<p>ತೋಂಟದಾರ್ಯ ಸ್ವಾಮೀಜಿ ಅವರು ಮಾಜಿ ಮಂತ್ರಿ ಬಿ. ಶ್ರಿರಾಮುಲು ಅವರ ಸಹಕಾರದಿಂದ ಗದುಗಿನ ಕೆರೆಯ ನೀರನ್ನು ಇಂಗಿಸಿ ಅಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ (ಪ್ರ ವಾ ವಾ ಏ.2)ದಲ್ಲಿ ಹುರುಳಿಲ್ಲ.<br /> <br /> ಶ್ರಿರಾಮುಲು ಗದಗ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದಾಗ ಒಮ್ಮೆ ಶ್ರಿಗಳ ಆಶೀರ್ವಾದ ಪಡೆಯಲು ಮಠಕ್ಕೆ ಬಂದಿದ್ದರು. ಆಗ ಅವರು ಗದುಗಿನ (ಭೀಷ್ಮ)ಕೆರೆಯಲ್ಲಿ ಶಿವನ ಮೂರ್ತಿ ಸ್ಥಾಪಿಸುವುದಾಗಿ ತಿಳಿಸಿದರು. <br /> <br /> ಆಗ ಶ್ರೀಗಳು ಹೈದರಾಬಾದ್ನ ಹುಸೇನ್ ಸಾಗರದಲ್ಲಿ ಬುದ್ಧನ ಮೂರ್ತಿ ಸ್ಥಾಪಿಸಿದ ಮಾದರಿಯಲ್ಲಿ ಯುಗ ಪುರುಷ ಬಸವೇಶ್ವರರ ಪುತ್ಥಳಿ ಸ್ಥಾಪಿಸಲು ಸಲಹೆ ನೀಡಿದ್ದರಷ್ಟೇ. <br /> <br /> ಶ್ರೀರಾಮುಲು ಅಂದಿನ ಮುಖ್ಯಮಂತ್ರಿಗಳ ಹಾಗೂ ಪ್ರವಾಸೋದ್ಯಮ ಸಚಿವರ ನೆರವಿನಿಂದ ಸರ್ಕಾರದಿಂದ 7.63 ಕೋಟಿ ರೂಗಳನ್ನು ಈ ಯೋಜನೆಗೆ ಮಂಜೂರು ಮಾಡಿಸಿದ್ದರು. ಆ ಹಣದಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕೂ ಸ್ವಾಮೀಜಿಯವರಿಗೂ ಸಂಬಂಧ ಇಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತೋಂಟದಾರ್ಯ ಸ್ವಾಮೀಜಿ ಅವರು ಮಾಜಿ ಮಂತ್ರಿ ಬಿ. ಶ್ರಿರಾಮುಲು ಅವರ ಸಹಕಾರದಿಂದ ಗದುಗಿನ ಕೆರೆಯ ನೀರನ್ನು ಇಂಗಿಸಿ ಅಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ (ಪ್ರ ವಾ ವಾ ಏ.2)ದಲ್ಲಿ ಹುರುಳಿಲ್ಲ.<br /> <br /> ಶ್ರಿರಾಮುಲು ಗದಗ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದಾಗ ಒಮ್ಮೆ ಶ್ರಿಗಳ ಆಶೀರ್ವಾದ ಪಡೆಯಲು ಮಠಕ್ಕೆ ಬಂದಿದ್ದರು. ಆಗ ಅವರು ಗದುಗಿನ (ಭೀಷ್ಮ)ಕೆರೆಯಲ್ಲಿ ಶಿವನ ಮೂರ್ತಿ ಸ್ಥಾಪಿಸುವುದಾಗಿ ತಿಳಿಸಿದರು. <br /> <br /> ಆಗ ಶ್ರೀಗಳು ಹೈದರಾಬಾದ್ನ ಹುಸೇನ್ ಸಾಗರದಲ್ಲಿ ಬುದ್ಧನ ಮೂರ್ತಿ ಸ್ಥಾಪಿಸಿದ ಮಾದರಿಯಲ್ಲಿ ಯುಗ ಪುರುಷ ಬಸವೇಶ್ವರರ ಪುತ್ಥಳಿ ಸ್ಥಾಪಿಸಲು ಸಲಹೆ ನೀಡಿದ್ದರಷ್ಟೇ. <br /> <br /> ಶ್ರೀರಾಮುಲು ಅಂದಿನ ಮುಖ್ಯಮಂತ್ರಿಗಳ ಹಾಗೂ ಪ್ರವಾಸೋದ್ಯಮ ಸಚಿವರ ನೆರವಿನಿಂದ ಸರ್ಕಾರದಿಂದ 7.63 ಕೋಟಿ ರೂಗಳನ್ನು ಈ ಯೋಜನೆಗೆ ಮಂಜೂರು ಮಾಡಿಸಿದ್ದರು. ಆ ಹಣದಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕೂ ಸ್ವಾಮೀಜಿಯವರಿಗೂ ಸಂಬಂಧ ಇಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>