<p><strong>ಹುಬ್ಬಳ್ಳಿ: </strong>ನಗರದ ನೃಪತುಂಗ ಬೆಟ್ಟದ ಮೇಲಿರುವ ಮೂರು ಜಲ ಸಂಗ್ರಹಾಗಾರಗಳು ಶುಕ್ರವಾರ ಅಮ್ಮಿನಬಾವಿ ಪಂಪ್ ಸ್ಟೇಶನ್ನಿಂದ ನೀರು ಪಡೆಯುವ ಮೂಲಕ ಅವಳಿನಗರದ ಜನರ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿತು.<br /> <br /> ಮೂರನೇ ಹಂತದ ಯೋಜನೆಯಂತೆ ಸವದತ್ತಿ ಜಾಕ್ವೆಲ್ನಿಂದ ನೀರು ಪಡೆಯುವ ಪ್ರಕ್ರಿಯೆ ಗುರುವಾರವೇ ಆರಂಭವಾಗಿತ್ತು. ಕೊಳವೆ ಮಾರ್ಗ ಹಾಗೂ ಜಲ ಸಂಗ್ರಹಾಗಾರಗಳನ್ನು ಒಮ್ಮೆ ಸ್ವಚ್ಛಗೊಳಿಸಬೇಕಾಗಿದ್ದ ಕಾರಣ ನೀರು ಸಂಗ್ರಹವನ್ನು ಶುಕ್ರವಾರ ಆರಂಭಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಜಲ ಮಂಡಳಿ ಅಧಿಕಾರಿಗಳು `ಮಾತು ಕೊಟ್ಟಂತೆ ನಡೆಯಲು ಬುಧವಾರದಿಂದ ಶುಕ್ರವಾರ ಸಂಜೆವರೆಗೆ ಹಗಲು-ರಾತ್ರಿ ಕೆಲಸ ಮಾಡಿದ್ದಾರೆ. ನೃಪತುಂಗ ಬೆಟ್ಟದಿಂದ ನೀರು ಪಡೆದಿದ್ದೇವೆ ಎಂಬ ಸಂದೇಶ ಸಿಗುತ್ತಿದ್ದಂತೆಯೇ ಅಮ್ಮಿನಬಾವಿ ಸ್ಟೇಶನ್ನಲ್ಲಿ ಬೀಡುಬಿಟ್ಟಿದ್ದ ಅಧಿಕಾರಿಗಳ ತಂಡ ಸಂಭ್ರಮದಿಂದ ನಲಿಯಿತು. ಪರಸ್ಪರರು ಅಭಿನಂದಿಸಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡರು.<br /> <br /> ಹಳೇ ಹುಬ್ಬಳ್ಳಿ ಸೇರಿದಂತೆ ಎಲ್ಲ ಭಾಗಕ್ಕೂ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಆರಂಭವಾಗಿದ್ದು, ಶನಿವಾರ ನೀರು ಪಡೆದವರು ಮೂರು ದಿನಕ್ಕೆ ಮತ್ತೆ ನೀರು ಪಡೆಯಲಿದ್ದಾರೆ ಎಂದು ಜಲ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ಗಳಾದ ಕೆ.ಪಿ. ಜಯರಾಂ, ಕೃಷ್ಣಮೂರ್ತಿ ಹಾಗೂ ಸಿದ್ಧನಾಯಕ ಹರ್ಷದಿಂದ ಹೇಳಿದರು.<br /> <br /> ಶುಕ್ರವಾರದಿಂದ ನಮಗೆ ಹೆಚ್ಚುವರಿಯಾಗಿ ನಿತ್ಯ 68 ದಶಲಕ್ಷ ಲೀಟರ್ ನೀರು ಲಭ್ಯವಾಗಿದ್ದರಿಂದ ಈಗ ನೀರಿನ ಸಮಸ್ಯೆ ಇಲ್ಲ. ಪೂರೈಕೆ ವ್ಯವಸ್ಥೆ ಕೂಡ ಸುಧಾರಣೆಯಾದರೆ ಹುಬ್ಬಳ್ಳಿ-ಧಾರವಾಡದಲ್ಲಿ ಇನ್ನುಮುಂದೆ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಅವರು ವಿವರಿಸಿದರು.<br /> <br /> ~ಪಾಲಿಕೆ ಸಾಮಾನ್ಯ ಸಭೆಯಲ್ಲಿ ನೀಡಿದ ಪ್ರಕಟಣೆಯಂತೆ ನಾವು ನಡೆದುಕೊಂಡಿದ್ದೇವೆ. ಅವಳಿನಗರ ಇನ್ನುಮುಂದೆ ಬೇಕಾದಷ್ಟು ನೀರು ಪಡೆಯಲಿದೆ. ಸವದತ್ತಿ ಜಾಕ್ವೆಲ್ನಿಂದ ಮೂರ ನೇ ಹಂತದ ಯೋಜನೆ ಯಶಸ್ವಿಯಾಗಿ ಕಾರ್ಯಾಚರಣೆ ಆರಂಭಿಸಿದ ವರ್ತಮಾನ ಕೇಳಿ ಆನಂದವಾಗಿದೆ~ ಎಂದು ಮೇಯರ್ ಪೂರ್ಣಾ ಪಾಟೀಲ ಪ್ರತಿಕ್ರಿಯಿಸಿದರು.<br /> <br /> ~ಹಲವು ತಿಂಗಳ ಹಿಂದೆಯೇ ಈ ಯೋಜನೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ದೊಡ್ಡ ಯೋಜನೆ ಹಲವು ಕಾರಣಗಳಿಂದ ವಿಳಂಬವಾಗಿದೆ. ಆದರೆ, ಕಾಮಗಾರಿ ಪೂರ್ಣಗೊಂಡು ನೀರು ಪೂರೈಕೆ ಆರಂಭವಾಗಿದ್ದು ಅವಳಿನಗರದ ಜನತೆಗೆ ಸಂತಸ ತಂದಿದೆ. ಈ ಹರ್ಷದಲ್ಲಿ ನಾವೂ ಭಾಗಿಯಾಗಿದ್ದೇವೆ~ ಎಂದು ಅವರು ಹೇಳಿದರು.<br /> <br /> ~ಇನ್ನು ಎಂಟು ದಿನಗಳ ನಂತರ ಧಾರವಾಡದಲ್ಲೂ ಮೂರು ದಿನಕ್ಕೊಮ್ಮೆ ನೀರು ಪೂರೈಕೆಯಾಗಲಿದೆ~ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು. ~ಪೂರೈಕೆ ವ್ಯವಸ್ಥೆ ಸುಧಾರಣೆಯಾದರೆ ನಿತ್ಯ ನೀರು ಪೂರೈಕೆ ಮಾಡುವ ಯೋಜನೆ ಇದೆ~ ಎಂದು ಡಾ.ತ್ರಿಲೋಕಚಂದ್ರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ನಗರದ ನೃಪತುಂಗ ಬೆಟ್ಟದ ಮೇಲಿರುವ ಮೂರು ಜಲ ಸಂಗ್ರಹಾಗಾರಗಳು ಶುಕ್ರವಾರ ಅಮ್ಮಿನಬಾವಿ ಪಂಪ್ ಸ್ಟೇಶನ್ನಿಂದ ನೀರು ಪಡೆಯುವ ಮೂಲಕ ಅವಳಿನಗರದ ಜನರ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿತು.<br /> <br /> ಮೂರನೇ ಹಂತದ ಯೋಜನೆಯಂತೆ ಸವದತ್ತಿ ಜಾಕ್ವೆಲ್ನಿಂದ ನೀರು ಪಡೆಯುವ ಪ್ರಕ್ರಿಯೆ ಗುರುವಾರವೇ ಆರಂಭವಾಗಿತ್ತು. ಕೊಳವೆ ಮಾರ್ಗ ಹಾಗೂ ಜಲ ಸಂಗ್ರಹಾಗಾರಗಳನ್ನು ಒಮ್ಮೆ ಸ್ವಚ್ಛಗೊಳಿಸಬೇಕಾಗಿದ್ದ ಕಾರಣ ನೀರು ಸಂಗ್ರಹವನ್ನು ಶುಕ್ರವಾರ ಆರಂಭಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಜಲ ಮಂಡಳಿ ಅಧಿಕಾರಿಗಳು `ಮಾತು ಕೊಟ್ಟಂತೆ ನಡೆಯಲು ಬುಧವಾರದಿಂದ ಶುಕ್ರವಾರ ಸಂಜೆವರೆಗೆ ಹಗಲು-ರಾತ್ರಿ ಕೆಲಸ ಮಾಡಿದ್ದಾರೆ. ನೃಪತುಂಗ ಬೆಟ್ಟದಿಂದ ನೀರು ಪಡೆದಿದ್ದೇವೆ ಎಂಬ ಸಂದೇಶ ಸಿಗುತ್ತಿದ್ದಂತೆಯೇ ಅಮ್ಮಿನಬಾವಿ ಸ್ಟೇಶನ್ನಲ್ಲಿ ಬೀಡುಬಿಟ್ಟಿದ್ದ ಅಧಿಕಾರಿಗಳ ತಂಡ ಸಂಭ್ರಮದಿಂದ ನಲಿಯಿತು. ಪರಸ್ಪರರು ಅಭಿನಂದಿಸಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡರು.<br /> <br /> ಹಳೇ ಹುಬ್ಬಳ್ಳಿ ಸೇರಿದಂತೆ ಎಲ್ಲ ಭಾಗಕ್ಕೂ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಆರಂಭವಾಗಿದ್ದು, ಶನಿವಾರ ನೀರು ಪಡೆದವರು ಮೂರು ದಿನಕ್ಕೆ ಮತ್ತೆ ನೀರು ಪಡೆಯಲಿದ್ದಾರೆ ಎಂದು ಜಲ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ಗಳಾದ ಕೆ.ಪಿ. ಜಯರಾಂ, ಕೃಷ್ಣಮೂರ್ತಿ ಹಾಗೂ ಸಿದ್ಧನಾಯಕ ಹರ್ಷದಿಂದ ಹೇಳಿದರು.<br /> <br /> ಶುಕ್ರವಾರದಿಂದ ನಮಗೆ ಹೆಚ್ಚುವರಿಯಾಗಿ ನಿತ್ಯ 68 ದಶಲಕ್ಷ ಲೀಟರ್ ನೀರು ಲಭ್ಯವಾಗಿದ್ದರಿಂದ ಈಗ ನೀರಿನ ಸಮಸ್ಯೆ ಇಲ್ಲ. ಪೂರೈಕೆ ವ್ಯವಸ್ಥೆ ಕೂಡ ಸುಧಾರಣೆಯಾದರೆ ಹುಬ್ಬಳ್ಳಿ-ಧಾರವಾಡದಲ್ಲಿ ಇನ್ನುಮುಂದೆ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಅವರು ವಿವರಿಸಿದರು.<br /> <br /> ~ಪಾಲಿಕೆ ಸಾಮಾನ್ಯ ಸಭೆಯಲ್ಲಿ ನೀಡಿದ ಪ್ರಕಟಣೆಯಂತೆ ನಾವು ನಡೆದುಕೊಂಡಿದ್ದೇವೆ. ಅವಳಿನಗರ ಇನ್ನುಮುಂದೆ ಬೇಕಾದಷ್ಟು ನೀರು ಪಡೆಯಲಿದೆ. ಸವದತ್ತಿ ಜಾಕ್ವೆಲ್ನಿಂದ ಮೂರ ನೇ ಹಂತದ ಯೋಜನೆ ಯಶಸ್ವಿಯಾಗಿ ಕಾರ್ಯಾಚರಣೆ ಆರಂಭಿಸಿದ ವರ್ತಮಾನ ಕೇಳಿ ಆನಂದವಾಗಿದೆ~ ಎಂದು ಮೇಯರ್ ಪೂರ್ಣಾ ಪಾಟೀಲ ಪ್ರತಿಕ್ರಿಯಿಸಿದರು.<br /> <br /> ~ಹಲವು ತಿಂಗಳ ಹಿಂದೆಯೇ ಈ ಯೋಜನೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ದೊಡ್ಡ ಯೋಜನೆ ಹಲವು ಕಾರಣಗಳಿಂದ ವಿಳಂಬವಾಗಿದೆ. ಆದರೆ, ಕಾಮಗಾರಿ ಪೂರ್ಣಗೊಂಡು ನೀರು ಪೂರೈಕೆ ಆರಂಭವಾಗಿದ್ದು ಅವಳಿನಗರದ ಜನತೆಗೆ ಸಂತಸ ತಂದಿದೆ. ಈ ಹರ್ಷದಲ್ಲಿ ನಾವೂ ಭಾಗಿಯಾಗಿದ್ದೇವೆ~ ಎಂದು ಅವರು ಹೇಳಿದರು.<br /> <br /> ~ಇನ್ನು ಎಂಟು ದಿನಗಳ ನಂತರ ಧಾರವಾಡದಲ್ಲೂ ಮೂರು ದಿನಕ್ಕೊಮ್ಮೆ ನೀರು ಪೂರೈಕೆಯಾಗಲಿದೆ~ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು. ~ಪೂರೈಕೆ ವ್ಯವಸ್ಥೆ ಸುಧಾರಣೆಯಾದರೆ ನಿತ್ಯ ನೀರು ಪೂರೈಕೆ ಮಾಡುವ ಯೋಜನೆ ಇದೆ~ ಎಂದು ಡಾ.ತ್ರಿಲೋಕಚಂದ್ರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>