<p><strong>ಬೆಂಗಳೂರು:</strong> ರಾಜ್ಯದಲ್ಲಿನ ಎಲ್ಲ ಕ್ರೀಡಾಂಗಣಗಳಲ್ಲಿ ಕ್ರೀಡೇತರ ಚಟುವಟಿಕೆಗಳಿಗೂ ಅವಕಾಶ ನೀಡಬಹುದೇ ಅಥವಾ ಬೇಡವೇ ಎಂಬ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ಯುವಜನ ಮತ್ತು ಕ್ರೀಡಾ ಇಲಾಖೆಗೆ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.</p>.<p>‘ಮೊದಲು, ಕ್ರೀಡೇತರ ಚಟುವಟಿಕೆಗಳಿಗೆ ಬಾಡಿಗೆ ನೀಡುವ ಸಂಬಂಧ ಯಾವ ರೀತಿಯ ಷರತ್ತುಗಳನ್ನು ವಿಧಿಸಬಹುದು ಎಂಬುದಾಗಿ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ 48 ಕ್ರೀಡಾ ಸಂಸ್ಥೆಗಳು ಕೂಡಲೇ ಸಭೆ ಸೇರಿ ಮಾರ್ಗಸೂಚಿ ರೂಪಿಸಬೇಕು. ಪ್ರತಿಯೊಂದು ಕ್ರೀಡಾ ಸಂಘಗಳು ಈ ಮಾರ್ಗಸೂಚಿಯನ್ನು ಮುಂದಿನ ಕ್ರಮಕ್ಕಾಗಿ ಆರು ತಿಂಗಳ ಒಳಗೆ ಪ್ರತ್ಯೇಕವಾಗಿ ಇಲಾಖೆಯ ಕಾರ್ಯದರ್ಶಿಯ ಅವಗಾಹನೆಗೆ ಕಳುಹಿಸಬೇಕು. ಈ ಕುರಿತು ಇಲಾಖೆ ನಂತರದ ಮೂರು ತಿಂಗಳ ಒಳಗೆ ಅಂತಿಮ ನಿರ್ಧಾರಕ್ಕೆ ಬರಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.</p>.<p>(ಅರ್ಜಿಯಲ್ಲಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್, ಅಥ್ಲೆಟಿಕ್ ಅಸೋಸಿಯೇಷನ್, ಬ್ಯಾಸ್ಕೆಟ್ಬಾಲ್, ಬಾಡ್ಮಿಂಟನ್, ಕೇರಂ, ಚೆಸ್, ಮಹಿಳಾ ಕ್ರಿಕೆಟ್ ಸೇರಿದಂತೆ ಇತರ ಕ್ರೀಡಾ ಸಂಘ ಸಂಸ್ಥೆಗಳು ಪ್ರತಿವಾದಿಗಳಾಗಿವೆ).</p>.<p>‘ಸಭೆಯಲ್ಲಿ ರೂಪಿಸಲಾದ ಮಾರ್ಗಸೂಚಿಗೆ ಇಲಾಖೆಯ ಕಾರ್ಯದರ್ಶಿಗಳು ತಿದ್ದುಪಡಿ ಮಾಡಬಹುದು ಇಲ್ಲವೇ ಬೇರೆ ವಿಷಯಗಳನ್ನು ಅದರಲ್ಲಿ ಸೇರಿಸಬಹುದು. ಅಂತಿಮವಾಗಿ ರೂಪಿಸಲಾಗುವ ಮಾರ್ಗಸೂಚಿಯಲ್ಲಿನ ನಿಯಮ ಮೀರಿದರೆ ಯಾವ ಶಿಕ್ಷೆಗೆ ಸಂಘ ಸಂಸ್ಥೆಗಳಿಗೆ ಒಳಪಡಿಸಲಾಗುವುದು ಎಂಬ ಬಗ್ಗೆಯೂ ಮಾರ್ಗಸೂಚಿಯಲ್ಲಿ ಉಲ್ಲೇಖಿಸಬೇಕು’ ಎಂದು ಸೂಚಿಸಿರುವ ಪೀಠ, ಇಲಾಖೆಯ ಈ ನಿರ್ಧಾರಕ್ಕೆ ಪ್ರತಿಯೊಂದು ಕ್ರೀಡಾ ಸಂಘ ಸಂಸ್ಥೆಗಳು ಬದ್ಧವಾಗಿರಬೇಕು ಎಂದು ಸ್ಪಷ್ಟಪಡಿಸಿದೆ.</p>.<p>‘ಒಂದು ವೇಳೆ ಯಾವುದೇ ಸಂಘ ಸಂಸ್ಥೆಗಳು ಆರು ತಿಂಗಳ ಅವಧಿಯಲ್ಲಿ ಮಾರ್ಗಸೂಚಿಯನ್ನು ಇಲಾಖೆಗೆ ನೀಡದೇ ಹೋದಲ್ಲಿ ಅಂತಹ ಸಂಘ ಸಂಸ್ಥೆಗಳು ಇನ್ನು ಮುಂದೆ ಕ್ರೀಡೇತರ ಚಟುವಟಿಕೆಗಳಿಗೆ ತಮ್ಮ ವ್ಯಾಪ್ತಿಯ ಕ್ರೀಡಾಂಗಣವನ್ನು ನೀಡುವಂತಿಲ್ಲ’ ಎಂದೂ ಪೀಠ ತೀರ್ಪಿನಲ್ಲಿ ಎಚ್ಚರಿಸಿದೆ.</p>.<p>ಕ್ರೀಡೆಗೆ ಮೀಸಲಿಟ್ಟ ನಗರದ ಕಂಠೀರವ ಕ್ರೀಡಾಂಗಣದ ಜಾಗವನ್ನು ವಾಣಿಜ್ಯ ಮೇಳ, ಫ್ಯಾಷನ್ ಷೋ, ಇತರ ಉತ್ಸವ, ಪಾರ್ಕಿಂಗ್ ನಿಲುಗಡೆಯಂತಹ ಕ್ರೀಡೇತರ ಚಟುವಟಿಕೆಗಳಿಗೆ ನೀಡುತ್ತಿರುವುದನ್ನು ಪ್ರಶ್ನಿಸಿ ಕೆ.ಪಟೇಲ್ ಮನೇಗೌಡ ಎನ್ನುವವರು 2008ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.</p>.<p>ವರ್ಷವಿಡೀ ಇತರ ಚಟುವಟಿಕೆಗಳಿಗೆ ಕ್ರೀಡಾಂಗಣ ಮೀಸಲು ಇರುವ ಕಾರಣ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟಗಳ ವಿವಿಧ ಕ್ರೀಡೆಗಳಿಗೆ ಕ್ರೀಡಾಂಗಣ ದೊರಕುತ್ತಿಲ್ಲ ಎನ್ನುವುದು ಅವರ ವಾದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದಲ್ಲಿನ ಎಲ್ಲ ಕ್ರೀಡಾಂಗಣಗಳಲ್ಲಿ ಕ್ರೀಡೇತರ ಚಟುವಟಿಕೆಗಳಿಗೂ ಅವಕಾಶ ನೀಡಬಹುದೇ ಅಥವಾ ಬೇಡವೇ ಎಂಬ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ಯುವಜನ ಮತ್ತು ಕ್ರೀಡಾ ಇಲಾಖೆಗೆ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.</p>.<p>‘ಮೊದಲು, ಕ್ರೀಡೇತರ ಚಟುವಟಿಕೆಗಳಿಗೆ ಬಾಡಿಗೆ ನೀಡುವ ಸಂಬಂಧ ಯಾವ ರೀತಿಯ ಷರತ್ತುಗಳನ್ನು ವಿಧಿಸಬಹುದು ಎಂಬುದಾಗಿ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ 48 ಕ್ರೀಡಾ ಸಂಸ್ಥೆಗಳು ಕೂಡಲೇ ಸಭೆ ಸೇರಿ ಮಾರ್ಗಸೂಚಿ ರೂಪಿಸಬೇಕು. ಪ್ರತಿಯೊಂದು ಕ್ರೀಡಾ ಸಂಘಗಳು ಈ ಮಾರ್ಗಸೂಚಿಯನ್ನು ಮುಂದಿನ ಕ್ರಮಕ್ಕಾಗಿ ಆರು ತಿಂಗಳ ಒಳಗೆ ಪ್ರತ್ಯೇಕವಾಗಿ ಇಲಾಖೆಯ ಕಾರ್ಯದರ್ಶಿಯ ಅವಗಾಹನೆಗೆ ಕಳುಹಿಸಬೇಕು. ಈ ಕುರಿತು ಇಲಾಖೆ ನಂತರದ ಮೂರು ತಿಂಗಳ ಒಳಗೆ ಅಂತಿಮ ನಿರ್ಧಾರಕ್ಕೆ ಬರಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.</p>.<p>(ಅರ್ಜಿಯಲ್ಲಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್, ಅಥ್ಲೆಟಿಕ್ ಅಸೋಸಿಯೇಷನ್, ಬ್ಯಾಸ್ಕೆಟ್ಬಾಲ್, ಬಾಡ್ಮಿಂಟನ್, ಕೇರಂ, ಚೆಸ್, ಮಹಿಳಾ ಕ್ರಿಕೆಟ್ ಸೇರಿದಂತೆ ಇತರ ಕ್ರೀಡಾ ಸಂಘ ಸಂಸ್ಥೆಗಳು ಪ್ರತಿವಾದಿಗಳಾಗಿವೆ).</p>.<p>‘ಸಭೆಯಲ್ಲಿ ರೂಪಿಸಲಾದ ಮಾರ್ಗಸೂಚಿಗೆ ಇಲಾಖೆಯ ಕಾರ್ಯದರ್ಶಿಗಳು ತಿದ್ದುಪಡಿ ಮಾಡಬಹುದು ಇಲ್ಲವೇ ಬೇರೆ ವಿಷಯಗಳನ್ನು ಅದರಲ್ಲಿ ಸೇರಿಸಬಹುದು. ಅಂತಿಮವಾಗಿ ರೂಪಿಸಲಾಗುವ ಮಾರ್ಗಸೂಚಿಯಲ್ಲಿನ ನಿಯಮ ಮೀರಿದರೆ ಯಾವ ಶಿಕ್ಷೆಗೆ ಸಂಘ ಸಂಸ್ಥೆಗಳಿಗೆ ಒಳಪಡಿಸಲಾಗುವುದು ಎಂಬ ಬಗ್ಗೆಯೂ ಮಾರ್ಗಸೂಚಿಯಲ್ಲಿ ಉಲ್ಲೇಖಿಸಬೇಕು’ ಎಂದು ಸೂಚಿಸಿರುವ ಪೀಠ, ಇಲಾಖೆಯ ಈ ನಿರ್ಧಾರಕ್ಕೆ ಪ್ರತಿಯೊಂದು ಕ್ರೀಡಾ ಸಂಘ ಸಂಸ್ಥೆಗಳು ಬದ್ಧವಾಗಿರಬೇಕು ಎಂದು ಸ್ಪಷ್ಟಪಡಿಸಿದೆ.</p>.<p>‘ಒಂದು ವೇಳೆ ಯಾವುದೇ ಸಂಘ ಸಂಸ್ಥೆಗಳು ಆರು ತಿಂಗಳ ಅವಧಿಯಲ್ಲಿ ಮಾರ್ಗಸೂಚಿಯನ್ನು ಇಲಾಖೆಗೆ ನೀಡದೇ ಹೋದಲ್ಲಿ ಅಂತಹ ಸಂಘ ಸಂಸ್ಥೆಗಳು ಇನ್ನು ಮುಂದೆ ಕ್ರೀಡೇತರ ಚಟುವಟಿಕೆಗಳಿಗೆ ತಮ್ಮ ವ್ಯಾಪ್ತಿಯ ಕ್ರೀಡಾಂಗಣವನ್ನು ನೀಡುವಂತಿಲ್ಲ’ ಎಂದೂ ಪೀಠ ತೀರ್ಪಿನಲ್ಲಿ ಎಚ್ಚರಿಸಿದೆ.</p>.<p>ಕ್ರೀಡೆಗೆ ಮೀಸಲಿಟ್ಟ ನಗರದ ಕಂಠೀರವ ಕ್ರೀಡಾಂಗಣದ ಜಾಗವನ್ನು ವಾಣಿಜ್ಯ ಮೇಳ, ಫ್ಯಾಷನ್ ಷೋ, ಇತರ ಉತ್ಸವ, ಪಾರ್ಕಿಂಗ್ ನಿಲುಗಡೆಯಂತಹ ಕ್ರೀಡೇತರ ಚಟುವಟಿಕೆಗಳಿಗೆ ನೀಡುತ್ತಿರುವುದನ್ನು ಪ್ರಶ್ನಿಸಿ ಕೆ.ಪಟೇಲ್ ಮನೇಗೌಡ ಎನ್ನುವವರು 2008ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.</p>.<p>ವರ್ಷವಿಡೀ ಇತರ ಚಟುವಟಿಕೆಗಳಿಗೆ ಕ್ರೀಡಾಂಗಣ ಮೀಸಲು ಇರುವ ಕಾರಣ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟಗಳ ವಿವಿಧ ಕ್ರೀಡೆಗಳಿಗೆ ಕ್ರೀಡಾಂಗಣ ದೊರಕುತ್ತಿಲ್ಲ ಎನ್ನುವುದು ಅವರ ವಾದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>