<p><strong style="font-size: 26px;">ಹುಮನಾಬಾದ್:</strong><span style="font-size: 26px;"> ಪಟ್ಟಣದ ಮಿನಿ ವಿಧಾನಸೌಧ ಒಳಾಂಗಣ ಪ್ರಾಂಗಣದಲ್ಲಿ ಆಸನಗಳ ಇಲ್ಲದೇ ವಿವಿಧ ಗ್ರಾಮಗಳಿಂದ ಬರುವ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗುತ್ತಿದ್ದಾರೆ.</span><br /> <br /> ವಿಧವಾ, ವೃದ್ಧಾಪ್ಯ ವೇತನ, ಅಂಗವಿಕಲ ಮಾಸಾಶನ, ಪಡಿತರ ಚೀಟಿ ಮತ್ತಿತರ ಕೆಲಸಗಳ ಸಂಬಂಧ ಇಲ್ಲಿಗೆ ಬರುವ ಸಾರ್ವಜನಿಕರು ಕೆಲಸ ವಿಳಂಬವಾದಲ್ಲಿ ನಿಂತೇ ಕಾಲ ಕಳೆಯಬೇಕಿದೆ.<br /> <br /> ಅವರಿಗಾಗಿ ಕುಳಿತುಕೊಳ್ಳುವುದಕ್ಕೆ ಕನಿಷ್ಠ ಆಸನಗಳ ಸೌಲಭ್ಯವೂ ಇಲ್ಲ. ಸೌಕರ್ಯ ಕಲ್ಪಿಸದ ತಾಲ್ಲೂಕು ಆಡಳಿತದ ಕ್ರಮದ ಬಗ್ಗೆ ಜನ ಬೇಸರ ವ್ಯಕ್ತಪಡಿಸಿದ್ದಾರೆ.<br /> <br /> ಈ ಸಮಸ್ಯೆ ಇಂದು ನಿನ್ನೆಯದೇನಲ್ಲ. ಪಟ್ಟಣದಲ್ಲಿ ಮಿನಿ ವಿಧಾನಸೌಧ ಕಚೇರಿ ಉದ್ಘಾಟನೆ ಆದಾಗಿನಿಂದಲೂ ಇದೆ. ಯುವಕರು, ಮಧ್ಯ ವಯಸ್ಸಿನ ಪುರುಷರು ಹೋಟೆಲ್ಗಳಿಗೆ ಹೋಗಬಹುದು. ಆದರೆ, ವೃದ್ಧರು, ಮಹಿಳೆಯರು ಎಲ್ಲಿಗೂ ಹೋಗಲಾದರೆ ನಿಂತೇ ಕಾಲ ಕಳೆಯುವಂತಾಗಿದೆ.<br /> <br /> ಅಲ್ಲದೆ ಕುಡಿಯುವ ನೀರು, ಪಹಣಿಗಾಗಿ ತಾಸುಗಟ್ಟಲೇ ನಿಲ್ಲುವವರಿಗಾಗಿ ನೆರಳಿನ ವ್ಯವಸ್ಥೆಯನ್ನು ಮಾಡಬೇಕು ಎನ್ನುವುದು ಜನರ ಬೇಡಿಕೆ. ಈ ಕುರಿತು ತಹಶೀಲ್ದಾರ್ ಬಾಲರಾಜ ದೇವರಖಾದ್ರ ಅವರನ್ನು ಸಂಪರ್ಕಿಸಿದಾಗ, `ಮೂಲಸೌಕರ್ಯಗಳ ಕೊರತೆ ಇರುವುದು ಈಗಾಗಲೇ ಗಮನಕ್ಕೆ ಬಂದಿದೆ. ಅಗತ್ಯ ಸೌಲಭ್ಯ ಕಲ್ಪಿಸಲು ರೂ. 6 ಲಕ್ಷ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ' ಎಂದು ಹೇಳಿದರು.<br /> <br /> `ಆಸನ, ಕುಡಿಯುವ ನೀರು ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆಯು ಸೂಕ್ತವಾದುದು. ಒಳಾಂಗಣ ಪ್ರಾಂಗಣದಲ್ಲಿ ಆಸನ ಆಳವಡಿಸಿದರೆ, ವ್ಯರ್ಥ ಕಾಲಹರಣ ಮಾಡುವವರು ಕುಳಿತುಕೊಂಡು ಇತರರಿಗೆ ತೊಂದರೆ ನೀಡಬಹುದು ಎಂಬ ಅಭಿಪ್ರಾಯವೂ ಇದೆ . ಆದರೂ ವೃದ್ಧರು, ಮಹಿಳೆಯರಿಗಾಗಿ ಆಸನ ಸೌಕರ್ಯ ಕಲ್ಪಿಸಲು, ಪಹಣಿ ವಿತರಣಾ ಕೇಂದ್ರ ಹೊರಗೆ ತಾತ್ಕಾಲಿಕ ನೆರಳಿನ ವ್ಯವಸ್ಥೆ, ಕುಡಿವ ನೀರಿನ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು' ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong style="font-size: 26px;">ಹುಮನಾಬಾದ್:</strong><span style="font-size: 26px;"> ಪಟ್ಟಣದ ಮಿನಿ ವಿಧಾನಸೌಧ ಒಳಾಂಗಣ ಪ್ರಾಂಗಣದಲ್ಲಿ ಆಸನಗಳ ಇಲ್ಲದೇ ವಿವಿಧ ಗ್ರಾಮಗಳಿಂದ ಬರುವ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗುತ್ತಿದ್ದಾರೆ.</span><br /> <br /> ವಿಧವಾ, ವೃದ್ಧಾಪ್ಯ ವೇತನ, ಅಂಗವಿಕಲ ಮಾಸಾಶನ, ಪಡಿತರ ಚೀಟಿ ಮತ್ತಿತರ ಕೆಲಸಗಳ ಸಂಬಂಧ ಇಲ್ಲಿಗೆ ಬರುವ ಸಾರ್ವಜನಿಕರು ಕೆಲಸ ವಿಳಂಬವಾದಲ್ಲಿ ನಿಂತೇ ಕಾಲ ಕಳೆಯಬೇಕಿದೆ.<br /> <br /> ಅವರಿಗಾಗಿ ಕುಳಿತುಕೊಳ್ಳುವುದಕ್ಕೆ ಕನಿಷ್ಠ ಆಸನಗಳ ಸೌಲಭ್ಯವೂ ಇಲ್ಲ. ಸೌಕರ್ಯ ಕಲ್ಪಿಸದ ತಾಲ್ಲೂಕು ಆಡಳಿತದ ಕ್ರಮದ ಬಗ್ಗೆ ಜನ ಬೇಸರ ವ್ಯಕ್ತಪಡಿಸಿದ್ದಾರೆ.<br /> <br /> ಈ ಸಮಸ್ಯೆ ಇಂದು ನಿನ್ನೆಯದೇನಲ್ಲ. ಪಟ್ಟಣದಲ್ಲಿ ಮಿನಿ ವಿಧಾನಸೌಧ ಕಚೇರಿ ಉದ್ಘಾಟನೆ ಆದಾಗಿನಿಂದಲೂ ಇದೆ. ಯುವಕರು, ಮಧ್ಯ ವಯಸ್ಸಿನ ಪುರುಷರು ಹೋಟೆಲ್ಗಳಿಗೆ ಹೋಗಬಹುದು. ಆದರೆ, ವೃದ್ಧರು, ಮಹಿಳೆಯರು ಎಲ್ಲಿಗೂ ಹೋಗಲಾದರೆ ನಿಂತೇ ಕಾಲ ಕಳೆಯುವಂತಾಗಿದೆ.<br /> <br /> ಅಲ್ಲದೆ ಕುಡಿಯುವ ನೀರು, ಪಹಣಿಗಾಗಿ ತಾಸುಗಟ್ಟಲೇ ನಿಲ್ಲುವವರಿಗಾಗಿ ನೆರಳಿನ ವ್ಯವಸ್ಥೆಯನ್ನು ಮಾಡಬೇಕು ಎನ್ನುವುದು ಜನರ ಬೇಡಿಕೆ. ಈ ಕುರಿತು ತಹಶೀಲ್ದಾರ್ ಬಾಲರಾಜ ದೇವರಖಾದ್ರ ಅವರನ್ನು ಸಂಪರ್ಕಿಸಿದಾಗ, `ಮೂಲಸೌಕರ್ಯಗಳ ಕೊರತೆ ಇರುವುದು ಈಗಾಗಲೇ ಗಮನಕ್ಕೆ ಬಂದಿದೆ. ಅಗತ್ಯ ಸೌಲಭ್ಯ ಕಲ್ಪಿಸಲು ರೂ. 6 ಲಕ್ಷ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ' ಎಂದು ಹೇಳಿದರು.<br /> <br /> `ಆಸನ, ಕುಡಿಯುವ ನೀರು ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆಯು ಸೂಕ್ತವಾದುದು. ಒಳಾಂಗಣ ಪ್ರಾಂಗಣದಲ್ಲಿ ಆಸನ ಆಳವಡಿಸಿದರೆ, ವ್ಯರ್ಥ ಕಾಲಹರಣ ಮಾಡುವವರು ಕುಳಿತುಕೊಂಡು ಇತರರಿಗೆ ತೊಂದರೆ ನೀಡಬಹುದು ಎಂಬ ಅಭಿಪ್ರಾಯವೂ ಇದೆ . ಆದರೂ ವೃದ್ಧರು, ಮಹಿಳೆಯರಿಗಾಗಿ ಆಸನ ಸೌಕರ್ಯ ಕಲ್ಪಿಸಲು, ಪಹಣಿ ವಿತರಣಾ ಕೇಂದ್ರ ಹೊರಗೆ ತಾತ್ಕಾಲಿಕ ನೆರಳಿನ ವ್ಯವಸ್ಥೆ, ಕುಡಿವ ನೀರಿನ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು' ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>