<p><strong>ಗೋಕರ್ಣ:</strong> ‘ಮಾತು ಜ್ಯೋತಿರ್ಲಿಂಗ. ಉತ್ತಮ ಮಾತು ಮನುಷ್ಯನ ಗೆಲುವಿಗೆ ಕಾರಣವಾಗಬಹುದು. ಕೆಟ್ಟ ಮಾತು ಅವನತಿಗೂ ಕಾರಣವಾಗಬಹುದು. ಆಡುವ ಮಾತಿನಲ್ಲಿ ತೂಕವಿದ್ದರೆ ಗೌರವ, ಘನತೆ ಹೆಚ್ಚಾಗುತ್ತದೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಅಭಿಪ್ರಾಯಪಟ್ಟರು.<br /> <br /> ಗೋಕರ್ಣ ಕ್ಷೇತ್ರದ ಬಾಳೆ ಹೊನ್ನೂರು ವೀರಶೈವ ಮಠದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಶಿವಭಜನಾ ಸಪ್ತಾಹದ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.<br /> <br /> ‘ಸಮಾಜದ ಎಲ್ಲ ರಂಗಗಳಲ್ಲಿ ಇಂದು ಗೊಂದಲ ಮತ್ತು ಸಮಸ್ಯೆ ತಲೆದೋರಿದೆ. ಆಡುವ ಮಾತೇ ಇದಕ್ಕೆ ಕಾರಣ ಎನ್ನಬಹುದು. ದಾರಿ ತಪ್ಪಿದರೆ ಹಿಂತಿರುಗಿ ಸರಿ ದಾರಿ ಕಂಡುಕೊಳ್ಳ ಬಹುದು. ಆದರೆ ಮಾತು ತಪ್ಪಿದರೆ ಹಿಂತಿರುಗಿ ಬರುವುದಿಲ್ಲ’ ಎಂದು ಅವರು ಹೇಳಿದರು.<br /> ಕಲಘಟಗಿ ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಧರ್ಮವು ಬಾಳಿಗೆ ದಾರಿ ತೋರಬಲ್ಲುದು. ಗುರು ಮತ್ತು ಗುರಿಯಿಟ್ಟು ಜೀವನ ಮುನ್ನಡೆಸಿದರೆ ಬಾಳು ಧನ್ಯವಾಗುತ್ತದೆ ಎಂದರು.<br /> <br /> ಈಶ್ವರಯ್ಯ ನಾವಳ್ಳಿಮಠ, ವೀರೇಶ ಪಾಟೀಲ, ಶ್ರೀಧರ ಪರಿಮಳಾಚಾರ್ಯ, ಕುಷ್ಟಗಿ ಪಂಚಾಕ್ಷರಯ್ಯ, ಮಹಾ ಬಲೇಶ್ವರ ಹನ್ನೆರಡುಮಠ, ಸಾವಿತ್ರಮ್ಮ ಮರಗಾಲ, ಎಸ್.ಆರ್.ನರೇಂದ್ರಮಠ, ಎ.ಎಂ.ಹಿರೇಮಠ ಮೊದಲಾದವರು ಹಾಜರಿದ್ದರು.<br /> ಎಸ್.ಎಸ್.ಪಾಟೀಲ ಸ್ವಾಗತಿಸಿ ದರು. ಪ್ರಕಾಶ ಬೆಂಡಿಗೇರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ:</strong> ‘ಮಾತು ಜ್ಯೋತಿರ್ಲಿಂಗ. ಉತ್ತಮ ಮಾತು ಮನುಷ್ಯನ ಗೆಲುವಿಗೆ ಕಾರಣವಾಗಬಹುದು. ಕೆಟ್ಟ ಮಾತು ಅವನತಿಗೂ ಕಾರಣವಾಗಬಹುದು. ಆಡುವ ಮಾತಿನಲ್ಲಿ ತೂಕವಿದ್ದರೆ ಗೌರವ, ಘನತೆ ಹೆಚ್ಚಾಗುತ್ತದೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಅಭಿಪ್ರಾಯಪಟ್ಟರು.<br /> <br /> ಗೋಕರ್ಣ ಕ್ಷೇತ್ರದ ಬಾಳೆ ಹೊನ್ನೂರು ವೀರಶೈವ ಮಠದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಶಿವಭಜನಾ ಸಪ್ತಾಹದ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.<br /> <br /> ‘ಸಮಾಜದ ಎಲ್ಲ ರಂಗಗಳಲ್ಲಿ ಇಂದು ಗೊಂದಲ ಮತ್ತು ಸಮಸ್ಯೆ ತಲೆದೋರಿದೆ. ಆಡುವ ಮಾತೇ ಇದಕ್ಕೆ ಕಾರಣ ಎನ್ನಬಹುದು. ದಾರಿ ತಪ್ಪಿದರೆ ಹಿಂತಿರುಗಿ ಸರಿ ದಾರಿ ಕಂಡುಕೊಳ್ಳ ಬಹುದು. ಆದರೆ ಮಾತು ತಪ್ಪಿದರೆ ಹಿಂತಿರುಗಿ ಬರುವುದಿಲ್ಲ’ ಎಂದು ಅವರು ಹೇಳಿದರು.<br /> ಕಲಘಟಗಿ ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಧರ್ಮವು ಬಾಳಿಗೆ ದಾರಿ ತೋರಬಲ್ಲುದು. ಗುರು ಮತ್ತು ಗುರಿಯಿಟ್ಟು ಜೀವನ ಮುನ್ನಡೆಸಿದರೆ ಬಾಳು ಧನ್ಯವಾಗುತ್ತದೆ ಎಂದರು.<br /> <br /> ಈಶ್ವರಯ್ಯ ನಾವಳ್ಳಿಮಠ, ವೀರೇಶ ಪಾಟೀಲ, ಶ್ರೀಧರ ಪರಿಮಳಾಚಾರ್ಯ, ಕುಷ್ಟಗಿ ಪಂಚಾಕ್ಷರಯ್ಯ, ಮಹಾ ಬಲೇಶ್ವರ ಹನ್ನೆರಡುಮಠ, ಸಾವಿತ್ರಮ್ಮ ಮರಗಾಲ, ಎಸ್.ಆರ್.ನರೇಂದ್ರಮಠ, ಎ.ಎಂ.ಹಿರೇಮಠ ಮೊದಲಾದವರು ಹಾಜರಿದ್ದರು.<br /> ಎಸ್.ಎಸ್.ಪಾಟೀಲ ಸ್ವಾಗತಿಸಿ ದರು. ಪ್ರಕಾಶ ಬೆಂಡಿಗೇರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>