<p>ಧಾರವಾಡ: ಮಾನವನ ಜೀವನದ ಪರಸ್ಪರ ಸಂಬಂಧಗಳ ಕುರಿತು ಮನೋವೈಜ್ಞಾನಿಕವಾಗಿ ಚಿಂತನೆ ನಡೆಯಬೇಕಿದೆ. ಸಂಬಂಧಗಳು ಯಾವ ರೀತಿಯಲ್ಲಿ ಇರಬೇಕು ಎಂಬುದರ ಕುರಿತು ಲೇಖಕ ಎಚ್.ಜಿ.ಮಳಗಿ ಅವರು ತಮ್ಮ ಪುಸ್ತಕಗಳಲ್ಲಿ ಸವಿವರ ವಾಗಿ ಉಲ್ಲೇಖಿಸಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.<br /> <br /> ನಗರ ಆಲೂರು ವೆಂಕಟರಾವ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಎಚ್.ಜಿ.ಮಳಗಿ ಅವರ `ಗೋಡ್ಸೆ ನೀನೆಲ್ಲಿದ್ದೀಯಾ?,~ `ಅಳಿವಿ ನಂಚಿನಲ್ಲಿರುವ ಸಂಬಂಧಗಳು~ ಹಾಗೂ `ಅಕ್ಷಯ ಪಾತ್ರೆ~ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತ ನಾಡಿದರು.<br /> <br /> `ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ. ಸಂದಿಗ್ಧ ಪರಿಸ್ಥಿತಿ ಎದುರಾದಾಗ ಅವರು ಯಾವ ರೀತಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಪ್ರೀತಿ, ಪ್ರೇಮದಂತಹ ಬಲೆಗೆ ಸಿಲುಕಿ ತಾವು ಯಾವ ರೀತಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂಬುದರ ಕುರಿತು ಮನಮುಟ್ಟುವಂತೆ ಬರೆದಿದ್ದಾರೆ. <br /> <br /> ಮಳಗಿ ತಮ್ಮ ವೃತ್ತಿ ಜೀವನ ವನ್ನು ಉಪಜೀವನವನ್ನಾಗಿ ಮಾಡಿಕೊಂಡು ಸಾಹಿತ್ಯವನ್ನು ಜೀವನವನ್ನಾಗಿ ಸ್ವೀಕರಿಸಿದ್ದಾರೆ. ಇಂಥವರ ಲೇಖನ ಹಾಗೂ ಇವರ ವ್ಯಕ್ತಿತ್ವವನ್ನು ಸಮಾಜ ಗುರುತಿಸಿ ಮೇಲೆತ್ತರಕ್ಕೆ ಬೆಳೆಯುವಂತೆ ಮಾಡಬೇಕು~ ಎಂದರು.<br /> <br /> ಖ್ಯಾತ ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ, ಮಳಗಿ ಅವರ ಗೋಡ್ಸೆ ನೀನೆಲ್ಲಿದ್ದೀಯಾ? ಪುಸ್ತಕದ ಕುರಿತು ಮಾತನಾಡಿ, `ಮಳಗಿ ರಚಿಸಿದ ಪ್ರತಿಯೊಂದು ಪುಸ್ತಕದಲ್ಲಿ ಮನಸ್ಸು ಹಾಗೂ ಮನಸ್ಮೃತಿಯನ್ನು ಬಿಂಬಿಸುವ ಕಾರ್ಯ ಮಾಡಿದ್ದಾರೆ. ಮಾನಸಿಕವಾದ ಎಲ್ಲ ದೃಷ್ಟಿಕೋನ ಗಳನ್ನು ಇಟ್ಟುಕೊಂಡು ಪುಸ್ತಕಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಪುಸ್ತಕ ಗಳಲ್ಲಿ ಯಾವುದೇ ಉಲ್ಲೇಖಿಸಿಲ್ಲ. ಸಮಾಜದ ದೃಷ್ಟಿಕೋನ ವನ್ನು ಇಟ್ಟು ಕೊಂಡು ರಚಿಸಿದ್ದಾರೆ. <br /> <br /> ಸಮಾಜದ ವ್ಯವಸ್ಥೆ ಹಾಳಾಗಿರುವ ಇಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆ ಯಾವ ದಿಕ್ಕಿನತ್ತ ಸಾಗಿದೆ ಹಾಗೂ ಸಂಶಯಾಸ್ಪದ ಸಮಸ್ಯೆಗಳಿದ್ದಾಗ ಅವುಗಳನ್ನು ಯಾವ ರೀತಿ ಪರಿಹರಿಸಿ ಕೊಳ್ಳಬೇಕು ಎಂಬುದರ ಕುರಿತು ಒಬ್ಬ ಮನೋರೋಗ ತಜ್ಞನ ಜಾಗದಲ್ಲಿ ನಿಂತು ಈ ಪುಸ್ತಕಗಳನ್ನು ರಚಿಸಿದ್ದಾರೆ~ ಎಂದರು.<br /> <br /> ಈಶ್ವರಚಂದ್ರ ಬೆಟಗೇರಿ ಅವರು `ಅಕ್ಷಯ ಪಾತ್ರೆ~ ಹಾಗೂ ಶಿರೀಷ ಜೋಶಿ `ಅಳಿವಿನಂಚಿನಲ್ಲಿರುವ ಸಂಬಂಧ ಗಳು~ ಪುಸ್ತಕದ ಕುರಿತು ಮಾತ ನಾಡಿದರು. <br /> <br /> ಲೇಖಕ ಎಚ್.ಜಿ.ಮಳಗಿ ಅನಿಸಿ ಕೆಗಳನ್ನು ಹಂಚಿಕೊಂಡರು. ಜಿ.ಎಂ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. <br /> <br /> <strong>ಸಿರಿಧಾನ್ಯಗಳ ಆಹಾರ ತಯಾರಿಕಾ ಕಾರ್ಯಕ್ರಮ <br /> </strong>ಧಾರವಾಡ: ನಗರದ ರ್ಯಾಪಿಡ್ ಸಂಸ್ಥೆಯ ವತಿಯಿಂದ ಮಹಿಳೆ ಯರಿಗಾಗಿ ಸಿರಿಧಾನ್ಯಗಳ ಆಹಾರ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ತರಬೇತಿಯು ಜುಲೈ 6 ಮತ್ತು 7ರಂದು ಬೆಳಿಗ್ಗೆ 10.30ರಿಂದ ಸಂಜೆ 5ರ ವರೆಗೆ ರ್ಯಾಪಿಡ್ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. <br /> <br /> ತರಬೇತಿ ಪಡೆಯಲು ಇಚ್ಚಿಸುವವರು ಜು 4ರ ಒಳಗಾಗಿ ನಗರದ ಮಾಳಡ್ಡಿಯ ಕರ್ಣಾಟಕ ಬ್ಯಾಂಕ್ ಎದುರಿಗಿನ ಗೋವಿಂದ ನಿವಾಸದ ಮೊದಲನೇ ಮಹಡಿ ಯಲ್ಲಿರುವ ರ್ಯಾಪಿಡ್ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಬಹುದು. ಮಾಹಿತಿಗಾಗಿ ದೂರವಾಣಿ ಸಂಖ್ಯೆ 08362444066 ಅಥವಾ 9742196835ಕ್ಕೆ ಸಂಪರ್ಕಿ ಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ಮಾನವನ ಜೀವನದ ಪರಸ್ಪರ ಸಂಬಂಧಗಳ ಕುರಿತು ಮನೋವೈಜ್ಞಾನಿಕವಾಗಿ ಚಿಂತನೆ ನಡೆಯಬೇಕಿದೆ. ಸಂಬಂಧಗಳು ಯಾವ ರೀತಿಯಲ್ಲಿ ಇರಬೇಕು ಎಂಬುದರ ಕುರಿತು ಲೇಖಕ ಎಚ್.ಜಿ.ಮಳಗಿ ಅವರು ತಮ್ಮ ಪುಸ್ತಕಗಳಲ್ಲಿ ಸವಿವರ ವಾಗಿ ಉಲ್ಲೇಖಿಸಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.<br /> <br /> ನಗರ ಆಲೂರು ವೆಂಕಟರಾವ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಎಚ್.ಜಿ.ಮಳಗಿ ಅವರ `ಗೋಡ್ಸೆ ನೀನೆಲ್ಲಿದ್ದೀಯಾ?,~ `ಅಳಿವಿ ನಂಚಿನಲ್ಲಿರುವ ಸಂಬಂಧಗಳು~ ಹಾಗೂ `ಅಕ್ಷಯ ಪಾತ್ರೆ~ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತ ನಾಡಿದರು.<br /> <br /> `ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ. ಸಂದಿಗ್ಧ ಪರಿಸ್ಥಿತಿ ಎದುರಾದಾಗ ಅವರು ಯಾವ ರೀತಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಪ್ರೀತಿ, ಪ್ರೇಮದಂತಹ ಬಲೆಗೆ ಸಿಲುಕಿ ತಾವು ಯಾವ ರೀತಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂಬುದರ ಕುರಿತು ಮನಮುಟ್ಟುವಂತೆ ಬರೆದಿದ್ದಾರೆ. <br /> <br /> ಮಳಗಿ ತಮ್ಮ ವೃತ್ತಿ ಜೀವನ ವನ್ನು ಉಪಜೀವನವನ್ನಾಗಿ ಮಾಡಿಕೊಂಡು ಸಾಹಿತ್ಯವನ್ನು ಜೀವನವನ್ನಾಗಿ ಸ್ವೀಕರಿಸಿದ್ದಾರೆ. ಇಂಥವರ ಲೇಖನ ಹಾಗೂ ಇವರ ವ್ಯಕ್ತಿತ್ವವನ್ನು ಸಮಾಜ ಗುರುತಿಸಿ ಮೇಲೆತ್ತರಕ್ಕೆ ಬೆಳೆಯುವಂತೆ ಮಾಡಬೇಕು~ ಎಂದರು.<br /> <br /> ಖ್ಯಾತ ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ, ಮಳಗಿ ಅವರ ಗೋಡ್ಸೆ ನೀನೆಲ್ಲಿದ್ದೀಯಾ? ಪುಸ್ತಕದ ಕುರಿತು ಮಾತನಾಡಿ, `ಮಳಗಿ ರಚಿಸಿದ ಪ್ರತಿಯೊಂದು ಪುಸ್ತಕದಲ್ಲಿ ಮನಸ್ಸು ಹಾಗೂ ಮನಸ್ಮೃತಿಯನ್ನು ಬಿಂಬಿಸುವ ಕಾರ್ಯ ಮಾಡಿದ್ದಾರೆ. ಮಾನಸಿಕವಾದ ಎಲ್ಲ ದೃಷ್ಟಿಕೋನ ಗಳನ್ನು ಇಟ್ಟುಕೊಂಡು ಪುಸ್ತಕಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಪುಸ್ತಕ ಗಳಲ್ಲಿ ಯಾವುದೇ ಉಲ್ಲೇಖಿಸಿಲ್ಲ. ಸಮಾಜದ ದೃಷ್ಟಿಕೋನ ವನ್ನು ಇಟ್ಟು ಕೊಂಡು ರಚಿಸಿದ್ದಾರೆ. <br /> <br /> ಸಮಾಜದ ವ್ಯವಸ್ಥೆ ಹಾಳಾಗಿರುವ ಇಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆ ಯಾವ ದಿಕ್ಕಿನತ್ತ ಸಾಗಿದೆ ಹಾಗೂ ಸಂಶಯಾಸ್ಪದ ಸಮಸ್ಯೆಗಳಿದ್ದಾಗ ಅವುಗಳನ್ನು ಯಾವ ರೀತಿ ಪರಿಹರಿಸಿ ಕೊಳ್ಳಬೇಕು ಎಂಬುದರ ಕುರಿತು ಒಬ್ಬ ಮನೋರೋಗ ತಜ್ಞನ ಜಾಗದಲ್ಲಿ ನಿಂತು ಈ ಪುಸ್ತಕಗಳನ್ನು ರಚಿಸಿದ್ದಾರೆ~ ಎಂದರು.<br /> <br /> ಈಶ್ವರಚಂದ್ರ ಬೆಟಗೇರಿ ಅವರು `ಅಕ್ಷಯ ಪಾತ್ರೆ~ ಹಾಗೂ ಶಿರೀಷ ಜೋಶಿ `ಅಳಿವಿನಂಚಿನಲ್ಲಿರುವ ಸಂಬಂಧ ಗಳು~ ಪುಸ್ತಕದ ಕುರಿತು ಮಾತ ನಾಡಿದರು. <br /> <br /> ಲೇಖಕ ಎಚ್.ಜಿ.ಮಳಗಿ ಅನಿಸಿ ಕೆಗಳನ್ನು ಹಂಚಿಕೊಂಡರು. ಜಿ.ಎಂ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. <br /> <br /> <strong>ಸಿರಿಧಾನ್ಯಗಳ ಆಹಾರ ತಯಾರಿಕಾ ಕಾರ್ಯಕ್ರಮ <br /> </strong>ಧಾರವಾಡ: ನಗರದ ರ್ಯಾಪಿಡ್ ಸಂಸ್ಥೆಯ ವತಿಯಿಂದ ಮಹಿಳೆ ಯರಿಗಾಗಿ ಸಿರಿಧಾನ್ಯಗಳ ಆಹಾರ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ತರಬೇತಿಯು ಜುಲೈ 6 ಮತ್ತು 7ರಂದು ಬೆಳಿಗ್ಗೆ 10.30ರಿಂದ ಸಂಜೆ 5ರ ವರೆಗೆ ರ್ಯಾಪಿಡ್ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. <br /> <br /> ತರಬೇತಿ ಪಡೆಯಲು ಇಚ್ಚಿಸುವವರು ಜು 4ರ ಒಳಗಾಗಿ ನಗರದ ಮಾಳಡ್ಡಿಯ ಕರ್ಣಾಟಕ ಬ್ಯಾಂಕ್ ಎದುರಿಗಿನ ಗೋವಿಂದ ನಿವಾಸದ ಮೊದಲನೇ ಮಹಡಿ ಯಲ್ಲಿರುವ ರ್ಯಾಪಿಡ್ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಬಹುದು. ಮಾಹಿತಿಗಾಗಿ ದೂರವಾಣಿ ಸಂಖ್ಯೆ 08362444066 ಅಥವಾ 9742196835ಕ್ಕೆ ಸಂಪರ್ಕಿ ಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>