<p>ಹಾವೇರಿ: ಭಾನುವಾರ ನಿಧನ ಹೊಂದಿದ ಜೈನ ಮುನಿ ಧರ್ಮಸಾಗರ ಮಹಾರಾಜರ ಅಂತ್ಯಕ್ರಿಯೆ ಜೈನ ಸಮುದಾಯದ ವಿಧಿವಿಧಾನಗಳ ಮೂಲಕ ಸೋಮವಾರ ಇಲ್ಲಿ ನಡೆಯಿತು.<br /> <br /> ಇಲ್ಲಿನ ಶಂಭವನಂದಿ ಮುನಿ ಮಹಾರಾಜರ ಪಾದುಕೆ ಇರುವ ಸ್ಥಳದಲ್ಲಿ ದೇಹದಹನ ಕಾರ್ಯವು ಮುನಿ ಪುಣ್ಯಸಾಗರ ಹಾಗೂ ಪ್ರಸನ್ನಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ನಡೆಯಿತು.<br /> <br /> ಪಾರ್ಥಿವ ಶರೀರವನ್ನು ಜೈನ ಬಸ್ತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಅಂತ್ಯಕ್ರಿಯೆ ಸ್ಥಳಕ್ಕೆ ತರಲಾಯಿತಲ್ಲದೇ, ಅವರ ದೇಹದಹನದ ವಿಧಿವಿಧಾನಗಳ ಕ್ರಿಯೆಯನ್ನು ಹರಾಜಿನ ಮೂಲಕ ಭಕ್ತರಿಗೆ ನೀಡಲಾಯಿತು.</p>.<p>ಂತರ ಧಾರ್ಮಿಕ ಕ್ರಿಯೆಗಳಾದ ಜಲಾಭಿಷೇಕ, ಚಂದನ ಅಭಿಷೇಕ, ಕ್ಷೀರಾಭಿಷೇಕ, ತುಪ್ಪದ ಅಭಿಷೇಕ, ಅಷ್ಟಕಳಶ ಅಭಿಷೇಕಗಳನ್ನು ಭಕ್ತರು ನೆರವೇರಿಸಿದರು. ಅದಾದ ನಂತರ ಜೈನ ಮುನಿಗಳು ಪಾರ್ಥಿವ ಶರೀರಕ್ಕೆ ಐದು ಸುತ್ತು ಹಾಕಿ, ಅಂತಿಮ ಸಂಸ್ಕಾರಕ್ಕೆ ಚಾಲನೆ ನೀಡಿದರು.<br /> <br /> ಜೈನ ಮುನಿಗಳ ಹಾಗೂ ಸಹಸ್ರಾರು ಭಕ್ತರ ಮಂತ್ರ- ಘೋಷಗಳ ಮಧ್ಯೆ ಪಾರ್ಥಿವ ಶರೀರಕ್ಕೆ ಭಕ್ತರೊಬ್ಬರು ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ಭಕ್ತರು ಶ್ರದ್ಧಾಭಕ್ತಿಯಿಂದ `ಧರ್ಮಸಾಗರ ಮಹಾರಾಜ ಕೀ ಜೈ...' ಎಂದು ಘೋಷಣೆಗಳನ್ನು ಕೂಗಿದರು.<br /> <br /> 14ನೇ ಚಾತುರ್ಮಾಸ ಆಚರಣೆಗೆ ಮುನಿ ಧರ್ಮಸಾಗರ ಮಹಾರಾಜರು ಸವಣೂರು ತಾಲ್ಲೂಕಿನ ಕಳಸೂರು ಗ್ರಾಮಕ್ಕೆ ತೆರಳುತ್ತಿದ್ದಾಗ ಭಾನುವಾರ ತೀವ್ರ ಹೃದಯಾಘಾತವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾವೇರಿ: ಭಾನುವಾರ ನಿಧನ ಹೊಂದಿದ ಜೈನ ಮುನಿ ಧರ್ಮಸಾಗರ ಮಹಾರಾಜರ ಅಂತ್ಯಕ್ರಿಯೆ ಜೈನ ಸಮುದಾಯದ ವಿಧಿವಿಧಾನಗಳ ಮೂಲಕ ಸೋಮವಾರ ಇಲ್ಲಿ ನಡೆಯಿತು.<br /> <br /> ಇಲ್ಲಿನ ಶಂಭವನಂದಿ ಮುನಿ ಮಹಾರಾಜರ ಪಾದುಕೆ ಇರುವ ಸ್ಥಳದಲ್ಲಿ ದೇಹದಹನ ಕಾರ್ಯವು ಮುನಿ ಪುಣ್ಯಸಾಗರ ಹಾಗೂ ಪ್ರಸನ್ನಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ನಡೆಯಿತು.<br /> <br /> ಪಾರ್ಥಿವ ಶರೀರವನ್ನು ಜೈನ ಬಸ್ತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಅಂತ್ಯಕ್ರಿಯೆ ಸ್ಥಳಕ್ಕೆ ತರಲಾಯಿತಲ್ಲದೇ, ಅವರ ದೇಹದಹನದ ವಿಧಿವಿಧಾನಗಳ ಕ್ರಿಯೆಯನ್ನು ಹರಾಜಿನ ಮೂಲಕ ಭಕ್ತರಿಗೆ ನೀಡಲಾಯಿತು.</p>.<p>ಂತರ ಧಾರ್ಮಿಕ ಕ್ರಿಯೆಗಳಾದ ಜಲಾಭಿಷೇಕ, ಚಂದನ ಅಭಿಷೇಕ, ಕ್ಷೀರಾಭಿಷೇಕ, ತುಪ್ಪದ ಅಭಿಷೇಕ, ಅಷ್ಟಕಳಶ ಅಭಿಷೇಕಗಳನ್ನು ಭಕ್ತರು ನೆರವೇರಿಸಿದರು. ಅದಾದ ನಂತರ ಜೈನ ಮುನಿಗಳು ಪಾರ್ಥಿವ ಶರೀರಕ್ಕೆ ಐದು ಸುತ್ತು ಹಾಕಿ, ಅಂತಿಮ ಸಂಸ್ಕಾರಕ್ಕೆ ಚಾಲನೆ ನೀಡಿದರು.<br /> <br /> ಜೈನ ಮುನಿಗಳ ಹಾಗೂ ಸಹಸ್ರಾರು ಭಕ್ತರ ಮಂತ್ರ- ಘೋಷಗಳ ಮಧ್ಯೆ ಪಾರ್ಥಿವ ಶರೀರಕ್ಕೆ ಭಕ್ತರೊಬ್ಬರು ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ಭಕ್ತರು ಶ್ರದ್ಧಾಭಕ್ತಿಯಿಂದ `ಧರ್ಮಸಾಗರ ಮಹಾರಾಜ ಕೀ ಜೈ...' ಎಂದು ಘೋಷಣೆಗಳನ್ನು ಕೂಗಿದರು.<br /> <br /> 14ನೇ ಚಾತುರ್ಮಾಸ ಆಚರಣೆಗೆ ಮುನಿ ಧರ್ಮಸಾಗರ ಮಹಾರಾಜರು ಸವಣೂರು ತಾಲ್ಲೂಕಿನ ಕಳಸೂರು ಗ್ರಾಮಕ್ಕೆ ತೆರಳುತ್ತಿದ್ದಾಗ ಭಾನುವಾರ ತೀವ್ರ ಹೃದಯಾಘಾತವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>