`ಮೇಲು-ಕೀಳು ಭಾವನೆ ತೊಲಗಿಸಿ'
ರಾಜರಾಜೇಶ್ವರಿನಗರ: `ಬಡವ- ಶ್ರೀಮಂತ, ಮೇಲು-ಕೀಳು ಭಾವನೆ ತೊಲಗಿಸಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕಾಗಿದೆ' ಎಂದು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಎಚ್. ಗೊಲ್ಲಹಳ್ಳಿಯಲ್ಲಿ ಕಾಳಿಕಾಂಬ ಮಠೇಶ್ವರಿ ದೇವರ ಜೀರ್ಣೋದ್ಧಾರ ಮತ್ತು ನೂತನ ದೇವಸ್ಥಾನ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಂಠೀರವ ಸ್ಟುಡಿಯೋದ ಮಾಜಿ ಅಧ್ಯಕ್ಷ ಎಂ.ರುದ್ರೇಶ್, `ಶಿಥಿಲಗೊಂಡಿದ್ದ ಪುರಾತನ ದೇವಸ್ಥಾನವನ್ನು ್ಙ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು ನಿತ್ಯಪೂಜೆ- ಪುರಸ್ಕಾರಗಳು ನಡೆಯಲಿವೆ' ಎಂದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಟಿ. ಸೋಮಶೇಖರ್, ಉದ್ಯಮಿ ಎಂ. ರಾಜಶೇಖರ್, ಟ್ರಸ್ಟಿ ಸಿ.ಎನ್. ಪರಮಶಿವಯ್ಯ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.