, `ಮಕ್ಕಳೇ ಇಂದಿನಿಂದ ನೀವು ಸಹ ಒಂದೊಂದು ಗಿಡ ನೆಡಿ. ಪರಿಸರ ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ' ಎಂದು ಶಾಲೆಯ ಕೈತೋಟಕ್ಕೆ ಕರೆದುಕೊಂಡು ಹೋಗಿ, ಮಕ್ಕಳಿಗೆಲ್ಲಾ ಒಂದೊಂದು ಸಸಿ ವಿತರಿಸಿದರು.<br /> <br /> ಸಿದ್ದಪ್ಪ ಶಾಲಾ ಮಾಸ್ತರಿಗೆ ವಂದಿಸಿ, ತನ್ನ ಕಿಸೆಯಲ್ಲಿದ್ದ ನಾಣ್ಯಗಳನ್ನು ಅವರಿಗೆ ನೀಡುತ್ತಾ, `ಪೇಟೆಯಿಂದ ನನಗೊಂದಿಷ್ಟು ಗಿಡಗಳನ್ನು ತರಿಸಿಕೊಡಿ' ಎಂದು ಕೇಳಿಕೊಂಡ.<br /> <br /> ಮಾರನೆಯ ದಿನದಿಂದ ಸಿದ್ದಪ್ಪ ಊರ ರಸ್ತೆಯ ಇಕ್ಕೆಲಗಳಲ್ಲಿ ಸನಿಕೆಯಿಂದ ಅಳವಾದ ಗುಂಡಿಗಳನ್ನು ತೆಗೆದ. ಸುಮಾರು ದಿನಗಳ ಅಗೆದ ಪರಿಣಾಮವಾಗಿ ನೂರು ಗುಂಡಿಗಳಾದವು. ಗುಂಡಿಗಳ ಬಳಿ ಮಾಸ್ತರರನ್ನು ಕರೆದುಕೊಂಡು ಬಂದು, `ಇವುಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತೇನೆ, ನೀವು ಗಿಡಗಳನ್ನು ತರಿಸಿಕೊಡಿ' ಎಂದನು.<br /> <br /> ಮಾಸ್ತರು ಸಂತೋಷದಿಂದ ಪೇಟೆಯಿಂದ ವಿವಿಧ ಬಗೆಯ ಗಿಡಗಳನ್ನು ತರಿಸಿಕೊಟ್ಟರು. ಸಿದ್ದಪ್ಪನ ಪೋಷಣೆಯಲ್ಲಿ ನೂರಾರು ಗಿಡಗಳು ಸೊಂಪಾಗಿ ಬೆಳೆಯತೊಡಗಿದುವು.<br /> <br /> ವರ್ಷಗಳು ಕಳೆದ ಹಾಗೆ ಗಿಡಗಳು ದೊಡ್ಡ ಮರಗಳಾಗಿ ಬೆಳೆದು ದಾರಿಹೋಕರಿಗೆ ನೆರಳನ್ನು, ಫಲಗಳನ್ನು ನೀಡತೊಡಗಿದುವು. ಮಾಸ್ತರರು ಶಾಲಾ ವನಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಸಿದ್ದಪ್ಪನು ಮಾಡಿದ ಕೆಲಸವನ್ನು ಮಕ್ಕಳಿಗೆ ಪರಿಚಯ ಮಾಡಿಕೊಟ್ಟು ಅವನನ್ನು ಸನ್ಮಾನಿಸಿದರು. ಸಿದ್ದಪ್ಪ ಊರಿನ ಎಲ್ಲರಿಂದ ಗೌರವ ಪಡೆದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಂದು ಊರಿನಲ್ಲಿ ಸಿದ್ದಪ್ಪನೆಂಬ ಸೋಮಾರಿ ಯುವಕನಿದ್ದನು. ಅವನು ಯಾವ ಕೆಲಸವನ್ನೂ ಮಾಡದೆ, ಹಸಿವಾದಾಗ ಒಂದಿಷ್ಟು ಹೊಟ್ಟೆ ತುಂಬಿಸಿಕೊಂಡು ಊರಿನ ಕೆರೆಯ ಹಿಂಭಾಗದ ದಿಬ್ಬದ ಮೇಲೆ ವಿಶಾಲವಾಗಿ ಹರಡಿದ್ದ ಹುಣಸೇಮರದ ನೆರಳಿನಲ್ಲಿ ಮೈಚಾಚಿ ಮಲಗಿ ಬಿಡುತ್ತಿದ್ದ.<br /> <br /> ಒಂದು ಮಧ್ಯಾಹ್ನ ಹುಣಸೇಮರದ ನೆರಳಿನಲ್ಲಿ ಮಲಗಿದ್ದ ಸಿದ್ದಪ್ಪನಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಹುಣಸೇಮರ ದೇವತೆಯ ರೂಪದಲ್ಲಿ ಪ್ರತ್ಯೆಕ್ಷಳಾಗಿ, ಸಿದ್ದಪ್ಪನನ್ನು ಕುರಿತು, `ಮಗು, ಹೀಗೆ ಸೋಮಾರಿಯಾಗಿ ಏಕೆ ಕಾಲ ಕಳೆಯುತ್ತಿದ್ದೀಯಾ? ಏನಾದರೊಂದು ಉದ್ಯೋಗ ಮಾಡಬಾರದೇ? ನೋಡು. ಈ ಗಾಳಿ, ಭೂಮಿ, ಚಂದ್ರ, ಸೂರ್ಯ - ಇವು ಮನುಷ್ಯರಿಗೆ ಸದಾ ನೆರವು ನೀಡುತ್ತವಲ್ಲವೇ? ನನ್ನನ್ನೇ ನೋಡು. ನೀನು ಮಲಗಲು ನೆರಳನ್ನು ಮಾಡಿಕೊಟ್ಟಿದ್ದೇನೆ. ಈ ಭೂಮಿಗೆ ಬಂದ ಮೇಲೆ ಯಾವುದಾದರೂ ಪ್ರಯೋಜನಕ್ಕೆ ಬರುವಂತಾಗಬೇಕು.<br /> <br /> ಸೋಮಾರಿತನ ನಮ್ಮ ಪ್ರಥಮ ಶತ್ರು. ನೀನು ಸಾಲು ಮರದ ತಿಮ್ನಕ್ಕನ ಹೆಸರು ಕೇಳಿಲ್ಲವೇ? ನನ್ನ ಅಣ್ಣ, ಅಕ್ಕ, ತಮ್ಮಂದಿರನ್ನು ಪೋಷಿಸಿ - ನಮ್ಮ ಸಂತತಿಯನ್ನು ಹೆಚ್ಚಿಸಿಲ್ಲವೇ? ಏಳು, ಎದ್ದೇಳು. ನಿನ್ನ ಪಾಳುಬಿದ್ದ ಜಮೀನನ್ನಾದರೂ ನೋಡಿಕೋ. ಭೂ ತಾಯಿಯನ್ನು ನಂಬಿ ಕೆಟ್ಟವರಿಲ್ಲ' - ಎಂದೆಲ್ಲಾ ಹೇಳಿ ಅವನ ಕನಸಿನಿಂದ ಮಾಯವಾದಳು ದೇವತೆ.<br /> <br /> ಸಿದ್ದಪ್ಪನಿಗೆ ಎಚ್ಚರವಾಯಿತು. ಕನಸಿನಲ್ಲಿ ಬಂದು ಮಾಯವಾದ ಹುಣಸೇಮರದಮ್ಮನನ್ನು ಹೊಸದಾಗಿ ನೋಡುವಂತೆ ನೋಡತೊಡಗಿದ.<br /> ನನ್ನ ಕಣ್ಣು ತೆರೆಸಿದ ದೇವತೆ' ಎಂದು ಹುಣಸೇಮರಕ್ಕೆ ನಮಸ್ಕರಿಸುತ್ತಾ, `ಅಮ್ಮಾ ನನಗೆ ನೀನು ಜ್ಞಾನೋದಯ ಮಾಡಿದ್ದೀಯಾ. ಇನ್ನು ಮುಂದೆ ಈ ರೀತಿ ಸೋಮಾರಿಯಾಗಿ ಕಾಲ ಕಳೆಯುವುದಿಲ್ಲ' ಎಂದು ಅಲ್ಲಿಂದ ಎದ್ದು ತನ್ನ ಜಮೀನಿನತ್ತ ಹೊರಟ.<br /> <br /> ಮಾರನೆಯ ದಿನದಿಂದ ಸಿದ್ದಪ್ಪನ ದಿನಚರಿ ಬದಲಾಯಿತು. ತನ್ನ ಹೊಲವನ್ನು ಹಸನು ಮಾಡಿದ. ಊರಿನ ಶಿವಪ್ಪನಿಂದ ನೇಗಿಲು, ಎತ್ತುಗಳನ್ನು ಎರವಲು ಪಡೆದು ಹೊಲವನ್ನು ಉತ್ತು ಬಿತ್ತಿದನು. ಆ ವರ್ಷ ಅವನ ಹೊಲದಲ್ಲಿ ಅದ್ಭುತ ಬೆಳೆ ಬಂದಿತು. ಸಿದ್ದಪ್ಪನ ಪರಿವರ್ತನೆಯನ್ನು ಕಂಡ ಅವನ ವೃದ್ಧ ತಂದೆ ತಾಯಿ ಸಂತಸಪಟ್ಟರು.<br /> <br /> ಸಿದ್ದಪ್ಪ ಬಿಡುವಿನ ವೇಳೆಯಲ್ಲಿ ಮನೆಯ ಹಿತ್ತಲಿನಲ್ಲಿ ತರಕಾರಿ ಗಿಡಗಳನ್ನು ನೆಟ್ಟು ಆರೈಕೆ ಮಾಡತೊಡಗಿದನು. ಮುಂಜಾನೆ ಎದ್ದು ತರಕಾರಿಗಳನ್ನು ಬಿಡಿಸಿ, ಸಂತೆಗೆ ಒಯ್ದು ತರಕಾರಿಗಳನ್ನು ಮಾರಿ ಹಣ ಸಂಪಾದನೆ ಮಾಡತೊಡಗಿದನು.<br /> <br /> ಆದರೂ ತಾನು ಹುಣಸೇ ಮರದಮ್ಮ ಹೇಳಿದಂತೆ ನಾಲ್ಕಾರು ಜನಕ್ಕೆ ಪ್ರಯೋಜನವಾಗುವಂತಹ ಕೆಲಸ ಮಾಡಬೇಕು ಎಂದುಕೊಂಡು ಊರ ಶಾಲೆಯ ಉಪಾಧ್ಯಾಯರ ಬಳಿ ಬಂದು, ಅವರಿಗೆ ನಮಸ್ಕರಿಸಿ, `ನನಗೆ ಸಾಲುಮರದ ತಿಮ್ಮಕ್ಕನ ಕತೆ ಹೇಳಿ' ಎಂದ. ಶಾಲಾ ಅಧ್ಯಾಪಕರು ಅವನನ್ನು ಶಾಲೆಯ ಒಳಕ್ಕೆ ಕರೆದು ಕುಳ್ಳಿರಿಸಿ, ಮಕ್ಕಳಿಗೆಲ್ಲಾ ಅಂದು ಸಾಲಮರದ ತಿಮ್ಮಕ್ಕನ ಕತೆ ಹೇಳುತ್ತಾ, `ಮಕ್ಕಳೇ ಇಂದಿನಿಂದ ನೀವು ಸಹ ಒಂದೊಂದು ಗಿಡ ನೆಡಿ. ಪರಿಸರ ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ' ಎಂದು ಶಾಲೆಯ ಕೈತೋಟಕ್ಕೆ ಕರೆದುಕೊಂಡು ಹೋಗಿ, ಮಕ್ಕಳಿಗೆಲ್ಲಾ ಒಂದೊಂದು ಸಸಿ ವಿತರಿಸಿದರು.<br /> <br /> ಸಿದ್ದಪ್ಪ ಶಾಲಾ ಮಾಸ್ತರಿಗೆ ವಂದಿಸಿ, ತನ್ನ ಕಿಸೆಯಲ್ಲಿದ್ದ ನಾಣ್ಯಗಳನ್ನು ಅವರಿಗೆ ನೀಡುತ್ತಾ, `ಪೇಟೆಯಿಂದ ನನಗೊಂದಿಷ್ಟು ಗಿಡಗಳನ್ನು ತರಿಸಿಕೊಡಿ' ಎಂದು ಕೇಳಿಕೊಂಡ.<br /> <br /> ಮಾರನೆಯ ದಿನದಿಂದ ಸಿದ್ದಪ್ಪ ಊರ ರಸ್ತೆಯ ಇಕ್ಕೆಲಗಳಲ್ಲಿ ಸನಿಕೆಯಿಂದ ಅಳವಾದ ಗುಂಡಿಗಳನ್ನು ತೆಗೆದ. ಸುಮಾರು ದಿನಗಳ ಅಗೆದ ಪರಿಣಾಮವಾಗಿ ನೂರು ಗುಂಡಿಗಳಾದವು. ಗುಂಡಿಗಳ ಬಳಿ ಮಾಸ್ತರರನ್ನು ಕರೆದುಕೊಂಡು ಬಂದು, `ಇವುಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತೇನೆ, ನೀವು ಗಿಡಗಳನ್ನು ತರಿಸಿಕೊಡಿ' ಎಂದನು.<br /> <br /> ಮಾಸ್ತರು ಸಂತೋಷದಿಂದ ಪೇಟೆಯಿಂದ ವಿವಿಧ ಬಗೆಯ ಗಿಡಗಳನ್ನು ತರಿಸಿಕೊಟ್ಟರು. ಸಿದ್ದಪ್ಪನ ಪೋಷಣೆಯಲ್ಲಿ ನೂರಾರು ಗಿಡಗಳು ಸೊಂಪಾಗಿ ಬೆಳೆಯತೊಡಗಿದುವು.<br /> <br /> ವರ್ಷಗಳು ಕಳೆದ ಹಾಗೆ ಗಿಡಗಳು ದೊಡ್ಡ ಮರಗಳಾಗಿ ಬೆಳೆದು ದಾರಿಹೋಕರಿಗೆ ನೆರಳನ್ನು, ಫಲಗಳನ್ನು ನೀಡತೊಡಗಿದುವು. ಮಾಸ್ತರರು ಶಾಲಾ ವನಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಸಿದ್ದಪ್ಪನು ಮಾಡಿದ ಕೆಲಸವನ್ನು ಮಕ್ಕಳಿಗೆ ಪರಿಚಯ ಮಾಡಿಕೊಟ್ಟು ಅವನನ್ನು ಸನ್ಮಾನಿಸಿದರು. ಸಿದ್ದಪ್ಪ ಊರಿನ ಎಲ್ಲರಿಂದ ಗೌರವ ಪಡೆದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>