<p>ಕಳೆದ ಹತ್ತು ವರ್ಷಗಳಿಂದ ಕನ್ನಡ ಹಾಗೂ ತುಳು ರಂಗಭೂಮಿಯಲ್ಲಿ ಪ್ರಯೋಗಶೀಲವಾಗಿ ತೊಡಗಿಕೊಂಡು ಹಲವು ಯಶಸ್ವಿ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ರಂಗಾವತಾರ್ ರಂಗತಂಡ ಡಾ. ಡಿ. ಕೆ. ಚೌಟ ಅವರ `ಮೂಜಿ ಮುಟ್ಟು ಮೂಜಿ ಲೋಕ~ ಎಂಬ ನೂತನ ತುಳು ನಾಟಕವನ್ನು ಕ್ರಿಯಾತ್ಮಕ ಪ್ರಯೋಗದೊಂದಿಗೆ ಪ್ರದರ್ಶನ ಮಾಡುತ್ತಿದೆ.<br /> <br /> ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಟಕದ ಮೊದಲ ಮೂರು ಪ್ರದರ್ಶನಗಳನ್ನು ಏಪ್ರಿಲ್ 13, 14 ಮತ್ತು 15ರಂದು ನಗರದ ಸಂಸ ಬಯಲು ರಂಗಮಂದಿರದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.<br /> <br /> `ಮೂಜಿ ಮುಟ್ಟು ಮೂಜಿ ಲೋಕ~ ವಿಶ್ವಾತ್ಮಕ ಪರಿಕಲ್ಪನೆಗಳನ್ನು ಸ್ಥಳೀಯ ಪುರಾಣ, ಐತಿಹ್ಯ, ಆಚರಣೆಗಳ ಮೂಲಕ ಕಟ್ಟಿಕೊಡುವ ಅನನ್ಯ ರಂಗಕಥಾನಕ. ತುಳು ಭಾಷಿಗರ ವಿಶಿಷ್ಟ ಲೋಕದೃಷ್ಟಿಗಳನ್ನು ಭೂತ, ವರ್ತಮಾನ, ಭವಿಷ್ಯತ್ ಲೋಕಗಳ ಒಳಗೆ ಕೊಂಡೊಯ್ಯುವ ಸಾಹಸ ಯಾನ. <br /> <br /> ಲೋಕದ ಸೃಷ್ಟಿಯನ್ನು ದೇಸೀಯ ನೆಲೆಯಲ್ಲಿ ವಿವರಿಸುವ ತುಳು ಭಾಷಿಗರ ಸೃಷ್ಟಿಪುರಾಣ, ಹಂದಿಯಂತಹ ಪ್ರಾಣಿಗಳು ದೈವಗಳಾಗುವ (ಪ್ರಾಣಿ ಕುಲದೈವಾರಾಧನೆ) ಕಥನ, ತುಳು-ಕೇರಳ ಪ್ರದೇಶದ ಸತಿಯಪುತ್ರ ನಾಡಿನ ಕೋಶರ್ ಜನರು ಮಹಾಬಲಿಯನ್ನು ತಮ್ಮ ಸಾಂಸ್ಕೃತಿಕ ನಾಯಕನನ್ನಾಗಿ ಆರಾಧಿಸಿದ್ದು ಎಲ್ಲವನ್ನೂ ಒಳಗೊಳ್ಳುವ ನಾಟಕ `ಬಲಿಪುರಾಣ~ದವರೆಗೆ ಬೆಳೆಯುತ್ತಾ ಹೋಗುತ್ತದೆ. <br /> <br /> ರಾಮನ ಮೂರು ಹೆಜ್ಜೆಗಳ ಮೂಲಕ ತ್ರಿವಿಕ್ರಮ ಆದಹಾಗೆ, ನಾಟಕದ ಭಾಷೆ, ಶೈಲಿ ತುಳುವಿನ ಮೌಖಿಕ ಪರಂಪರೆಯ ಜೀವಸತ್ವವನ್ನು ಪೂರ್ಣವಾಗಿ ಹೀರಿಕೊಂಡು, ಭಿನ್ನ ಅರ್ಥಧ್ವನಿಗಳನ್ನು ಅನುರಣಿಸುತ್ತದೆ. ಈ ನಾಟಕ ಭಾರತೀಯ ಭಾಷೆಗಳ ನಾಟಕಗಳಲ್ಲೇ ಹೊಸ ಪ್ರಯೋಗ ಎಂದು ಬಿ. ವಿ. ವಿವೇಕ್ ರೈ ಬಣ್ಣಿಸಿದ್ದಾರೆ.<br /> <strong> ಸ್ಥಳ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ. ಸಂಜೆ 6.30ಕ್ಕೆ. <br /> </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳೆದ ಹತ್ತು ವರ್ಷಗಳಿಂದ ಕನ್ನಡ ಹಾಗೂ ತುಳು ರಂಗಭೂಮಿಯಲ್ಲಿ ಪ್ರಯೋಗಶೀಲವಾಗಿ ತೊಡಗಿಕೊಂಡು ಹಲವು ಯಶಸ್ವಿ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ರಂಗಾವತಾರ್ ರಂಗತಂಡ ಡಾ. ಡಿ. ಕೆ. ಚೌಟ ಅವರ `ಮೂಜಿ ಮುಟ್ಟು ಮೂಜಿ ಲೋಕ~ ಎಂಬ ನೂತನ ತುಳು ನಾಟಕವನ್ನು ಕ್ರಿಯಾತ್ಮಕ ಪ್ರಯೋಗದೊಂದಿಗೆ ಪ್ರದರ್ಶನ ಮಾಡುತ್ತಿದೆ.<br /> <br /> ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಟಕದ ಮೊದಲ ಮೂರು ಪ್ರದರ್ಶನಗಳನ್ನು ಏಪ್ರಿಲ್ 13, 14 ಮತ್ತು 15ರಂದು ನಗರದ ಸಂಸ ಬಯಲು ರಂಗಮಂದಿರದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.<br /> <br /> `ಮೂಜಿ ಮುಟ್ಟು ಮೂಜಿ ಲೋಕ~ ವಿಶ್ವಾತ್ಮಕ ಪರಿಕಲ್ಪನೆಗಳನ್ನು ಸ್ಥಳೀಯ ಪುರಾಣ, ಐತಿಹ್ಯ, ಆಚರಣೆಗಳ ಮೂಲಕ ಕಟ್ಟಿಕೊಡುವ ಅನನ್ಯ ರಂಗಕಥಾನಕ. ತುಳು ಭಾಷಿಗರ ವಿಶಿಷ್ಟ ಲೋಕದೃಷ್ಟಿಗಳನ್ನು ಭೂತ, ವರ್ತಮಾನ, ಭವಿಷ್ಯತ್ ಲೋಕಗಳ ಒಳಗೆ ಕೊಂಡೊಯ್ಯುವ ಸಾಹಸ ಯಾನ. <br /> <br /> ಲೋಕದ ಸೃಷ್ಟಿಯನ್ನು ದೇಸೀಯ ನೆಲೆಯಲ್ಲಿ ವಿವರಿಸುವ ತುಳು ಭಾಷಿಗರ ಸೃಷ್ಟಿಪುರಾಣ, ಹಂದಿಯಂತಹ ಪ್ರಾಣಿಗಳು ದೈವಗಳಾಗುವ (ಪ್ರಾಣಿ ಕುಲದೈವಾರಾಧನೆ) ಕಥನ, ತುಳು-ಕೇರಳ ಪ್ರದೇಶದ ಸತಿಯಪುತ್ರ ನಾಡಿನ ಕೋಶರ್ ಜನರು ಮಹಾಬಲಿಯನ್ನು ತಮ್ಮ ಸಾಂಸ್ಕೃತಿಕ ನಾಯಕನನ್ನಾಗಿ ಆರಾಧಿಸಿದ್ದು ಎಲ್ಲವನ್ನೂ ಒಳಗೊಳ್ಳುವ ನಾಟಕ `ಬಲಿಪುರಾಣ~ದವರೆಗೆ ಬೆಳೆಯುತ್ತಾ ಹೋಗುತ್ತದೆ. <br /> <br /> ರಾಮನ ಮೂರು ಹೆಜ್ಜೆಗಳ ಮೂಲಕ ತ್ರಿವಿಕ್ರಮ ಆದಹಾಗೆ, ನಾಟಕದ ಭಾಷೆ, ಶೈಲಿ ತುಳುವಿನ ಮೌಖಿಕ ಪರಂಪರೆಯ ಜೀವಸತ್ವವನ್ನು ಪೂರ್ಣವಾಗಿ ಹೀರಿಕೊಂಡು, ಭಿನ್ನ ಅರ್ಥಧ್ವನಿಗಳನ್ನು ಅನುರಣಿಸುತ್ತದೆ. ಈ ನಾಟಕ ಭಾರತೀಯ ಭಾಷೆಗಳ ನಾಟಕಗಳಲ್ಲೇ ಹೊಸ ಪ್ರಯೋಗ ಎಂದು ಬಿ. ವಿ. ವಿವೇಕ್ ರೈ ಬಣ್ಣಿಸಿದ್ದಾರೆ.<br /> <strong> ಸ್ಥಳ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ. ಸಂಜೆ 6.30ಕ್ಕೆ. <br /> </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>