<p><strong>ಇಸ್ಲಾಮಾಬಾದ್ (ಪಿಟಿಐ): </strong>ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಮೇಲೆ ಉಗ್ರರ ದಾಳಿಯ ಸಾಧ್ಯತೆ ಕುರಿತು ಭದ್ರತಾ ಜಾಗೃತಿಗಾಗಿ ಮುನ್ನೆಚ್ಚರಿಕೆ ಸಂದೇಶ ನೀಡಿದ ಪ್ರಕರಣದಲ್ಲಿ ವಿವರಣೆ ನೀಡಲು ರಹಸ್ಯ ವಿಚಾರಣೆಗೆ ಹಾಜರಾಗುವಂತೆ ಉನ್ನತ ಗುಪ್ತಚರ ಅಧಿಕಾರಿಗಳಿಗೆ ವಿಶೇಷ ನ್ಯಾಯಾಲಯ ಬುಧವಾರ ಸಮನ್ಸ್ ನೀಡಿದೆ.<br /> <br /> 2007ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾರಣಕ್ಕಾಗಿ ಮುಷರಫ್ ದೇಶದ್ರೋಹ ಮೊಕದ್ದಮೆ ಎದುರಿಸುತ್ತಿದ್ದು, ನ್ಯಾಯಮೂರ್ತಿ ಫೈಸಲ್ ಅರಬ್ ನೇತೃತ್ವದ ಮೂವರು ಸದಸ್ಯರ ಪೀಠ ವಿಚಾರಣೆನಡೆಸುತ್ತಿದೆ. ಈ ವಿಚಾರಣೆ ಗುರುವಾರಕ್ಕೆ ಮುಂದೂಡಲ್ಪಟ್ಟಿದೆ.<br /> <br /> <strong>ವಕೀಲರಿಗೆ ಪ್ರವೇಶ ನಿರ್ಬಂಧ</strong><br /> ಈ ಮಧ್ಯೆ, ಮುಷರಫ್ ಪರ ವಕೀಲ ರಾಣಾ ಇಜಾಜ್ ಅವರನ್ನು ನ್ಯಾಯಾಲಯ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ಬುಧವಾರ ತಡೆದ ಘಟನೆ ನಡೆಯಿತು.<br /> ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರೊಂದಿಗೆ ಅನುಚಿತವಾಗಿ ನಡೆದುಕೊಂಡ ಕಾರಣಕ್ಕಾಗಿ ಅವರಿಗೆ ಕೋರ್ಟ್ ಪ್ರವೇಶ ನಿರ್ಬಂಧಿಸಿ ರಿಜಿಸ್ಟ್ರಾರ್ ಅಬ್ದುಲ್ ಘನಿ ಸೂಮ್ರೊ ಆದೇಶ ಹೊರಡಿಸಿದ್ದರು.<br /> <br /> ‘ಲ್ಯಾರಿ ಗ್ಯಾಂಗ್’ನಿಂದ ತಮಗೆ ಬೆದರಿಕೆ ಕರೆ ಬಂದಿದ್ದು, ಇದರಲ್ಲಿ ನ್ಯಾ. ಫೈಸಲ್ ಅರಬ್ ಅವರ ಕೈವಾಡ ಇದೆ ಎಂದು ವಿಚಾರಣೆ ವೇಳೆ ನೇರವಾಗಿ ಇಜಾಜ್ ಆರೋಪಿಸಿದ್ದರು. ಇದರಿಂದ ಕೆಂಡಾಮಂಡಲರಾದ ಪೈಜಲ್ ಅವರು ಇಜಾಜ್ ಅವರನ್ನು ಭದ್ರತಾ ಸಿಬ್ಬಂದಿ ಮೂಲಕ ಹೊರಹಾಕಿಸಿದ್ದರು.<br /> ಅಲ್ಲದೆ, ‘ಇದು ನ್ಯಾಯಾಲಯ ಅಲ್ಲ, ಕಟುಕರ ಮನೆ’ ಎಂದು ಕೂಗಾಡಿದ್ದರು. ಇದಕ್ಕೆ ಕ್ಷಮೆ ಕೇಳಲು ನ್ಯಾಯಾಧೀಶರು ಹೇಳಿದಾಗ, ಇಜಾಜ್ ನಿರಾಕರಿಸಿದ ಕಾರಣ ಅವರಿಗೆ ನ್ಯಾಯಾಲಯದ ಒಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು.</p>.<p><strong>ಮುಂಬೈ ದಾಳಿ: ವಿಚಾರಣೆ 19ಕ್ಕೆ</strong></p>.<p><strong>ಲಾಹೋರ್ (ಪಿಟಿಐ): </strong>ಮುಂಬೈ ದಾಳಿ ಪ್ರಕರಣದ ಏಳು ಆರೋಪಿಗಳ ವಿಚಾರಣೆಯನ್ನು ಪಾಕಿಸ್ತಾನ ನ್ಯಾಯಾಲಯ ಈ ತಿಂಗಳ 19ಕ್ಕೆ ಮುಂದೂಡಿದೆ.<br /> ಇತ್ತೀಚೆಗೆ ಪಾಕ್ ನ್ಯಾಯಾಲಯದ ಮೇಲೆ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.<br /> <br /> ಪೂರ್ಣ ಪ್ರಮಾಣದ ಭದ್ರತೆ ಒದಗಿಸದ ಹೊರತು ಉನ್ನತ ಮಟ್ಟದ ಪ್ರಕರಣಗಳ ವಿಚಾರಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ವಕೀಲ ಚೌಧರಿ ಅಜರ್ ಘೋಷಿಸಿದ್ದಾರೆ. ಮುಂಬೈ ದಾಳಿ ಪ್ರಕರಣದ ಸರ್ಕಾರಿ ವಕೀಲ ಜುಲ್ಫಿಕರ್ ಅಲಿ ಅವರ ಹತ್ಯೆ ನಂತರ ಚೌಧರಿ ಅಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್ (ಪಿಟಿಐ): </strong>ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಮೇಲೆ ಉಗ್ರರ ದಾಳಿಯ ಸಾಧ್ಯತೆ ಕುರಿತು ಭದ್ರತಾ ಜಾಗೃತಿಗಾಗಿ ಮುನ್ನೆಚ್ಚರಿಕೆ ಸಂದೇಶ ನೀಡಿದ ಪ್ರಕರಣದಲ್ಲಿ ವಿವರಣೆ ನೀಡಲು ರಹಸ್ಯ ವಿಚಾರಣೆಗೆ ಹಾಜರಾಗುವಂತೆ ಉನ್ನತ ಗುಪ್ತಚರ ಅಧಿಕಾರಿಗಳಿಗೆ ವಿಶೇಷ ನ್ಯಾಯಾಲಯ ಬುಧವಾರ ಸಮನ್ಸ್ ನೀಡಿದೆ.<br /> <br /> 2007ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾರಣಕ್ಕಾಗಿ ಮುಷರಫ್ ದೇಶದ್ರೋಹ ಮೊಕದ್ದಮೆ ಎದುರಿಸುತ್ತಿದ್ದು, ನ್ಯಾಯಮೂರ್ತಿ ಫೈಸಲ್ ಅರಬ್ ನೇತೃತ್ವದ ಮೂವರು ಸದಸ್ಯರ ಪೀಠ ವಿಚಾರಣೆನಡೆಸುತ್ತಿದೆ. ಈ ವಿಚಾರಣೆ ಗುರುವಾರಕ್ಕೆ ಮುಂದೂಡಲ್ಪಟ್ಟಿದೆ.<br /> <br /> <strong>ವಕೀಲರಿಗೆ ಪ್ರವೇಶ ನಿರ್ಬಂಧ</strong><br /> ಈ ಮಧ್ಯೆ, ಮುಷರಫ್ ಪರ ವಕೀಲ ರಾಣಾ ಇಜಾಜ್ ಅವರನ್ನು ನ್ಯಾಯಾಲಯ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ಬುಧವಾರ ತಡೆದ ಘಟನೆ ನಡೆಯಿತು.<br /> ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರೊಂದಿಗೆ ಅನುಚಿತವಾಗಿ ನಡೆದುಕೊಂಡ ಕಾರಣಕ್ಕಾಗಿ ಅವರಿಗೆ ಕೋರ್ಟ್ ಪ್ರವೇಶ ನಿರ್ಬಂಧಿಸಿ ರಿಜಿಸ್ಟ್ರಾರ್ ಅಬ್ದುಲ್ ಘನಿ ಸೂಮ್ರೊ ಆದೇಶ ಹೊರಡಿಸಿದ್ದರು.<br /> <br /> ‘ಲ್ಯಾರಿ ಗ್ಯಾಂಗ್’ನಿಂದ ತಮಗೆ ಬೆದರಿಕೆ ಕರೆ ಬಂದಿದ್ದು, ಇದರಲ್ಲಿ ನ್ಯಾ. ಫೈಸಲ್ ಅರಬ್ ಅವರ ಕೈವಾಡ ಇದೆ ಎಂದು ವಿಚಾರಣೆ ವೇಳೆ ನೇರವಾಗಿ ಇಜಾಜ್ ಆರೋಪಿಸಿದ್ದರು. ಇದರಿಂದ ಕೆಂಡಾಮಂಡಲರಾದ ಪೈಜಲ್ ಅವರು ಇಜಾಜ್ ಅವರನ್ನು ಭದ್ರತಾ ಸಿಬ್ಬಂದಿ ಮೂಲಕ ಹೊರಹಾಕಿಸಿದ್ದರು.<br /> ಅಲ್ಲದೆ, ‘ಇದು ನ್ಯಾಯಾಲಯ ಅಲ್ಲ, ಕಟುಕರ ಮನೆ’ ಎಂದು ಕೂಗಾಡಿದ್ದರು. ಇದಕ್ಕೆ ಕ್ಷಮೆ ಕೇಳಲು ನ್ಯಾಯಾಧೀಶರು ಹೇಳಿದಾಗ, ಇಜಾಜ್ ನಿರಾಕರಿಸಿದ ಕಾರಣ ಅವರಿಗೆ ನ್ಯಾಯಾಲಯದ ಒಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು.</p>.<p><strong>ಮುಂಬೈ ದಾಳಿ: ವಿಚಾರಣೆ 19ಕ್ಕೆ</strong></p>.<p><strong>ಲಾಹೋರ್ (ಪಿಟಿಐ): </strong>ಮುಂಬೈ ದಾಳಿ ಪ್ರಕರಣದ ಏಳು ಆರೋಪಿಗಳ ವಿಚಾರಣೆಯನ್ನು ಪಾಕಿಸ್ತಾನ ನ್ಯಾಯಾಲಯ ಈ ತಿಂಗಳ 19ಕ್ಕೆ ಮುಂದೂಡಿದೆ.<br /> ಇತ್ತೀಚೆಗೆ ಪಾಕ್ ನ್ಯಾಯಾಲಯದ ಮೇಲೆ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.<br /> <br /> ಪೂರ್ಣ ಪ್ರಮಾಣದ ಭದ್ರತೆ ಒದಗಿಸದ ಹೊರತು ಉನ್ನತ ಮಟ್ಟದ ಪ್ರಕರಣಗಳ ವಿಚಾರಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ವಕೀಲ ಚೌಧರಿ ಅಜರ್ ಘೋಷಿಸಿದ್ದಾರೆ. ಮುಂಬೈ ದಾಳಿ ಪ್ರಕರಣದ ಸರ್ಕಾರಿ ವಕೀಲ ಜುಲ್ಫಿಕರ್ ಅಲಿ ಅವರ ಹತ್ಯೆ ನಂತರ ಚೌಧರಿ ಅಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>