<p>ರಾಂಚಿ (ಜಾರ್ಖಂಡ್) (ಪಿಟಿಐ): ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಕಾರ್ಯ ನಿರತವಾಗಿದ್ದ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಹೆಲಿಕಾಪ್ಟರ್ ಒಂದು ರಾಂಚಿಯ ಹೊರ ಹೊರವಲಯದಲ್ಲಿ ನೆಲಕ್ಕಪ್ಪಳಿಸಿದ ಪರಿಣಾಮವಾಗಿ ಅದರಲ್ಲಿ ಇದ್ದ ಇಬ್ಬರು ಪೈಲಟ್ ಗಳು ಮತ್ತು ಒಬ್ಬ ತಂತ್ರಜ್ಞ ಮೃತರಾಗಿದ್ದಾರೆ.<br /> <br /> ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ (ಎಎಲ್ ಎಚ್) ಧ್ರುವ ರಾಂಚಿಯಿಂದ ಚೈಬಾಸಾ ಕಡೆಗೆ ಹೊರಟಿದ್ದಾಗ ಅದರ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಖುಂಟಿ ಅರಣ್ಯದಲ್ಲಿ ನೆಲಕ್ಕೆ ಅಪ್ಪಳಿಸಿತು ಎಂದು ಹಿರಿಯ ಬಿಎಸ್ಎಫ್ ಅಧಿಕಾರಿ ತಿಳಿಸಿದರು.<br /> <br /> ಪವನ ಹಂಸ್ ಹೆಲಿಕಾಪ್ಟರ್ ನಲ್ಲಿದ್ದ ಕ್ಯಾಪ್ಟನ್ ಥಾಮಸ್, ಕ್ಯಾಪ್ಟನ್ ಎಸ್.ಪಿ. ಸಿಂಗ್ ಮತ್ತು ತಂತ್ರಜ್ಞ ಮನೋಜ್ ಕುಮಾರ್ ಸ್ವೈನ್ ದುರಂತದಲ್ಲಿ ಮೃತರಾದರು ಎಂದು ಅವರು ಹೇಳಿದರು.<br /> <br /> ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ನೆಲೆಗೊಳಿಸಲಾಗಿದ್ದ ಸಿಆರ್ ಪಿ ಎಸ್ ಸಿಬ್ಬಂದಿಯ ತಂಡ ಕೂಡಾ ಸ್ಥಳಕ್ಕೆ ಧಾವಿಸಿದೆ. ಕಲೈಕುಂಡ ವೈಮಾನಿಕ ನೆಲೆಯಿಂದ ವಾಯುಪಡೆ ಕೂಡಾ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಂಚಿ (ಜಾರ್ಖಂಡ್) (ಪಿಟಿಐ): ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಕಾರ್ಯ ನಿರತವಾಗಿದ್ದ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಹೆಲಿಕಾಪ್ಟರ್ ಒಂದು ರಾಂಚಿಯ ಹೊರ ಹೊರವಲಯದಲ್ಲಿ ನೆಲಕ್ಕಪ್ಪಳಿಸಿದ ಪರಿಣಾಮವಾಗಿ ಅದರಲ್ಲಿ ಇದ್ದ ಇಬ್ಬರು ಪೈಲಟ್ ಗಳು ಮತ್ತು ಒಬ್ಬ ತಂತ್ರಜ್ಞ ಮೃತರಾಗಿದ್ದಾರೆ.<br /> <br /> ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ (ಎಎಲ್ ಎಚ್) ಧ್ರುವ ರಾಂಚಿಯಿಂದ ಚೈಬಾಸಾ ಕಡೆಗೆ ಹೊರಟಿದ್ದಾಗ ಅದರ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಖುಂಟಿ ಅರಣ್ಯದಲ್ಲಿ ನೆಲಕ್ಕೆ ಅಪ್ಪಳಿಸಿತು ಎಂದು ಹಿರಿಯ ಬಿಎಸ್ಎಫ್ ಅಧಿಕಾರಿ ತಿಳಿಸಿದರು.<br /> <br /> ಪವನ ಹಂಸ್ ಹೆಲಿಕಾಪ್ಟರ್ ನಲ್ಲಿದ್ದ ಕ್ಯಾಪ್ಟನ್ ಥಾಮಸ್, ಕ್ಯಾಪ್ಟನ್ ಎಸ್.ಪಿ. ಸಿಂಗ್ ಮತ್ತು ತಂತ್ರಜ್ಞ ಮನೋಜ್ ಕುಮಾರ್ ಸ್ವೈನ್ ದುರಂತದಲ್ಲಿ ಮೃತರಾದರು ಎಂದು ಅವರು ಹೇಳಿದರು.<br /> <br /> ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ನೆಲೆಗೊಳಿಸಲಾಗಿದ್ದ ಸಿಆರ್ ಪಿ ಎಸ್ ಸಿಬ್ಬಂದಿಯ ತಂಡ ಕೂಡಾ ಸ್ಥಳಕ್ಕೆ ಧಾವಿಸಿದೆ. ಕಲೈಕುಂಡ ವೈಮಾನಿಕ ನೆಲೆಯಿಂದ ವಾಯುಪಡೆ ಕೂಡಾ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>