<p><strong>ಯಕ್ಷೋತ್ಸವ<br /> </strong><br /> ಬನಶಂಕರಿಯ ಯಕ್ಷಸಂಪದ ಸಂಸ್ಥೆಯಿಂದ ಬುಧವಾರ ಮತ್ತು ಗುರುವಾರ ‘ಯಕ್ಷೋತ್ಸವ’. ಇದರ ಅಂಗವಾಗಿ ಬುಧವಾರ ‘ವೀರ ವೃಷಸೇನ’ ಮತ್ತು ‘ಪ್ರಮೀಳಾರ್ಜುನ’ ಯಕ್ಷಗಾನ ಪ್ರದರ್ಶಿಸಲಿದೆ.<br /> <br /> <strong>ಹಿಮ್ಮೇಳ: </strong>ಗುಂಡ್ಮಿ ರಘುರಾಮ್, ನಾರಾಯಣ ಹೆಬ್ಬಾರ ಕಲಚೆ, ಶ್ರೀನಿವಾಸಪ್ರಭು, ಲಕ್ಷ್ಮೀನಾರಾಯಣ ನಾವುಡ. ಕಲಾವಿದರು: ನಾಗರಾಜ ಶೇರೆಗಾರ್, ಸತ್ಯನಾರಾಯಣ ರಾವ್, ಪ್ರಕಾಶ್ ಕಮಲಶಿಲೆ, ಪ್ರಶಾಂತ್ ಹೆಗಡೆ, ವಿಶ್ವನಾಥ ಅಡಿಗ, ರಾಧಾಕೃಷ್ಣ ಬೆಳಿಯೂರ್, ಶ್ರೀಪಾದ ಹೆಗಡೆ, ನಾಗರಾಜ್ ಪಂಚಲಿಂಗ, ನಾಗರಾಜ್ ತಂತ್ರಿ, ಅನಂತ್ ಭಟ್, ಆನಂದ ಭಟ್. ನಿರ್ದೇಶನ: ಎ. ಶ್ರೀನಿವಾಸ ಅಲ್ಸೆ.<br /> <br /> <strong>ಸ್ಥಳ:</strong> ಶ್ರೀ ವಾದಿರಾಜ ಕಲ್ಯಾಣ ಮಂದಿರ, ನೆಟ್ಟಕಲ್ಲಪ್ಪ ವೃತ್ತ, ಬಸವನಗುಡಿ. ಸಂಜೆ 5.30.<br /> <br /> <br /> <strong>ಕೂಚಿಪುಡಿ ‘ದಿವ್ಯ’ಪ್ರತಿಭೆ</strong><br /> ಎಡಿಎ ರಂಗಮಂದಿರಲ್ಲಿ ಇತ್ತೀಚೆಗೆ ನಡೆದ ದಿವ್ಯಾ ನಟರಾಜ್ ಅವರ ಕೂಚಿಪುಡಿ ರಂಗಪ್ರವೇಶ, ಈ ನೃತ್ಯ ಪ್ರಕಾರದಲ್ಲಿ ಆಕೆ ಸಾಧಿಸಿರುವ ಹಿಡಿತಕ್ಕೆ ಸಾಕ್ಷಿಯಾಗಿತ್ತು. <br /> <br /> ದಿವ್ಯಾ, ನಗರದ ಪ್ರಸಿದ್ಧ ಕೂಚಿಪುಡಿ ನೃತ್ಯಶಾಲೆಯಾದ ನಾಟ್ಯಸರಸ್ವತಿ ಇನ್ಸ್ಟಿಟ್ಯೂಟ್ನ ಡಾ. ಸರಸ್ವತಿ ರಜತೇಶ್ ಅವರ ಶಿಷ್ಯೆ. ಹಲವು ನೃತ್ಯ ಉತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ. ಆರ್ಸಿ ಕಾಲೇಜಿನಲ್ಲಿ ಫೈನಾನ್ಸ್ ಮತ್ತು ಅಕೌಂಟಿಂಗ್ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. <br /> <br /> ಗಣೇಶ ಕೌತವಂನೊಂದಿಗೆ ಕಾರ್ಯಕ್ರಮ ಆರಂಭಿಸಿ ಪುರಂದರದಾಸರ ಕೃತಿಯಾದ ‘ಎಲ್ಲಿರುವೆಯೊ ರಂಗಾ’ವನ್ನು ಮನೋಜ್ಞವಾಗಿ ಪ್ರದರ್ಶಿಸಿದರು. ಗಜೇಂದ್ರ ಮೋಕ್ಷ, ಪ್ರಹ್ಲಾದ ಕಥನ, ದ್ರೌಪದಿ ವಸ್ತ್ರಾಪಹರಣಂ, ವಿಶ್ವರೂಪ ದರ್ಶನ ಮುಂತಾದ ದೃಶ್ಯಗಳನ್ನು ಮನಮುಟ್ಟುವಂತೆ ಅಭಿನಯಿಸಿದರು. ಆನಂತರ ಸತ್ಯಭಾಮ ಪ್ರವೇಶ, ಶಿವ ತಾಂಡವಗಳನ್ನು ಅಭಿನಯಿಸಿದರು. <br /> <br /> ಡಾ. ಸರಸ್ವತಿ ಮತ್ತು ವೇದಾಂತಂ ರಾಮು (ನಟುವಾಂಗ), ರಮಾ ಜಗನ್ನಾಥ್ (ಸಂಗೀತ), ಗಣೇಶ (ಮೃದಂಗ), ರಾಜಗೋಪಾಲ (ರಿದಂ), ಬಾಲಕೃಷ್ಣ (ಪಿಟಿಲು), ಗೋಪಾಲ (ಕೊಳಲು) ಕಾರ್ಯಕ್ರಮದ ಗಾಂಭೀರ್ಯ ಹೆಚ್ಚಿಸಿದರು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಕ್ಷೋತ್ಸವ<br /> </strong><br /> ಬನಶಂಕರಿಯ ಯಕ್ಷಸಂಪದ ಸಂಸ್ಥೆಯಿಂದ ಬುಧವಾರ ಮತ್ತು ಗುರುವಾರ ‘ಯಕ್ಷೋತ್ಸವ’. ಇದರ ಅಂಗವಾಗಿ ಬುಧವಾರ ‘ವೀರ ವೃಷಸೇನ’ ಮತ್ತು ‘ಪ್ರಮೀಳಾರ್ಜುನ’ ಯಕ್ಷಗಾನ ಪ್ರದರ್ಶಿಸಲಿದೆ.<br /> <br /> <strong>ಹಿಮ್ಮೇಳ: </strong>ಗುಂಡ್ಮಿ ರಘುರಾಮ್, ನಾರಾಯಣ ಹೆಬ್ಬಾರ ಕಲಚೆ, ಶ್ರೀನಿವಾಸಪ್ರಭು, ಲಕ್ಷ್ಮೀನಾರಾಯಣ ನಾವುಡ. ಕಲಾವಿದರು: ನಾಗರಾಜ ಶೇರೆಗಾರ್, ಸತ್ಯನಾರಾಯಣ ರಾವ್, ಪ್ರಕಾಶ್ ಕಮಲಶಿಲೆ, ಪ್ರಶಾಂತ್ ಹೆಗಡೆ, ವಿಶ್ವನಾಥ ಅಡಿಗ, ರಾಧಾಕೃಷ್ಣ ಬೆಳಿಯೂರ್, ಶ್ರೀಪಾದ ಹೆಗಡೆ, ನಾಗರಾಜ್ ಪಂಚಲಿಂಗ, ನಾಗರಾಜ್ ತಂತ್ರಿ, ಅನಂತ್ ಭಟ್, ಆನಂದ ಭಟ್. ನಿರ್ದೇಶನ: ಎ. ಶ್ರೀನಿವಾಸ ಅಲ್ಸೆ.<br /> <br /> <strong>ಸ್ಥಳ:</strong> ಶ್ರೀ ವಾದಿರಾಜ ಕಲ್ಯಾಣ ಮಂದಿರ, ನೆಟ್ಟಕಲ್ಲಪ್ಪ ವೃತ್ತ, ಬಸವನಗುಡಿ. ಸಂಜೆ 5.30.<br /> <br /> <br /> <strong>ಕೂಚಿಪುಡಿ ‘ದಿವ್ಯ’ಪ್ರತಿಭೆ</strong><br /> ಎಡಿಎ ರಂಗಮಂದಿರಲ್ಲಿ ಇತ್ತೀಚೆಗೆ ನಡೆದ ದಿವ್ಯಾ ನಟರಾಜ್ ಅವರ ಕೂಚಿಪುಡಿ ರಂಗಪ್ರವೇಶ, ಈ ನೃತ್ಯ ಪ್ರಕಾರದಲ್ಲಿ ಆಕೆ ಸಾಧಿಸಿರುವ ಹಿಡಿತಕ್ಕೆ ಸಾಕ್ಷಿಯಾಗಿತ್ತು. <br /> <br /> ದಿವ್ಯಾ, ನಗರದ ಪ್ರಸಿದ್ಧ ಕೂಚಿಪುಡಿ ನೃತ್ಯಶಾಲೆಯಾದ ನಾಟ್ಯಸರಸ್ವತಿ ಇನ್ಸ್ಟಿಟ್ಯೂಟ್ನ ಡಾ. ಸರಸ್ವತಿ ರಜತೇಶ್ ಅವರ ಶಿಷ್ಯೆ. ಹಲವು ನೃತ್ಯ ಉತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ. ಆರ್ಸಿ ಕಾಲೇಜಿನಲ್ಲಿ ಫೈನಾನ್ಸ್ ಮತ್ತು ಅಕೌಂಟಿಂಗ್ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. <br /> <br /> ಗಣೇಶ ಕೌತವಂನೊಂದಿಗೆ ಕಾರ್ಯಕ್ರಮ ಆರಂಭಿಸಿ ಪುರಂದರದಾಸರ ಕೃತಿಯಾದ ‘ಎಲ್ಲಿರುವೆಯೊ ರಂಗಾ’ವನ್ನು ಮನೋಜ್ಞವಾಗಿ ಪ್ರದರ್ಶಿಸಿದರು. ಗಜೇಂದ್ರ ಮೋಕ್ಷ, ಪ್ರಹ್ಲಾದ ಕಥನ, ದ್ರೌಪದಿ ವಸ್ತ್ರಾಪಹರಣಂ, ವಿಶ್ವರೂಪ ದರ್ಶನ ಮುಂತಾದ ದೃಶ್ಯಗಳನ್ನು ಮನಮುಟ್ಟುವಂತೆ ಅಭಿನಯಿಸಿದರು. ಆನಂತರ ಸತ್ಯಭಾಮ ಪ್ರವೇಶ, ಶಿವ ತಾಂಡವಗಳನ್ನು ಅಭಿನಯಿಸಿದರು. <br /> <br /> ಡಾ. ಸರಸ್ವತಿ ಮತ್ತು ವೇದಾಂತಂ ರಾಮು (ನಟುವಾಂಗ), ರಮಾ ಜಗನ್ನಾಥ್ (ಸಂಗೀತ), ಗಣೇಶ (ಮೃದಂಗ), ರಾಜಗೋಪಾಲ (ರಿದಂ), ಬಾಲಕೃಷ್ಣ (ಪಿಟಿಲು), ಗೋಪಾಲ (ಕೊಳಲು) ಕಾರ್ಯಕ್ರಮದ ಗಾಂಭೀರ್ಯ ಹೆಚ್ಚಿಸಿದರು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>