<p>ವಿವೇಕನಗರ ಮುಂದುವರೆದ ಬಡಾವಣೆ, ಈಜಿಪುರದ ಮುಖ್ಯರಸ್ತೆಯ (ಶಾಲಿಮಾರ್ ಹೋಟೆಲ್) ಪಕ್ಕದ 2ನೇ ಅಡ್ಡರಸ್ತೆಯಲ್ಲಿ ಚರಂಡಿ ನೀರು ನಿರಂತರವಾಗಿ ಹರಿಯುತ್ತಿದೆ. ಒಂದು ಕಡೆಯಿಂದ ಮೋರಿಯಲ್ಲಿ ಹರಿಯುತ್ತಿರುವ ಒಳಚರಂಡಿಯ ತ್ಯಾಜ್ಯ ನೀರು ಮತ್ತೆ ಮೋರಿಗೆ ಅಥವಾ ಚೇಂಬರಿಗೆ ಹರಿದುಹೋಗಲು ಈ ರಸ್ತೆಗೆ ಮೋರಿಯೇ ಇಲ್ಲದೆ ರಸ್ತೆ ಮೇಲೆಲ್ಲಾ ಹರಿಯುತ್ತಿದೆ. ನಾಗರಿಕರು ಈ ತ್ಯಾಜ್ಯ ನೀರನ್ನು ತುಳಿದುಕೊಂಡೇ ರಸ್ತೆ ದಾಟಬೇಕಾಗಿದೆ.<br /> <br /> ಅದರಲ್ಲೂ ದ್ವಿಚಕ್ರ ವಾಹನ, ಕಾರುಗಳು ಬಂದಾಗ ಪಾದಚಾರಿಗಳ ಮೇಲೆ ಮಲಿನ ನೀರು ಸಿಡಿಯುತ್ತದೆ. ಅಲ್ಲದೆ 1ನೇ ಕ್ರಾಸ್ನಲ್ಲಿ ಒಳಚರಂಡಿ ಪೈಪುಗಳು ತುಂಬಾ ಹಳೆಯದಾಗಿದ್ದು, ಈ ರಸ್ತೆಗೆ ಹೊಸ ಪೈಪುಗಳನ್ನು ಅಳವಡಿಸಬೇಕೆಂದು ಹಲವಾರು ಬಾರಿ ಕೌನ್ಸಿಲರ್, ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಹೊಸ ಪೈಪುಗಳನ್ನು ಅಳವಡಿಸಿಲ್ಲ. ಹಾಕಿಸುತ್ತೇವೆ ಎಂದು ಭರವಸೆ ನೀಡುತ್ತಲೇ ಬಂದಿದ್ದಾರೆ. ಮೇಯರ್ ಈ ಸಮಸ್ಯೆ ಕುರಿತು ಗಮನಿಸಬೇಕೆಂದು ಹಾಗೂ ಶೀಘ್ರವೇ ಒಳಚರಂಡಿಗೆ ಹೊಸ ಪೈಪುಗಳನ್ನು ಹಾಕಿಸಲು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.<br /> <strong>–ಎಲ್. ನಾರಾಯಣ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿವೇಕನಗರ ಮುಂದುವರೆದ ಬಡಾವಣೆ, ಈಜಿಪುರದ ಮುಖ್ಯರಸ್ತೆಯ (ಶಾಲಿಮಾರ್ ಹೋಟೆಲ್) ಪಕ್ಕದ 2ನೇ ಅಡ್ಡರಸ್ತೆಯಲ್ಲಿ ಚರಂಡಿ ನೀರು ನಿರಂತರವಾಗಿ ಹರಿಯುತ್ತಿದೆ. ಒಂದು ಕಡೆಯಿಂದ ಮೋರಿಯಲ್ಲಿ ಹರಿಯುತ್ತಿರುವ ಒಳಚರಂಡಿಯ ತ್ಯಾಜ್ಯ ನೀರು ಮತ್ತೆ ಮೋರಿಗೆ ಅಥವಾ ಚೇಂಬರಿಗೆ ಹರಿದುಹೋಗಲು ಈ ರಸ್ತೆಗೆ ಮೋರಿಯೇ ಇಲ್ಲದೆ ರಸ್ತೆ ಮೇಲೆಲ್ಲಾ ಹರಿಯುತ್ತಿದೆ. ನಾಗರಿಕರು ಈ ತ್ಯಾಜ್ಯ ನೀರನ್ನು ತುಳಿದುಕೊಂಡೇ ರಸ್ತೆ ದಾಟಬೇಕಾಗಿದೆ.<br /> <br /> ಅದರಲ್ಲೂ ದ್ವಿಚಕ್ರ ವಾಹನ, ಕಾರುಗಳು ಬಂದಾಗ ಪಾದಚಾರಿಗಳ ಮೇಲೆ ಮಲಿನ ನೀರು ಸಿಡಿಯುತ್ತದೆ. ಅಲ್ಲದೆ 1ನೇ ಕ್ರಾಸ್ನಲ್ಲಿ ಒಳಚರಂಡಿ ಪೈಪುಗಳು ತುಂಬಾ ಹಳೆಯದಾಗಿದ್ದು, ಈ ರಸ್ತೆಗೆ ಹೊಸ ಪೈಪುಗಳನ್ನು ಅಳವಡಿಸಬೇಕೆಂದು ಹಲವಾರು ಬಾರಿ ಕೌನ್ಸಿಲರ್, ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಹೊಸ ಪೈಪುಗಳನ್ನು ಅಳವಡಿಸಿಲ್ಲ. ಹಾಕಿಸುತ್ತೇವೆ ಎಂದು ಭರವಸೆ ನೀಡುತ್ತಲೇ ಬಂದಿದ್ದಾರೆ. ಮೇಯರ್ ಈ ಸಮಸ್ಯೆ ಕುರಿತು ಗಮನಿಸಬೇಕೆಂದು ಹಾಗೂ ಶೀಘ್ರವೇ ಒಳಚರಂಡಿಗೆ ಹೊಸ ಪೈಪುಗಳನ್ನು ಹಾಕಿಸಲು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.<br /> <strong>–ಎಲ್. ನಾರಾಯಣ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>