<p><span style="font-size: medium"><strong>ನವದೆಹಲಿ, (ಪಿಟಿಐ):</strong> ಕಳೆದ 2008ರಲ್ಲಿ ಮಾಲೆಗಾವ್ ನಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಎದುರಿಸುತ್ತಿರುವ ಮೊಕ್ಕಾ ಕಾನೂನು ಅಡಿ ಬಂಧಿತರಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.</span></p>.<p><span style="font-size: medium">ಜಾಮೀನು ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಗಳಾದ ಜೆ.ಎಂ.ಪಂಚಾಳ್ ಮತ್ತು ಎಚ್.ಜಿ.ಗೋಖಲೆ ಅವರ ವಿಭಾಗೀಯ ಪೀಠ ಅವರ ಜಾಮೀನು ಅರ್ಜಿಯನ್ನು ತಳ್ಳಿಹಾಕಿದೆ.</span></p>.<p><span style="font-size: medium">ಮಹಾರಾಷ್ಟ್ರ ಭಯೋತ್ಪಾದಕ ನಿರೋಧ ಪಡೆ (ಮಹಾರಾಷ್ಟ್ರ ಆಂಟಿ ಟೆರರಿಸ್ಟ್ ಸ್ಕ್ವಾಡ್)ಯು 2008 ಅಕ್ಟೋಬರ್ 23 ರಂದು ತಮ್ಮನ್ನು ಬಂಧಿಸಿದ್ದರೂ 90 ದಿನಗೊಳಳಗಾಗಿ ತಮ್ಮ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ವಿಫಲವಾಗಿದೆ ಎಂದು ಸಾಧ್ವಿ ಅವರ ಜಾಮೀನು ಅರ್ಜಿಯಲ್ಲಿ ಹೇಳಲಾಗಿತ್ತು.</span></p>.<p><span style="font-size: medium">ಇದಲ್ಲದೇ, 2008ರ ಅಕ್ಟೋಬರ್ 10ರಿಂದ ತಮ್ಮ ಕಕ್ಷಿದಾರಳನ್ನು ಅಕ್ರಮವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದ ಎಐಟಿಎಸ್, ಕಕ್ಷಿದಾರಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿ ನೀಡಿದೆ, ಹೀಗಾಗಿ ತಮ್ಮ ಕಕ್ಷಿದಾರಳಿಗೆ ಜಾಮೀನು ನೀಡಬೇಕೆಂದು ಎಂದು ಸಾಧ್ವಿ ಪರ ವಕೀಲರು ವಾದಿಸಿದ್ದರು.</span></p>.<p><span style="font-size: medium">ಕಳೆದ 2008ರ ಅಕ್ಟೋಬರ್ 23 ರಂದು ಸಾಧ್ವಿ ಅವರನ್ನು ಬಂಧಿಸಿದ ಕೂಡಲೇ ಕಾನೂನಿನ ಪ್ರಕಾರ ಅವರನ್ನು ಮ್ಯಾಜಿಸ್ಟ್ರೇಟ್ ರ ಎದುರು ಹಾಜರು ಪಡಿಸಲಾಗಿತ್ತು ಎಂದು ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿತ್ತು.</span></p>.<p><span style="font-size: medium">ಕಕ್ಷಿದಾರ ಸಾಧ್ವಿ ಮತ್ತು ಸರ್ಕಾರದ ಪರ ವಾದಗಳನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ, ಸೆಪ್ಟೆಂಬರ್ 1 ರಂದು ತನ್ನ ತೀರ್ಮಾನವನ್ನು ನಂತರ ಪ್ರಕಟಿಸುವುದಾಗಿ ತಿಳಿಸಿತ್ತು.</span><br /> <br /> <span style="font-size: medium">ಮೊದಲೇ ಕೋಮುಗಲಭೆಗಳಿಗೆ ಹೆಸರಾದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬಟ್ಟೆಗಿರಣಿಗಳ ಮಾಲೆಗಾವ್ ನಲ್ಲಿ, ಕಳೆದ 2008 ಸೆಪ್ಟೆಂಬರ್ 29 ರಂದು ನಡೆದ ಸ್ಫೋಟದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಯ ನಂತರ ಈ ಬಾಂಬ್ ಸ್ಫೋಟದಲ್ಲಿ ಬಲಪಂಥೀಯ ಹಿಂದೂ ಸಂಘಟನೆಗಳ ಕೈವಾಡವಿರುವುದು ಬೆಳಕಿಗೆ ಬಂದಿತ್ತು.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: medium"><strong>ನವದೆಹಲಿ, (ಪಿಟಿಐ):</strong> ಕಳೆದ 2008ರಲ್ಲಿ ಮಾಲೆಗಾವ್ ನಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಎದುರಿಸುತ್ತಿರುವ ಮೊಕ್ಕಾ ಕಾನೂನು ಅಡಿ ಬಂಧಿತರಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.</span></p>.<p><span style="font-size: medium">ಜಾಮೀನು ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಗಳಾದ ಜೆ.ಎಂ.ಪಂಚಾಳ್ ಮತ್ತು ಎಚ್.ಜಿ.ಗೋಖಲೆ ಅವರ ವಿಭಾಗೀಯ ಪೀಠ ಅವರ ಜಾಮೀನು ಅರ್ಜಿಯನ್ನು ತಳ್ಳಿಹಾಕಿದೆ.</span></p>.<p><span style="font-size: medium">ಮಹಾರಾಷ್ಟ್ರ ಭಯೋತ್ಪಾದಕ ನಿರೋಧ ಪಡೆ (ಮಹಾರಾಷ್ಟ್ರ ಆಂಟಿ ಟೆರರಿಸ್ಟ್ ಸ್ಕ್ವಾಡ್)ಯು 2008 ಅಕ್ಟೋಬರ್ 23 ರಂದು ತಮ್ಮನ್ನು ಬಂಧಿಸಿದ್ದರೂ 90 ದಿನಗೊಳಳಗಾಗಿ ತಮ್ಮ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ವಿಫಲವಾಗಿದೆ ಎಂದು ಸಾಧ್ವಿ ಅವರ ಜಾಮೀನು ಅರ್ಜಿಯಲ್ಲಿ ಹೇಳಲಾಗಿತ್ತು.</span></p>.<p><span style="font-size: medium">ಇದಲ್ಲದೇ, 2008ರ ಅಕ್ಟೋಬರ್ 10ರಿಂದ ತಮ್ಮ ಕಕ್ಷಿದಾರಳನ್ನು ಅಕ್ರಮವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದ ಎಐಟಿಎಸ್, ಕಕ್ಷಿದಾರಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿ ನೀಡಿದೆ, ಹೀಗಾಗಿ ತಮ್ಮ ಕಕ್ಷಿದಾರಳಿಗೆ ಜಾಮೀನು ನೀಡಬೇಕೆಂದು ಎಂದು ಸಾಧ್ವಿ ಪರ ವಕೀಲರು ವಾದಿಸಿದ್ದರು.</span></p>.<p><span style="font-size: medium">ಕಳೆದ 2008ರ ಅಕ್ಟೋಬರ್ 23 ರಂದು ಸಾಧ್ವಿ ಅವರನ್ನು ಬಂಧಿಸಿದ ಕೂಡಲೇ ಕಾನೂನಿನ ಪ್ರಕಾರ ಅವರನ್ನು ಮ್ಯಾಜಿಸ್ಟ್ರೇಟ್ ರ ಎದುರು ಹಾಜರು ಪಡಿಸಲಾಗಿತ್ತು ಎಂದು ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿತ್ತು.</span></p>.<p><span style="font-size: medium">ಕಕ್ಷಿದಾರ ಸಾಧ್ವಿ ಮತ್ತು ಸರ್ಕಾರದ ಪರ ವಾದಗಳನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ, ಸೆಪ್ಟೆಂಬರ್ 1 ರಂದು ತನ್ನ ತೀರ್ಮಾನವನ್ನು ನಂತರ ಪ್ರಕಟಿಸುವುದಾಗಿ ತಿಳಿಸಿತ್ತು.</span><br /> <br /> <span style="font-size: medium">ಮೊದಲೇ ಕೋಮುಗಲಭೆಗಳಿಗೆ ಹೆಸರಾದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬಟ್ಟೆಗಿರಣಿಗಳ ಮಾಲೆಗಾವ್ ನಲ್ಲಿ, ಕಳೆದ 2008 ಸೆಪ್ಟೆಂಬರ್ 29 ರಂದು ನಡೆದ ಸ್ಫೋಟದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಯ ನಂತರ ಈ ಬಾಂಬ್ ಸ್ಫೋಟದಲ್ಲಿ ಬಲಪಂಥೀಯ ಹಿಂದೂ ಸಂಘಟನೆಗಳ ಕೈವಾಡವಿರುವುದು ಬೆಳಕಿಗೆ ಬಂದಿತ್ತು.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>