<p>ಬಾಗಲಕೋಟೆ: ನವನಗರ ಸಮೀಪದ ಮುಚಖಂಡಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಭಕ್ತಿ, ಭಾವ, ಸಂಭ್ರಮದಿಂದ ರಥೋತ್ಸವ ಜರುಗಿತು.<br /> <br /> ಕಾರ್ತಿಕೋತ್ಸವದ ಅಂಗವಾಗಿ ನಡೆದ ಜಾತ್ರಾ ಮಹೋತ್ಸವದಲ್ಲಿ ವೀರಭದ್ವೇಶ್ವರನಿಗೆ ಬೆಳಿಗ್ಗೆ ವಿವಿಧ ಪೂಜಾ ಕೈಂಕರ್ಯ ಹಾಗೂ ರುದ್ರಾಭಿಷೇಕ ನಡೆಯಿತು.<br /> <br /> ಸಂಜೆ ವೇಳೆಗೆ ವಿವಿಧ ವಾದ್ಯವೈಭವದೊಂದಿಗೆ ಮತ್ತು ಮಹಿಳೆಯರ ಆರತಿಯೊಂದಿಗೆ ಆರಂಭಗೊಂಡ ರಥೋತ್ಸವ ಗ್ರಾಮದ ಅಗಸಿ ಬಾಗಿಲನವರೆಗೆ ತೆರಳಿ ಬಳಿಕ ಪಾದಗಟ್ಟೆಗೆ ಪೂಜೆ ಸಲ್ಲಿಸಿ ಮರಳಿ ದೇವಸ್ಥಾನ ತಲುಪಿತು.<br /> <br /> ರಥ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು ಉತ್ತತ್ತಿ, ಚುರುಮುರಿ, ಬಾಳೆಕಾಯಿ, ಹೂವುಗಳನ್ನು ಭಕ್ತಿಯಿಂದ ಎರಚುವ ಮೂಲಕ ಹರಕೆ ಸಮರ್ಪಿಸಿದರು. ಜಿಲ್ಲೆ, ಹೊರಜಿಲ್ಲೆಯ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.<br /> <br /> ಚಿಕ್ಕ ರಥೋತ್ಸವಕ್ಕೆ ಮುಚಖಂಡಿ ಗ್ರಾಮದ ಹಗ್ಗ ಮತ್ತು ಮಹಾ ರಥೋತ್ಸವಕ್ಕೆ ವೀರಾಪುರ ಗ್ರಾಮದ ಹಗ್ಗ ಹಾಗೂ ಬೆಣ್ಣೂರಿನ ಕಳಸವನ್ನು ಬಳಸುವ ಮೂಲಕ ವೈಶಿಷ್ಟ್ಯ ಮೆರೆಯಲಾಯಿತು.<br /> <br /> ಭಕ್ತರು ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಲು ಪುರವಂತರಿಂದ ದೇಹಕ್ಕೆ ಶಸ್ತ್ರಗಳನ್ನು ಹಾಕಿಕೊಳ್ಳುವ ಮೂಲಕ ಭಕ್ತಿ ಪರಾಕಾಷ್ಠತೆ ಮೆರೆದರು.<br /> <br /> ರಥೋತ್ಸವದ ಬಳಿಕ ದೇವಸ್ಥಾನದ ಆವರಣದಲ್ಲಿ ಭಕ್ತರು ಸಹಸ್ರಾರು ಹಣತೆಗಳನ್ನು ಬೆಳಗಿಸುವ ಮೂಲಕ ಕಾರ್ತಿಕೋತ್ಸವ ಆಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗಲಕೋಟೆ: ನವನಗರ ಸಮೀಪದ ಮುಚಖಂಡಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಭಕ್ತಿ, ಭಾವ, ಸಂಭ್ರಮದಿಂದ ರಥೋತ್ಸವ ಜರುಗಿತು.<br /> <br /> ಕಾರ್ತಿಕೋತ್ಸವದ ಅಂಗವಾಗಿ ನಡೆದ ಜಾತ್ರಾ ಮಹೋತ್ಸವದಲ್ಲಿ ವೀರಭದ್ವೇಶ್ವರನಿಗೆ ಬೆಳಿಗ್ಗೆ ವಿವಿಧ ಪೂಜಾ ಕೈಂಕರ್ಯ ಹಾಗೂ ರುದ್ರಾಭಿಷೇಕ ನಡೆಯಿತು.<br /> <br /> ಸಂಜೆ ವೇಳೆಗೆ ವಿವಿಧ ವಾದ್ಯವೈಭವದೊಂದಿಗೆ ಮತ್ತು ಮಹಿಳೆಯರ ಆರತಿಯೊಂದಿಗೆ ಆರಂಭಗೊಂಡ ರಥೋತ್ಸವ ಗ್ರಾಮದ ಅಗಸಿ ಬಾಗಿಲನವರೆಗೆ ತೆರಳಿ ಬಳಿಕ ಪಾದಗಟ್ಟೆಗೆ ಪೂಜೆ ಸಲ್ಲಿಸಿ ಮರಳಿ ದೇವಸ್ಥಾನ ತಲುಪಿತು.<br /> <br /> ರಥ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು ಉತ್ತತ್ತಿ, ಚುರುಮುರಿ, ಬಾಳೆಕಾಯಿ, ಹೂವುಗಳನ್ನು ಭಕ್ತಿಯಿಂದ ಎರಚುವ ಮೂಲಕ ಹರಕೆ ಸಮರ್ಪಿಸಿದರು. ಜಿಲ್ಲೆ, ಹೊರಜಿಲ್ಲೆಯ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.<br /> <br /> ಚಿಕ್ಕ ರಥೋತ್ಸವಕ್ಕೆ ಮುಚಖಂಡಿ ಗ್ರಾಮದ ಹಗ್ಗ ಮತ್ತು ಮಹಾ ರಥೋತ್ಸವಕ್ಕೆ ವೀರಾಪುರ ಗ್ರಾಮದ ಹಗ್ಗ ಹಾಗೂ ಬೆಣ್ಣೂರಿನ ಕಳಸವನ್ನು ಬಳಸುವ ಮೂಲಕ ವೈಶಿಷ್ಟ್ಯ ಮೆರೆಯಲಾಯಿತು.<br /> <br /> ಭಕ್ತರು ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಲು ಪುರವಂತರಿಂದ ದೇಹಕ್ಕೆ ಶಸ್ತ್ರಗಳನ್ನು ಹಾಕಿಕೊಳ್ಳುವ ಮೂಲಕ ಭಕ್ತಿ ಪರಾಕಾಷ್ಠತೆ ಮೆರೆದರು.<br /> <br /> ರಥೋತ್ಸವದ ಬಳಿಕ ದೇವಸ್ಥಾನದ ಆವರಣದಲ್ಲಿ ಭಕ್ತರು ಸಹಸ್ರಾರು ಹಣತೆಗಳನ್ನು ಬೆಳಗಿಸುವ ಮೂಲಕ ಕಾರ್ತಿಕೋತ್ಸವ ಆಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>