<p><strong>ಕೊಪ್ಪಳ</strong>: ನಗರದ ಜನತೆ ಇದೀಗ ಆರೋಗ್ಯ ಕಾಳಜಿಗೆ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. ಅದಕ್ಕೊಂದು ಹೊಸ ಸೇರ್ಪಡೆ ಯೋಗಾಸನ.<br /> ನಗರದ ವಿವಿಧ ಭಾಗದಲ್ಲಿ ಬೆಳಿಗ್ಗೆ, ಸಂಜೆ ಯೋಗಾಸನ ನಿರತರು ಕಾಣಸಿಗುತ್ತಾರೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಬಂದ ಮೇಲಂತೂ ಇದಕ್ಕೊಂದು ವ್ಯವಸ್ಥಿತ ರೂಪ ಸಿಕ್ಕಿದೆ.<br /> <br /> ನಗರದಲ್ಲಿ ಪತಂಜಲಿ ಯೋಗ ಸಮಿತಿ, ರಾಮಕೃಷ್ಣ ವಿವೇಕಾಶ್ರಮದ ಸಹಯೋಗದ ಶಿಬಿರಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಪತ್ರಕರ್ತ ಚಾಮರಾಜ ಸವಡಿ ನೇತೃತ್ವದ ತಂಡಗಳು ಅಲ್ಲಲ್ಲಿ ಯೋಗಾಭ್ಯಾಸಿಗಳಿಗೆ ನಿರಂತರ ವೇದಿಕೆ ಒದಗಿಸಿವೆ.<br /> <br /> ಯೋಗ ದಿನಾಚರಣೆ ಆರಂಭವಾಗುತ್ತಿದ್ದಂತೆಯೇ ಕೆಲವು ಯೋಗ ತಂಡಗಳು ಹುಟ್ಟಿಕೊಂಡು ಆಚರಣೆ ಮುಗಿಯುತ್ತಿದ್ದಂತೆಯೇ ಹಾಗೇ ಮರೆಯಾದದ್ದೂ ಈ ಕ್ಷೇತ್ರದ ಇನ್ನೊಂದು ಮುಖ. ಉಳಿದಂತೆ ಏಕಾಂಗಿಯಾಗಿ ಅಭ್ಯಾಸ ನಿರತರಾಗಿರುವವರಿಗೂ ಕೊರತೆ ಇಲ್ಲ. ಒಟ್ಟಿನಲ್ಲಿ ಈ ವರ್ಷ ಯೋಗಾಭ್ಯಾಸಕ್ಕೆ ನಗರದ ಜನತೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ.<br /> <br /> ನಗರದ ಸಾರ್ವಜನಿಕ ಮೈದಾನದಲ್ಲಿ ಇತ್ತೀಚೆಗೆ ಧಾರವಾಡ ಮನಗುಂಡಿಯ ಗುರುಬಸವ ಮಹಾಮನೆಯ ನಿಸರ್ಗ ಚಿಕಿತ್ಸಾ ತಜ್ಞ ಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಯೋಗ ಮತ್ತು ನಿಸರ್ಗ ಚಿಕಿತ್ಸೆಯ ಉಚಿತ ಶಿಬಿರ ನಡೆಯಿತು.</p>.<p>ನೂರಾರು ಮಂದಿ ಹಾಜರಾಗಿದ್ದೂ ಅಲ್ಲದೇ ಆರೋಗ್ಯ ಸಂಬಂಧಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. 21 ದಿನಗಳ ಉಪವಾಸ ಮತ್ತು ಜಲ ಚಿಕಿತ್ಸೆಯ ಪರಿಣಾಮ ಅತಿ ತೂಕ ಇಳಿಸಿಕೊಳ್ಳಲು ನೆರವಾಯಿತು ಎಂಬುದು ಫಲಿತಾಂಶ ಪಡೆದವರ ಅಭಿಮತ.<br /> <br /> ಇತ್ತ ಪತಂಜಲಿ ಯೋಗ ಸಮಿತಿ 10 ವರ್ಷಗಳಿಂದ ಜಿಲ್ಲೆಯಲ್ಲಿ ಸದ್ದಿಲ್ಲದೇ ಕಾರ್ಯನಿರ್ವಹಿಸುತ್ತಿದೆ. ಭಾಗ್ಯನಗರ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣ, ಗವಿಸಿದ್ದೇಶ್ವರ ಡಿ.ಇಡಿ ಕಾಲೇಜು ಆವರಣದಲ್ಲಿ ಶಿಬಿರ ಏರ್ಪಡಿಸಿದ್ದಾರೆ. ಈ ವರ್ಷ ಒಂದು ಹೆಜ್ಜೆ ಮುಂದುವರಿದ ಸಮಿತಿಯು ಯೋಗ ಸಹ ಶಿಕ್ಷಕರ ತರಬೇತಿ ಶಿಬಿರ ಹಮ್ಮಿಕೊಂಡಿದೆ.<br /> <br /> ಯೋಗ ಶಿಕ್ಷಕರಾಗಲು ಬಯಸುವವರಿಗೆ 100 ಗಂಟೆಗಳ ವೃತ್ತಿಪರ ತರಬೇತಿ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳ ದೈಹಿಕ ಶಿಕ್ಷಕರು,<br /> ಆಸಕ್ತರು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.<br /> <br /> ಕೇವಲ ಯೋಗ ಮಾತ್ರವಲ್ಲ. ಆಹಾರ ಪದ್ಧತಿ, ಜೀವನ ಶೈಲಿ, ರಕ್ತದಾನದ ಮಹತ್ವ, ಉಪವಾಸ ಪ್ರಯೋಜನಗಳು ಸೇರಿದಂತೆ ಆರೋಗ್ಯಕರ ಬದುಕಿನ ಹಲವು ಆಯಾಮಗಳನ್ನು ತಿಳಿಹೇಳಲಾಗುತ್ತದೆ ಎಂದು ಯೋಗ ಸಮಿತಿ ಉಪಪ್ರಭಾರಿ ಭೀಮಸೇನ ಮೇಘರಾಜ್ (ಮೊಬೈಲ್: 96637 99777).<br /> <br /> ಒತ್ತಡದ ಬದುಕು, ಬದಲಾದ ಜೀವನಶೈಲಿ, ಕಾಡುತ್ತಿರುವ ಹೊಸ ಹೊಸ ಸಮಸ್ಯೆಗಳನ್ನು ಸ್ವಲ್ಪಮಟ್ಟಿಗಾದರೂ ನಿವಾರಿಸಲು ಯೋಗಾಭ್ಯಾಸಕ್ಕೆ ಒಗ್ಗಿಕೊಂಡಿದ್ದೇವೆ ಎನ್ನುತ್ತಾರೆ ಯೋಗ ನಿರತರು.</p>.<p>*<br /> ವಿಶ್ವ ಯೋಗ ದಿನಾಚರಣೆ ಜಾರಿಗೆ ಬಂದ ಮೇಲೆ ಯೋಗಾಸಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.<br /> <em><strong>-ಭೀಮಸೇನ ಮೇಘರಾಜ್, ಉಪ ಪ್ರಭಾರಿ, ಪತಂಜಲಿ ಯೋಗ ಸಮಿತಿ ಕೊಪ್ಪಳ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ನಗರದ ಜನತೆ ಇದೀಗ ಆರೋಗ್ಯ ಕಾಳಜಿಗೆ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. ಅದಕ್ಕೊಂದು ಹೊಸ ಸೇರ್ಪಡೆ ಯೋಗಾಸನ.<br /> ನಗರದ ವಿವಿಧ ಭಾಗದಲ್ಲಿ ಬೆಳಿಗ್ಗೆ, ಸಂಜೆ ಯೋಗಾಸನ ನಿರತರು ಕಾಣಸಿಗುತ್ತಾರೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಬಂದ ಮೇಲಂತೂ ಇದಕ್ಕೊಂದು ವ್ಯವಸ್ಥಿತ ರೂಪ ಸಿಕ್ಕಿದೆ.<br /> <br /> ನಗರದಲ್ಲಿ ಪತಂಜಲಿ ಯೋಗ ಸಮಿತಿ, ರಾಮಕೃಷ್ಣ ವಿವೇಕಾಶ್ರಮದ ಸಹಯೋಗದ ಶಿಬಿರಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಪತ್ರಕರ್ತ ಚಾಮರಾಜ ಸವಡಿ ನೇತೃತ್ವದ ತಂಡಗಳು ಅಲ್ಲಲ್ಲಿ ಯೋಗಾಭ್ಯಾಸಿಗಳಿಗೆ ನಿರಂತರ ವೇದಿಕೆ ಒದಗಿಸಿವೆ.<br /> <br /> ಯೋಗ ದಿನಾಚರಣೆ ಆರಂಭವಾಗುತ್ತಿದ್ದಂತೆಯೇ ಕೆಲವು ಯೋಗ ತಂಡಗಳು ಹುಟ್ಟಿಕೊಂಡು ಆಚರಣೆ ಮುಗಿಯುತ್ತಿದ್ದಂತೆಯೇ ಹಾಗೇ ಮರೆಯಾದದ್ದೂ ಈ ಕ್ಷೇತ್ರದ ಇನ್ನೊಂದು ಮುಖ. ಉಳಿದಂತೆ ಏಕಾಂಗಿಯಾಗಿ ಅಭ್ಯಾಸ ನಿರತರಾಗಿರುವವರಿಗೂ ಕೊರತೆ ಇಲ್ಲ. ಒಟ್ಟಿನಲ್ಲಿ ಈ ವರ್ಷ ಯೋಗಾಭ್ಯಾಸಕ್ಕೆ ನಗರದ ಜನತೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ.<br /> <br /> ನಗರದ ಸಾರ್ವಜನಿಕ ಮೈದಾನದಲ್ಲಿ ಇತ್ತೀಚೆಗೆ ಧಾರವಾಡ ಮನಗುಂಡಿಯ ಗುರುಬಸವ ಮಹಾಮನೆಯ ನಿಸರ್ಗ ಚಿಕಿತ್ಸಾ ತಜ್ಞ ಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಯೋಗ ಮತ್ತು ನಿಸರ್ಗ ಚಿಕಿತ್ಸೆಯ ಉಚಿತ ಶಿಬಿರ ನಡೆಯಿತು.</p>.<p>ನೂರಾರು ಮಂದಿ ಹಾಜರಾಗಿದ್ದೂ ಅಲ್ಲದೇ ಆರೋಗ್ಯ ಸಂಬಂಧಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. 21 ದಿನಗಳ ಉಪವಾಸ ಮತ್ತು ಜಲ ಚಿಕಿತ್ಸೆಯ ಪರಿಣಾಮ ಅತಿ ತೂಕ ಇಳಿಸಿಕೊಳ್ಳಲು ನೆರವಾಯಿತು ಎಂಬುದು ಫಲಿತಾಂಶ ಪಡೆದವರ ಅಭಿಮತ.<br /> <br /> ಇತ್ತ ಪತಂಜಲಿ ಯೋಗ ಸಮಿತಿ 10 ವರ್ಷಗಳಿಂದ ಜಿಲ್ಲೆಯಲ್ಲಿ ಸದ್ದಿಲ್ಲದೇ ಕಾರ್ಯನಿರ್ವಹಿಸುತ್ತಿದೆ. ಭಾಗ್ಯನಗರ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣ, ಗವಿಸಿದ್ದೇಶ್ವರ ಡಿ.ಇಡಿ ಕಾಲೇಜು ಆವರಣದಲ್ಲಿ ಶಿಬಿರ ಏರ್ಪಡಿಸಿದ್ದಾರೆ. ಈ ವರ್ಷ ಒಂದು ಹೆಜ್ಜೆ ಮುಂದುವರಿದ ಸಮಿತಿಯು ಯೋಗ ಸಹ ಶಿಕ್ಷಕರ ತರಬೇತಿ ಶಿಬಿರ ಹಮ್ಮಿಕೊಂಡಿದೆ.<br /> <br /> ಯೋಗ ಶಿಕ್ಷಕರಾಗಲು ಬಯಸುವವರಿಗೆ 100 ಗಂಟೆಗಳ ವೃತ್ತಿಪರ ತರಬೇತಿ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳ ದೈಹಿಕ ಶಿಕ್ಷಕರು,<br /> ಆಸಕ್ತರು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.<br /> <br /> ಕೇವಲ ಯೋಗ ಮಾತ್ರವಲ್ಲ. ಆಹಾರ ಪದ್ಧತಿ, ಜೀವನ ಶೈಲಿ, ರಕ್ತದಾನದ ಮಹತ್ವ, ಉಪವಾಸ ಪ್ರಯೋಜನಗಳು ಸೇರಿದಂತೆ ಆರೋಗ್ಯಕರ ಬದುಕಿನ ಹಲವು ಆಯಾಮಗಳನ್ನು ತಿಳಿಹೇಳಲಾಗುತ್ತದೆ ಎಂದು ಯೋಗ ಸಮಿತಿ ಉಪಪ್ರಭಾರಿ ಭೀಮಸೇನ ಮೇಘರಾಜ್ (ಮೊಬೈಲ್: 96637 99777).<br /> <br /> ಒತ್ತಡದ ಬದುಕು, ಬದಲಾದ ಜೀವನಶೈಲಿ, ಕಾಡುತ್ತಿರುವ ಹೊಸ ಹೊಸ ಸಮಸ್ಯೆಗಳನ್ನು ಸ್ವಲ್ಪಮಟ್ಟಿಗಾದರೂ ನಿವಾರಿಸಲು ಯೋಗಾಭ್ಯಾಸಕ್ಕೆ ಒಗ್ಗಿಕೊಂಡಿದ್ದೇವೆ ಎನ್ನುತ್ತಾರೆ ಯೋಗ ನಿರತರು.</p>.<p>*<br /> ವಿಶ್ವ ಯೋಗ ದಿನಾಚರಣೆ ಜಾರಿಗೆ ಬಂದ ಮೇಲೆ ಯೋಗಾಸಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.<br /> <em><strong>-ಭೀಮಸೇನ ಮೇಘರಾಜ್, ಉಪ ಪ್ರಭಾರಿ, ಪತಂಜಲಿ ಯೋಗ ಸಮಿತಿ ಕೊಪ್ಪಳ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>