<p><strong>ಬೆಂಗಳೂರು: </strong>`ನಮ್ಮ ಮೆಟ್ರೊ~ ನಿಲ್ದಾಣದ ಪ್ಲಾಟ್ಫಾರಂನಲ್ಲಿ ರೈಲು ಬಂದಾಗ ಮಾತ್ರ ಹತ್ತಿಳಿಯಲು ಅವಕಾಶ ಇದ್ದಿದ್ದರೆ...! ರೈಲು ಎಂಜಿನ್ಗೆ ಎದುರಾಗಿ ಹಳಿಗಳ ಮೇಲೆ ಬೀಳಲು ಅವಕಾಶ ಇಲ್ಲದಿದ್ದರೆ..! <br /> <br /> ವಿದ್ಯಾರ್ಥಿಯೊಬ್ಬ ಮೆಟ್ರೊ ನಿಲ್ದಾಣದಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.<br /> ಹಾಂಕಾಂಗ್, ಸಿಂಗಪುರ ಸೇರಿದಂತೆ ವಿಶ್ವದ ಪ್ರಮುಖ ಮಹಾನಗರಗಳ ಮೆಟ್ರೊ ನಿಲ್ದಾಣಗಳಲ್ಲಿ ರೈಲು ಹತ್ತಲು ಅಥವಾ ಇಳಿಯಲು ಅವಕಾಶವಾಗುವ ಹಾಗೆ ಗಾಜಿನ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಈ ಗಾಜಿನ ತಡೆಗೋಡೆಗಳಲ್ಲಿ ಇರುವ ಸ್ವಯಂಚಾಲಿತ ಬಾಗಿಲುಗಳು ರೈಲು ಬಂದಾಗ ಮಾತ್ರ ತೆರೆದುಕೊಳ್ಳುತ್ತವೆ, ಉಳಿದಂತೆ ಮುಚ್ಚಿರುತ್ತವೆ. ಈ ಬಾಗಿಲುಗಳಿಗೆ `ಪ್ಲಾಟ್ಫಾರಂ ಸ್ಕ್ರೀನ್ ಡೋರ್ಸ್~ ಎಂದು ಕರೆಯಲಾಗುತ್ತದೆ. ದೆಹಲಿ ಮೆಟ್ರೊದ ಎರಡು ನಿಲ್ದಾಣಗಳಲ್ಲಿ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ.<br /> <br /> ಬೆಂಗಳೂರು ಮೆಟ್ರೊ ರೈಲು ನಿಗಮದವರು (ಬಿಎಂಆರ್ಸಿಎಲ್) ಮಾತೆತ್ತಿದರೆ `ನಗರದ ಮೆಟ್ರೊ ನಿಲ್ದಾಣಗಳು ವಿಶ್ವದರ್ಜೆಯವು, ಪ್ರಯಾಣಿಕರ ಸುರ ಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗಿದೆ~ ಎಂದು ಹೇಳುತ್ತಾರೆ. ಆದರೆ ನಿಲ್ದಾಣಗಳಲ್ಲಿ ಹಳಿಗಳ ಮೇಲೆ ಬೀಳದ ಹಾಗೆ ತಡೆಯುವ ವ್ಯವಸ್ಥೆಯನ್ನು ಮಾಡಿಲ್ಲ; ಮಾಡುವ ಬಗ್ಗೆ ಚಿಂತನೆ ಮಾಡಿದಂತಿಲ್ಲ.<br /> <br /> 1984ರಲ್ಲಿ ಕೋಲ್ಕತ್ತ ಮೆಟ್ರೊ ರೈಲು ಸಂಚಾರ ಪ್ರಾರಂಭವಾಯಿತು. ಅಲ್ಲಿನ ನಿಲ್ದಾಣವೊಂದರಲ್ಲಿ 1998ರಲ್ಲಿ ಮೊದಲ ಆತ್ಮಹತ್ಯೆ ಪ್ರಕರಣ ಘಟಿಸಿತು. ಇದುವರೆಗೆ ಅಲ್ಲಿನ ಮೆಟ್ರೊ ನಿಲ್ದಾಣಗಳಲ್ಲಿ 234 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.<br /> <br /> ದೆಹಲಿಯಲ್ಲಿ 2002ರಲ್ಲಿ ಮೆಟ್ರೊದ ಮೊದಲ ಮಾರ್ಗ ಸಾರ್ವಜನಿಕ ಬಳಕೆಗೆ ಮುಕ್ತವಾಯಿತು. ಅಲ್ಲಿನ ನಿಲ್ದಾಣಗಳಲ್ಲಿ ಇಲ್ಲಿಯ ತನಕ 12 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಮೆಟ್ರೊ ನಿಲ್ದಾಣ ಸೇರಿದಂತೆ ದೇಶದ ಮೂರು ಮೆಟ್ರೊ ಸಾರಿಗೆ ವ್ಯವಸ್ಥೆಯಲ್ಲಿ ಒಟ್ಟು 247 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.<br /> <br /> ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕೋಲ್ಕೊತ್ತ ಮೆಟ್ರೊ ರೈಲು ನಿಗಮದ ವಕ್ತಾರ ಪ್ರತ್ಯೂಷ್ ಘೋಷ್, `ಗಾಜಿನ ತಡೆಗೋಡೆ ವ್ಯವಸ್ಥೆಯನ್ನು ಮೂರು ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುತ್ತಿದೆ. 12 ಕೋಟಿ ರೂಪಾಯಿ ವೆಚ್ಚದ ಪೈಲಟ್ ಯೋಜನೆಯನ್ನು ವರ್ಷದ ಹಿಂದೆಯೇ ರೈಲ್ವೆ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ~ ಎಂದರು.<br /> <br /> `ನಿಲ್ದಾಣಗಳಲ್ಲಿ ಪ್ರಯಾಣಿಕರ ಚಲನವಲನಗಳನ್ನು ಸಿಸಿಟಿವಿ ಮೂಲಕ ಗಮನಿಸಲಾಗುತ್ತಿರುತ್ತದೆ. ಅಲ್ಲದೇ ನಿಲ್ದಾಣಗಳಿಗೆ ನಿಯೋಜಿಸಿರುವ ಪೊಲೀಸರಿಗೆ ಪ್ಲಾಟ್ಫಾರಂಗಳಲ್ಲಿ ಚಿಂತಾಕ್ರಾಂತವಾಗಿ ಕಾಣಿಸಿಕೊಳ್ಳುವ ಹಾಗೂ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧವಿರುವಂತೆ ಕಾಣುವ ಜನರನ್ನು ಗುರುತಿಸಲು ವಿಶೇಷ ತರಬೇತಿ ನೀಡಲಾಗಿದೆ. ಈ ನಿಗಾ ವ್ಯವಸ್ಥೆಯ ಮೂಲಕ 114 ಜನ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದ್ದೇವೆ~ ಎಂದು ಅವರು ತಿಳಿಸಿದರು.<br /> <br /> ದೆಹಲಿ ಮೆಟ್ರೊ ಸಾರಿಗೆ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನುಜ್ ದಯಾಳ್, `ರಾಜೀವ್ ಚೌಕ ಮತ್ತು ಕಶ್ಮೀರೆ ಗೇಟ್ ನಿಲ್ದಾಣಗಳಲ್ಲಿ ಗಾಜಿನ ತಡೆಗೋಡೆ ವ್ಯವಸ್ಥೆ ಮಾಡಿದ್ದೇವೆ.ಉಳಿದ ನಿಲ್ದಾಣಗಳಲ್ಲಿ ಮೂರಡಿ ಎತ್ತರದ ಬ್ಯಾರಿಕೇಡ್ ವ್ಯವಸ್ಥೆ ಇದೆ. ಭದ್ರತಾ ಸಿಬ್ಬಂದಿಯ ಕಣ್ಗಾವಲು ಇದೆ~ ಎಂದು ತಿಳಿಸಿದರು.<br /> <br /> ಬಿಎಂಆರ್ಸಿಎಲ್ ವಕ್ತಾರ ಬಿ.ಎಲ್.ಯಶವಂತ್ ಚವಾಣ್ ಅವರು, `ದೆಹಲಿಯ ಯಾವ ಮಾರ್ಗದಲ್ಲಿ ಗಾಜಿನ ತಡೆಗೋಡೆ ವ್ಯವಸ್ಥೆ ಇದೆ? ಜಗತ್ತಿನಲ್ಲಿ 507 ಮೆಟ್ರೊ ಸಾರಿಗೆ ವ್ಯವಸ್ಥೆಯಿದೆ. ನಮ್ಮ ಮೆಟ್ರೊ ವಿಶ್ವದರ್ಜೆಯದ್ದು~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ನಮ್ಮ ಮೆಟ್ರೊ~ ನಿಲ್ದಾಣದ ಪ್ಲಾಟ್ಫಾರಂನಲ್ಲಿ ರೈಲು ಬಂದಾಗ ಮಾತ್ರ ಹತ್ತಿಳಿಯಲು ಅವಕಾಶ ಇದ್ದಿದ್ದರೆ...! ರೈಲು ಎಂಜಿನ್ಗೆ ಎದುರಾಗಿ ಹಳಿಗಳ ಮೇಲೆ ಬೀಳಲು ಅವಕಾಶ ಇಲ್ಲದಿದ್ದರೆ..! <br /> <br /> ವಿದ್ಯಾರ್ಥಿಯೊಬ್ಬ ಮೆಟ್ರೊ ನಿಲ್ದಾಣದಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.<br /> ಹಾಂಕಾಂಗ್, ಸಿಂಗಪುರ ಸೇರಿದಂತೆ ವಿಶ್ವದ ಪ್ರಮುಖ ಮಹಾನಗರಗಳ ಮೆಟ್ರೊ ನಿಲ್ದಾಣಗಳಲ್ಲಿ ರೈಲು ಹತ್ತಲು ಅಥವಾ ಇಳಿಯಲು ಅವಕಾಶವಾಗುವ ಹಾಗೆ ಗಾಜಿನ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಈ ಗಾಜಿನ ತಡೆಗೋಡೆಗಳಲ್ಲಿ ಇರುವ ಸ್ವಯಂಚಾಲಿತ ಬಾಗಿಲುಗಳು ರೈಲು ಬಂದಾಗ ಮಾತ್ರ ತೆರೆದುಕೊಳ್ಳುತ್ತವೆ, ಉಳಿದಂತೆ ಮುಚ್ಚಿರುತ್ತವೆ. ಈ ಬಾಗಿಲುಗಳಿಗೆ `ಪ್ಲಾಟ್ಫಾರಂ ಸ್ಕ್ರೀನ್ ಡೋರ್ಸ್~ ಎಂದು ಕರೆಯಲಾಗುತ್ತದೆ. ದೆಹಲಿ ಮೆಟ್ರೊದ ಎರಡು ನಿಲ್ದಾಣಗಳಲ್ಲಿ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ.<br /> <br /> ಬೆಂಗಳೂರು ಮೆಟ್ರೊ ರೈಲು ನಿಗಮದವರು (ಬಿಎಂಆರ್ಸಿಎಲ್) ಮಾತೆತ್ತಿದರೆ `ನಗರದ ಮೆಟ್ರೊ ನಿಲ್ದಾಣಗಳು ವಿಶ್ವದರ್ಜೆಯವು, ಪ್ರಯಾಣಿಕರ ಸುರ ಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗಿದೆ~ ಎಂದು ಹೇಳುತ್ತಾರೆ. ಆದರೆ ನಿಲ್ದಾಣಗಳಲ್ಲಿ ಹಳಿಗಳ ಮೇಲೆ ಬೀಳದ ಹಾಗೆ ತಡೆಯುವ ವ್ಯವಸ್ಥೆಯನ್ನು ಮಾಡಿಲ್ಲ; ಮಾಡುವ ಬಗ್ಗೆ ಚಿಂತನೆ ಮಾಡಿದಂತಿಲ್ಲ.<br /> <br /> 1984ರಲ್ಲಿ ಕೋಲ್ಕತ್ತ ಮೆಟ್ರೊ ರೈಲು ಸಂಚಾರ ಪ್ರಾರಂಭವಾಯಿತು. ಅಲ್ಲಿನ ನಿಲ್ದಾಣವೊಂದರಲ್ಲಿ 1998ರಲ್ಲಿ ಮೊದಲ ಆತ್ಮಹತ್ಯೆ ಪ್ರಕರಣ ಘಟಿಸಿತು. ಇದುವರೆಗೆ ಅಲ್ಲಿನ ಮೆಟ್ರೊ ನಿಲ್ದಾಣಗಳಲ್ಲಿ 234 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.<br /> <br /> ದೆಹಲಿಯಲ್ಲಿ 2002ರಲ್ಲಿ ಮೆಟ್ರೊದ ಮೊದಲ ಮಾರ್ಗ ಸಾರ್ವಜನಿಕ ಬಳಕೆಗೆ ಮುಕ್ತವಾಯಿತು. ಅಲ್ಲಿನ ನಿಲ್ದಾಣಗಳಲ್ಲಿ ಇಲ್ಲಿಯ ತನಕ 12 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಮೆಟ್ರೊ ನಿಲ್ದಾಣ ಸೇರಿದಂತೆ ದೇಶದ ಮೂರು ಮೆಟ್ರೊ ಸಾರಿಗೆ ವ್ಯವಸ್ಥೆಯಲ್ಲಿ ಒಟ್ಟು 247 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.<br /> <br /> ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕೋಲ್ಕೊತ್ತ ಮೆಟ್ರೊ ರೈಲು ನಿಗಮದ ವಕ್ತಾರ ಪ್ರತ್ಯೂಷ್ ಘೋಷ್, `ಗಾಜಿನ ತಡೆಗೋಡೆ ವ್ಯವಸ್ಥೆಯನ್ನು ಮೂರು ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುತ್ತಿದೆ. 12 ಕೋಟಿ ರೂಪಾಯಿ ವೆಚ್ಚದ ಪೈಲಟ್ ಯೋಜನೆಯನ್ನು ವರ್ಷದ ಹಿಂದೆಯೇ ರೈಲ್ವೆ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ~ ಎಂದರು.<br /> <br /> `ನಿಲ್ದಾಣಗಳಲ್ಲಿ ಪ್ರಯಾಣಿಕರ ಚಲನವಲನಗಳನ್ನು ಸಿಸಿಟಿವಿ ಮೂಲಕ ಗಮನಿಸಲಾಗುತ್ತಿರುತ್ತದೆ. ಅಲ್ಲದೇ ನಿಲ್ದಾಣಗಳಿಗೆ ನಿಯೋಜಿಸಿರುವ ಪೊಲೀಸರಿಗೆ ಪ್ಲಾಟ್ಫಾರಂಗಳಲ್ಲಿ ಚಿಂತಾಕ್ರಾಂತವಾಗಿ ಕಾಣಿಸಿಕೊಳ್ಳುವ ಹಾಗೂ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧವಿರುವಂತೆ ಕಾಣುವ ಜನರನ್ನು ಗುರುತಿಸಲು ವಿಶೇಷ ತರಬೇತಿ ನೀಡಲಾಗಿದೆ. ಈ ನಿಗಾ ವ್ಯವಸ್ಥೆಯ ಮೂಲಕ 114 ಜನ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದ್ದೇವೆ~ ಎಂದು ಅವರು ತಿಳಿಸಿದರು.<br /> <br /> ದೆಹಲಿ ಮೆಟ್ರೊ ಸಾರಿಗೆ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನುಜ್ ದಯಾಳ್, `ರಾಜೀವ್ ಚೌಕ ಮತ್ತು ಕಶ್ಮೀರೆ ಗೇಟ್ ನಿಲ್ದಾಣಗಳಲ್ಲಿ ಗಾಜಿನ ತಡೆಗೋಡೆ ವ್ಯವಸ್ಥೆ ಮಾಡಿದ್ದೇವೆ.ಉಳಿದ ನಿಲ್ದಾಣಗಳಲ್ಲಿ ಮೂರಡಿ ಎತ್ತರದ ಬ್ಯಾರಿಕೇಡ್ ವ್ಯವಸ್ಥೆ ಇದೆ. ಭದ್ರತಾ ಸಿಬ್ಬಂದಿಯ ಕಣ್ಗಾವಲು ಇದೆ~ ಎಂದು ತಿಳಿಸಿದರು.<br /> <br /> ಬಿಎಂಆರ್ಸಿಎಲ್ ವಕ್ತಾರ ಬಿ.ಎಲ್.ಯಶವಂತ್ ಚವಾಣ್ ಅವರು, `ದೆಹಲಿಯ ಯಾವ ಮಾರ್ಗದಲ್ಲಿ ಗಾಜಿನ ತಡೆಗೋಡೆ ವ್ಯವಸ್ಥೆ ಇದೆ? ಜಗತ್ತಿನಲ್ಲಿ 507 ಮೆಟ್ರೊ ಸಾರಿಗೆ ವ್ಯವಸ್ಥೆಯಿದೆ. ನಮ್ಮ ಮೆಟ್ರೊ ವಿಶ್ವದರ್ಜೆಯದ್ದು~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>