<p><strong>ಜೈಪುರ (ಪಿಟಿಐ): </strong>ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರೊಂದಿಗೆ ಸಂಘರ್ಷಕ್ಕೆ ಇಳಿದಿರುವ ರಾಜಸ್ತಾನ ಸರ್ಕಾರ, ಇಲ್ಲಿನ ಸಾಹಿತ್ಯ ಉತ್ಸವದಲ್ಲಿ ಅವರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ವಿವಾದಕ್ಕೆ ಮತ್ತೊಂದು ಆಯಾಮ ನೀಡಿದೆ.<br /> <br /> ಪೂರ್ವಾನುಮತಿ ಇಲ್ಲದೆ ರಶ್ದಿ ಅವರು ವಿಡಿಯೊ ಸಂವಾದದ ಮೂಲಕ ಉತ್ಸವದಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಅದು ಸೋಮವಾರ ಹೊಸ `ಬಾಂಬ್~ ಸಿಡಿಸಿದೆ.<br /> <br /> ಉತ್ಸವದಲ್ಲಿ ಭಾಗವಹಿಸದಂತೆ ತಮ್ಮನ್ನು ತಡೆಯಲು ರಾಜಸ್ತಾನ ಪೊಲೀಸರು ಸಂಚು ರೂಪಿಸಿದ್ದಾರೆ ಎಂದು ಭಾರತೀಯ ಸಂಜಾತ ಲೇಖಕ ಟ್ವಿಟ್ಟರ್ನಲ್ಲಿ ಆರೋಪಿಸಿದ ಬೆನ್ನಲ್ಲೇ ಸರ್ಕಾರದ ಈ ಹೇಳಿಕೆ ಹೊರಬಿದ್ದಿದೆ. ಈ ಬೆಳವಣಿಗೆಯಿಂದಾಗಿ, ಸಂಘಟಕರು ಉತ್ಸವದ ಕೊನೆಯ ದಿನವಾದ ಮಂಗಳವಾರ ಆಯೋಜಿಸಲು ಉದ್ದೇಶಿಸಿದ್ದ ರಶ್ದಿ ವಿಡಿಯೊ ಸಂವಾದ ಕಾರ್ಯಕ್ರಮ ತೂಗುಯ್ಯಾಲೆಯಲ್ಲಿದೆ. ಆದರೆ, ಸಂಘಟಕರು ಮಾತ್ರ ಕಾರ್ಯಕ್ರಮ ನಡೆದೇ ನಡೆಯುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. <br /> <br /> `ಇದು ಅತಿ ಸೂಕ್ಷ್ಮ ವಿಷಯವಾದ ಕಾರಣ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ~ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. `ಸರ್ಕಾರದ ಅನುಮತಿ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ~ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ಹೇಳಿದ್ದಾರೆ.<br /> <br /> ಉತ್ಸವದ ಸಂಘಟಕರಲ್ಲಿ ಒಬ್ಬರಾದ ಸಂಜಯ್ ರಾಯ್ `ಈ ಕುರಿತು ನಮಗೆ ಇನ್ನೂ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಸದ್ಯಕ್ಕೆ ಯಾವ ಅಧಿಕಾರಿಯೂ ನಮ್ಮ ಬಳಿ ಮಾತನಾಡಿಲ್ಲ. ಹೀಗಾಗಿ ಕಾರ್ಯಕ್ರಮ ನಡೆಯುತ್ತದೆ~ ಎಂದು ಪ್ರತಿಕ್ರಿಯಿಸಿದ್ದಾರೆ.<br /> <br /> ಈ ಬಗ್ಗೆ ಮುಸ್ಲಿಂ ಸಂಘಟನೆಗಳು ವಿಭಿನ್ನ ನಿಲುವು ತಾಳಿವೆ. ಕೆಲವರು ಕಾರ್ಯಕ್ರಮ ನಡೆಸಲು ಸಮ್ಮತಿ ಸೂಚಿಸಿದ್ದಾರೆ. ಆದರೆ ರಶ್ದಿ ಯಾವುದೇ ಕಾನೂನುಬಾಹಿರ ಹೇಳಿಕೆ ನೀಡಿದರೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.<br /> <br /> <strong>ಲೇಖಕನಿಗೆ ಮುಕ್ತ ಆಹ್ವಾನ:</strong> ಈ ನಡುವೆ ಕೆಲವು ಸಂಘಟನೆಗಳು ರಶ್ದಿ ಮತ್ತು ಕಲಾವಿದ ಎಂ.ಎಫ್.ಹುಸೇನ್ ಪ್ರಕರಣಗಳನ್ನು ಸಮೀಕರಿಸಿವೆ. ಭಾರತಕ್ಕೆ ಆಗಮಿಸಿ ಸಾಹಿತ್ಯದ ಕುರಿತು ಉಪನ್ಯಾಸ ನೀಡುವಂತೆ ಕಲಾವಿದರು ಮತ್ತು ಹೋರಾಟಗಾರರ ಸಂಘಟನೆ `ಸಹಮತ್~ ವಿವಾದಿತ ಲೇಖಕನಿಗೆ ಮುಕ್ತ ಆಹ್ವಾನ ನೀಡಿದೆ. <br /> <br /> ದೆಹಲಿಯಲ್ಲಿ ಎಂ.ಎಫ್.ಹುಸೇನ್ ಕಲಾಕೃತಿಗಳ ಪ್ರದರ್ಶನ ಮತ್ತು ರಶ್ದಿ ಅವರ ವಿವಾದಿತ ಪುಸ್ತಕ `ಸೆಟಾನಿಕ್ ವರ್ಸಸ್~ ಕುರಿತು ಉಪನ್ಯಾಸ ಏರ್ಪಡಿಸಲು ಬದ್ಧ, ಕೋಮುವಾದದ ವಿರುದ್ಧ ಯಾವುದೇ ಪರಿಸ್ಥಿತಿ ಎದುರಿಸಲು ಸಹ ಸಿದ್ಧ ಎಂದು ಅದು ಹೇಳಿದೆ. <br /> <br /> ಈ ಕೃತಿಯ ಮೇಲೆ ಹೇರಲಾಗಿರುವ 23 ವರ್ಷಗಳ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಲೇಖಕರ ಗುಂಪೊಂದು ಆನ್ಲೈನ್ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಪಿ.ಚಿದಂಬರಂ ಅವರಿಗೆ ಮನವಿ ಸಲ್ಲಿಸಿದೆ. 250 ಜನ ಇದಕ್ಕೆ ಸಹಿ ಹಾಕಿದ್ದಾರೆ. <br /> <br /> ಉತ್ಸವದ ಬಹುತೇಕ ಅಮೂಲ್ಯ ಸಮಯವನ್ನು ನುಂಗಿ ಹಾಕಿದ ವಿವಾದದ ಕರಿ ನೆರಳು ನಾಲ್ಕನೇ ದಿನದ ಕಾರ್ಯಕ್ರಮದ ಮೇಲೆ ಬೀಳಲಿಲ್ಲ. ವಾತಾವರಣ ಸ್ವಲ್ಪ ತಿಳಿಯಾಗಿತ್ತು. ಹೆಸರಾಂತ ಗೀತ ರಚನಕಾರರಾದ ಗುಲ್ಜಾರ್, ಜಾವೇದ್ ಮತ್ತು ಪ್ರಸೂನ್ ಜೋಶಿ ಪ್ರೇಕ್ಷಕರಿಗೆ ಕಾವ್ಯಗಳ ರಸಗವಳ ಉಣಬಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ (ಪಿಟಿಐ): </strong>ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರೊಂದಿಗೆ ಸಂಘರ್ಷಕ್ಕೆ ಇಳಿದಿರುವ ರಾಜಸ್ತಾನ ಸರ್ಕಾರ, ಇಲ್ಲಿನ ಸಾಹಿತ್ಯ ಉತ್ಸವದಲ್ಲಿ ಅವರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ವಿವಾದಕ್ಕೆ ಮತ್ತೊಂದು ಆಯಾಮ ನೀಡಿದೆ.<br /> <br /> ಪೂರ್ವಾನುಮತಿ ಇಲ್ಲದೆ ರಶ್ದಿ ಅವರು ವಿಡಿಯೊ ಸಂವಾದದ ಮೂಲಕ ಉತ್ಸವದಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಅದು ಸೋಮವಾರ ಹೊಸ `ಬಾಂಬ್~ ಸಿಡಿಸಿದೆ.<br /> <br /> ಉತ್ಸವದಲ್ಲಿ ಭಾಗವಹಿಸದಂತೆ ತಮ್ಮನ್ನು ತಡೆಯಲು ರಾಜಸ್ತಾನ ಪೊಲೀಸರು ಸಂಚು ರೂಪಿಸಿದ್ದಾರೆ ಎಂದು ಭಾರತೀಯ ಸಂಜಾತ ಲೇಖಕ ಟ್ವಿಟ್ಟರ್ನಲ್ಲಿ ಆರೋಪಿಸಿದ ಬೆನ್ನಲ್ಲೇ ಸರ್ಕಾರದ ಈ ಹೇಳಿಕೆ ಹೊರಬಿದ್ದಿದೆ. ಈ ಬೆಳವಣಿಗೆಯಿಂದಾಗಿ, ಸಂಘಟಕರು ಉತ್ಸವದ ಕೊನೆಯ ದಿನವಾದ ಮಂಗಳವಾರ ಆಯೋಜಿಸಲು ಉದ್ದೇಶಿಸಿದ್ದ ರಶ್ದಿ ವಿಡಿಯೊ ಸಂವಾದ ಕಾರ್ಯಕ್ರಮ ತೂಗುಯ್ಯಾಲೆಯಲ್ಲಿದೆ. ಆದರೆ, ಸಂಘಟಕರು ಮಾತ್ರ ಕಾರ್ಯಕ್ರಮ ನಡೆದೇ ನಡೆಯುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. <br /> <br /> `ಇದು ಅತಿ ಸೂಕ್ಷ್ಮ ವಿಷಯವಾದ ಕಾರಣ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ~ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. `ಸರ್ಕಾರದ ಅನುಮತಿ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ~ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ಹೇಳಿದ್ದಾರೆ.<br /> <br /> ಉತ್ಸವದ ಸಂಘಟಕರಲ್ಲಿ ಒಬ್ಬರಾದ ಸಂಜಯ್ ರಾಯ್ `ಈ ಕುರಿತು ನಮಗೆ ಇನ್ನೂ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಸದ್ಯಕ್ಕೆ ಯಾವ ಅಧಿಕಾರಿಯೂ ನಮ್ಮ ಬಳಿ ಮಾತನಾಡಿಲ್ಲ. ಹೀಗಾಗಿ ಕಾರ್ಯಕ್ರಮ ನಡೆಯುತ್ತದೆ~ ಎಂದು ಪ್ರತಿಕ್ರಿಯಿಸಿದ್ದಾರೆ.<br /> <br /> ಈ ಬಗ್ಗೆ ಮುಸ್ಲಿಂ ಸಂಘಟನೆಗಳು ವಿಭಿನ್ನ ನಿಲುವು ತಾಳಿವೆ. ಕೆಲವರು ಕಾರ್ಯಕ್ರಮ ನಡೆಸಲು ಸಮ್ಮತಿ ಸೂಚಿಸಿದ್ದಾರೆ. ಆದರೆ ರಶ್ದಿ ಯಾವುದೇ ಕಾನೂನುಬಾಹಿರ ಹೇಳಿಕೆ ನೀಡಿದರೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.<br /> <br /> <strong>ಲೇಖಕನಿಗೆ ಮುಕ್ತ ಆಹ್ವಾನ:</strong> ಈ ನಡುವೆ ಕೆಲವು ಸಂಘಟನೆಗಳು ರಶ್ದಿ ಮತ್ತು ಕಲಾವಿದ ಎಂ.ಎಫ್.ಹುಸೇನ್ ಪ್ರಕರಣಗಳನ್ನು ಸಮೀಕರಿಸಿವೆ. ಭಾರತಕ್ಕೆ ಆಗಮಿಸಿ ಸಾಹಿತ್ಯದ ಕುರಿತು ಉಪನ್ಯಾಸ ನೀಡುವಂತೆ ಕಲಾವಿದರು ಮತ್ತು ಹೋರಾಟಗಾರರ ಸಂಘಟನೆ `ಸಹಮತ್~ ವಿವಾದಿತ ಲೇಖಕನಿಗೆ ಮುಕ್ತ ಆಹ್ವಾನ ನೀಡಿದೆ. <br /> <br /> ದೆಹಲಿಯಲ್ಲಿ ಎಂ.ಎಫ್.ಹುಸೇನ್ ಕಲಾಕೃತಿಗಳ ಪ್ರದರ್ಶನ ಮತ್ತು ರಶ್ದಿ ಅವರ ವಿವಾದಿತ ಪುಸ್ತಕ `ಸೆಟಾನಿಕ್ ವರ್ಸಸ್~ ಕುರಿತು ಉಪನ್ಯಾಸ ಏರ್ಪಡಿಸಲು ಬದ್ಧ, ಕೋಮುವಾದದ ವಿರುದ್ಧ ಯಾವುದೇ ಪರಿಸ್ಥಿತಿ ಎದುರಿಸಲು ಸಹ ಸಿದ್ಧ ಎಂದು ಅದು ಹೇಳಿದೆ. <br /> <br /> ಈ ಕೃತಿಯ ಮೇಲೆ ಹೇರಲಾಗಿರುವ 23 ವರ್ಷಗಳ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಲೇಖಕರ ಗುಂಪೊಂದು ಆನ್ಲೈನ್ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಪಿ.ಚಿದಂಬರಂ ಅವರಿಗೆ ಮನವಿ ಸಲ್ಲಿಸಿದೆ. 250 ಜನ ಇದಕ್ಕೆ ಸಹಿ ಹಾಕಿದ್ದಾರೆ. <br /> <br /> ಉತ್ಸವದ ಬಹುತೇಕ ಅಮೂಲ್ಯ ಸಮಯವನ್ನು ನುಂಗಿ ಹಾಕಿದ ವಿವಾದದ ಕರಿ ನೆರಳು ನಾಲ್ಕನೇ ದಿನದ ಕಾರ್ಯಕ್ರಮದ ಮೇಲೆ ಬೀಳಲಿಲ್ಲ. ವಾತಾವರಣ ಸ್ವಲ್ಪ ತಿಳಿಯಾಗಿತ್ತು. ಹೆಸರಾಂತ ಗೀತ ರಚನಕಾರರಾದ ಗುಲ್ಜಾರ್, ಜಾವೇದ್ ಮತ್ತು ಪ್ರಸೂನ್ ಜೋಶಿ ಪ್ರೇಕ್ಷಕರಿಗೆ ಕಾವ್ಯಗಳ ರಸಗವಳ ಉಣಬಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>