<p>ಬಿಳಗುಳ(ಮೂಡಿಗೆರೆ ): ತಾಲ್ಲೂಕಿನ ನಿವೇಶನ ರಹಿತರನ್ನು ಸಂಘಟಿಸಲು ಬಿಳಗುಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ `ಸೂರಿಗಾಗಿ ಸಮರ~ ಜನಾಂದೋಲನ ಜಾಥಾ ವನ್ನು ಎಐವೈಎಫ್ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಸಾತಿ ಸುಂದರೇಶ್ ಉದ್ಘಾಟಿಸಿದರು.<br /> <br /> ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ನಿವೇಶನ ರಹಿತರಿಗೆ ಒಂದೇ ಒಂದು ನಿವೇಶನವನ್ನು ಸರ್ಕಾರ, ಗ್ರಾ.ಪಂ.ಗಳು ನೀಡಿಲ್ಲ ಈ ನಿಟ್ಟಿನಲ್ಲಿ ಜಾಥಾ ನಡೆಸಿ ನಿವೇಶನ ರಹಿತರನ್ನು ಸಂಘಟಿಸಲಾಗುವುದು ಎಂದರು.<br /> <br /> ತಾಲ್ಲೂಕಿನಲ್ಲಿ ವಾಸಿಸುವ ಜನರಿಗೆ ಸೂರು ನಿರ್ಮಿಸುವ ಕನಸು ನನಸು ಮಾಡಲು ಜನಪ್ರತಿನಿಧಿಗಳನ್ನು, ಅಧಿಕಾರಿ ಗಳನ್ನು ಎಚ್ಚರಿಸಲಾಗುತ್ತದೆ ಎಂದರು. <br /> <br /> ರಾಜ್ಯ ಸರ್ಕಾರ ನಿವೇಶನ ರಹಿತರನ್ನು ಗುರುತಿಸಿ ಅವರಿಗೆ ನಿವೇಶನ ಹಾಗೂ ಸೂರು ನಿರ್ಮಿಸಲು ಜಿಲ್ಲೆಗೆ ರೂ 3.15ಕೋಟಿ ಹಣ ಮಂಜೂರು ಮಾಡಿದ್ದರೂ ಯಾವುದೆ ಗ್ರಾ.ಪ.,ಜಿ.ಪಂ., ತಾ.ಪಂ. ಹಾಗೂ ಶಾಸಕರು ಖಾಸಗಿ ಭೂಮಿ ಖರೀದಿಸಿ ನಿವೇಶನ ನೀಡಲು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.<br /> <br /> ತಾಲ್ಲೂಕು ಎಐವೈಎಫ್ ಕಾರ್ಯದರ್ಶಿ ಪೆರಿಯಾಸ್ವಾಮಿ ಮಾತನಾಡಿ, ಸೂರಿಗಾಗಿ ಸಮರ ಜಾಥ ತಾಲ್ಲೂಕಿನ ಎಲ್ಲ ಗ್ರಾಮ ಹಾಗೂ ಕಾಲೊನಿಗಳಲ್ಲಿ ಸಂಚರಿಸಿ ಜನರಲ್ಲಿ ವಾಸ್ತವ ಸಂಗತಿಯನ್ನು ತಿಳಿಸಿ ಜನರನ್ನು ಸಂಘಟಿಸಲಾಗುವುದು ಎಂದರು.<br /> <br /> ತಾಲ್ಲೂಕು ಅಧ್ಯಕ್ಷ ಸುಂಕಸಾಲೆ ರವಿ ಮಾತನಾಡಿ, ಇದೇ 23ರಿಂದ 26ರವರಗೆ ಜನಾಂದೋಲನ ಜಾಥಾ ನಡೆಸಿ 30ರಂದು ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ನಿವೇಶನ ರಹಿತರ ಸಮಾವೇಶ ನಡೆಸಲಾಗುವುದು ಎಂದರು.<br /> <br /> ರಾಜ್ಯ ಕಾರ್ಯದರ್ಶಿ ಎ.ಎಸ್.ಮೋನಪ್ಪ, ತಾಲ್ಲೂಕು ಸಮಿತಿ ಉಪಾಧ್ಯಕ್ಷ ಅಣ್ಣಪ್ಪ, ಸುಂದರ್, ಸುರೇಂದ್ರ, ಬಿಳಗುಳ ಶಾಖೆ ಸುಬ್ರಹ್ಮಣ್ಯ ಎಐವೈಎಫ್ ಕಾರ್ಯಕರ್ತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಿಳಗುಳ(ಮೂಡಿಗೆರೆ ): ತಾಲ್ಲೂಕಿನ ನಿವೇಶನ ರಹಿತರನ್ನು ಸಂಘಟಿಸಲು ಬಿಳಗುಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ `ಸೂರಿಗಾಗಿ ಸಮರ~ ಜನಾಂದೋಲನ ಜಾಥಾ ವನ್ನು ಎಐವೈಎಫ್ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಸಾತಿ ಸುಂದರೇಶ್ ಉದ್ಘಾಟಿಸಿದರು.<br /> <br /> ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ನಿವೇಶನ ರಹಿತರಿಗೆ ಒಂದೇ ಒಂದು ನಿವೇಶನವನ್ನು ಸರ್ಕಾರ, ಗ್ರಾ.ಪಂ.ಗಳು ನೀಡಿಲ್ಲ ಈ ನಿಟ್ಟಿನಲ್ಲಿ ಜಾಥಾ ನಡೆಸಿ ನಿವೇಶನ ರಹಿತರನ್ನು ಸಂಘಟಿಸಲಾಗುವುದು ಎಂದರು.<br /> <br /> ತಾಲ್ಲೂಕಿನಲ್ಲಿ ವಾಸಿಸುವ ಜನರಿಗೆ ಸೂರು ನಿರ್ಮಿಸುವ ಕನಸು ನನಸು ಮಾಡಲು ಜನಪ್ರತಿನಿಧಿಗಳನ್ನು, ಅಧಿಕಾರಿ ಗಳನ್ನು ಎಚ್ಚರಿಸಲಾಗುತ್ತದೆ ಎಂದರು. <br /> <br /> ರಾಜ್ಯ ಸರ್ಕಾರ ನಿವೇಶನ ರಹಿತರನ್ನು ಗುರುತಿಸಿ ಅವರಿಗೆ ನಿವೇಶನ ಹಾಗೂ ಸೂರು ನಿರ್ಮಿಸಲು ಜಿಲ್ಲೆಗೆ ರೂ 3.15ಕೋಟಿ ಹಣ ಮಂಜೂರು ಮಾಡಿದ್ದರೂ ಯಾವುದೆ ಗ್ರಾ.ಪ.,ಜಿ.ಪಂ., ತಾ.ಪಂ. ಹಾಗೂ ಶಾಸಕರು ಖಾಸಗಿ ಭೂಮಿ ಖರೀದಿಸಿ ನಿವೇಶನ ನೀಡಲು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.<br /> <br /> ತಾಲ್ಲೂಕು ಎಐವೈಎಫ್ ಕಾರ್ಯದರ್ಶಿ ಪೆರಿಯಾಸ್ವಾಮಿ ಮಾತನಾಡಿ, ಸೂರಿಗಾಗಿ ಸಮರ ಜಾಥ ತಾಲ್ಲೂಕಿನ ಎಲ್ಲ ಗ್ರಾಮ ಹಾಗೂ ಕಾಲೊನಿಗಳಲ್ಲಿ ಸಂಚರಿಸಿ ಜನರಲ್ಲಿ ವಾಸ್ತವ ಸಂಗತಿಯನ್ನು ತಿಳಿಸಿ ಜನರನ್ನು ಸಂಘಟಿಸಲಾಗುವುದು ಎಂದರು.<br /> <br /> ತಾಲ್ಲೂಕು ಅಧ್ಯಕ್ಷ ಸುಂಕಸಾಲೆ ರವಿ ಮಾತನಾಡಿ, ಇದೇ 23ರಿಂದ 26ರವರಗೆ ಜನಾಂದೋಲನ ಜಾಥಾ ನಡೆಸಿ 30ರಂದು ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ನಿವೇಶನ ರಹಿತರ ಸಮಾವೇಶ ನಡೆಸಲಾಗುವುದು ಎಂದರು.<br /> <br /> ರಾಜ್ಯ ಕಾರ್ಯದರ್ಶಿ ಎ.ಎಸ್.ಮೋನಪ್ಪ, ತಾಲ್ಲೂಕು ಸಮಿತಿ ಉಪಾಧ್ಯಕ್ಷ ಅಣ್ಣಪ್ಪ, ಸುಂದರ್, ಸುರೇಂದ್ರ, ಬಿಳಗುಳ ಶಾಖೆ ಸುಬ್ರಹ್ಮಣ್ಯ ಎಐವೈಎಫ್ ಕಾರ್ಯಕರ್ತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>