<p>ಕಡೆಗೂ ಶ್ರೀ ಸತ್ಯಸಾಯಿಬಾಬಾ ಅವರ ದೇಹಾವಸಾನವಾಯಿತು!<br /> ಐವತ್ತು ವರ್ಷಗಳ ಹಿಂದೆ, ನಾನೂ ಮಿತ್ರ ಪೂರ್ಣಚಂದ್ರ ತೇಜಸ್ವಿಯವರೂ ಬಾಬಾ ಅವರನ್ನು ಪುಟ್ಟಪರ್ತಿಯಲ್ಲಿ ಕಂಡಿದ್ದೆವು. ಆಗ ಅದಿನ್ನೂ ಒಂದು ಕುಗ್ರಾಮ; ಒಂದು ಸಣ್ಣ ಆಸ್ಪತ್ರೆಯಷ್ಟೆ ಅಲ್ಲಿತ್ತು (ಅಂದಹಾಗೆ, ತೇಜಸ್ವಿಯವರಿಗೆ ಸಾಯಿಬಾಬಾ ಅವರಲ್ಲಿ ಭಕ್ತಿಯೇನೂ ಇರಲಿಲ್ಲ; ಅವರ ಅಜ್ಜಿ-ತಾಯಿಯ ತಾಯಿ-ಬಾಬಾ ಭಕ್ತೆಯಾಗಿದ್ದುದರಿಂದ, ಸ್ವಲ್ಪ ಆಸಕ್ತಿ ಇತ್ತಷ್ಟೆ. ಆಮೇಲೆ ಅದೂ ಅಳಿಯಿತು.) ತೇಜಸ್ವಿಯವರಿಗೆ ಏನೋ ಅಮೂಲ್ಯವಾದ ವಸ್ತುವನ್ನು (ಉಂಗುರ?) ಬಾಬಾ ಅನುಗ್ರಹಿಸಿದಂತೆ ತೋರುತ್ತದೆ; ಬಡಪಾಯಿ ನನಗೆ ಲಭಿಸಿದ್ದು ಬರಿಯ ಮಾಮೂಲು ಬೂದಿಯೆ! (ಅಲ್ಲದೆ, ಅವರ ಒಂದು ಆಶ್ವಾಸನೆ ಹುಸಿಯಾಯಿತು.)<br /> <br /> ಅದು ಹಾಗಿರಲಿ. ಇನ್ನೊಂದು ಮುಖ್ಯ ವಿಷಯ: ಆ ನಂತರ ನಾನು ಕುವೆಂಪು ಅವರೊಡನೆ ಒಮ್ಮೆ ಮಾತನಾಡುವಾಗ, ಬಾಬಾ ಬಗೆಗೆ ಅವರು ಹೇಳಿದರು: ‘ಸಾಯಿಬಾಬಾ ಅವರಲ್ಲಿ ಏನೋ ಶಕ್ತಿಯಿರಬೇಕು. ಅವರೊಬ್ಬ ‘ಡೆಮಿ ಗಾಡ್’ (ಅರ್ಧದೇವತೆ, ಉಪದೇವತೆ) ಇರಬಹುದು!’<br /> <br /> ಕುವೆಂಪು ಹೀಗೆಂದರೆಂದು ನಾನೊಂದು ಸಭೆಯಲ್ಲಿ ಶ್ರೋತೃವೊಬ್ಬರ ಪ್ರಶ್ನೆಗೆ ಉತ್ತರವಾಗಿ ತಿಳಿಸಿದಾಗ, ಅಲ್ಲಿ ಉಪಸ್ಥಿತರಿದ್ದ ‘ಕುಂಬಳಕಾಯಿ ಆಕಾಂಕ್ಷಿ’ ಡಾ. ಎಚ್. ನರಸಿಂಹಯ್ಯನವರು ತಲೆಯಾಡಿಸಿ ನಕ್ಕರು; ಅವರ ಪಕ್ಕದಲ್ಲಿದ್ದ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರು ‘ಹೌದು, ಹೌದು. ಡಮ್ಮಿ ಗಾಡ್’ (ತೋರಿಕೆಯ ದೇವತೆ) ಎಂದು ವ್ಯಂಗ್ಯವಾಡಿದರು!<br /> <br /> ಮಾನವ ಶರೀರಕ್ಕೆ ಅಂತ್ಯ ಉಂಟೇ ಉಂಟು. ಅಚ್ಚರಿಯೇನು? ಸಾಯಿಬಾಬಾ ಅವರಿಗೆ 85 ವರ್ಷ ವಯಸ್ಸಾಗಿತ್ತು. ‘ಯಾರು ರಾಮನೋ, ಯಾರು ಕೃಷ್ಣನೋ ಅವನೇ ಈ ದೇಹದಲ್ಲಿ ರಾಮಕೃಷ್ಣನಿದ್ದಾನೆ!’ ಎಂದು ಘೋಷಿಸಿದ ‘ಅವತಾರವರಿಷ್ಠ’ ಶ್ರೀ ರಾಮಕೃಷ್ಣ ಪರಮಹಂಸರು 50ನೆಯ ವಯಸ್ಸಿಗೇ (ಗಂಟಲು ಕ್ಯಾನ್ಸರಿನಿಂದ ನರಳಿ) ಅಸ್ತಂಗತರಾಗಲಿಲ್ಲವೆ? ಇಷ್ಟಕ್ಕೂ, ಸಾಯಿಬಾಬಾ ಅವರ ಬಗೆಗೆ ನನ್ನ ವೈಯಕ್ತಿಕ ಅಭಿಪ್ರಾಯವೇನು? ನಾನೊಬ್ಬ ಸಂದೇಹವಾದಿ ಎಂದಷ್ಟೆ ಹೇಳಬಲ್ಲೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಡೆಗೂ ಶ್ರೀ ಸತ್ಯಸಾಯಿಬಾಬಾ ಅವರ ದೇಹಾವಸಾನವಾಯಿತು!<br /> ಐವತ್ತು ವರ್ಷಗಳ ಹಿಂದೆ, ನಾನೂ ಮಿತ್ರ ಪೂರ್ಣಚಂದ್ರ ತೇಜಸ್ವಿಯವರೂ ಬಾಬಾ ಅವರನ್ನು ಪುಟ್ಟಪರ್ತಿಯಲ್ಲಿ ಕಂಡಿದ್ದೆವು. ಆಗ ಅದಿನ್ನೂ ಒಂದು ಕುಗ್ರಾಮ; ಒಂದು ಸಣ್ಣ ಆಸ್ಪತ್ರೆಯಷ್ಟೆ ಅಲ್ಲಿತ್ತು (ಅಂದಹಾಗೆ, ತೇಜಸ್ವಿಯವರಿಗೆ ಸಾಯಿಬಾಬಾ ಅವರಲ್ಲಿ ಭಕ್ತಿಯೇನೂ ಇರಲಿಲ್ಲ; ಅವರ ಅಜ್ಜಿ-ತಾಯಿಯ ತಾಯಿ-ಬಾಬಾ ಭಕ್ತೆಯಾಗಿದ್ದುದರಿಂದ, ಸ್ವಲ್ಪ ಆಸಕ್ತಿ ಇತ್ತಷ್ಟೆ. ಆಮೇಲೆ ಅದೂ ಅಳಿಯಿತು.) ತೇಜಸ್ವಿಯವರಿಗೆ ಏನೋ ಅಮೂಲ್ಯವಾದ ವಸ್ತುವನ್ನು (ಉಂಗುರ?) ಬಾಬಾ ಅನುಗ್ರಹಿಸಿದಂತೆ ತೋರುತ್ತದೆ; ಬಡಪಾಯಿ ನನಗೆ ಲಭಿಸಿದ್ದು ಬರಿಯ ಮಾಮೂಲು ಬೂದಿಯೆ! (ಅಲ್ಲದೆ, ಅವರ ಒಂದು ಆಶ್ವಾಸನೆ ಹುಸಿಯಾಯಿತು.)<br /> <br /> ಅದು ಹಾಗಿರಲಿ. ಇನ್ನೊಂದು ಮುಖ್ಯ ವಿಷಯ: ಆ ನಂತರ ನಾನು ಕುವೆಂಪು ಅವರೊಡನೆ ಒಮ್ಮೆ ಮಾತನಾಡುವಾಗ, ಬಾಬಾ ಬಗೆಗೆ ಅವರು ಹೇಳಿದರು: ‘ಸಾಯಿಬಾಬಾ ಅವರಲ್ಲಿ ಏನೋ ಶಕ್ತಿಯಿರಬೇಕು. ಅವರೊಬ್ಬ ‘ಡೆಮಿ ಗಾಡ್’ (ಅರ್ಧದೇವತೆ, ಉಪದೇವತೆ) ಇರಬಹುದು!’<br /> <br /> ಕುವೆಂಪು ಹೀಗೆಂದರೆಂದು ನಾನೊಂದು ಸಭೆಯಲ್ಲಿ ಶ್ರೋತೃವೊಬ್ಬರ ಪ್ರಶ್ನೆಗೆ ಉತ್ತರವಾಗಿ ತಿಳಿಸಿದಾಗ, ಅಲ್ಲಿ ಉಪಸ್ಥಿತರಿದ್ದ ‘ಕುಂಬಳಕಾಯಿ ಆಕಾಂಕ್ಷಿ’ ಡಾ. ಎಚ್. ನರಸಿಂಹಯ್ಯನವರು ತಲೆಯಾಡಿಸಿ ನಕ್ಕರು; ಅವರ ಪಕ್ಕದಲ್ಲಿದ್ದ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರು ‘ಹೌದು, ಹೌದು. ಡಮ್ಮಿ ಗಾಡ್’ (ತೋರಿಕೆಯ ದೇವತೆ) ಎಂದು ವ್ಯಂಗ್ಯವಾಡಿದರು!<br /> <br /> ಮಾನವ ಶರೀರಕ್ಕೆ ಅಂತ್ಯ ಉಂಟೇ ಉಂಟು. ಅಚ್ಚರಿಯೇನು? ಸಾಯಿಬಾಬಾ ಅವರಿಗೆ 85 ವರ್ಷ ವಯಸ್ಸಾಗಿತ್ತು. ‘ಯಾರು ರಾಮನೋ, ಯಾರು ಕೃಷ್ಣನೋ ಅವನೇ ಈ ದೇಹದಲ್ಲಿ ರಾಮಕೃಷ್ಣನಿದ್ದಾನೆ!’ ಎಂದು ಘೋಷಿಸಿದ ‘ಅವತಾರವರಿಷ್ಠ’ ಶ್ರೀ ರಾಮಕೃಷ್ಣ ಪರಮಹಂಸರು 50ನೆಯ ವಯಸ್ಸಿಗೇ (ಗಂಟಲು ಕ್ಯಾನ್ಸರಿನಿಂದ ನರಳಿ) ಅಸ್ತಂಗತರಾಗಲಿಲ್ಲವೆ? ಇಷ್ಟಕ್ಕೂ, ಸಾಯಿಬಾಬಾ ಅವರ ಬಗೆಗೆ ನನ್ನ ವೈಯಕ್ತಿಕ ಅಭಿಪ್ರಾಯವೇನು? ನಾನೊಬ್ಬ ಸಂದೇಹವಾದಿ ಎಂದಷ್ಟೆ ಹೇಳಬಲ್ಲೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>