<p><strong>ನವದೆಹಲಿ (ಪಿಟಿಐ):</strong> 2 ಜಿ ತರಂಗಾಂತರ ಹಗರಣದಲ್ಲಿ ದೂರಸಂಪರ್ಕ ಖಾತೆ ಮಾಜಿ ಸಚಿವ ದಯಾನಿಧಿ ಮಾರನ್ ನಿರ್ದೋಷಿ ಎಂದು ತಾನು ಹೇಳಿಯೇ ಇಲ್ಲ ಎಂದು ಸಿಬಿಐ ಗುರುವಾರ ಸುಪ್ರೀಂಕೋರ್ಟ್ನಲ್ಲಿ ಸಮರ್ಥಿಸಿಕೊಂಡಿದೆ.<br /> <br /> ಇದೇ ವೇಳೆ ಈ ಹಗರಣದಲ್ಲಿ ಸಿಬಿಐ ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ಆಪಾದಿಸಿ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯಗಳ ಕೇಂದ್ರ (ಸಿಪಿಐಎಲ್) ಅರ್ಜಿ ಸಲ್ಲಿಸಿರುವುದಕ್ಕೂ ಸಿಬಿಐ ತೀವ್ರವಾಗಿ ಆಕ್ಷೇಪಿಸಿದೆ.<br /> <br /> `ಏರ್ಸೆಲ್ ಕಂಪೆನಿಯು ತನ್ನ ಷೇರುಗಳನ್ನು ಮಲೇಷಿಯಾ ಮೂಲದ ಮ್ಯಾಕ್ಸಿಸ್ ಗ್ರೂಪ್ಗೆ ಮಾರಾಟ ಮಾಡಲು ಮಾರನ್ ಒತ್ತಡ ಹೇರಿದ್ದರೆಂಬುದಕ್ಕೆ ಈತನಕ ಯಾವುದೇ ಸುಳಿವು ಸಿಕ್ಕಿಲ್ಲ ಎಂದಷ್ಟೇ ನಾವು ಹೇಳಿದ್ದೇವೆ~ ಎಂಬುದನ್ನು ಸಿಬಿಐ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರ ನ್ಯಾಯಪೀಠದ ಮುಂದೆ ಸಮರ್ಥಿಸಿಕೊಂಡಿತು.<br /> <br /> `ಏರ್ಸೆಲ್ ಷೇರು ಮಾರಾಟ ಮಾಡುವ ಮುನ್ನವೇ ಮ್ಯಾಕ್ಸಿಸ್ ಕಂಪೆನಿಯು ಮಾರನ್ ಮತ್ತು ಅವರ ಸೋದರನೊಂದಿಗೆ ಸಂಪರ್ಕ ಹೊಂದಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ~ ಎಂದೂ ಸಿಬಿಐ ಪರ ವಕೀಲ ಕೆ.ಕೆ.ವೇಣುಗೋಪಾಲ್ ತಿಳಿಸಿದರು.ಹಿಂದಿನ ವಿಚಾರಣೆಯ ಬಗ್ಗೆ ಮಾಧ್ಯಮಗಳು ತಪ್ಪು ವರದಿ ಮಾಡಿವೆ. ಮಾರನ್ರನ್ನು ಸಿಬಿಐ ದೋಷಮುಕ್ತಗೊಳಿಸಿದೆ ಎಂಬ ರೀತಿಯಲ್ಲಿ ವರದಿಗಳು ಪ್ರಕಟವಾಗಿವೆ ಎಂದು ದೂರಿದರು. <br /> <br /> ಸಿಪಿಐಎಲ್ ಪರ ವಕೀಲ ಪ್ರಶಾಂತ್ ಭೂಷಣ್ ಸಿಬಿಐ ತನಿಖೆ ಪ್ರಾಮಾಣಿಕತೆ ಬಗ್ಗೆ ಹಾಗೂ ಈ ಪ್ರಕರಣ ವಿಚಾರಣಾ ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತದೆಂದು ಅನುಮಾನ ವ್ಯಕ್ತಪಡಿಸಿರುವುದು ತೀವ್ರ ಆಕ್ಷೇಪಾರ್ಹ ಎಂದು ವೇಣುಗೋಪಾಲ್ ವಾದಿಸಿದರು.<br /> <br /> ಪ್ರಶಾಂತ್ ಭೂಷಣ್ ಸಿಬಿಐ ಬಗ್ಗೆ ಆರೋಪಗಳ ದುರದೃಷ್ಟಕರ. ಈ ಆರೋಪಗಳನ್ನು ರದ್ದುಗಳಿಸಬೇಕು ಎಂದು ವೇಣುಗೋಪಾಲ್ ಕೋರಿದರು. ಆದರೆ ಸಿಪಿಐಎಲ್ ವಾದವನ್ನೂ ಆಲಿಸದೆ ಹಾಗೆ ರದ್ದತಿ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳ ಸ್ಪಷ್ಟಪಡಿಸಿದರು.<br /> <br /> ಮಾರನ್ ಮೇ 2004ರಿಂದ ಮೇ 2007ರವರೆಗೆ ದೂರಸಂಪರ್ಕ ಸಚಿವರಾಗಿದ್ದರು. ಆಗ ಏರ್ಸೆಲ್ ಕಂಪೆನಿ ಮಾಲಿಕರಾಗಿದ್ದ ಶಿವಶಂಕರನ್ ತಮ್ಮ ಹೆಸರಿನಲ್ಲಿ ಹೊಂದಿದ್ದ ಷೇರುಗಳನ್ನು ಮ್ಯಾಕ್ಸಿಮ್ ಕಂಪೆನಿಗೆ ಮಾರಾಟ ಮಾಡಲು ಮಾರನ್ ಒತ್ತಾಯಿಸಿದ್ದರು. ಈ ಮುನ್ನ ಏರ್ಸೆಲ್ ಕಂಪೆನಿಗೆ ಸರ್ಕಾರದ ಒಪ್ಪಿಗೆ ಪತ್ರ ನೀಡಲು ಮಾರನ್ ಬಹಳಷ್ಟು ವಿಳಂಬ ಮಾಡಿದ್ದರು. <br /> </p>.<p>ಆದರೆ ಮ್ಯಾಕ್ಸಿಮ್ ಗ್ರೂಪ್ಗೆ ಷೇರು ಮಾರಿದ ಮೇಲೆ ಆ ಕಂಪೆನಿಗೆ ತ್ವರಿತವಾಗಿ ಒಪ್ಪಿಗೆ ಪತ್ರ ನೀಡಿದರು. ಸಚಿವರು ಹೀಗೆ ಅನುಕೂಲ ಮಾಡಿಕೊಟ್ಟದ್ದಕ್ಕೆ ಪ್ರತಿಯಾಗಿ, ಮ್ಯಾಕ್ಸಿಮ್ ಕಂಪೆನಿ ಮಾರನ್ ಕುಟುಂಬದ ವಹಿವಾಟಿನಲ್ಲಿ ಹಣ ತೊಡಗಿಸಿದೆ ಎಂಬ ಆರೋಪ ಇದಾಗಿದೆ.<br /> <br /> ಸುಪ್ರೀಂಕೋರ್ಟ್ನಲ್ಲಿ ನಡೆದಿರುವ ವಿಚಾರಣೆ ಸಂದರ್ಭದಲ್ಲಿ, `ಶಿವಶಂಕರನ್ ಅವರಿಗೆ ಒಪ್ಪಿಗೆ ಪತ್ರ ನೀಡುವಲ್ಲಿ ಮಾರನ್ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಾರೆ~ ಎಂದೇ ಸಿಬಿಐ ಹೇಳಿದೆ.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> 2 ಜಿ ತರಂಗಾಂತರ ಹಗರಣದಲ್ಲಿ ದೂರಸಂಪರ್ಕ ಖಾತೆ ಮಾಜಿ ಸಚಿವ ದಯಾನಿಧಿ ಮಾರನ್ ನಿರ್ದೋಷಿ ಎಂದು ತಾನು ಹೇಳಿಯೇ ಇಲ್ಲ ಎಂದು ಸಿಬಿಐ ಗುರುವಾರ ಸುಪ್ರೀಂಕೋರ್ಟ್ನಲ್ಲಿ ಸಮರ್ಥಿಸಿಕೊಂಡಿದೆ.<br /> <br /> ಇದೇ ವೇಳೆ ಈ ಹಗರಣದಲ್ಲಿ ಸಿಬಿಐ ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ಆಪಾದಿಸಿ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯಗಳ ಕೇಂದ್ರ (ಸಿಪಿಐಎಲ್) ಅರ್ಜಿ ಸಲ್ಲಿಸಿರುವುದಕ್ಕೂ ಸಿಬಿಐ ತೀವ್ರವಾಗಿ ಆಕ್ಷೇಪಿಸಿದೆ.<br /> <br /> `ಏರ್ಸೆಲ್ ಕಂಪೆನಿಯು ತನ್ನ ಷೇರುಗಳನ್ನು ಮಲೇಷಿಯಾ ಮೂಲದ ಮ್ಯಾಕ್ಸಿಸ್ ಗ್ರೂಪ್ಗೆ ಮಾರಾಟ ಮಾಡಲು ಮಾರನ್ ಒತ್ತಡ ಹೇರಿದ್ದರೆಂಬುದಕ್ಕೆ ಈತನಕ ಯಾವುದೇ ಸುಳಿವು ಸಿಕ್ಕಿಲ್ಲ ಎಂದಷ್ಟೇ ನಾವು ಹೇಳಿದ್ದೇವೆ~ ಎಂಬುದನ್ನು ಸಿಬಿಐ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರ ನ್ಯಾಯಪೀಠದ ಮುಂದೆ ಸಮರ್ಥಿಸಿಕೊಂಡಿತು.<br /> <br /> `ಏರ್ಸೆಲ್ ಷೇರು ಮಾರಾಟ ಮಾಡುವ ಮುನ್ನವೇ ಮ್ಯಾಕ್ಸಿಸ್ ಕಂಪೆನಿಯು ಮಾರನ್ ಮತ್ತು ಅವರ ಸೋದರನೊಂದಿಗೆ ಸಂಪರ್ಕ ಹೊಂದಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ~ ಎಂದೂ ಸಿಬಿಐ ಪರ ವಕೀಲ ಕೆ.ಕೆ.ವೇಣುಗೋಪಾಲ್ ತಿಳಿಸಿದರು.ಹಿಂದಿನ ವಿಚಾರಣೆಯ ಬಗ್ಗೆ ಮಾಧ್ಯಮಗಳು ತಪ್ಪು ವರದಿ ಮಾಡಿವೆ. ಮಾರನ್ರನ್ನು ಸಿಬಿಐ ದೋಷಮುಕ್ತಗೊಳಿಸಿದೆ ಎಂಬ ರೀತಿಯಲ್ಲಿ ವರದಿಗಳು ಪ್ರಕಟವಾಗಿವೆ ಎಂದು ದೂರಿದರು. <br /> <br /> ಸಿಪಿಐಎಲ್ ಪರ ವಕೀಲ ಪ್ರಶಾಂತ್ ಭೂಷಣ್ ಸಿಬಿಐ ತನಿಖೆ ಪ್ರಾಮಾಣಿಕತೆ ಬಗ್ಗೆ ಹಾಗೂ ಈ ಪ್ರಕರಣ ವಿಚಾರಣಾ ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತದೆಂದು ಅನುಮಾನ ವ್ಯಕ್ತಪಡಿಸಿರುವುದು ತೀವ್ರ ಆಕ್ಷೇಪಾರ್ಹ ಎಂದು ವೇಣುಗೋಪಾಲ್ ವಾದಿಸಿದರು.<br /> <br /> ಪ್ರಶಾಂತ್ ಭೂಷಣ್ ಸಿಬಿಐ ಬಗ್ಗೆ ಆರೋಪಗಳ ದುರದೃಷ್ಟಕರ. ಈ ಆರೋಪಗಳನ್ನು ರದ್ದುಗಳಿಸಬೇಕು ಎಂದು ವೇಣುಗೋಪಾಲ್ ಕೋರಿದರು. ಆದರೆ ಸಿಪಿಐಎಲ್ ವಾದವನ್ನೂ ಆಲಿಸದೆ ಹಾಗೆ ರದ್ದತಿ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳ ಸ್ಪಷ್ಟಪಡಿಸಿದರು.<br /> <br /> ಮಾರನ್ ಮೇ 2004ರಿಂದ ಮೇ 2007ರವರೆಗೆ ದೂರಸಂಪರ್ಕ ಸಚಿವರಾಗಿದ್ದರು. ಆಗ ಏರ್ಸೆಲ್ ಕಂಪೆನಿ ಮಾಲಿಕರಾಗಿದ್ದ ಶಿವಶಂಕರನ್ ತಮ್ಮ ಹೆಸರಿನಲ್ಲಿ ಹೊಂದಿದ್ದ ಷೇರುಗಳನ್ನು ಮ್ಯಾಕ್ಸಿಮ್ ಕಂಪೆನಿಗೆ ಮಾರಾಟ ಮಾಡಲು ಮಾರನ್ ಒತ್ತಾಯಿಸಿದ್ದರು. ಈ ಮುನ್ನ ಏರ್ಸೆಲ್ ಕಂಪೆನಿಗೆ ಸರ್ಕಾರದ ಒಪ್ಪಿಗೆ ಪತ್ರ ನೀಡಲು ಮಾರನ್ ಬಹಳಷ್ಟು ವಿಳಂಬ ಮಾಡಿದ್ದರು. <br /> </p>.<p>ಆದರೆ ಮ್ಯಾಕ್ಸಿಮ್ ಗ್ರೂಪ್ಗೆ ಷೇರು ಮಾರಿದ ಮೇಲೆ ಆ ಕಂಪೆನಿಗೆ ತ್ವರಿತವಾಗಿ ಒಪ್ಪಿಗೆ ಪತ್ರ ನೀಡಿದರು. ಸಚಿವರು ಹೀಗೆ ಅನುಕೂಲ ಮಾಡಿಕೊಟ್ಟದ್ದಕ್ಕೆ ಪ್ರತಿಯಾಗಿ, ಮ್ಯಾಕ್ಸಿಮ್ ಕಂಪೆನಿ ಮಾರನ್ ಕುಟುಂಬದ ವಹಿವಾಟಿನಲ್ಲಿ ಹಣ ತೊಡಗಿಸಿದೆ ಎಂಬ ಆರೋಪ ಇದಾಗಿದೆ.<br /> <br /> ಸುಪ್ರೀಂಕೋರ್ಟ್ನಲ್ಲಿ ನಡೆದಿರುವ ವಿಚಾರಣೆ ಸಂದರ್ಭದಲ್ಲಿ, `ಶಿವಶಂಕರನ್ ಅವರಿಗೆ ಒಪ್ಪಿಗೆ ಪತ್ರ ನೀಡುವಲ್ಲಿ ಮಾರನ್ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಾರೆ~ ಎಂದೇ ಸಿಬಿಐ ಹೇಳಿದೆ.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>