<p>ಸುತ್ತಲೂ ಕಗ್ಗತ್ತಲು. ಒಂದು ಮೂಲೆಯಲ್ಲಿ ಪ್ರಕಾಶಮಾನ ಬೆಳಕು ಮೂಡುತ್ತದೆ. ಅಲ್ಲಿ ಒಬ್ಬ ಚಂಚಲಚಿತ್ತ ವ್ಯಕ್ತಿ ಕುಳಿತಿದ್ದಾನೆ. ನೃತ್ಯ ರೂಪಕದ ಮೂಲಕ ಪ್ರಸ್ತುತ ಒತ್ತಡದ ಜೀವನದಲ್ಲಿ ಮನುಷ್ಯನ ತೊಳಲಾಟಗಳನ್ನು ಅಭಿವ್ಯಕ್ತಿಸುತ್ತಿದ್ದಾನೆ. <br /> <br /> ನಂತರ ಏಕಾಏಕಿ ನಾಲ್ವರು ನೃತ್ಯಪಟುಗಳ ಆಗಮನ; ಅವರದ್ದೂ ಅದೇ ಚಲನೆ, ನೃತ್ಯ. ಹೀಗೆ ಸತತ ಒಂದು ಗಂಟೆ ನೃತ್ಯದ ಮೂಲಕ ಪ್ರೇಕ್ಷಕರನ್ನು ಹಿಡಿದು ಕೂರಿಸಿದರು ಕಲಾವಿದರು.<br /> <br /> ರವೀಂದ್ರ ಕಲಾಕ್ಷೇತ್ರದಲ್ಲಿ ಅಟ್ಟಕ್ಕಲರಿ ಸೆಂಟರ್ ಫಾರ್ ಮೂವ್ಮೆಂಟ್ ಆರ್ಟ್ಸ್ ಸಂಸ್ಥೆ ಆಯೋಜಿಸಿದ್ದ `ಮೈಧ್ವನಿ~ (ದೇಹದ ಪ್ರತಿಧ್ವನಿಗಳು) ಅಟ್ಟಕ್ಕಲರಿ ನೃತ್ಯ ಪ್ರದರ್ಶನದಲ್ಲಿ ಕಂಡು ಬಂದ ಮನಮೋಹಕ ದೃಶ್ಯಗಳಿವು. <br /> <br /> ಮೈಧ್ವನಿ ಶೀರ್ಷಿಕೆಗೆ ತಮಿಳು ಮತ್ತು ಸಂಸ್ಕೃತ ಮೂಲ. ಮೈ ಅಂದರೆ ದೇಹ ಮತ್ತು ಧ್ವನಿ ಎಂದರೆ ಮಾರ್ದನಿ ಎಂಬ ಅರ್ಥ. ಈ ಸಮಕಾಲೀನ ನೃತ್ಯವನ್ನು ದೇಹದ ಪ್ರತಿಧ್ವನಿಗಳು ಅಥವಾ ದೇಹದ ಸ್ಮೃತಿಗಳು ಎಂದು ಅರ್ಥೈಸಬಹುದು ಎನ್ನುತ್ತಾರೆ ನೃತ್ಯ ನಿರ್ದೇಶಕ ಜಯಚಂದ್ರನ್ ಪಳರಿ. <br /> <br /> ಭಾರತೀಯ ಉಪಖಂಡದಲ್ಲಿ ಚಾಲ್ತಿಯಲ್ಲಿರುವ ದೈಹಿಕ ಮತ್ತು ಪ್ರದರ್ಶನ ಕಲೆಗಳ ಕುರಿತು ಆಳವಾಗಿ ಅಧ್ಯಯನ ನಡೆಸಿ ಈ ನೃತ್ಯ ಸಂಯೋಜಿಸಲಾಗಿದೆ. ಭರತನಾಟ್ಯದ ಮುದ್ರೆಗಳು ಮತ್ತು ಕೇರಳದ ಕಳರಿಪಯಟ್ಟುವಿನಲ್ಲಿ ಪ್ರದರ್ಶಿಸುವ ಪ್ರಾಣಿಗಳ ಚಲನೆಯನ್ನು ಆಧಾರವಾಗಿ ಇಟ್ಟುಕೊಂಡು ನೃತ್ಯ ಪ್ರದರ್ಶಿಸಲಾಯಿತು.<br /> <br /> ಶ್ವೇತವರ್ಣದ ಧಿರಿಸು ತೊಟ್ಟ ಮೂವರು ಹುಡುಗಿಯರು ಮೂರು ಸ್ಟೀಲಿನ ಬಿಂದಿಗೆ ಹಿಡಿದು ಹೆಜ್ಜೆ ಹಾಕುತ್ತಿದ್ದರು. ಅದು ಕೊನೆಯಿಲ್ಲದ ಹೆಣ್ತನವನ್ನು ಸೂಚಿಸಿದರೆ, ಮೂವರು ಯುವಕರು ದೀಪಗಳನ್ನು ಹಿಡಿದು ಕಳರಿಪಯಟ್ಟುವಿನ ಪಟ್ಟುಗಳನ್ನು ಪ್ರದರ್ಶಿಸುತ್ತಿದ್ದುದು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಈ ಬೆಂಕಿ ಪುರುಷ ಶಕ್ತಿಯನ್ನು ಸಂಕೇತಿಸುತ್ತಿತ್ತು.<br /> <br /> ನೀರನ್ನು ಜೀವನ ಚಿಲುಮೆಯಾಗಿ ಬಿಂಬಿಸಿ, ಪ್ರಕೃತಿ ಮತ್ತು ಮಾನವನ ಸಂಬಂಧವನ್ನು ಅರ್ಥೈಸುವ ಉದ್ದೇಶ ಈ ನೃತ್ಯದಲ್ಲಿದೆ. ಹಿನ್ನೆಲೆ ಸಂಗೀತದ ನಿನಾದ ಈ ಸಮಕಾಲೀನ ನೃತ್ಯಕ್ಕೆ ಸಾಥ್ ನೀಡಿತ್ತು.<br /> <br /> ಇಲ್ಲಿ ಮೂಕಾಭಿನಯವೆಂಬಂತೆ ಕಂಡುಬಂದರೂ ದೇಹದ ಚಲನೆಗಳು ದೇಹದೊಳಗಿರುವ ಜ್ಯಾಮಿತಿಯ ಸಂಕೇತಗಳು ಹಾಗೂ ಮನಸ್ಸಿನ ಚೈತನ್ಯ ಬಿಂಬಿಸುವ ಚಲನೆಗಳನ್ನು ಅವಿಸ್ಮರಣೇಯ ರೀತಿಯಲ್ಲಿ ರಂಗದ ಮೇಲೆ ಪ್ರದರ್ಶಿಸಲಾಯಿತು. ಇದರ ಹಿಂದೆ ಯುವ ಕಲಾವಿದರ ಪರಿಶ್ರಮ ಎದ್ದು ಕಾಣುತ್ತಿತ್ತು.<br /> <br /> ಜಯಚಂದ್ರನ್ ಪಳರಿ ಕಲಾನಿರ್ದೇಶನ ಮಾಡಿದ್ದರೆ, ಇಸ್ರೆಲ್ನ ಪೆಟ್ರಿಕ್ ಸೆಬಾಗ್ ಮತ್ತು ಯೊಟಾಮ ಅಗಂ ಸಂಗೀತ ಮತ್ತು ಧ್ವನಿ ನೀಡಿದ್ದರು. ಥಾಮಸ್ ದೊಟ್ಜಲರ್ (ಬೆಳಕು), ಹಿಮಾಂಶು ಮತ್ತು ಸೋನಾಲಿ ಅವರು ವಸ್ತ್ರ ವಿನ್ಯಾಸ ಮಾಡಿದ್ದರು. <br /> <br /> ಒಟ್ಟಾರೆ ಸಮಕಾಲೀನ ನೃತ್ಯ ಪರಂಪರೆಗೆ ವಿಶಿಷ್ಟ ಆಯಾಮ ತಂದುಕೊಟ್ಟು ರಂಗದ ಮೇಲೆ ಪ್ರದರ್ಶಿತವಾದ ಮೈಧ್ವನಿ ಅಟ್ಟಕಲರಿಯು ಅಭಿಮಾನಿಗಳಿಗೆ ಪುಳಕ ಉಂಟುಮಾಡಿತ್ತು. ಈ ಪ್ರದರ್ಶನ ಅಕ್ಟೋಬರ್ನಲ್ಲಿ ಜರ್ಮನಿಯಲ್ಲಿ ಪ್ರದರ್ಶಿತವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುತ್ತಲೂ ಕಗ್ಗತ್ತಲು. ಒಂದು ಮೂಲೆಯಲ್ಲಿ ಪ್ರಕಾಶಮಾನ ಬೆಳಕು ಮೂಡುತ್ತದೆ. ಅಲ್ಲಿ ಒಬ್ಬ ಚಂಚಲಚಿತ್ತ ವ್ಯಕ್ತಿ ಕುಳಿತಿದ್ದಾನೆ. ನೃತ್ಯ ರೂಪಕದ ಮೂಲಕ ಪ್ರಸ್ತುತ ಒತ್ತಡದ ಜೀವನದಲ್ಲಿ ಮನುಷ್ಯನ ತೊಳಲಾಟಗಳನ್ನು ಅಭಿವ್ಯಕ್ತಿಸುತ್ತಿದ್ದಾನೆ. <br /> <br /> ನಂತರ ಏಕಾಏಕಿ ನಾಲ್ವರು ನೃತ್ಯಪಟುಗಳ ಆಗಮನ; ಅವರದ್ದೂ ಅದೇ ಚಲನೆ, ನೃತ್ಯ. ಹೀಗೆ ಸತತ ಒಂದು ಗಂಟೆ ನೃತ್ಯದ ಮೂಲಕ ಪ್ರೇಕ್ಷಕರನ್ನು ಹಿಡಿದು ಕೂರಿಸಿದರು ಕಲಾವಿದರು.<br /> <br /> ರವೀಂದ್ರ ಕಲಾಕ್ಷೇತ್ರದಲ್ಲಿ ಅಟ್ಟಕ್ಕಲರಿ ಸೆಂಟರ್ ಫಾರ್ ಮೂವ್ಮೆಂಟ್ ಆರ್ಟ್ಸ್ ಸಂಸ್ಥೆ ಆಯೋಜಿಸಿದ್ದ `ಮೈಧ್ವನಿ~ (ದೇಹದ ಪ್ರತಿಧ್ವನಿಗಳು) ಅಟ್ಟಕ್ಕಲರಿ ನೃತ್ಯ ಪ್ರದರ್ಶನದಲ್ಲಿ ಕಂಡು ಬಂದ ಮನಮೋಹಕ ದೃಶ್ಯಗಳಿವು. <br /> <br /> ಮೈಧ್ವನಿ ಶೀರ್ಷಿಕೆಗೆ ತಮಿಳು ಮತ್ತು ಸಂಸ್ಕೃತ ಮೂಲ. ಮೈ ಅಂದರೆ ದೇಹ ಮತ್ತು ಧ್ವನಿ ಎಂದರೆ ಮಾರ್ದನಿ ಎಂಬ ಅರ್ಥ. ಈ ಸಮಕಾಲೀನ ನೃತ್ಯವನ್ನು ದೇಹದ ಪ್ರತಿಧ್ವನಿಗಳು ಅಥವಾ ದೇಹದ ಸ್ಮೃತಿಗಳು ಎಂದು ಅರ್ಥೈಸಬಹುದು ಎನ್ನುತ್ತಾರೆ ನೃತ್ಯ ನಿರ್ದೇಶಕ ಜಯಚಂದ್ರನ್ ಪಳರಿ. <br /> <br /> ಭಾರತೀಯ ಉಪಖಂಡದಲ್ಲಿ ಚಾಲ್ತಿಯಲ್ಲಿರುವ ದೈಹಿಕ ಮತ್ತು ಪ್ರದರ್ಶನ ಕಲೆಗಳ ಕುರಿತು ಆಳವಾಗಿ ಅಧ್ಯಯನ ನಡೆಸಿ ಈ ನೃತ್ಯ ಸಂಯೋಜಿಸಲಾಗಿದೆ. ಭರತನಾಟ್ಯದ ಮುದ್ರೆಗಳು ಮತ್ತು ಕೇರಳದ ಕಳರಿಪಯಟ್ಟುವಿನಲ್ಲಿ ಪ್ರದರ್ಶಿಸುವ ಪ್ರಾಣಿಗಳ ಚಲನೆಯನ್ನು ಆಧಾರವಾಗಿ ಇಟ್ಟುಕೊಂಡು ನೃತ್ಯ ಪ್ರದರ್ಶಿಸಲಾಯಿತು.<br /> <br /> ಶ್ವೇತವರ್ಣದ ಧಿರಿಸು ತೊಟ್ಟ ಮೂವರು ಹುಡುಗಿಯರು ಮೂರು ಸ್ಟೀಲಿನ ಬಿಂದಿಗೆ ಹಿಡಿದು ಹೆಜ್ಜೆ ಹಾಕುತ್ತಿದ್ದರು. ಅದು ಕೊನೆಯಿಲ್ಲದ ಹೆಣ್ತನವನ್ನು ಸೂಚಿಸಿದರೆ, ಮೂವರು ಯುವಕರು ದೀಪಗಳನ್ನು ಹಿಡಿದು ಕಳರಿಪಯಟ್ಟುವಿನ ಪಟ್ಟುಗಳನ್ನು ಪ್ರದರ್ಶಿಸುತ್ತಿದ್ದುದು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಈ ಬೆಂಕಿ ಪುರುಷ ಶಕ್ತಿಯನ್ನು ಸಂಕೇತಿಸುತ್ತಿತ್ತು.<br /> <br /> ನೀರನ್ನು ಜೀವನ ಚಿಲುಮೆಯಾಗಿ ಬಿಂಬಿಸಿ, ಪ್ರಕೃತಿ ಮತ್ತು ಮಾನವನ ಸಂಬಂಧವನ್ನು ಅರ್ಥೈಸುವ ಉದ್ದೇಶ ಈ ನೃತ್ಯದಲ್ಲಿದೆ. ಹಿನ್ನೆಲೆ ಸಂಗೀತದ ನಿನಾದ ಈ ಸಮಕಾಲೀನ ನೃತ್ಯಕ್ಕೆ ಸಾಥ್ ನೀಡಿತ್ತು.<br /> <br /> ಇಲ್ಲಿ ಮೂಕಾಭಿನಯವೆಂಬಂತೆ ಕಂಡುಬಂದರೂ ದೇಹದ ಚಲನೆಗಳು ದೇಹದೊಳಗಿರುವ ಜ್ಯಾಮಿತಿಯ ಸಂಕೇತಗಳು ಹಾಗೂ ಮನಸ್ಸಿನ ಚೈತನ್ಯ ಬಿಂಬಿಸುವ ಚಲನೆಗಳನ್ನು ಅವಿಸ್ಮರಣೇಯ ರೀತಿಯಲ್ಲಿ ರಂಗದ ಮೇಲೆ ಪ್ರದರ್ಶಿಸಲಾಯಿತು. ಇದರ ಹಿಂದೆ ಯುವ ಕಲಾವಿದರ ಪರಿಶ್ರಮ ಎದ್ದು ಕಾಣುತ್ತಿತ್ತು.<br /> <br /> ಜಯಚಂದ್ರನ್ ಪಳರಿ ಕಲಾನಿರ್ದೇಶನ ಮಾಡಿದ್ದರೆ, ಇಸ್ರೆಲ್ನ ಪೆಟ್ರಿಕ್ ಸೆಬಾಗ್ ಮತ್ತು ಯೊಟಾಮ ಅಗಂ ಸಂಗೀತ ಮತ್ತು ಧ್ವನಿ ನೀಡಿದ್ದರು. ಥಾಮಸ್ ದೊಟ್ಜಲರ್ (ಬೆಳಕು), ಹಿಮಾಂಶು ಮತ್ತು ಸೋನಾಲಿ ಅವರು ವಸ್ತ್ರ ವಿನ್ಯಾಸ ಮಾಡಿದ್ದರು. <br /> <br /> ಒಟ್ಟಾರೆ ಸಮಕಾಲೀನ ನೃತ್ಯ ಪರಂಪರೆಗೆ ವಿಶಿಷ್ಟ ಆಯಾಮ ತಂದುಕೊಟ್ಟು ರಂಗದ ಮೇಲೆ ಪ್ರದರ್ಶಿತವಾದ ಮೈಧ್ವನಿ ಅಟ್ಟಕಲರಿಯು ಅಭಿಮಾನಿಗಳಿಗೆ ಪುಳಕ ಉಂಟುಮಾಡಿತ್ತು. ಈ ಪ್ರದರ್ಶನ ಅಕ್ಟೋಬರ್ನಲ್ಲಿ ಜರ್ಮನಿಯಲ್ಲಿ ಪ್ರದರ್ಶಿತವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>