<p>ಶಿಕ್ಷಣ ಇಲಾಖೆ ಈ ವರ್ಷ ಬರ ಪೀಡಿತ ಪ್ರದೇಶಗಳಲ್ಲಿ 1ರಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ಬೇಸಿಗೆ ರಜೆ ಅವಧಿಯಲ್ಲೂ ಬಿಸಿಯೂಟ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಶಾಲೆಗಳು ನಡೆಯುವ ಸಮಯದಲ್ಲೇ ಬಹುತೇಕ ಊರುಗಳಲ್ಲಿ ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ. <br /> <br /> ಇನ್ನು ರಜೆಯಲ್ಲಿ ಬಿಸಿಯೂಟಕ್ಕಾಗಿ ಶಾಲೆಗೆ ಹಾಜರಾಗುವ ಸಾಧ್ಯತೆ ಕಡಿಮೆ. ಬಡವರ ಮಕ್ಕಳು ಕೇವಲ ಊಟಕ್ಕಾಗಿ ಶಾಲೆಗೆ ಬರುತ್ತಾರೆ ಎಂದು ಸರ್ಕಾರ ಭಾವಿಸಿರುವುದು ನಿಜಕ್ಕೂ ದುರದೃಷ್ಟಕರ.<br /> <br /> ಬಹುತೇಕ ಶಾಲೆಗಳಲ್ಲಿ ಬಿಸಿಯೂಟದ ಹೆಸರಿನಲ್ಲಿ ಕಳಪೆ ಊಟ ನೀಡುತ್ತಿರುವುದು ಗುಟ್ಟೇನಲ್ಲ. ಶಾಲೆಗಳ ಮುಖ್ಯಗುರುಗಳು, ಅಭಿವೃದ್ಧಿ ಸಮಿತಿಗಳ ಸದಸ್ಯರು ಮತ್ತು ಕೆಲ ಎನ್ಜಿಒಗಳು ಬಿಸಿಯೂಟದ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. <br /> <br /> ಕಡಿಮೆ ಮಕ್ಕಳಿದ್ದರೂ ಪೂರ್ಣ ಹಾಜರಿ ತೋರಿಸಿ ಹಣ ದುರುಪಯೋಗ ಮಾಡಿಕೊಳ್ಳುವುದು ಸರ್ಕಾರಕ್ಕೆ ಗೊತ್ತಿಲ್ಲವೇ? ರಜೆ ಅವಧಿಯಲ್ಲಿ ಬಿಸಿಯೂಟ ನೀಡುವ ನಿರ್ಧಾರದಿಂದ ಯಾರಿಗೆ ಲಾಭ ಆಗಬಹುದು? ಸರ್ಕಾರದ ಚಿಂತನೆ ಸರಿಯಾಗಿದ್ದರೂ ಜಾರಿಗೆ ಬಗ್ಗೆ ಜನರಿಗೆ ಸಂದೇಹಗಳಿವೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿಕ್ಷಣ ಇಲಾಖೆ ಈ ವರ್ಷ ಬರ ಪೀಡಿತ ಪ್ರದೇಶಗಳಲ್ಲಿ 1ರಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ಬೇಸಿಗೆ ರಜೆ ಅವಧಿಯಲ್ಲೂ ಬಿಸಿಯೂಟ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಶಾಲೆಗಳು ನಡೆಯುವ ಸಮಯದಲ್ಲೇ ಬಹುತೇಕ ಊರುಗಳಲ್ಲಿ ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ. <br /> <br /> ಇನ್ನು ರಜೆಯಲ್ಲಿ ಬಿಸಿಯೂಟಕ್ಕಾಗಿ ಶಾಲೆಗೆ ಹಾಜರಾಗುವ ಸಾಧ್ಯತೆ ಕಡಿಮೆ. ಬಡವರ ಮಕ್ಕಳು ಕೇವಲ ಊಟಕ್ಕಾಗಿ ಶಾಲೆಗೆ ಬರುತ್ತಾರೆ ಎಂದು ಸರ್ಕಾರ ಭಾವಿಸಿರುವುದು ನಿಜಕ್ಕೂ ದುರದೃಷ್ಟಕರ.<br /> <br /> ಬಹುತೇಕ ಶಾಲೆಗಳಲ್ಲಿ ಬಿಸಿಯೂಟದ ಹೆಸರಿನಲ್ಲಿ ಕಳಪೆ ಊಟ ನೀಡುತ್ತಿರುವುದು ಗುಟ್ಟೇನಲ್ಲ. ಶಾಲೆಗಳ ಮುಖ್ಯಗುರುಗಳು, ಅಭಿವೃದ್ಧಿ ಸಮಿತಿಗಳ ಸದಸ್ಯರು ಮತ್ತು ಕೆಲ ಎನ್ಜಿಒಗಳು ಬಿಸಿಯೂಟದ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. <br /> <br /> ಕಡಿಮೆ ಮಕ್ಕಳಿದ್ದರೂ ಪೂರ್ಣ ಹಾಜರಿ ತೋರಿಸಿ ಹಣ ದುರುಪಯೋಗ ಮಾಡಿಕೊಳ್ಳುವುದು ಸರ್ಕಾರಕ್ಕೆ ಗೊತ್ತಿಲ್ಲವೇ? ರಜೆ ಅವಧಿಯಲ್ಲಿ ಬಿಸಿಯೂಟ ನೀಡುವ ನಿರ್ಧಾರದಿಂದ ಯಾರಿಗೆ ಲಾಭ ಆಗಬಹುದು? ಸರ್ಕಾರದ ಚಿಂತನೆ ಸರಿಯಾಗಿದ್ದರೂ ಜಾರಿಗೆ ಬಗ್ಗೆ ಜನರಿಗೆ ಸಂದೇಹಗಳಿವೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>