<p><strong>ಬೆಂಗಳೂರು:</strong> ಸಿಐಡಿಗೆ ವಹಿಸುವ ಪ್ರಕರಣಗಳ ತನಿಖೆಯಲ್ಲಿನ ವಿಳಂಬವನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಡಿಜಿಪಿ ಶಂಕರ ಬಿದರಿ ಅವರು ಸಿಐಡಿಗೆ ವಹಿಸುವ ಯಾವುದೇ ಪ್ರಕರಣದ ತನಿಖೆಯನ್ನು ಮೂರು ತಿಂಗಳೊಳಗೆ ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.<br /> <br /> ಸಿಐಡಿಗೆ ವಹಿಸುವ ಪ್ರಕರಣಗಳ ದಾಖಲಾತಿ, ತನಿಖೆ, ಆರೋಪಪಟ್ಟಿ ಸಲ್ಲಿಕೆ, ವಿಚಾರಣೆಯಲ್ಲಿ ಪಾಲ್ಗೊಳ್ಳುವಿಕೆ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸೂಚನೆಗಳನ್ನು ಅವರು ನೀಡಿದ್ದಾರೆ.<br /> <br /> ಸಾಮಾನ್ಯವಾಗಿ ಯಾವುದೇ ಪ್ರಕರಣದ ತನಿಖೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು. ತನಿಖೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಾಕಾಶ ಬೇಕಾದರೆ ನಿರ್ದಿಷ್ಟ ವಿಭಾಗದ ಡಿಐಜಿಯ ಅನುಮತಿ ಪಡೆಯಬೇಕು. ಒಟ್ಟಾರೆ ಆರು ತಿಂಗಳ ಅವಧಿಯಲ್ಲಿ ತನಿಖೆಯನ್ನು ಮುಗಿಸಬೇಕು. ಆರು ತಿಂಗಳಿಗಿಂತ ಇನ್ನೂ ಹೆಚ್ಚಿನ ಅವಧಿ ಬೇಕಾದರೆ ಐಜಿಪಿ- ಎಡಿಜಿಪಿಯ ಗಮನಕ್ಕೆ ತರಬೇಕು. ಅವರಿಂದ ಅನುಮತಿ ಪಡೆದು (ಎರಡು ತಿಂಗಳ ಹೆಚ್ಚಿನ ಕಾಲಾವಕಾಶ) ತನಿಖೆಯನ್ನು ಪೂರ್ಣಗೊಳಿಸಬೇಕು. <br /> <br /> ಒಂದು ವರ್ಷದ ಅವಧಿಯಲ್ಲೂ ತನಿಖೆ ಪೂರ್ಣಗೊಳ್ಳದಂತಹ ಗಂಭೀರ ಪ್ರಕರಣಗಳಿದ್ದರೆ ತನಿಖಾಧಿಕಾರಿ ವಿಷಯವನ್ನು ಡಿಜಿಪಿ ಗಮನಕ್ಕೆ ತರಬೇಕು. ಹೆಚ್ಚಿನ ಅವಧಿ ಕೋರಿಕೆಗೆ ತನಿಖಾಧಿಕಾರಿ ನೀಡಿರುವ ಕಾರಣ ಸಮಾಧಾನಕರವಾಗಿದ್ದರೆ ಅನುಮತಿ ಸಿಗುತ್ತದೆ ಎಂದು ಅವರು ಸೂಚನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.<br /> <br /> ಯಾವುದೇ ಪ್ರಕರಣದ ತನಿಖೆ ಅನಗತ್ಯವಾಗಿ ವಿಳಂಬವಾದರೆ ಆ ಬಗ್ಗೆ ಹಿರಿಯ ಅಧಿಕಾರಿ ವಿಚಾರಣೆ ನಡೆಸುತ್ತಾರೆ. ತನಿಖಾಧಿಕಾರಿಯ ನಿರ್ಲಕ್ಷ್ಯದಿಂದ ತನಿಖೆ ವಿಳಂಬವಾಗಿದೆ ಎಂಬ ಅಂಶ ಮನದಟ್ಟಾದರೆ ಆ ತನಿಖಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿದರಿ ಎಚ್ಚರಿಸಿದ್ದಾರೆ.<br /> <br /> ತನಿಖೆಗೆ ಸಂಬಂಧಿಸಿದ ವಸ್ತುಗಳು, ಸಾಕ್ಷ್ಯಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಎರಡು ತಿಂಗಳಲ್ಲಿ ವರದಿ ಪಡೆದುಕೊಳ್ಳಬೇಕು. ಎರಡು ತಿಂಗಳ ನಂತರವೂ ವರದಿ ಬರದಿದ್ದರೆ ಸಂಬಂಧಿಸಿದ ಎಸ್ಪಿ ಈ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಗಮನ ಸೆಳೆಯಬೇಕು. ಪ್ರಯೋಗಾಲಯದ ವರದಿ ವಿಳಂಬವಾದರೆ ಡಿಐಜಿ, ಐಜಿಪಿ ದರ್ಜೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ತನಿಖೆಗೆ ಅಗತ್ಯ ವಿರುವ ವರದಿ ಆದಷ್ಟು ಬೇಗ ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.<br /> <br /> ಆರೋಪಪಟ್ಟಿಯಲ್ಲಿ ದೋಷಗಳಿರದಂತೆ ಎಚ್ಚರಿಕೆ ವಹಿಸಬೇಕೆಂದು ಅವರು ಹೇಳಿದ್ದಾರೆ. ಆರೋಪಪಟ್ಟಿ ತಯಾರಾದ ನಂತರ ಅದನ್ನು ಕಾನೂನು ಸಲಹಾ ಸಿಬ್ಬಂದಿಗೆ ತೋರಿಸಬೇಕು. ಸಿಬ್ಬಂದಿ ನೀಡುವ ಸಲಹೆಗಳನ್ನು ಪರಿಗಣಿಸಿ ಆರೋಪಪಟ್ಟಿಯಲ್ಲಿ ಅಗತ್ಯ ಬದಲಾವಣೆ ಮಾಡಿದ ನಂತರವಷ್ಟೇ ನ್ಯಾಯಾಲಯಕ್ಕೆ ಸಲ್ಲಿಸಬೇಕು. <br /> <br /> ಪ್ರಕರಣದ ವಿಚಾರಣೆ ಆರಂಭವಾದ ನಂತರ ಅಧಿಕಾರಿಗಳು ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಿ ಪಬ್ಲಿಕ್ ಪ್ರಾಸಿಕ್ಯೂಟರ್ಗೆ ಸೂಕ್ತ ನೆರವು ನೀಡಿ ಆರೋಪಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅತಿ ಮುಖ್ಯ ಪ್ರಕರಣಗಳಲ್ಲಿ ಎಸ್ಪಿ ದರ್ಜೆ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ.<br /> <br /> `ಸಿಐಡಿಗೆ ಸರ್ಕಾರ, ಹೈಕೋರ್ಟ್ ಅಥವಾ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರಕರಣವೊಂದನ್ನು ತನಿಖೆಗೆ ವಹಿಸಿದಾಗ ನಿಗದಿತ ಕಾಲಾವಧಿಯಲ್ಲಿ ತನಿಖೆ ಪೂರ್ಣಗೊಳಿಸುವುದು ಮುಖ್ಯ. ಸಮಯ ನಿಗದಿ ಇಲ್ಲದಿದ್ದರೆ ಅನಗತ್ಯ ವಾಗಿ ವಿಳಂಬವಾಗುತ್ತದೆ.<br /> <br /> ಪ್ರಕರಣದ ತನಿಖೆ ಅಚ್ಚುಕಟ್ಟಾಗಿ ಮಾಡುವುದರ ಜತೆಗೆ ಅವಧಿಯೊಳಗೆ ಪೂರ್ಣಗೊಳಿಸುವುದೂ ಮುಖ್ಯ. ಆದ್ದರಿಂದಲೇ ಕಿರಿಯ ಅಧಿಕಾರಿಗಳಿಗೆ ಲಿಖಿತ ಸೂಚನೆ ನೀಡಲಾಗಿದೆ~ ಎಂದು ಶಂಕರ ಬಿದರಿ `ಪ್ರಜಾವಾಣಿ~ಗೆ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಿಐಡಿಗೆ ವಹಿಸುವ ಪ್ರಕರಣಗಳ ತನಿಖೆಯಲ್ಲಿನ ವಿಳಂಬವನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಡಿಜಿಪಿ ಶಂಕರ ಬಿದರಿ ಅವರು ಸಿಐಡಿಗೆ ವಹಿಸುವ ಯಾವುದೇ ಪ್ರಕರಣದ ತನಿಖೆಯನ್ನು ಮೂರು ತಿಂಗಳೊಳಗೆ ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.<br /> <br /> ಸಿಐಡಿಗೆ ವಹಿಸುವ ಪ್ರಕರಣಗಳ ದಾಖಲಾತಿ, ತನಿಖೆ, ಆರೋಪಪಟ್ಟಿ ಸಲ್ಲಿಕೆ, ವಿಚಾರಣೆಯಲ್ಲಿ ಪಾಲ್ಗೊಳ್ಳುವಿಕೆ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸೂಚನೆಗಳನ್ನು ಅವರು ನೀಡಿದ್ದಾರೆ.<br /> <br /> ಸಾಮಾನ್ಯವಾಗಿ ಯಾವುದೇ ಪ್ರಕರಣದ ತನಿಖೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು. ತನಿಖೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಾಕಾಶ ಬೇಕಾದರೆ ನಿರ್ದಿಷ್ಟ ವಿಭಾಗದ ಡಿಐಜಿಯ ಅನುಮತಿ ಪಡೆಯಬೇಕು. ಒಟ್ಟಾರೆ ಆರು ತಿಂಗಳ ಅವಧಿಯಲ್ಲಿ ತನಿಖೆಯನ್ನು ಮುಗಿಸಬೇಕು. ಆರು ತಿಂಗಳಿಗಿಂತ ಇನ್ನೂ ಹೆಚ್ಚಿನ ಅವಧಿ ಬೇಕಾದರೆ ಐಜಿಪಿ- ಎಡಿಜಿಪಿಯ ಗಮನಕ್ಕೆ ತರಬೇಕು. ಅವರಿಂದ ಅನುಮತಿ ಪಡೆದು (ಎರಡು ತಿಂಗಳ ಹೆಚ್ಚಿನ ಕಾಲಾವಕಾಶ) ತನಿಖೆಯನ್ನು ಪೂರ್ಣಗೊಳಿಸಬೇಕು. <br /> <br /> ಒಂದು ವರ್ಷದ ಅವಧಿಯಲ್ಲೂ ತನಿಖೆ ಪೂರ್ಣಗೊಳ್ಳದಂತಹ ಗಂಭೀರ ಪ್ರಕರಣಗಳಿದ್ದರೆ ತನಿಖಾಧಿಕಾರಿ ವಿಷಯವನ್ನು ಡಿಜಿಪಿ ಗಮನಕ್ಕೆ ತರಬೇಕು. ಹೆಚ್ಚಿನ ಅವಧಿ ಕೋರಿಕೆಗೆ ತನಿಖಾಧಿಕಾರಿ ನೀಡಿರುವ ಕಾರಣ ಸಮಾಧಾನಕರವಾಗಿದ್ದರೆ ಅನುಮತಿ ಸಿಗುತ್ತದೆ ಎಂದು ಅವರು ಸೂಚನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.<br /> <br /> ಯಾವುದೇ ಪ್ರಕರಣದ ತನಿಖೆ ಅನಗತ್ಯವಾಗಿ ವಿಳಂಬವಾದರೆ ಆ ಬಗ್ಗೆ ಹಿರಿಯ ಅಧಿಕಾರಿ ವಿಚಾರಣೆ ನಡೆಸುತ್ತಾರೆ. ತನಿಖಾಧಿಕಾರಿಯ ನಿರ್ಲಕ್ಷ್ಯದಿಂದ ತನಿಖೆ ವಿಳಂಬವಾಗಿದೆ ಎಂಬ ಅಂಶ ಮನದಟ್ಟಾದರೆ ಆ ತನಿಖಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿದರಿ ಎಚ್ಚರಿಸಿದ್ದಾರೆ.<br /> <br /> ತನಿಖೆಗೆ ಸಂಬಂಧಿಸಿದ ವಸ್ತುಗಳು, ಸಾಕ್ಷ್ಯಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಎರಡು ತಿಂಗಳಲ್ಲಿ ವರದಿ ಪಡೆದುಕೊಳ್ಳಬೇಕು. ಎರಡು ತಿಂಗಳ ನಂತರವೂ ವರದಿ ಬರದಿದ್ದರೆ ಸಂಬಂಧಿಸಿದ ಎಸ್ಪಿ ಈ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಗಮನ ಸೆಳೆಯಬೇಕು. ಪ್ರಯೋಗಾಲಯದ ವರದಿ ವಿಳಂಬವಾದರೆ ಡಿಐಜಿ, ಐಜಿಪಿ ದರ್ಜೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ತನಿಖೆಗೆ ಅಗತ್ಯ ವಿರುವ ವರದಿ ಆದಷ್ಟು ಬೇಗ ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.<br /> <br /> ಆರೋಪಪಟ್ಟಿಯಲ್ಲಿ ದೋಷಗಳಿರದಂತೆ ಎಚ್ಚರಿಕೆ ವಹಿಸಬೇಕೆಂದು ಅವರು ಹೇಳಿದ್ದಾರೆ. ಆರೋಪಪಟ್ಟಿ ತಯಾರಾದ ನಂತರ ಅದನ್ನು ಕಾನೂನು ಸಲಹಾ ಸಿಬ್ಬಂದಿಗೆ ತೋರಿಸಬೇಕು. ಸಿಬ್ಬಂದಿ ನೀಡುವ ಸಲಹೆಗಳನ್ನು ಪರಿಗಣಿಸಿ ಆರೋಪಪಟ್ಟಿಯಲ್ಲಿ ಅಗತ್ಯ ಬದಲಾವಣೆ ಮಾಡಿದ ನಂತರವಷ್ಟೇ ನ್ಯಾಯಾಲಯಕ್ಕೆ ಸಲ್ಲಿಸಬೇಕು. <br /> <br /> ಪ್ರಕರಣದ ವಿಚಾರಣೆ ಆರಂಭವಾದ ನಂತರ ಅಧಿಕಾರಿಗಳು ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಿ ಪಬ್ಲಿಕ್ ಪ್ರಾಸಿಕ್ಯೂಟರ್ಗೆ ಸೂಕ್ತ ನೆರವು ನೀಡಿ ಆರೋಪಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅತಿ ಮುಖ್ಯ ಪ್ರಕರಣಗಳಲ್ಲಿ ಎಸ್ಪಿ ದರ್ಜೆ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ.<br /> <br /> `ಸಿಐಡಿಗೆ ಸರ್ಕಾರ, ಹೈಕೋರ್ಟ್ ಅಥವಾ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರಕರಣವೊಂದನ್ನು ತನಿಖೆಗೆ ವಹಿಸಿದಾಗ ನಿಗದಿತ ಕಾಲಾವಧಿಯಲ್ಲಿ ತನಿಖೆ ಪೂರ್ಣಗೊಳಿಸುವುದು ಮುಖ್ಯ. ಸಮಯ ನಿಗದಿ ಇಲ್ಲದಿದ್ದರೆ ಅನಗತ್ಯ ವಾಗಿ ವಿಳಂಬವಾಗುತ್ತದೆ.<br /> <br /> ಪ್ರಕರಣದ ತನಿಖೆ ಅಚ್ಚುಕಟ್ಟಾಗಿ ಮಾಡುವುದರ ಜತೆಗೆ ಅವಧಿಯೊಳಗೆ ಪೂರ್ಣಗೊಳಿಸುವುದೂ ಮುಖ್ಯ. ಆದ್ದರಿಂದಲೇ ಕಿರಿಯ ಅಧಿಕಾರಿಗಳಿಗೆ ಲಿಖಿತ ಸೂಚನೆ ನೀಡಲಾಗಿದೆ~ ಎಂದು ಶಂಕರ ಬಿದರಿ `ಪ್ರಜಾವಾಣಿ~ಗೆ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>