<p><strong>ರಾಮಾಪುರ: </strong>ಅಜ್ಜೀಪುರ ಗ್ರಾಮ ಪಂಚಾಯಿತಿಗೆ ಸೇರಿದ ಸಮೀಪದ ಕುರುಬರದೊಡ್ಡಿ ಗ್ರಾಮ ಮೂಲ ಸೌಕರ್ಯದಿಂದ ವಂಚಿತವಾಗಿದೆ.ಗ್ರಾಮದಲ್ಲಿ ಸುಮಾರು 150 ಮನೆಗಳಿದ್ದು, 750ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇಲ್ಲಿಗೆ ಭೇಟಿ ನೀಡಿದರೆ ಸಮಸ್ಯೆಗಳು ಎದ್ದುಕಾಣುತ್ತವೆ. <br /> <br /> ಗ್ರಾಮ ಪಂಚಾಯಿತಿ ಆಡಳಿತ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ.<br /> <br /> ಇಂದಿಗೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯವಿಲ್ಲ. ಪ್ರಸ್ತುತ ಬೇಸಿಗೆ ಆರಂಭಗೊಂಡಿರುವ ಪರಿಣಾಮ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ. ಹಲವು ವರ್ಷದ ಹಿಂದೆಯೇ ಗ್ರಾಮದಲ್ಲಿ ಕಿರುನೀರು ಸರಬರಾಜು ಯೋಜನೆಯಡಿ ತೊಂಬೆ ನಿರ್ಮಿಸಲಾಗಿದೆ. <br /> <br /> ಆದರೆ, ನೀರು ಪೂರೈಸುವ ಕಾರ್ಯವೇ ನಡೆದಿಲ್ಲ. ಅಳವಡಿಸಿರುವ ಏಕೈಕ ನಲ್ಲಿಪೈಪ್ ಜಾನುವಾರು ಕಟ್ಟಲು ಬಳಕೆಯಾಗುತ್ತಿದೆ. ನೀರು ಸರಬರಾಜು ಮಾಡಲು ನಿರ್ಲಕ್ಷ್ಯವಹಿಸಿರುವ ಗ್ರಾ.ಪಂ. ಆಡಳಿತಕ್ಕೆ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. <br /> <br /> ಜತೆಗೆ, ಸೂಕ್ತ ಚರಂಡಿ ಸೌಲಭ್ಯವೂ ಇಲ್ಲ. ಇದರ ಪರಿಣಾಮ ಗೃಹಬಳಕೆಯ ನೀರು ಹೊರಹೋಗಲು ತೊಂದರೆ ಯಾಗಿದೆ. ಕೆಲವು ಮನೆಗಳ ಮುಂಭಾಗ ಸಂಗ್ರಹಗೊಂಡು ಕಲ್ಮಷ ವಾತಾವರಣ ಸೃಷ್ಟಿಗೆ ಕಾರಣವಾಗಿದೆ. ಕೆಲವೆಡೆ ರಸ್ತೆ ಯಲ್ಲಿಯೇ ಮಲಿನ ನೀರು ಹರಿಯುವುದರಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ. <br /> <br /> ಸುಸಜ್ಜಿತ ಬಾಕ್ಸ್ ಚರಂಡಿ ನಿರ್ಮಿಸಲು ಗ್ರಾ.ಪಂ.ನಿಂದ ಚಾಲನೆ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ದೂರು.<br /> ಹೆಸರಿಗಷ್ಟೇ ಗ್ರಾ.ಪಂ.ನಿಂದ ಬೀದಿದೀಪ ಅಳವಡಿಸಲಾಗಿದೆ. ಆದರೆ, ರಾತ್ರಿವೇಳೆ ಅವುಗಳು ಬೆಳಗುವುದಿಲ್ಲ. <br /> <br /> ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಹೊರಬರಲು ಹೆದರುತ್ತಾರೆ. ಗುಣಮಟ್ಟದ ದೀಪ ಅಳವಡಿಸಲು ಹಿಂದೇಟು ಹಾಕಿರುವುದರಿಂದ ಹುಳುಹುಪ್ಪಟೆ ಕಾಟಕ್ಕೆ ಗ್ರಾಮಸ್ಥರು ಭಯಗೊಳ್ಳುವಂತಾಗಿದೆ.<br /> <br /> ಸರ್ಕಾರದ ಹಲವು ಯೋಜನೆಗಳ ಸೌಲಭ್ಯ ಇಲ್ಲಿನವರಿಗೆ ಸಿಕ್ಕಿಲ್ಲ. ವಸತಿ ಸೌಕರ್ಯ ಇಲ್ಲದ ಹಲವು ಕಡುಬಡವರು ಕೂಡ ಗ್ರಾಮದಲ್ಲಿದ್ದಾರೆ. ಅರ್ಹರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಕ್ರಮಕೈಗೊಂಡಿಲ್ಲ.<br /> <br /> ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಚಾಲನೆ ನೀಡುವ ಪ್ರಯತ್ನವೂ ನಡೆದಿಲ್ಲ. ಯೋಜನೆ ಬಗ್ಗೆ ಕೆಲವರಿಗೆ ಮಾಹಿತಿಯೂ ಇಲ್ಲ.<br /> <br /> `ಪ್ರಸ್ತುತ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ. ಆದರೆ, ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸ್ಥಳೀಯ ಆಡಳಿತ ಕ್ರಮಕೈಗೊಂಡಿಲ್ಲ. ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದಾರೆ. <br /> <br /> ಅವರಿಗೆ ಸೂರು ಕಲ್ಪಿಸಲು ಜನಪ್ರತಿನಿಧಿಗಳು ಆಸಕ್ತಿವಹಿಸುತ್ತಿಲ್ಲ. ಈಗಲಾ ದರೂ, ಅಗತ್ಯ ಸೌಲಭ್ಯ ಕಲ್ಪಿಸಲು ಜಿಲ್ಲಾ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು~ ಎಂಬುದು ಗ್ರಾಮದ ನಿವಾಸಿ ಕೆಂಪಮ್ಮ ಅವರ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮಾಪುರ: </strong>ಅಜ್ಜೀಪುರ ಗ್ರಾಮ ಪಂಚಾಯಿತಿಗೆ ಸೇರಿದ ಸಮೀಪದ ಕುರುಬರದೊಡ್ಡಿ ಗ್ರಾಮ ಮೂಲ ಸೌಕರ್ಯದಿಂದ ವಂಚಿತವಾಗಿದೆ.ಗ್ರಾಮದಲ್ಲಿ ಸುಮಾರು 150 ಮನೆಗಳಿದ್ದು, 750ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇಲ್ಲಿಗೆ ಭೇಟಿ ನೀಡಿದರೆ ಸಮಸ್ಯೆಗಳು ಎದ್ದುಕಾಣುತ್ತವೆ. <br /> <br /> ಗ್ರಾಮ ಪಂಚಾಯಿತಿ ಆಡಳಿತ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ.<br /> <br /> ಇಂದಿಗೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯವಿಲ್ಲ. ಪ್ರಸ್ತುತ ಬೇಸಿಗೆ ಆರಂಭಗೊಂಡಿರುವ ಪರಿಣಾಮ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ. ಹಲವು ವರ್ಷದ ಹಿಂದೆಯೇ ಗ್ರಾಮದಲ್ಲಿ ಕಿರುನೀರು ಸರಬರಾಜು ಯೋಜನೆಯಡಿ ತೊಂಬೆ ನಿರ್ಮಿಸಲಾಗಿದೆ. <br /> <br /> ಆದರೆ, ನೀರು ಪೂರೈಸುವ ಕಾರ್ಯವೇ ನಡೆದಿಲ್ಲ. ಅಳವಡಿಸಿರುವ ಏಕೈಕ ನಲ್ಲಿಪೈಪ್ ಜಾನುವಾರು ಕಟ್ಟಲು ಬಳಕೆಯಾಗುತ್ತಿದೆ. ನೀರು ಸರಬರಾಜು ಮಾಡಲು ನಿರ್ಲಕ್ಷ್ಯವಹಿಸಿರುವ ಗ್ರಾ.ಪಂ. ಆಡಳಿತಕ್ಕೆ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. <br /> <br /> ಜತೆಗೆ, ಸೂಕ್ತ ಚರಂಡಿ ಸೌಲಭ್ಯವೂ ಇಲ್ಲ. ಇದರ ಪರಿಣಾಮ ಗೃಹಬಳಕೆಯ ನೀರು ಹೊರಹೋಗಲು ತೊಂದರೆ ಯಾಗಿದೆ. ಕೆಲವು ಮನೆಗಳ ಮುಂಭಾಗ ಸಂಗ್ರಹಗೊಂಡು ಕಲ್ಮಷ ವಾತಾವರಣ ಸೃಷ್ಟಿಗೆ ಕಾರಣವಾಗಿದೆ. ಕೆಲವೆಡೆ ರಸ್ತೆ ಯಲ್ಲಿಯೇ ಮಲಿನ ನೀರು ಹರಿಯುವುದರಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ. <br /> <br /> ಸುಸಜ್ಜಿತ ಬಾಕ್ಸ್ ಚರಂಡಿ ನಿರ್ಮಿಸಲು ಗ್ರಾ.ಪಂ.ನಿಂದ ಚಾಲನೆ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ದೂರು.<br /> ಹೆಸರಿಗಷ್ಟೇ ಗ್ರಾ.ಪಂ.ನಿಂದ ಬೀದಿದೀಪ ಅಳವಡಿಸಲಾಗಿದೆ. ಆದರೆ, ರಾತ್ರಿವೇಳೆ ಅವುಗಳು ಬೆಳಗುವುದಿಲ್ಲ. <br /> <br /> ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಹೊರಬರಲು ಹೆದರುತ್ತಾರೆ. ಗುಣಮಟ್ಟದ ದೀಪ ಅಳವಡಿಸಲು ಹಿಂದೇಟು ಹಾಕಿರುವುದರಿಂದ ಹುಳುಹುಪ್ಪಟೆ ಕಾಟಕ್ಕೆ ಗ್ರಾಮಸ್ಥರು ಭಯಗೊಳ್ಳುವಂತಾಗಿದೆ.<br /> <br /> ಸರ್ಕಾರದ ಹಲವು ಯೋಜನೆಗಳ ಸೌಲಭ್ಯ ಇಲ್ಲಿನವರಿಗೆ ಸಿಕ್ಕಿಲ್ಲ. ವಸತಿ ಸೌಕರ್ಯ ಇಲ್ಲದ ಹಲವು ಕಡುಬಡವರು ಕೂಡ ಗ್ರಾಮದಲ್ಲಿದ್ದಾರೆ. ಅರ್ಹರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಕ್ರಮಕೈಗೊಂಡಿಲ್ಲ.<br /> <br /> ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಚಾಲನೆ ನೀಡುವ ಪ್ರಯತ್ನವೂ ನಡೆದಿಲ್ಲ. ಯೋಜನೆ ಬಗ್ಗೆ ಕೆಲವರಿಗೆ ಮಾಹಿತಿಯೂ ಇಲ್ಲ.<br /> <br /> `ಪ್ರಸ್ತುತ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ. ಆದರೆ, ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸ್ಥಳೀಯ ಆಡಳಿತ ಕ್ರಮಕೈಗೊಂಡಿಲ್ಲ. ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದಾರೆ. <br /> <br /> ಅವರಿಗೆ ಸೂರು ಕಲ್ಪಿಸಲು ಜನಪ್ರತಿನಿಧಿಗಳು ಆಸಕ್ತಿವಹಿಸುತ್ತಿಲ್ಲ. ಈಗಲಾ ದರೂ, ಅಗತ್ಯ ಸೌಲಭ್ಯ ಕಲ್ಪಿಸಲು ಜಿಲ್ಲಾ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು~ ಎಂಬುದು ಗ್ರಾಮದ ನಿವಾಸಿ ಕೆಂಪಮ್ಮ ಅವರ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>