<p><strong>ನವದೆಹಲಿ:</strong> `ದೇಶದ ಹಲವು ರಕ್ಷಣಾ ವ್ಯವಹಾರಗಳಲ್ಲಿ ಮಧ್ಯವರ್ತಿಗಳು ಸಕ್ರಿಯ ಪಾತ್ರ ವಹಿಸಿದ್ದು, ಕಮಿಷನ್ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳಿವೆ~ ಎಂದು ಅಣ್ಣಾ ತಂಡದ ಸದಸ್ಯರಾದ ಅರವಿಂದ್ ಕೇಜ್ರಿವಾಲ್ ಹಾಗೂ ಪ್ರಶಾಂತ್ ಭೂಷಣ್ ಗುರುವಾರ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.</p>.<p>`ಕೆಲವು ರಕ್ಷಣಾ ವ್ಯವಹಾರಗಳಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಅಭಿಷೇಕ್ ವರ್ಮಾ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪುರಾವೆಗಳು ನಮ್ಮ ಬಳಿ ಇವೆ. ನೌಕಾಪಡೆಗೆ ಸಂಬಂಧಿಸಿದ ಕೆಲವು ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿದ ಆರೋಪದಲ್ಲಿ ವರ್ಮಾ ಭಾಗಿಯಾಗಿ ಜಾಮೀನು ಪಡೆದಿದ್ದಾರೆ~ ಎಂದು ಕೇಜ್ರಿವಾಲ್ ಮತ್ತು ಭೂಷಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.</p>.<p>ತಮ್ಮ ಆರೋಪಗಳಿಗೆ ಪೂರಕವಾಗಿ ಅಮೆರಿಕ ಮೂಲದ ಅಟಾರ್ನಿ ಎಡ್ಮಂಡ್ ಇ. ಆಲೆನ್ ಅವರಿಂದ ಪಡೆದಿರುವ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು. ಈ ಮೊದಲು ವರ್ಮಾ ಅವರ ಪಾಲುದಾರರಾಗಿದ್ದ ಆಲೆನ್ ಈಗ ಅಲ್ಲಿನ ನ್ಯಾಯಾಲಯದಲ್ಲಿ ವರ್ಮಾ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದಾರೆ.</p>.<p>ವರ್ಮಾ ಅವರ ವ್ಯವಹಾರಗಳ ಕುರಿತು ಸಿಬಿಐ ಮತ್ತು ಸರ್ಕಾರದ ಕೆಲವು ಸಂಸ್ಥೆಗಳಿಗೂ ದೂರು ಸಲ್ಲಿಸಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಶಾಂತ್ ಭೂಷಣ್ ಸ್ಪಷ್ಟಪಡಿಸಿದರು.</p>.<p>ಕೇಂದ್ರ ಸರ್ಕಾರವು ಇಸ್ರೇಲ್ ಮೂಲದ ಇಸಿಐ ಟೆಲಿಕಾಂ ಮೇಲೆ ಹೇರಿದ್ದ `ಸುರಿ ವಿರೋಧಿ ತೆರಿಗೆ~ ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ವರ್ಮಾ ಪ್ರಮುಖ ಪಾತ್ರ ವಹಿಸಿದ್ದರು. 2010ರಲ್ಲಿ ಕೇಂದ್ರ ಸರ್ಕಾರ `ಇಸಿಐ ಟೆಲಿಕಾಂ~ ವಿರುದ್ಧ ಹೇರಿದ್ದ ಸಾವಿರ ಕೋಟಿ ರೂಪಾಯಿಗಳ `ಸುರಿ ವಿರೋಧಿ ತೆರಿಗೆ~ ರದ್ದು ಮಾಡಿತ್ತು. ಈ ಹೊರೆಯಿಂದ ಮುಕ್ತಿ ದೊರಕಿಸುವಂತೆ ಇಸಿಐ, ವರ್ಮಾ ಅವರಿಗೆ ಸೇರಿದ ಕಂಪನಿಯನ್ನು ಸಂಪರ್ಕಿಸಿದ್ದರು ಎಂದು ಅವರು ದೂರಿದರು.</p>.<p>ವಿದೇಶಾಂಗ ಸಚಿವ ಕೃಷ್ಣ, ಇಸ್ರೇಲ್ಗೆ ಭೇಟಿ ನೀಡುವ ಮೊದಲು ವರ್ಮಾ ಇಸಿಐ ಪ್ರತಿನಿಧಿಗಳಿಗೆ ಇ- ಮೇಲ್ ಸಂದೇಶ ಕಳುಹಿಸಿದ್ದರು. ಈ ಸಂದೇಶದಲ್ಲಿ ವಿದೇಶಾಂಗ ಸಚಿವರು `ಸುರಿ ವಿರೋಧಿ ತೆರಿಗೆ~ ರದ್ದಿಗೆ ಶಿಫಾರಸು ಮಾಡಲಿದ್ದಾರೆ ಎಂದು ತಿಳಿಸಿದ್ದರು.</p>.<p>ಕೃಷ್ಣ ಅವರ ಇಸ್ರೇಲ್ ಭೇಟಿ ಬಳಿಕ ಸರ್ಕಾರ ತೆರಿಗೆ ರದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಇ- ಮೇಲ್ ಸಾಚಾತನ ಕುರಿತು ಪರಿಶೀಲಿಸಬೇಕು. ಇದು ನಿಜವಾಗಿದ್ದರೆ ಇದೊಂದು ಗಂಭೀರ ಸ್ವರೂಪದ ಹಗರಣವಾಗಲಿದೆ ಎಂದು ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಅಭಿಪ್ರಾಯಪಟ್ಟರು.</p>.<p>ಹೆಲಿಕಾಪ್ಟರ್ ವ್ಯವಹಾರ: ಇಟಲಿ ಮೂಲದ `ಆಗಸ್ಟ್ ವೆಸ್ಟ್ಲ್ಯಾಂಡ್~ ಕಂಪನಿ 12 ಹೆಲಿಕಾಪ್ಟರ್ಗಳನ್ನು ಸೇನೆಗೆ ಪೂರೈಕೆ ಮಾಡಿದೆ. ಇದರ ಒಟ್ಟು ಮೊತ್ತ ರೂ 3546 ಕೋಟಿ. ಈ ವ್ಯವಹಾರದಲ್ಲೂ ವರ್ಮಾ ಕಂಪನಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದೆ. ಈ ಕೆಲಸಕ್ಕೆ ಶೇ 15ರಷ್ಟು ಸಲಹಾ ಶುಲ್ಕ ಪಡೆಯಲಾಗಿದೆ.</p>.<p>ಈ ಒಪ್ಪಂದದಲ್ಲಿ ಕಮಿಷನ್ ವ್ಯವಹಾರ ನಡೆದಿದೆ ಎನ್ನುವ ಇಟಲಿ ಪತ್ರಿಕೆಗಳ ವರದಿ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ವಿಚಾರಣೆ ನಡೆಸುತ್ತಿದೆ. ಸಲಹಾ ಶುಲ್ಕ ನೀಡಿಕೆ ರಕ್ಷಣಾ ಇಲಾಖೆ ಮಾರ್ಗಸೂಚಿಗೆ ವಿರುದ್ಧವಾಗಿದೆ.<br /> ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಖರೀದಿ ವ್ಯವಹಾರ ಕುರಿತು ತನಿಖೆ ನಡೆಸಬೇಕು. ಇದರಲ್ಲಿ ಬೇರೆಯವರಿಗೂ ಪಾಲು ಇದೆಯೇ ಎಂಬ ಬಗ್ಗೆ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.</p>.<p>ಕೇಂದ್ರ ಸರ್ಕಾರವು ತಪ್ಪು ಎಸಗಿದ ಆರು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಈ ಪೈಕಿ ಜರ್ಮನಿ ಮೂಲದ `ರ್ಯಾಡ್~ (ರೀನ್ಮೆಟಲ್) ಕಂಪನಿಯೂ ಒಂದು. ಇದನ್ನು ಕಪ್ಪು ಪಟ್ಟಿಯಿಂದ ತೆಗೆಸುವಲ್ಲಿ `ಗ್ಯಾಂಟನ್~ ಪ್ರಮುಖ ಪಾತ್ರ ವಹಿಸಿದೆ ಎಂದು ದೂರಿದರು.</p>.<p>ವರ್ಮಾ ಜೈಲಿನಿಂದಲೇ ಮಧ್ಯವರ್ತಿ ಕೆಲಸ ಮಾಡಿದ್ದಾರೆ. `ಇ- ಮೇಲ್~ ಕಳಿಸಿದ್ದಾರೆ. ಬೇರೆ ಬೇರೆ ಖಾತೆಗಳಿಗೆ ಹಣಕಾಸು ವರ್ಗಾವಣೆ ಕೂಡಾ ಮಾಡಿದ್ದಾರೆ. ಈ ಎಲ್ಲ ವ್ಯವಹಾರಗಳ ಸತ್ಯಾಸತ್ಯತೆ ಬಹಿರಂಗಕ್ಕೆ ಬರಲು ಸೂಕ್ತ ತನಿಖೆ ನಡೆಸಬೇಕು ಎಂದು ಅಣ್ಣಾ ತಂಡದ ಸದಸ್ಯರು ಆಗ್ರಹಿಸಿದರು.</p>.<p>ಈ ಎಲ್ಲ ಆರೋಪ ಕುರಿತು ಸಿಬಿಐ ಮತ್ತು ಸಿವಿಸಿಗೆ ದೂರು ಕೊಡಲಾಗಿದೆ. ಆದರೂ ವರ್ಮಾ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> `ದೇಶದ ಹಲವು ರಕ್ಷಣಾ ವ್ಯವಹಾರಗಳಲ್ಲಿ ಮಧ್ಯವರ್ತಿಗಳು ಸಕ್ರಿಯ ಪಾತ್ರ ವಹಿಸಿದ್ದು, ಕಮಿಷನ್ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳಿವೆ~ ಎಂದು ಅಣ್ಣಾ ತಂಡದ ಸದಸ್ಯರಾದ ಅರವಿಂದ್ ಕೇಜ್ರಿವಾಲ್ ಹಾಗೂ ಪ್ರಶಾಂತ್ ಭೂಷಣ್ ಗುರುವಾರ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.</p>.<p>`ಕೆಲವು ರಕ್ಷಣಾ ವ್ಯವಹಾರಗಳಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಅಭಿಷೇಕ್ ವರ್ಮಾ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪುರಾವೆಗಳು ನಮ್ಮ ಬಳಿ ಇವೆ. ನೌಕಾಪಡೆಗೆ ಸಂಬಂಧಿಸಿದ ಕೆಲವು ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿದ ಆರೋಪದಲ್ಲಿ ವರ್ಮಾ ಭಾಗಿಯಾಗಿ ಜಾಮೀನು ಪಡೆದಿದ್ದಾರೆ~ ಎಂದು ಕೇಜ್ರಿವಾಲ್ ಮತ್ತು ಭೂಷಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.</p>.<p>ತಮ್ಮ ಆರೋಪಗಳಿಗೆ ಪೂರಕವಾಗಿ ಅಮೆರಿಕ ಮೂಲದ ಅಟಾರ್ನಿ ಎಡ್ಮಂಡ್ ಇ. ಆಲೆನ್ ಅವರಿಂದ ಪಡೆದಿರುವ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು. ಈ ಮೊದಲು ವರ್ಮಾ ಅವರ ಪಾಲುದಾರರಾಗಿದ್ದ ಆಲೆನ್ ಈಗ ಅಲ್ಲಿನ ನ್ಯಾಯಾಲಯದಲ್ಲಿ ವರ್ಮಾ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದಾರೆ.</p>.<p>ವರ್ಮಾ ಅವರ ವ್ಯವಹಾರಗಳ ಕುರಿತು ಸಿಬಿಐ ಮತ್ತು ಸರ್ಕಾರದ ಕೆಲವು ಸಂಸ್ಥೆಗಳಿಗೂ ದೂರು ಸಲ್ಲಿಸಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಶಾಂತ್ ಭೂಷಣ್ ಸ್ಪಷ್ಟಪಡಿಸಿದರು.</p>.<p>ಕೇಂದ್ರ ಸರ್ಕಾರವು ಇಸ್ರೇಲ್ ಮೂಲದ ಇಸಿಐ ಟೆಲಿಕಾಂ ಮೇಲೆ ಹೇರಿದ್ದ `ಸುರಿ ವಿರೋಧಿ ತೆರಿಗೆ~ ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ವರ್ಮಾ ಪ್ರಮುಖ ಪಾತ್ರ ವಹಿಸಿದ್ದರು. 2010ರಲ್ಲಿ ಕೇಂದ್ರ ಸರ್ಕಾರ `ಇಸಿಐ ಟೆಲಿಕಾಂ~ ವಿರುದ್ಧ ಹೇರಿದ್ದ ಸಾವಿರ ಕೋಟಿ ರೂಪಾಯಿಗಳ `ಸುರಿ ವಿರೋಧಿ ತೆರಿಗೆ~ ರದ್ದು ಮಾಡಿತ್ತು. ಈ ಹೊರೆಯಿಂದ ಮುಕ್ತಿ ದೊರಕಿಸುವಂತೆ ಇಸಿಐ, ವರ್ಮಾ ಅವರಿಗೆ ಸೇರಿದ ಕಂಪನಿಯನ್ನು ಸಂಪರ್ಕಿಸಿದ್ದರು ಎಂದು ಅವರು ದೂರಿದರು.</p>.<p>ವಿದೇಶಾಂಗ ಸಚಿವ ಕೃಷ್ಣ, ಇಸ್ರೇಲ್ಗೆ ಭೇಟಿ ನೀಡುವ ಮೊದಲು ವರ್ಮಾ ಇಸಿಐ ಪ್ರತಿನಿಧಿಗಳಿಗೆ ಇ- ಮೇಲ್ ಸಂದೇಶ ಕಳುಹಿಸಿದ್ದರು. ಈ ಸಂದೇಶದಲ್ಲಿ ವಿದೇಶಾಂಗ ಸಚಿವರು `ಸುರಿ ವಿರೋಧಿ ತೆರಿಗೆ~ ರದ್ದಿಗೆ ಶಿಫಾರಸು ಮಾಡಲಿದ್ದಾರೆ ಎಂದು ತಿಳಿಸಿದ್ದರು.</p>.<p>ಕೃಷ್ಣ ಅವರ ಇಸ್ರೇಲ್ ಭೇಟಿ ಬಳಿಕ ಸರ್ಕಾರ ತೆರಿಗೆ ರದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಇ- ಮೇಲ್ ಸಾಚಾತನ ಕುರಿತು ಪರಿಶೀಲಿಸಬೇಕು. ಇದು ನಿಜವಾಗಿದ್ದರೆ ಇದೊಂದು ಗಂಭೀರ ಸ್ವರೂಪದ ಹಗರಣವಾಗಲಿದೆ ಎಂದು ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಅಭಿಪ್ರಾಯಪಟ್ಟರು.</p>.<p>ಹೆಲಿಕಾಪ್ಟರ್ ವ್ಯವಹಾರ: ಇಟಲಿ ಮೂಲದ `ಆಗಸ್ಟ್ ವೆಸ್ಟ್ಲ್ಯಾಂಡ್~ ಕಂಪನಿ 12 ಹೆಲಿಕಾಪ್ಟರ್ಗಳನ್ನು ಸೇನೆಗೆ ಪೂರೈಕೆ ಮಾಡಿದೆ. ಇದರ ಒಟ್ಟು ಮೊತ್ತ ರೂ 3546 ಕೋಟಿ. ಈ ವ್ಯವಹಾರದಲ್ಲೂ ವರ್ಮಾ ಕಂಪನಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದೆ. ಈ ಕೆಲಸಕ್ಕೆ ಶೇ 15ರಷ್ಟು ಸಲಹಾ ಶುಲ್ಕ ಪಡೆಯಲಾಗಿದೆ.</p>.<p>ಈ ಒಪ್ಪಂದದಲ್ಲಿ ಕಮಿಷನ್ ವ್ಯವಹಾರ ನಡೆದಿದೆ ಎನ್ನುವ ಇಟಲಿ ಪತ್ರಿಕೆಗಳ ವರದಿ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ವಿಚಾರಣೆ ನಡೆಸುತ್ತಿದೆ. ಸಲಹಾ ಶುಲ್ಕ ನೀಡಿಕೆ ರಕ್ಷಣಾ ಇಲಾಖೆ ಮಾರ್ಗಸೂಚಿಗೆ ವಿರುದ್ಧವಾಗಿದೆ.<br /> ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಖರೀದಿ ವ್ಯವಹಾರ ಕುರಿತು ತನಿಖೆ ನಡೆಸಬೇಕು. ಇದರಲ್ಲಿ ಬೇರೆಯವರಿಗೂ ಪಾಲು ಇದೆಯೇ ಎಂಬ ಬಗ್ಗೆ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.</p>.<p>ಕೇಂದ್ರ ಸರ್ಕಾರವು ತಪ್ಪು ಎಸಗಿದ ಆರು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಈ ಪೈಕಿ ಜರ್ಮನಿ ಮೂಲದ `ರ್ಯಾಡ್~ (ರೀನ್ಮೆಟಲ್) ಕಂಪನಿಯೂ ಒಂದು. ಇದನ್ನು ಕಪ್ಪು ಪಟ್ಟಿಯಿಂದ ತೆಗೆಸುವಲ್ಲಿ `ಗ್ಯಾಂಟನ್~ ಪ್ರಮುಖ ಪಾತ್ರ ವಹಿಸಿದೆ ಎಂದು ದೂರಿದರು.</p>.<p>ವರ್ಮಾ ಜೈಲಿನಿಂದಲೇ ಮಧ್ಯವರ್ತಿ ಕೆಲಸ ಮಾಡಿದ್ದಾರೆ. `ಇ- ಮೇಲ್~ ಕಳಿಸಿದ್ದಾರೆ. ಬೇರೆ ಬೇರೆ ಖಾತೆಗಳಿಗೆ ಹಣಕಾಸು ವರ್ಗಾವಣೆ ಕೂಡಾ ಮಾಡಿದ್ದಾರೆ. ಈ ಎಲ್ಲ ವ್ಯವಹಾರಗಳ ಸತ್ಯಾಸತ್ಯತೆ ಬಹಿರಂಗಕ್ಕೆ ಬರಲು ಸೂಕ್ತ ತನಿಖೆ ನಡೆಸಬೇಕು ಎಂದು ಅಣ್ಣಾ ತಂಡದ ಸದಸ್ಯರು ಆಗ್ರಹಿಸಿದರು.</p>.<p>ಈ ಎಲ್ಲ ಆರೋಪ ಕುರಿತು ಸಿಬಿಐ ಮತ್ತು ಸಿವಿಸಿಗೆ ದೂರು ಕೊಡಲಾಗಿದೆ. ಆದರೂ ವರ್ಮಾ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>