<p><strong>ಬೆಂಗಳೂರು:</strong> `ರಂಗಭೂಮಿಯ ಸಾವಿರಾರು ಕಲಾವಿದರಿಗೆ ಧೈರ್ಯ ತುಂಬಿದ ಸಿಜಿಕೆ, ರಂಗಕರ್ಮಿಗಳ ಆತ್ಮವಿಶ್ವಾಸದ ಪ್ರತೀಕದಂತಿದ್ದಾರೆ~ ಎಂದು ಕಲಾ ನಿರ್ದೇಶಕ ಶಶಿಧರ ಅಡಪ ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> ರಂಗ ನಿರಂತರ ಸಂಸ್ಥೆ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಿಜಿಕೆ ನೆನಪು ಹಾಗೂ `ಚೌಟಾಯನ~ ಡಿ.ಕೆ.ಚೌಟ ಅವರ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. <br /> <br /> `ರಂಗಭೂಮಿ ಒಂದು ಕಾಲದಲ್ಲಿ ಕೆಲವೇ ಮಂದಿ ಸಂಭಾವಿತರಿಗೆ ಸೇರಿತ್ತು. ಅದು ಎಲ್ಲರಿಗೂ ದಕ್ಕುವಂತೆ ಸಿಜಿಕೆ ಮಾಡಿದರು. ರಂಗಭೂಮಿಯ ಅನೇಕರ ವ್ಯಕ್ತಿತ್ವವನ್ನು ಅವರು ರೂಪಿಸಿದರು. ಒಂದು ಚೇತನವಾಗಿ ಅವರು ಸದಾ ನಮ್ಮ ಜತೆಗಿದ್ದಾರೆ~ ಎಂದರು. <br /> <br /> `ಮಾತನಾಡಿದಂತೆ ಮಾಡು ಎಂಬುದು ಸಿಜಿಕೆ ನಿಲುವಾಗಿತ್ತು. ಸುಮ್ಮನೆ ಕೂರುವುದಕ್ಕಿಂತ ಸರಿಯೋ ತಪ್ಪೋ ಏನಾದರೂ ಮಾಡು ಎಂದು ಅವರು ಪ್ರೇರೇಪಿಸುತ್ತಿದ್ದರು. ಅಂತಹ ಮಹಾನ್ ರಂಗಕರ್ಮಿಯ ಅಂತಃಸತ್ವ ರಂಗಭೂಮಿಯಲ್ಲಿ ಜೀವಂತವಾಗಿ ಉಳಿಯಬೇಕು~ ಎಂದು ಅವರು ತಿಳಿಸಿದರು. <br /> <br /> ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ ಮಾತನಾಡಿ, `ಅನೇಕ ಹೊಸ ಹೊಸ ನಾಟಕಕಾರರನ್ನು ಸಿಜಿಕೆ ಹುಟ್ಟುಹಾಕಿದರು. ಬರೆಯುವುದೇ ಇಲ್ಲ ಎಂದು ಹಠ ಹಿಡಿದಂತಿದ್ದ ಕಿ.ರಂ.ನಾಗರಾಜರಂತಹ ವಿದ್ವಾಂಸರಿಂದಲೂ ನಾಟಕಗಳನ್ನು ಬರೆಸಿದರು. ಸಿಜಿಕೆ ಅವರಿಂದಾಗಿ ಸಾಣೆಹಳ್ಳಿಯಲ್ಲಿ ರಂಗ ಚಟುವಟಿಕೆ ಅರಳಿತು. ಸುಚಿತ್ರಾ ಸಂಸ್ಥೆಯ ಅಂಗಳದಲ್ಲಿ ಪೀರ್ ಬಯಲು ರಂಗಭೂಮಿ ಮೈದಳೆಯಿತು~ ಎಂದು ಬಣ್ಣಿಸಿದರು. <br /> <br /> `ಕನಸುಗಳನ್ನು ಬಿತ್ತಿದ ಕನಸುಗಾರ ಸಿಜಿಕೆ. ರಂಗಭೂಮಿ ಪರಿಷತ್ತು ಹುಟ್ಟು ಹಾಕಬೇಕು ಎಂಬುದು ಅವರ ಕನಸಾಗಿತ್ತು. ಇದಕ್ಕಾಗಿ ಹಲವು ವರ್ಷಗಳ ಕಾಲ ಶ್ರಮಿಸಿದರು. ಆದರೆ ರಂಗಕರ್ಮಿಗಳ ದೌರ್ಬಲ್ಯಗಳಿಂದಾಗಿ ಅವರು ಕಂಡ ಅನೇಕ ಕನಸುಗಳನ್ನು ನನಸು ಮಾಡಲು ಸಾಧ್ಯವಾಗುತ್ತಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು. <br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್, `ತಮ್ಮ ಜತೆಗೆ ಅನೇಕ ಕಲಾವಿದರನ್ನು ಬೆಳೆಸಿದ ಸಿಜಿಕೆ ನೆನಪು ಅತಿ ಮುಖ್ಯವಾಗುತ್ತದೆ. ಅವರ ನೆನಪು ಚೇತೋಹಾರಿಯಾದುದು. ಸಿಜಿಕೆ ಹಾಗೂ ಡಿ.ಕೆ. ಚೌಟ ಅವರದ್ದು ಅನುರೂಪದ ಹೊಂದಾಣಿಕೆ. ಸಿಜಿಕೆ ನೆನಪಿನಲ್ಲಿ ಚೌಟ ಅವರ ನಾಟಕ ಪ್ರದರ್ಶನ ನಡೆಯುತ್ತಿರುವುದು ಸಂತಸದ ವಿಷಯ~ ಎಂದರು. <br /> <br /> ಈ ಸಂದರ್ಭದಲ್ಲಿ ರಂಗಕರ್ಮಿ ಕೆ.ಕೇಶವಲು, ನಿರ್ದೇಶಕ ಬಿ.ಜಿ.ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು.ರಕ್ತದಾನ ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಿಜಿಕೆ ಅವರ ಪತ್ನಿ ಜಯಲಕ್ಷ್ಮಿ, ರಂಗಕರ್ಮಿ ರಶ್ಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ರಂಗಭೂಮಿಯ ಸಾವಿರಾರು ಕಲಾವಿದರಿಗೆ ಧೈರ್ಯ ತುಂಬಿದ ಸಿಜಿಕೆ, ರಂಗಕರ್ಮಿಗಳ ಆತ್ಮವಿಶ್ವಾಸದ ಪ್ರತೀಕದಂತಿದ್ದಾರೆ~ ಎಂದು ಕಲಾ ನಿರ್ದೇಶಕ ಶಶಿಧರ ಅಡಪ ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> ರಂಗ ನಿರಂತರ ಸಂಸ್ಥೆ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಿಜಿಕೆ ನೆನಪು ಹಾಗೂ `ಚೌಟಾಯನ~ ಡಿ.ಕೆ.ಚೌಟ ಅವರ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. <br /> <br /> `ರಂಗಭೂಮಿ ಒಂದು ಕಾಲದಲ್ಲಿ ಕೆಲವೇ ಮಂದಿ ಸಂಭಾವಿತರಿಗೆ ಸೇರಿತ್ತು. ಅದು ಎಲ್ಲರಿಗೂ ದಕ್ಕುವಂತೆ ಸಿಜಿಕೆ ಮಾಡಿದರು. ರಂಗಭೂಮಿಯ ಅನೇಕರ ವ್ಯಕ್ತಿತ್ವವನ್ನು ಅವರು ರೂಪಿಸಿದರು. ಒಂದು ಚೇತನವಾಗಿ ಅವರು ಸದಾ ನಮ್ಮ ಜತೆಗಿದ್ದಾರೆ~ ಎಂದರು. <br /> <br /> `ಮಾತನಾಡಿದಂತೆ ಮಾಡು ಎಂಬುದು ಸಿಜಿಕೆ ನಿಲುವಾಗಿತ್ತು. ಸುಮ್ಮನೆ ಕೂರುವುದಕ್ಕಿಂತ ಸರಿಯೋ ತಪ್ಪೋ ಏನಾದರೂ ಮಾಡು ಎಂದು ಅವರು ಪ್ರೇರೇಪಿಸುತ್ತಿದ್ದರು. ಅಂತಹ ಮಹಾನ್ ರಂಗಕರ್ಮಿಯ ಅಂತಃಸತ್ವ ರಂಗಭೂಮಿಯಲ್ಲಿ ಜೀವಂತವಾಗಿ ಉಳಿಯಬೇಕು~ ಎಂದು ಅವರು ತಿಳಿಸಿದರು. <br /> <br /> ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ ಮಾತನಾಡಿ, `ಅನೇಕ ಹೊಸ ಹೊಸ ನಾಟಕಕಾರರನ್ನು ಸಿಜಿಕೆ ಹುಟ್ಟುಹಾಕಿದರು. ಬರೆಯುವುದೇ ಇಲ್ಲ ಎಂದು ಹಠ ಹಿಡಿದಂತಿದ್ದ ಕಿ.ರಂ.ನಾಗರಾಜರಂತಹ ವಿದ್ವಾಂಸರಿಂದಲೂ ನಾಟಕಗಳನ್ನು ಬರೆಸಿದರು. ಸಿಜಿಕೆ ಅವರಿಂದಾಗಿ ಸಾಣೆಹಳ್ಳಿಯಲ್ಲಿ ರಂಗ ಚಟುವಟಿಕೆ ಅರಳಿತು. ಸುಚಿತ್ರಾ ಸಂಸ್ಥೆಯ ಅಂಗಳದಲ್ಲಿ ಪೀರ್ ಬಯಲು ರಂಗಭೂಮಿ ಮೈದಳೆಯಿತು~ ಎಂದು ಬಣ್ಣಿಸಿದರು. <br /> <br /> `ಕನಸುಗಳನ್ನು ಬಿತ್ತಿದ ಕನಸುಗಾರ ಸಿಜಿಕೆ. ರಂಗಭೂಮಿ ಪರಿಷತ್ತು ಹುಟ್ಟು ಹಾಕಬೇಕು ಎಂಬುದು ಅವರ ಕನಸಾಗಿತ್ತು. ಇದಕ್ಕಾಗಿ ಹಲವು ವರ್ಷಗಳ ಕಾಲ ಶ್ರಮಿಸಿದರು. ಆದರೆ ರಂಗಕರ್ಮಿಗಳ ದೌರ್ಬಲ್ಯಗಳಿಂದಾಗಿ ಅವರು ಕಂಡ ಅನೇಕ ಕನಸುಗಳನ್ನು ನನಸು ಮಾಡಲು ಸಾಧ್ಯವಾಗುತ್ತಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು. <br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್, `ತಮ್ಮ ಜತೆಗೆ ಅನೇಕ ಕಲಾವಿದರನ್ನು ಬೆಳೆಸಿದ ಸಿಜಿಕೆ ನೆನಪು ಅತಿ ಮುಖ್ಯವಾಗುತ್ತದೆ. ಅವರ ನೆನಪು ಚೇತೋಹಾರಿಯಾದುದು. ಸಿಜಿಕೆ ಹಾಗೂ ಡಿ.ಕೆ. ಚೌಟ ಅವರದ್ದು ಅನುರೂಪದ ಹೊಂದಾಣಿಕೆ. ಸಿಜಿಕೆ ನೆನಪಿನಲ್ಲಿ ಚೌಟ ಅವರ ನಾಟಕ ಪ್ರದರ್ಶನ ನಡೆಯುತ್ತಿರುವುದು ಸಂತಸದ ವಿಷಯ~ ಎಂದರು. <br /> <br /> ಈ ಸಂದರ್ಭದಲ್ಲಿ ರಂಗಕರ್ಮಿ ಕೆ.ಕೇಶವಲು, ನಿರ್ದೇಶಕ ಬಿ.ಜಿ.ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು.ರಕ್ತದಾನ ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಿಜಿಕೆ ಅವರ ಪತ್ನಿ ಜಯಲಕ್ಷ್ಮಿ, ರಂಗಕರ್ಮಿ ರಶ್ಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>