<p><strong>ನವದೆಹಲಿ (ಐಎಎನ್ಎಸ್):</strong> ಭಾರತೀಯ ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳ ಮೇಲೆ ಬಾಹ್ಯ ಸಂಸ್ಥೆಗಳು ನಿಯಂತ್ರಣ ಹೇರುವುದಕ್ಕಿಂತ ಅವುಗಳೇ ಸ್ವಯಂ ಆಗಿ ನಿಯಂತ್ರಣ ಹೇರಿಕೊಳ್ಳುವುದು ಉತ್ತಮ ಮಾರ್ಗ ಎಂದು ಮಾಧ್ಯಮ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.</p>.<p>`ಭಾರತೀಯ ಪತ್ರಿಕಾ ಮಂಡಳಿಯಂತಹ ಸಂಸ್ಥೆಗಳು ಮಾಧ್ಯಮಗಳಿಗಾಗಿ ನೀತಿ ಸಂಹಿತೆ ರೂಪಿಸುವುದು ಮಾಧ್ಯಮಗಳ ನಿಯಂತ್ರಣಕ್ಕೆ ಇರುವ ಏಕೈಕ ದಾರಿ ಎಂದು ತೋರುತ್ತದೆ~ ಎಂದು ಅಂತರರಾಷ್ಟ್ರೀಯ ಮಾಧ್ಯಮ ವೀಕ್ಷಕ ಮತ್ತು `ಇಂಡಿಯಾಸ್ ನ್ಯೂಸ್ಪೇಪರ್ ರೆವಲ್ಯೂಷನ್~ ಲೇಖಕ ರಾಬಿನ್ ಜೆಫ್ರಿ ಹೇಳಿದ್ದಾರೆ.</p>.<p>`ವಿದೇಶದ ಇಂಗ್ಲಿಷ್ ಮಾಧ್ಯಮಗಳು ಈ ನಿಟ್ಟಿನಲ್ಲಿ ಇದುವರೆಗೆ ತೃಪ್ತಿಕರವಾದ ಮಾರ್ಗ ಕಂಡುಕೊಂಡಿಲ್ಲ. ಆದರೆ, ಸ್ವಯಂ ನಿಯಂತ್ರಣ ಮಾತ್ರ ಇದಕ್ಕೆ ಅತ್ಯುತ್ತಮ ದಾರಿ~ ಎಂದು ನವದೆಹಲಿ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಭಾರತೀಯ ಸಂಪಾದಕರ ಮಂಡಳಿ ಆಯೋಜಿಸಿದ್ದ ರಾಜೇಂದ್ರ ಮಥುರ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಜೆಫ್ರಿ ಅಭಿಪ್ರಾಯಪಟ್ಟಿದ್ದಾರೆ. ಮೂಲತಃ ಕೆನಡಾ ಪತ್ರಕರ್ತರಾದ ಜೆಫ್ರಿ ಭಾರತ, ಆಸ್ಟ್ರೇಲಿಯಾ, ಸಿಂಗಪುರದಲ್ಲಿ ಕಾರ್ಯನಿರ್ವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್):</strong> ಭಾರತೀಯ ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳ ಮೇಲೆ ಬಾಹ್ಯ ಸಂಸ್ಥೆಗಳು ನಿಯಂತ್ರಣ ಹೇರುವುದಕ್ಕಿಂತ ಅವುಗಳೇ ಸ್ವಯಂ ಆಗಿ ನಿಯಂತ್ರಣ ಹೇರಿಕೊಳ್ಳುವುದು ಉತ್ತಮ ಮಾರ್ಗ ಎಂದು ಮಾಧ್ಯಮ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.</p>.<p>`ಭಾರತೀಯ ಪತ್ರಿಕಾ ಮಂಡಳಿಯಂತಹ ಸಂಸ್ಥೆಗಳು ಮಾಧ್ಯಮಗಳಿಗಾಗಿ ನೀತಿ ಸಂಹಿತೆ ರೂಪಿಸುವುದು ಮಾಧ್ಯಮಗಳ ನಿಯಂತ್ರಣಕ್ಕೆ ಇರುವ ಏಕೈಕ ದಾರಿ ಎಂದು ತೋರುತ್ತದೆ~ ಎಂದು ಅಂತರರಾಷ್ಟ್ರೀಯ ಮಾಧ್ಯಮ ವೀಕ್ಷಕ ಮತ್ತು `ಇಂಡಿಯಾಸ್ ನ್ಯೂಸ್ಪೇಪರ್ ರೆವಲ್ಯೂಷನ್~ ಲೇಖಕ ರಾಬಿನ್ ಜೆಫ್ರಿ ಹೇಳಿದ್ದಾರೆ.</p>.<p>`ವಿದೇಶದ ಇಂಗ್ಲಿಷ್ ಮಾಧ್ಯಮಗಳು ಈ ನಿಟ್ಟಿನಲ್ಲಿ ಇದುವರೆಗೆ ತೃಪ್ತಿಕರವಾದ ಮಾರ್ಗ ಕಂಡುಕೊಂಡಿಲ್ಲ. ಆದರೆ, ಸ್ವಯಂ ನಿಯಂತ್ರಣ ಮಾತ್ರ ಇದಕ್ಕೆ ಅತ್ಯುತ್ತಮ ದಾರಿ~ ಎಂದು ನವದೆಹಲಿ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಭಾರತೀಯ ಸಂಪಾದಕರ ಮಂಡಳಿ ಆಯೋಜಿಸಿದ್ದ ರಾಜೇಂದ್ರ ಮಥುರ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಜೆಫ್ರಿ ಅಭಿಪ್ರಾಯಪಟ್ಟಿದ್ದಾರೆ. ಮೂಲತಃ ಕೆನಡಾ ಪತ್ರಕರ್ತರಾದ ಜೆಫ್ರಿ ಭಾರತ, ಆಸ್ಟ್ರೇಲಿಯಾ, ಸಿಂಗಪುರದಲ್ಲಿ ಕಾರ್ಯನಿರ್ವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>