<p><strong>ಕೆ.ಬಾಲಚಂದರ್ ಯಾರು?</strong><br /> 1930ರಲ್ಲಿ ಹುಟ್ಟಿದ ಕೆ.ಬಾಲಚಂದರ್ ಹೆಸರಾಂತ ಸಿನಿಮಾ ನಿರ್ದೇಶಕ, ಚಿತ್ರಕಥಾ ಬರಹಗಾರ ಹಾಗೂ ನಿರ್ಮಾಪಕ. ವ್ಯಕ್ತಿ ನೆಲೆಯ ಅಂತರ್ಮುಖಿ ಸಮಸ್ಯೆಗಳನ್ನು ಬಿಂಬಿಸುವ ಚಿತ್ರಗಳಿಗೆ ಹೆಸರಾದ ಅವರು ತಮಿಳುನಾಡಿನವರು. ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಬಿಂಬಿಸುವ ಚಿತ್ರಗಳನ್ನೂ ಅವರು ಮಾಡಿದ್ದಾರೆ. <br /> <strong><br /> ಯಾವ ಭಾಷೆಗಳಲ್ಲಿ ಚಿತ್ರಗಳನ್ನು ಮಾಡಿದ್ದಾರೆ?</strong><br /> ಅವರ ಬಹುತೇಕ ಚಿತ್ರಗಳು ತಮಿಳು ಭಾಷೆಯವು. ತೆಲುಗು, ಕನ್ನಡ ಹಾಗೂ ಹಿಂದಿಯಲ್ಲೂ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತೆಲುಗಿನ ತಮ್ಮದೇ `ಮರೊ ಚರಿತ್ರ~ ಆಧರಿಸಿದ `ಏಕ್ ದೂಜೆ ಕೇ ಲಿಯೇ~ ಹಿಂದಿಯಲ್ಲಿ ಜನಪ್ರಿಯವಾಯಿತು. <br /> <br /> <strong>ಅವರ ಪ್ರಶಸ್ತಿ ಪಡೆದ ಚಿತ್ರಗಳು ಯಾವುವು?<br /> </strong>ಇರು ಕೊಡುಗಳ್ (1969), ಅಪೂರ್ವ ರಾಗಂಗಳ್ (1975), ತಣೀರ್ (1981), ಹಾಗೂ ಅಚಮಿಲ್ಲೈ ಅಚಮಿಲ್ಲೈ (1984) ತಮಿಳಿನ ಶ್ರೇಷ್ಠ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿವೆ. 1987ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಬಾಲಚಂದರ್ ಅವರಿಗೆ 2010ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿತು. <br /> <br /> <strong>ಟೀವಿಯಲ್ಲೂ ಅವರು ಕೆಲಸ ಮಾಡಿದ್ದಾರಾ?</strong><br /> ಹೌದು. `ಕೈ ಅಳವು ಮನಸು~, `ರಾಯಿಲ್ ಸ್ನೇಹಂ~ ಹಾಗೂ `ಸಹನಾ~ ಅವರು ನಿರ್ದೇಶಿಸಿದ ತಮಿಳಿನ ಜನಪ್ರಿಯ ಧಾರಾವಾಹಿಗಳು. <br /> <br /> <strong>ಅವರು ಅವಕಾಶ ಕೊಟ್ಟ ನಂತರ ಅತಿ ಜನಪ್ರಿಯರಾದವರು ಯಾರು?<br /> </strong>ಸೂಪರ್ಸ್ಟಾರ್ ರಜನೀಕಾಂತ್. `ಅಪೂರ್ವ ರಾಗಂಗಳ್~ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ್ದ ರಜನೀಕಾಂತ್ ಆಮೇಲೆ ಉತ್ತುಂಗಕ್ಕೇರಿದರು. ಕಮಲ ಹಾಸನ್, ರಮೇಶ್ ಅರವಿಂದ್, ಪ್ರಕಾಶ್ ರೈ ಮೊದಲಾದ ನಟರ ಬೆಳವಣಿಗೆಗೆ ಕಾರಣರಾದವರೂ ಇದೇ ಬಾಲಚಂದರ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಬಾಲಚಂದರ್ ಯಾರು?</strong><br /> 1930ರಲ್ಲಿ ಹುಟ್ಟಿದ ಕೆ.ಬಾಲಚಂದರ್ ಹೆಸರಾಂತ ಸಿನಿಮಾ ನಿರ್ದೇಶಕ, ಚಿತ್ರಕಥಾ ಬರಹಗಾರ ಹಾಗೂ ನಿರ್ಮಾಪಕ. ವ್ಯಕ್ತಿ ನೆಲೆಯ ಅಂತರ್ಮುಖಿ ಸಮಸ್ಯೆಗಳನ್ನು ಬಿಂಬಿಸುವ ಚಿತ್ರಗಳಿಗೆ ಹೆಸರಾದ ಅವರು ತಮಿಳುನಾಡಿನವರು. ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಬಿಂಬಿಸುವ ಚಿತ್ರಗಳನ್ನೂ ಅವರು ಮಾಡಿದ್ದಾರೆ. <br /> <strong><br /> ಯಾವ ಭಾಷೆಗಳಲ್ಲಿ ಚಿತ್ರಗಳನ್ನು ಮಾಡಿದ್ದಾರೆ?</strong><br /> ಅವರ ಬಹುತೇಕ ಚಿತ್ರಗಳು ತಮಿಳು ಭಾಷೆಯವು. ತೆಲುಗು, ಕನ್ನಡ ಹಾಗೂ ಹಿಂದಿಯಲ್ಲೂ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತೆಲುಗಿನ ತಮ್ಮದೇ `ಮರೊ ಚರಿತ್ರ~ ಆಧರಿಸಿದ `ಏಕ್ ದೂಜೆ ಕೇ ಲಿಯೇ~ ಹಿಂದಿಯಲ್ಲಿ ಜನಪ್ರಿಯವಾಯಿತು. <br /> <br /> <strong>ಅವರ ಪ್ರಶಸ್ತಿ ಪಡೆದ ಚಿತ್ರಗಳು ಯಾವುವು?<br /> </strong>ಇರು ಕೊಡುಗಳ್ (1969), ಅಪೂರ್ವ ರಾಗಂಗಳ್ (1975), ತಣೀರ್ (1981), ಹಾಗೂ ಅಚಮಿಲ್ಲೈ ಅಚಮಿಲ್ಲೈ (1984) ತಮಿಳಿನ ಶ್ರೇಷ್ಠ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿವೆ. 1987ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಬಾಲಚಂದರ್ ಅವರಿಗೆ 2010ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿತು. <br /> <br /> <strong>ಟೀವಿಯಲ್ಲೂ ಅವರು ಕೆಲಸ ಮಾಡಿದ್ದಾರಾ?</strong><br /> ಹೌದು. `ಕೈ ಅಳವು ಮನಸು~, `ರಾಯಿಲ್ ಸ್ನೇಹಂ~ ಹಾಗೂ `ಸಹನಾ~ ಅವರು ನಿರ್ದೇಶಿಸಿದ ತಮಿಳಿನ ಜನಪ್ರಿಯ ಧಾರಾವಾಹಿಗಳು. <br /> <br /> <strong>ಅವರು ಅವಕಾಶ ಕೊಟ್ಟ ನಂತರ ಅತಿ ಜನಪ್ರಿಯರಾದವರು ಯಾರು?<br /> </strong>ಸೂಪರ್ಸ್ಟಾರ್ ರಜನೀಕಾಂತ್. `ಅಪೂರ್ವ ರಾಗಂಗಳ್~ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ್ದ ರಜನೀಕಾಂತ್ ಆಮೇಲೆ ಉತ್ತುಂಗಕ್ಕೇರಿದರು. ಕಮಲ ಹಾಸನ್, ರಮೇಶ್ ಅರವಿಂದ್, ಪ್ರಕಾಶ್ ರೈ ಮೊದಲಾದ ನಟರ ಬೆಳವಣಿಗೆಗೆ ಕಾರಣರಾದವರೂ ಇದೇ ಬಾಲಚಂದರ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>