<p><strong>ರಾಯಚೂರು: </strong>ನಗರದ ಹೃದಯ ಭಾಗದಲ್ಲಿರುವ ಮಾವಿನಕೆರೆ ಮಲಿನ ನೀರಿನ ತಾಣವಾದರೂ ಜನರಿಗೆ ಆಕರ್ಷಣೆಯ ಸ್ಥಳ.<br /> <br /> ವಿಸ್ತಾರವಾಗಿ ಚಾಚಿಕೊಂಡಿರುವ ಮಾವಿನ ಕೆರೆಯ ಒಂದು ಮಗ್ಗುಲಲ್ಲಿ ಮಾತ್ರ ಸಾರ್ವಜನಿಕರಿಗೆ ಅನುಕೂಲಗಳಿವೆ. ಉದ್ಯಾನ, ಕೆರೆಯ ಏರಿ ಮೇಲೆ ಪಾದಚಾರಿ ಮಾರ್ಗ ಇದೆ. ನಿತ್ಯ ಇಲ್ಲಿ ನೂರಾರು ಜನರು ವಾಯು ವಿಹಾರ ಮಾಡುತ್ತಾರೆ.<br /> <br /> ಜೊತೆಗೆ ವಾರಾಂತ್ಯದಲ್ಲಿ ಹೆಚ್ಚಿನ ಜನರು ಉದ್ಯಾನಕ್ಕೆ ಭೇಟಿ ನೀಡಿ ಕೆಲವು ಸಮಯ ಕಳೆಯುತ್ತಾರೆ. ಆದರೆ, ಕೆರೆಯ ಇತರ ಭಾಗಗಳಲ್ಲಿ ಇಂತಹ ಈ ಅವಕಾಶ ಇಲ್ಲ. ಈಗ ನಗರಸಭೆಯು ಉರಿಕುಂದಿ ಈರಣ್ಣ ದೇವಾಲಯ ರಸ್ತೆಗೆ ಹೊಂದಿಕೊಂಡಿರುವ (ಖಾಸ ಬಾವಿ ಎದುರು) ಕೆರೆಯ ಏರಿ ಮೇಲೆ ಸಿಮೆಂಟ್ ಬೆಂಚುಗಳನ್ನು ಹಾಕಿಸಿ ನಾಗರಿಕರಿಗೆ ಕುಳಿತುಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ.<br /> <br /> ಈ ಜಾಗ ಕಟ್ಟಡಗಳ ಅವಶೇಷ ಮತ್ತು ತ್ಯಾಜ್ಯಗಳನ್ನು ಸುರಿಯುವ ತಾಣವಾಗಿತ್ತು. ಕೆರೆಯ ಭಾಗ ಇತರೆಡೆ ಒತ್ತುವರಿಯಾದಂತೆ ಇಲ್ಲೂ ಒತ್ತುವರಿ ಆಗುತ್ತದೆ ಎಂಬ ಗುಮಾನಿ ಜನರಲ್ಲಿ ಉಂಟಾಗಿತ್ತು. ಈ ಸಂಶಯವನ್ನು ಹೋಗಲಾಡಿಸಲು ಮತ್ತು ಕೆರೆಯನ್ನು ಸಂರಕ್ಷಿಸಲು ನಗರಸಭೆಯಿಂದ ಈ ಬೆಂಚುಗಳನ್ನು ಹಾಕಲಾಗಿದೆ.<br /> <br /> ₹ 6 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಯೂ ನಡೆಯುತ್ತಿದೆ. 500 ಚದರ ಮೀಟರ್ ಇಂಟರ್ಲಾಕ್ ಟೈಲ್ಸ್ನ ಪಾದಚಾರಿ ಮಾರ್ಗದ ನಿರ್ಮಾಣ ಆಗುತ್ತಿದ್ದು, 15 ಕಡೆ ಸಿಮೆಂಟ್ ಬೆಂಚ್ಗಳನ್ನು ಹಾಕಲಾಗುತ್ತದೆ. ಸದ್ಯ 10 ಕಡೆ ಬೆಂಚ್ಗಳ ಅಳವಡಿಕೆ ಆಗಿದೆ.<br /> <br /> ‘ಖಾಸ ಭಾವಿ ಎದುರು ಬೆಂಚುಗಳನ್ನು ಹಾಕಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಈ ಇದು ಹಾಳಾಗದಂತೆ ಬೇಲಿಯನ್ನೂ ಹಾಕ ಬೇಕು. ಆಗ ದನಕರುಗಳು, ಹಂದಿ– ನಾಯಿಗಳು ನುಗ್ಗಿ ಹೊಲಸು ಮಾಡುವುದು ತಪ್ಪುತ್ತದೆ’ ಎಂದು ಕೋಟೆ ಪ್ರದೇಶದ ನಿವಾಸಿ ಸುಧೀಂದ್ರ ಹೇಳಿದರು.<br /> <br /> ‘ಬೆಂಚುಗಳನ್ನು ಹಾಕಿದ್ದು ಚಲೋ ಕಾರ್ಯವೇ ಆದರೆ, ದುರ್ವಾಸನೆ, ಸೊಳ್ಳೆಗಳ ಕಾಟವನ್ನು ಹೋಗಲಾಡಿ ಸಿದರೆ ಮಾತ್ರ ಇದು ಜನರ ಉಪ ಯೋಗಕ್ಕೆ ಹಚ್ಚು ಬರುತ್ತದೆ’ ಎಂದು ಜಬೀನ್ ಬೀ ನುಡಿದರು.<br /> <br /> ‘ಕೆರೆ ಏರಿಗೆ ಹಸಿರುಹುಲ್ಲಿನ ಹೊದಿಕೆ (ಗ್ರೀನ್ ಲಾನ್), ತಂತಿ ಬೇಲಿ ಹಾಕಿಸಿ ಗೇಟ್ ಕೂಡ ಅಳವಡಿಸಲಾಗುವುದು. ಇನಷ್ಟು ವಿದ್ಯುತ್ ದೀಪಗಳನ್ನು ಹಾಕಿ ಸುವ ಕಾಮಗಾರಿಗಳು ನಡೆಯಲಿವೆ’ ಎಂದು 9ನೇ ವಾರ್ಡ್ನ ಸದಸ್ಯ ನರಸಪ್ಪ ಯಾಕ್ಲಾಸಪುರ ಹೇಳಿದರು.<br /> <br /> ‘ಖಾಸ ಭಾವಿ ಎದುರಿನ ಮಾವಿನಕೆರೆ ಏರಿ ಮೇಲೆ ಮಣ್ಣು ಸುರಿಯಲಾಗುತ್ತಿತ್ತು. ಕೆರೆ ಏರಿ ಒತ್ತುವರಿ ಆಗುತ್ತದೆ ಎಂಬ ಆತಂಕ ಜನರಲ್ಲಿ ಮೂಡಿತ್ತು. ಸಿಮೆಂಟ್ನ ಬೆಂಚ್ಗಳನ್ನು ಹಾಕಿ ಜನೋಪಯೋಗಿ ಕೆಲಸ ಮಾಡಲಾಗಿದೆ.’ ಎಂದು ನಗರಸಭೆ ಉಪಾಧ್ಯಕ್ಷ ಜಯಣ್ಣ ತಿಳಿಸಿದರು. <br /> <br /> ***<br /> ಕೆರೆ ಏರಿ ಮೇಲೆ ವೇದಿಕೆಯೊಂದನ್ನು ನಿರ್ಮಿಸಲಾಗಿದೆ. ಜಿಲ್ಲಾಡಳಿತ ಅನುಮತಿ ನೀಡಿದರೆ, 60ಅಡಿ ಎತ್ತರದ ಸ್ತಂಭ ಸ್ಥಾಪಿಸಿ ರಾಷ್ಟ್ರಧ್ವಜ ಅರಳಿಸುವ ಯೋಚನೆ ಇದೆ.<br /> <em><strong>-ನರಸಪ್ಪ ಯಾಕ್ಲಾಸಪುರ,ನಗರಸಭೆಸದಸ್ಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ನಗರದ ಹೃದಯ ಭಾಗದಲ್ಲಿರುವ ಮಾವಿನಕೆರೆ ಮಲಿನ ನೀರಿನ ತಾಣವಾದರೂ ಜನರಿಗೆ ಆಕರ್ಷಣೆಯ ಸ್ಥಳ.<br /> <br /> ವಿಸ್ತಾರವಾಗಿ ಚಾಚಿಕೊಂಡಿರುವ ಮಾವಿನ ಕೆರೆಯ ಒಂದು ಮಗ್ಗುಲಲ್ಲಿ ಮಾತ್ರ ಸಾರ್ವಜನಿಕರಿಗೆ ಅನುಕೂಲಗಳಿವೆ. ಉದ್ಯಾನ, ಕೆರೆಯ ಏರಿ ಮೇಲೆ ಪಾದಚಾರಿ ಮಾರ್ಗ ಇದೆ. ನಿತ್ಯ ಇಲ್ಲಿ ನೂರಾರು ಜನರು ವಾಯು ವಿಹಾರ ಮಾಡುತ್ತಾರೆ.<br /> <br /> ಜೊತೆಗೆ ವಾರಾಂತ್ಯದಲ್ಲಿ ಹೆಚ್ಚಿನ ಜನರು ಉದ್ಯಾನಕ್ಕೆ ಭೇಟಿ ನೀಡಿ ಕೆಲವು ಸಮಯ ಕಳೆಯುತ್ತಾರೆ. ಆದರೆ, ಕೆರೆಯ ಇತರ ಭಾಗಗಳಲ್ಲಿ ಇಂತಹ ಈ ಅವಕಾಶ ಇಲ್ಲ. ಈಗ ನಗರಸಭೆಯು ಉರಿಕುಂದಿ ಈರಣ್ಣ ದೇವಾಲಯ ರಸ್ತೆಗೆ ಹೊಂದಿಕೊಂಡಿರುವ (ಖಾಸ ಬಾವಿ ಎದುರು) ಕೆರೆಯ ಏರಿ ಮೇಲೆ ಸಿಮೆಂಟ್ ಬೆಂಚುಗಳನ್ನು ಹಾಕಿಸಿ ನಾಗರಿಕರಿಗೆ ಕುಳಿತುಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ.<br /> <br /> ಈ ಜಾಗ ಕಟ್ಟಡಗಳ ಅವಶೇಷ ಮತ್ತು ತ್ಯಾಜ್ಯಗಳನ್ನು ಸುರಿಯುವ ತಾಣವಾಗಿತ್ತು. ಕೆರೆಯ ಭಾಗ ಇತರೆಡೆ ಒತ್ತುವರಿಯಾದಂತೆ ಇಲ್ಲೂ ಒತ್ತುವರಿ ಆಗುತ್ತದೆ ಎಂಬ ಗುಮಾನಿ ಜನರಲ್ಲಿ ಉಂಟಾಗಿತ್ತು. ಈ ಸಂಶಯವನ್ನು ಹೋಗಲಾಡಿಸಲು ಮತ್ತು ಕೆರೆಯನ್ನು ಸಂರಕ್ಷಿಸಲು ನಗರಸಭೆಯಿಂದ ಈ ಬೆಂಚುಗಳನ್ನು ಹಾಕಲಾಗಿದೆ.<br /> <br /> ₹ 6 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಯೂ ನಡೆಯುತ್ತಿದೆ. 500 ಚದರ ಮೀಟರ್ ಇಂಟರ್ಲಾಕ್ ಟೈಲ್ಸ್ನ ಪಾದಚಾರಿ ಮಾರ್ಗದ ನಿರ್ಮಾಣ ಆಗುತ್ತಿದ್ದು, 15 ಕಡೆ ಸಿಮೆಂಟ್ ಬೆಂಚ್ಗಳನ್ನು ಹಾಕಲಾಗುತ್ತದೆ. ಸದ್ಯ 10 ಕಡೆ ಬೆಂಚ್ಗಳ ಅಳವಡಿಕೆ ಆಗಿದೆ.<br /> <br /> ‘ಖಾಸ ಭಾವಿ ಎದುರು ಬೆಂಚುಗಳನ್ನು ಹಾಕಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಈ ಇದು ಹಾಳಾಗದಂತೆ ಬೇಲಿಯನ್ನೂ ಹಾಕ ಬೇಕು. ಆಗ ದನಕರುಗಳು, ಹಂದಿ– ನಾಯಿಗಳು ನುಗ್ಗಿ ಹೊಲಸು ಮಾಡುವುದು ತಪ್ಪುತ್ತದೆ’ ಎಂದು ಕೋಟೆ ಪ್ರದೇಶದ ನಿವಾಸಿ ಸುಧೀಂದ್ರ ಹೇಳಿದರು.<br /> <br /> ‘ಬೆಂಚುಗಳನ್ನು ಹಾಕಿದ್ದು ಚಲೋ ಕಾರ್ಯವೇ ಆದರೆ, ದುರ್ವಾಸನೆ, ಸೊಳ್ಳೆಗಳ ಕಾಟವನ್ನು ಹೋಗಲಾಡಿ ಸಿದರೆ ಮಾತ್ರ ಇದು ಜನರ ಉಪ ಯೋಗಕ್ಕೆ ಹಚ್ಚು ಬರುತ್ತದೆ’ ಎಂದು ಜಬೀನ್ ಬೀ ನುಡಿದರು.<br /> <br /> ‘ಕೆರೆ ಏರಿಗೆ ಹಸಿರುಹುಲ್ಲಿನ ಹೊದಿಕೆ (ಗ್ರೀನ್ ಲಾನ್), ತಂತಿ ಬೇಲಿ ಹಾಕಿಸಿ ಗೇಟ್ ಕೂಡ ಅಳವಡಿಸಲಾಗುವುದು. ಇನಷ್ಟು ವಿದ್ಯುತ್ ದೀಪಗಳನ್ನು ಹಾಕಿ ಸುವ ಕಾಮಗಾರಿಗಳು ನಡೆಯಲಿವೆ’ ಎಂದು 9ನೇ ವಾರ್ಡ್ನ ಸದಸ್ಯ ನರಸಪ್ಪ ಯಾಕ್ಲಾಸಪುರ ಹೇಳಿದರು.<br /> <br /> ‘ಖಾಸ ಭಾವಿ ಎದುರಿನ ಮಾವಿನಕೆರೆ ಏರಿ ಮೇಲೆ ಮಣ್ಣು ಸುರಿಯಲಾಗುತ್ತಿತ್ತು. ಕೆರೆ ಏರಿ ಒತ್ತುವರಿ ಆಗುತ್ತದೆ ಎಂಬ ಆತಂಕ ಜನರಲ್ಲಿ ಮೂಡಿತ್ತು. ಸಿಮೆಂಟ್ನ ಬೆಂಚ್ಗಳನ್ನು ಹಾಕಿ ಜನೋಪಯೋಗಿ ಕೆಲಸ ಮಾಡಲಾಗಿದೆ.’ ಎಂದು ನಗರಸಭೆ ಉಪಾಧ್ಯಕ್ಷ ಜಯಣ್ಣ ತಿಳಿಸಿದರು. <br /> <br /> ***<br /> ಕೆರೆ ಏರಿ ಮೇಲೆ ವೇದಿಕೆಯೊಂದನ್ನು ನಿರ್ಮಿಸಲಾಗಿದೆ. ಜಿಲ್ಲಾಡಳಿತ ಅನುಮತಿ ನೀಡಿದರೆ, 60ಅಡಿ ಎತ್ತರದ ಸ್ತಂಭ ಸ್ಥಾಪಿಸಿ ರಾಷ್ಟ್ರಧ್ವಜ ಅರಳಿಸುವ ಯೋಚನೆ ಇದೆ.<br /> <em><strong>-ನರಸಪ್ಪ ಯಾಕ್ಲಾಸಪುರ,ನಗರಸಭೆಸದಸ್ಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>