<p><strong>ಬೆಂಗಳೂರು:</strong> `ಚುನಾವಣೆಯಲ್ಲಿ ಹಣ ನೀಡದೆ ಮತವನ್ನು ಪಡೆಯುವಂತಾದರೆ, ಪ್ರಜಾಪ್ರಭುತ್ವಕ್ಕೆ ಒಂದು ಬೆಲೆ ಬರುತ್ತದೆ~ ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ನಡೆದ ಬಿ.ಆರ್.ರಾಮೇಗೌಡ ರಚಿತ `ಕೆಂಪೇಗೌಡ ಇತಿಹಾಸ ಹಾಗೂ ನಗರ ಕಾರ್ಪೋರೇಟರ್ಗಳು ನಡೆಸಿದ ಜಯಂತ್ಯುತ್ಸವಗಳು~ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ರಾಜಕಾರಣಿಗಳು ನಮಸ್ಕಾರ ಮಾಡಿ ಗೆದ್ದು ಬರಲಿಲ್ಲ. ಬದಲಿಗೆ ಹಣ ನೀಡಿ ಗೆದ್ದು ಬಂದಿದ್ದಾರೆ. ರಾಜಕಾರಣ ಅನಿವಾರ್ಯವಾಗಿದೆ. ಆದರೆ, ಮಾಡುವ ರಾಜಕಾರಣದಲ್ಲಿ ಆತ್ಮ ತೃಪ್ತಿಯಿಲ್ಲ, ಸಮಾಧಾನವಿಲ್ಲ~ ಎಂದು ನುಡಿದರು.<br /> <br /> `ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಮಾನತೆ ದೊರೆಯಬೇಕು. ಅವನಿಗೆ ಎಲ್ಲ ಮೂಲಭೂತ ಅಂಶಗಳು ದೊರೆಯಬೇಕು ಆಗಲೇ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯವಾಗಿದೆ~ ಎಂದು ಹೇಳಿದರು.`ಕೆಂಪೇಗೌಡರು ಈ ನಾಡನ್ನು ಕಟ್ಟಿ ಬೆಳಸಿದರು. ಕೊನೆ ಉಸಿರು ಇರುವವರೆಗೂ ಈ ನಾಡಿನ ಪ್ರತಿಯೊಬ್ಬ ಪ್ರಜೆ ನಾಡು ಕಟ್ಟಿದ ನಾಡಗೌಡ ಕೆಂಪೇಗೌಡರನ್ನು ಸದಾ ನೆನಪಿಸಿಕೊಳ್ಳಬೇಕು~ ಎಂದರು.<br /> <br /> ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, `ವ್ಯವಸ್ಥೆ ತುಂಬ ಕೆಟ್ಟು ಹೋಗಿದೆ ಎಂದು ಬಡಬಡಿಸುವವರೇ ಹೆಚ್ಚಾಗಿದ್ದಾರೆ. ಅದರ ಬದಲು ತಮ್ಮ ಮಿತಿಯಲ್ಲಿ ಹೋರಾಟ ನಡೆಸಿದರೆ ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬಹುದು~ ಎಂದು ಆಶಾ ಭಾವ ವ್ಯಕ್ತಪಡಿಸಿದರು.<br /> <br /> `ವಿದ್ಯಾವಂತರು ಜಾತೀಯತೆಯನ್ನು ದಿನದಿಂದ ದಿನಕ್ಕೆ ಗಟ್ಟಿ ಮಾಡುತ್ತಿದ್ದಾರೆ. ಒಂದು ನೌಕರಿಗೆ, ಬಡ್ತಿ ಹೀಗೆ ನಾನಾ ರೀತಿಗೆ ಜಾತೀಯತೆಯ ಒತ್ತು ನೀಡಿ ವಿದ್ಯಾವಂತರೆನಿಸಿಕೊಂಡವರು ಜಾತೀಯತೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ~ ಎಂದರು.<br /> <br /> ಯುವಜನ ಹಾಗೂ ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರುಮಾಳ್, ಪ್ರೊ.ಟಿ.ಶಿವಣ್ಣ, ಕೃತಿ ಕತೃ ಬಿ.ಆರ್.ರಾಮೇಗೌಡ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಚುನಾವಣೆಯಲ್ಲಿ ಹಣ ನೀಡದೆ ಮತವನ್ನು ಪಡೆಯುವಂತಾದರೆ, ಪ್ರಜಾಪ್ರಭುತ್ವಕ್ಕೆ ಒಂದು ಬೆಲೆ ಬರುತ್ತದೆ~ ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ನಡೆದ ಬಿ.ಆರ್.ರಾಮೇಗೌಡ ರಚಿತ `ಕೆಂಪೇಗೌಡ ಇತಿಹಾಸ ಹಾಗೂ ನಗರ ಕಾರ್ಪೋರೇಟರ್ಗಳು ನಡೆಸಿದ ಜಯಂತ್ಯುತ್ಸವಗಳು~ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ರಾಜಕಾರಣಿಗಳು ನಮಸ್ಕಾರ ಮಾಡಿ ಗೆದ್ದು ಬರಲಿಲ್ಲ. ಬದಲಿಗೆ ಹಣ ನೀಡಿ ಗೆದ್ದು ಬಂದಿದ್ದಾರೆ. ರಾಜಕಾರಣ ಅನಿವಾರ್ಯವಾಗಿದೆ. ಆದರೆ, ಮಾಡುವ ರಾಜಕಾರಣದಲ್ಲಿ ಆತ್ಮ ತೃಪ್ತಿಯಿಲ್ಲ, ಸಮಾಧಾನವಿಲ್ಲ~ ಎಂದು ನುಡಿದರು.<br /> <br /> `ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಮಾನತೆ ದೊರೆಯಬೇಕು. ಅವನಿಗೆ ಎಲ್ಲ ಮೂಲಭೂತ ಅಂಶಗಳು ದೊರೆಯಬೇಕು ಆಗಲೇ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯವಾಗಿದೆ~ ಎಂದು ಹೇಳಿದರು.`ಕೆಂಪೇಗೌಡರು ಈ ನಾಡನ್ನು ಕಟ್ಟಿ ಬೆಳಸಿದರು. ಕೊನೆ ಉಸಿರು ಇರುವವರೆಗೂ ಈ ನಾಡಿನ ಪ್ರತಿಯೊಬ್ಬ ಪ್ರಜೆ ನಾಡು ಕಟ್ಟಿದ ನಾಡಗೌಡ ಕೆಂಪೇಗೌಡರನ್ನು ಸದಾ ನೆನಪಿಸಿಕೊಳ್ಳಬೇಕು~ ಎಂದರು.<br /> <br /> ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, `ವ್ಯವಸ್ಥೆ ತುಂಬ ಕೆಟ್ಟು ಹೋಗಿದೆ ಎಂದು ಬಡಬಡಿಸುವವರೇ ಹೆಚ್ಚಾಗಿದ್ದಾರೆ. ಅದರ ಬದಲು ತಮ್ಮ ಮಿತಿಯಲ್ಲಿ ಹೋರಾಟ ನಡೆಸಿದರೆ ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬಹುದು~ ಎಂದು ಆಶಾ ಭಾವ ವ್ಯಕ್ತಪಡಿಸಿದರು.<br /> <br /> `ವಿದ್ಯಾವಂತರು ಜಾತೀಯತೆಯನ್ನು ದಿನದಿಂದ ದಿನಕ್ಕೆ ಗಟ್ಟಿ ಮಾಡುತ್ತಿದ್ದಾರೆ. ಒಂದು ನೌಕರಿಗೆ, ಬಡ್ತಿ ಹೀಗೆ ನಾನಾ ರೀತಿಗೆ ಜಾತೀಯತೆಯ ಒತ್ತು ನೀಡಿ ವಿದ್ಯಾವಂತರೆನಿಸಿಕೊಂಡವರು ಜಾತೀಯತೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ~ ಎಂದರು.<br /> <br /> ಯುವಜನ ಹಾಗೂ ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರುಮಾಳ್, ಪ್ರೊ.ಟಿ.ಶಿವಣ್ಣ, ಕೃತಿ ಕತೃ ಬಿ.ಆರ್.ರಾಮೇಗೌಡ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>