<p><strong>ಹುಬ್ಬಳ್ಳಿ:</strong> ನೈರುತ್ಯ ರೈಲ್ವೆಯು ಮೈಸೂರು- ಸಾಯಿನಗರ ಶಿರಡಿ- ಮೈಸೂರು ನಡುವೆ ಈಗಾಗಲೇ ಸಂಚರಿಸುತ್ತಿರುವ (ಸಂಖ್ಯೆ 06201/06202) ವಿಶೇಷ ಸಾಪ್ತಾಹಿಕ ರೈಲುಗಳ ಸಂಚಾರವನ್ನು ಮಾರ್ಚ್ 26ರವರೆಗೆ ಮುಂದುವರಿಸಲು ತೀರ್ಮಾನಿಸಿದೆ.<br /> <br /> ಪ್ರತಿ ಸೋಮವಾರ ಬೆಳಿಗ್ಗೆ 5.30ಕ್ಕೆ ಮೈಸೂರಿನಿಂದ ಹೊರಡುವ ರೈಲು (ಸಂಖ್ಯೆ 06201) ಶಿರಡಿಯನ್ನು ಮಂಗಳವಾರ 11.30ಕ್ಕೆ ತಲುಪುತ್ತದೆ. ಬೆಂಗಳೂರು, ಧರ್ಮಾವರಂ, ಗುಂತಕಲ್, ಬಳ್ಳಾರಿ, ಹೊಸಪೇಟೆ, ಗದಗ, ವಿಜಾಪುರ ಮತ್ತು ಸೊಲ್ಲಾಪುರ ಮಾರ್ಗವಾಗಿ ಈ ರೈಲು ಸಂಚರಿಸಲಿದೆ.<br /> <br /> ಶಿರಡಿಯಿಂದ ಪ್ರತಿ ಮಂಗಳವಾರ ಹೊರಡುವ ರೈಲು (ಸಂಖ್ಯೆ 06202) ಗುರುವಾರ ಬೆಳಿಗ್ಗೆ 7.10ಕ್ಕೆ ಮೈಸೂರು ತಲುಪುತ್ತದೆ. ವಾಪಸಾಗುವ ಮಾರ್ಗದಲ್ಲಿಯೂ ಮೇಲ್ಕಂಡ ನಿಲ್ದಾಣಗಳ ಮೂಲಕವೇ ರೈಲು ಸಂಚರಿಸುತ್ತದೆ.<br /> <br /> <strong>ರೈಲು ರದ್ದು<br /> </strong> ಉಪ ಮಾರ್ಗ, ಸೇತುವೆ ಸೇರಿದಂತೆ ಕೆಲವು ತುರ್ತು ಕಾಮಗಾರಿ ಆರಂಭಿಸಿರುವುದರಿಂದ ಮೈಸೂರು ವಿಭಾಗದ ಶಿವಮೊಗ್ಗ- ಮೈಸೂರು ಹಾಗೂ ಮೈಸೂರು- ಶಿವಮೊಗ್ಗ ರೈಲು ಸಂಚಾರ ರದ್ದು ಪಡಿಸಲಾಗಿದೆ. <br /> <br /> ಇನ್ನು ಕೆಲವು ರೈಲುಗಳ ಸಂಚಾರವನ್ನು ಅರಸೀಕೆರೆಯಿಂದ ಮಂದಗೆರೆವರೆಗೆ ಮಾತ್ರ ನಿಗದಿಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ನೈರುತ್ಯ ರೈಲ್ವೆಯು ಮೈಸೂರು- ಸಾಯಿನಗರ ಶಿರಡಿ- ಮೈಸೂರು ನಡುವೆ ಈಗಾಗಲೇ ಸಂಚರಿಸುತ್ತಿರುವ (ಸಂಖ್ಯೆ 06201/06202) ವಿಶೇಷ ಸಾಪ್ತಾಹಿಕ ರೈಲುಗಳ ಸಂಚಾರವನ್ನು ಮಾರ್ಚ್ 26ರವರೆಗೆ ಮುಂದುವರಿಸಲು ತೀರ್ಮಾನಿಸಿದೆ.<br /> <br /> ಪ್ರತಿ ಸೋಮವಾರ ಬೆಳಿಗ್ಗೆ 5.30ಕ್ಕೆ ಮೈಸೂರಿನಿಂದ ಹೊರಡುವ ರೈಲು (ಸಂಖ್ಯೆ 06201) ಶಿರಡಿಯನ್ನು ಮಂಗಳವಾರ 11.30ಕ್ಕೆ ತಲುಪುತ್ತದೆ. ಬೆಂಗಳೂರು, ಧರ್ಮಾವರಂ, ಗುಂತಕಲ್, ಬಳ್ಳಾರಿ, ಹೊಸಪೇಟೆ, ಗದಗ, ವಿಜಾಪುರ ಮತ್ತು ಸೊಲ್ಲಾಪುರ ಮಾರ್ಗವಾಗಿ ಈ ರೈಲು ಸಂಚರಿಸಲಿದೆ.<br /> <br /> ಶಿರಡಿಯಿಂದ ಪ್ರತಿ ಮಂಗಳವಾರ ಹೊರಡುವ ರೈಲು (ಸಂಖ್ಯೆ 06202) ಗುರುವಾರ ಬೆಳಿಗ್ಗೆ 7.10ಕ್ಕೆ ಮೈಸೂರು ತಲುಪುತ್ತದೆ. ವಾಪಸಾಗುವ ಮಾರ್ಗದಲ್ಲಿಯೂ ಮೇಲ್ಕಂಡ ನಿಲ್ದಾಣಗಳ ಮೂಲಕವೇ ರೈಲು ಸಂಚರಿಸುತ್ತದೆ.<br /> <br /> <strong>ರೈಲು ರದ್ದು<br /> </strong> ಉಪ ಮಾರ್ಗ, ಸೇತುವೆ ಸೇರಿದಂತೆ ಕೆಲವು ತುರ್ತು ಕಾಮಗಾರಿ ಆರಂಭಿಸಿರುವುದರಿಂದ ಮೈಸೂರು ವಿಭಾಗದ ಶಿವಮೊಗ್ಗ- ಮೈಸೂರು ಹಾಗೂ ಮೈಸೂರು- ಶಿವಮೊಗ್ಗ ರೈಲು ಸಂಚಾರ ರದ್ದು ಪಡಿಸಲಾಗಿದೆ. <br /> <br /> ಇನ್ನು ಕೆಲವು ರೈಲುಗಳ ಸಂಚಾರವನ್ನು ಅರಸೀಕೆರೆಯಿಂದ ಮಂದಗೆರೆವರೆಗೆ ಮಾತ್ರ ನಿಗದಿಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>