<p>ಕೆಂಗೇರಿ ಉಪನಗರದ ಕೆಎಚ್ಬಿ ಬಡಾವಣೆಯ (ಶಿರ್ಕೆ ಬಡಾವಣೆ) ಸುತ್ತಮುತ್ತ ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ಈಗ ಬೇರೆ ಬೇರೆ ಬಡಾವಣೆಗಳು ತಲೆ ಎತ್ತಿವೆ. <br /> <br /> ಜೊತೆಗೆ ರಿಂಗ್ ರೋಡ್ ಇರುವುದರಿಂದ ಕೆಲವು ವರ್ಷಗಳಿಂದ ಅನೇಕ ಕಡೆಗೆ ಬಸ್ ಸೌಲಭ್ಯವಿತ್ತು. ಇತ್ತೀಚೆಗೆ ಇಲ್ಲಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕಿದ್ದ 222ಎ ಎಫ್ ಕಣ್ಮರೆಯಾಗಿದೆ. ಜೊತೆಗೆ ಒಂದರ ಹಿಂದೆ ಒಂದು ಬರುತ್ತಿದ್ದ ಬನಶಂಕರಿ-ಬನಶಂಕರಿ ಸುತ್ತುವಳಿ 500 ಮತ್ತು 600 ನಂಬರಿನ ಬಸ್ಸುಗಳು ನಾಪತ್ತೆಯಾಗಿವೆ.<br /> <br /> 405 ಡಿ ಮತ್ತು ಹೊಸಕೋಟೆಗೆ ಇದ್ದ 317 ಕಣ್ಮರೆಯಾಗಿ ಎರಡು ವರ್ಷವಾಯಿತು. ಅನೇಕ ಪ್ರದೇಶಗಳಿಗೆ ಅನುಕೂಲವಾಗಿದ್ದ 405 ಸರಣಿಯೂ ಹೋಗಿ ನಾಲ್ಕೈದು ವರ್ಷವಾಯಿತು.<br /> <br /> ಜನಸಂಖ್ಯೆ ಹೆಚ್ಚಾಗುತ್ತಿದ್ದು, ಜನರ ಸಂಚಾರವೂ ಹೆಚ್ಚುತ್ತಿದ್ದರೂ ಈ ಪ್ರದೇಶಕ್ಕೆ ಇದ್ದ ಅನೇಕ ಬಸ್ ಸೌಲಭ್ಯವನ್ನು ಏಕೆ ಕಡಿಮೆ ಮಾಡಲಾಗಿದೆ ಎಂಬುದು ತಿಳಿಯದು. <br /> <br /> ಜನರು ಈಗ ಮೆಜೆಸ್ಟಿಕ್, ಮಾರುಕಟ್ಟೆ, ಶಿವಾಜಿನಗರ ಮತ್ತು ಕೆ.ಆರ್ ಮಾರುಕಟ್ಟೆಗೆ ಹೋಗಲು ದಿನ ನಿತ್ಯ ಪರದಾಡುವಂತಾಗಿದೆ. ಈ ಸಮಸ್ಯೆಯ ಬಗೆಗೆ ಪರಿಶೀಲಿಸಿ ಈ ಪ್ರದೇಶಗಳಿಗೆ ಹಿಂದಿನಂತೆ ಹೆಚ್ಚು ಬಸ್ ಸೌಲಭ್ಯ ಒದಗಿಸಲು ಬಿಎಂಟಿಸಿ ಆಡಳಿತಕ್ಕೆ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಂಗೇರಿ ಉಪನಗರದ ಕೆಎಚ್ಬಿ ಬಡಾವಣೆಯ (ಶಿರ್ಕೆ ಬಡಾವಣೆ) ಸುತ್ತಮುತ್ತ ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ಈಗ ಬೇರೆ ಬೇರೆ ಬಡಾವಣೆಗಳು ತಲೆ ಎತ್ತಿವೆ. <br /> <br /> ಜೊತೆಗೆ ರಿಂಗ್ ರೋಡ್ ಇರುವುದರಿಂದ ಕೆಲವು ವರ್ಷಗಳಿಂದ ಅನೇಕ ಕಡೆಗೆ ಬಸ್ ಸೌಲಭ್ಯವಿತ್ತು. ಇತ್ತೀಚೆಗೆ ಇಲ್ಲಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕಿದ್ದ 222ಎ ಎಫ್ ಕಣ್ಮರೆಯಾಗಿದೆ. ಜೊತೆಗೆ ಒಂದರ ಹಿಂದೆ ಒಂದು ಬರುತ್ತಿದ್ದ ಬನಶಂಕರಿ-ಬನಶಂಕರಿ ಸುತ್ತುವಳಿ 500 ಮತ್ತು 600 ನಂಬರಿನ ಬಸ್ಸುಗಳು ನಾಪತ್ತೆಯಾಗಿವೆ.<br /> <br /> 405 ಡಿ ಮತ್ತು ಹೊಸಕೋಟೆಗೆ ಇದ್ದ 317 ಕಣ್ಮರೆಯಾಗಿ ಎರಡು ವರ್ಷವಾಯಿತು. ಅನೇಕ ಪ್ರದೇಶಗಳಿಗೆ ಅನುಕೂಲವಾಗಿದ್ದ 405 ಸರಣಿಯೂ ಹೋಗಿ ನಾಲ್ಕೈದು ವರ್ಷವಾಯಿತು.<br /> <br /> ಜನಸಂಖ್ಯೆ ಹೆಚ್ಚಾಗುತ್ತಿದ್ದು, ಜನರ ಸಂಚಾರವೂ ಹೆಚ್ಚುತ್ತಿದ್ದರೂ ಈ ಪ್ರದೇಶಕ್ಕೆ ಇದ್ದ ಅನೇಕ ಬಸ್ ಸೌಲಭ್ಯವನ್ನು ಏಕೆ ಕಡಿಮೆ ಮಾಡಲಾಗಿದೆ ಎಂಬುದು ತಿಳಿಯದು. <br /> <br /> ಜನರು ಈಗ ಮೆಜೆಸ್ಟಿಕ್, ಮಾರುಕಟ್ಟೆ, ಶಿವಾಜಿನಗರ ಮತ್ತು ಕೆ.ಆರ್ ಮಾರುಕಟ್ಟೆಗೆ ಹೋಗಲು ದಿನ ನಿತ್ಯ ಪರದಾಡುವಂತಾಗಿದೆ. ಈ ಸಮಸ್ಯೆಯ ಬಗೆಗೆ ಪರಿಶೀಲಿಸಿ ಈ ಪ್ರದೇಶಗಳಿಗೆ ಹಿಂದಿನಂತೆ ಹೆಚ್ಚು ಬಸ್ ಸೌಲಭ್ಯ ಒದಗಿಸಲು ಬಿಎಂಟಿಸಿ ಆಡಳಿತಕ್ಕೆ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>