<p><strong>ಬೆಂಗಳೂರು:</strong> ನಗರದ ಸುಂಕದಕಟ್ಟೆಯಲ್ಲಿರುವ ಕಾರ್ಖಾನೆಯೊಂದರಲ್ಲಿ ಗುರುವಾರ ಜೀನ್ಸ್ ಪ್ಯಾಂಟ್ ಶೇಡ್ ಮಾಡುವ ಯಂತ್ರದ ಬಿಡಿ ಭಾಗ ತಲೆಗೆ ಹೊಡೆದು ಮಣಿಕುಮಾರ್ ರಾಯ್ (45) ಎಂಬುವರು ಸಾವನ್ನಪ್ಪಿದ್ದಾರೆ.<br /> <br /> ಅಸ್ಸಾಂ ಮೂಲದ ಮಣಿಕುಮಾರ್, ಆರು ದಿನಗಳ ಹಿಂದಷ್ಟೆ ನಗರಕ್ಕೆ ಬಂದು ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಕಾರ್ಖಾನೆಯ ಮಾಲೀಕರು ಇತ್ತೀಚೆಗೆ ಬಟ್ಟೆ ಒಣಗಿಸುವ ಹಾಗೂ ಜೀನ್ಸ್ ಪ್ಯಾಂಟ್ಗಳನ್ನು ಶೇಡ್ ಮಾಡುವ ಎಂಟು ಯಂತ್ರಗಳನ್ನು ಶಬೀರ್ ಎಂಬುವರಿಂದ ಖರೀದಿಸಿದ್ದರು.</p>.<p>ಬೆಳಿಗ್ಗೆ 11 ಗಂಟೆ ಸುಮಾರಿಗೆ ಯಂತ್ರವೊಂದರಲ್ಲಿ ಪ್ಯಾಂಟ್ ಶೇಡ್ ಮಾಡುತ್ತಿದ್ದ ಮಣಿಕುಮಾರ್ ಅವರ ತಲೆಗೆ ಯಂತ್ರದ ಬಿಡಿಭಾಗ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ಸಹ ಕಾರ್ಮಿಕರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರು.<br /> <br /> ಆದರೆ, ಮಣಿಕುಮಾರ್ ಮಾರ್ಗ ಮಧ್ಯೆಯೇ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದರು. ಯಂತ್ರದಲ್ಲಿನ ಲೋಪದಿಂದ ಈ ದುರ್ಘಟನೆ ನಡೆದಿದ್ದು, ಘಟನೆ ಸಂಬಂಧ ಶಬೀರ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ (ಐಪಿಸಿ 304ಎ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಸುಂಕದಕಟ್ಟೆಯಲ್ಲಿರುವ ಕಾರ್ಖಾನೆಯೊಂದರಲ್ಲಿ ಗುರುವಾರ ಜೀನ್ಸ್ ಪ್ಯಾಂಟ್ ಶೇಡ್ ಮಾಡುವ ಯಂತ್ರದ ಬಿಡಿ ಭಾಗ ತಲೆಗೆ ಹೊಡೆದು ಮಣಿಕುಮಾರ್ ರಾಯ್ (45) ಎಂಬುವರು ಸಾವನ್ನಪ್ಪಿದ್ದಾರೆ.<br /> <br /> ಅಸ್ಸಾಂ ಮೂಲದ ಮಣಿಕುಮಾರ್, ಆರು ದಿನಗಳ ಹಿಂದಷ್ಟೆ ನಗರಕ್ಕೆ ಬಂದು ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಕಾರ್ಖಾನೆಯ ಮಾಲೀಕರು ಇತ್ತೀಚೆಗೆ ಬಟ್ಟೆ ಒಣಗಿಸುವ ಹಾಗೂ ಜೀನ್ಸ್ ಪ್ಯಾಂಟ್ಗಳನ್ನು ಶೇಡ್ ಮಾಡುವ ಎಂಟು ಯಂತ್ರಗಳನ್ನು ಶಬೀರ್ ಎಂಬುವರಿಂದ ಖರೀದಿಸಿದ್ದರು.</p>.<p>ಬೆಳಿಗ್ಗೆ 11 ಗಂಟೆ ಸುಮಾರಿಗೆ ಯಂತ್ರವೊಂದರಲ್ಲಿ ಪ್ಯಾಂಟ್ ಶೇಡ್ ಮಾಡುತ್ತಿದ್ದ ಮಣಿಕುಮಾರ್ ಅವರ ತಲೆಗೆ ಯಂತ್ರದ ಬಿಡಿಭಾಗ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ಸಹ ಕಾರ್ಮಿಕರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರು.<br /> <br /> ಆದರೆ, ಮಣಿಕುಮಾರ್ ಮಾರ್ಗ ಮಧ್ಯೆಯೇ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದರು. ಯಂತ್ರದಲ್ಲಿನ ಲೋಪದಿಂದ ಈ ದುರ್ಘಟನೆ ನಡೆದಿದ್ದು, ಘಟನೆ ಸಂಬಂಧ ಶಬೀರ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ (ಐಪಿಸಿ 304ಎ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>